ತುಳಸಿ ಎಲೆ ತೆಗೆಯುವಾಗ ಈ ತಪ್ಪು ಮಾಡಿದ್ರೆ ದುರಾದೃಷ್ಟ
ತುಳಸಿಯನ್ನು ಹಿಂದೂ ಧರ್ಮದಲ್ಲಿ (Hinduism) ತುಂಬಾ ಪವಿತ್ರವೆಂದು ಪರಿಗಣಿಸಲಾಗುತ್ತದೆ ಮತ್ತು ಅದಕ್ಕಾಗಿಯೇ ಬಹುತೇಕ ಪ್ರತಿಯೊಂದು ಮನೆಯಲ್ಲೂ ತುಳಸಿ ಸಸ್ಯ (Holy basil) ಇರುತ್ತದೆ. ಜನರು ತುಳಸಿಯನ್ನು ದೇವರಂತೆ ಪೂಜಿಸುತ್ತಾರೆ. ಪ್ರತಿಯೊಂದು ದೇವಾಲಯದಲ್ಲೂ ಖಂಡಿತವಾಗಿಯೂ ತುಳಸಿ ಗಿಡ ಇರುತ್ತದೆ.

ಎಲ್ಲಾ ಧಾರ್ಮಿಕ ಆಚರಣೆಗಳಲ್ಲಿ ತುಳಸಿಯ ಬಳಕೆಯನ್ನು ಶುಭವೆಂದು ಪರಿಗಣಿಸಲಾಗುತ್ತದೆ. ಪುರಾಣಗಳ ಪ್ರಕಾರ ತುಳಸಿ ಎಲೆಗಳನ್ನು ತೆಗೆಯುವಾಗ ಕೆಲವು ನಿಯಮಗಳಿವೆ ಮತ್ತು ಅವುಗಳನ್ನು ಪಾಲಿಸದಿದ್ದರೆ, ನಿಮ್ಮ ಮೇಲೆ ಅಡ್ಡ ಪರಿಣಾಮ ಬೀರುತ್ತದೆ. ತುಳಸಿ ಎಲೆಗಳನ್ನು ಕೀಳುವಾಗ ನೀವು ಯಾವ ತಪ್ಪುಗಳನ್ನು ಮಾಡಬಾರದು ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ...
ಏಕಾದಶಿಯ ದಿನ ತುಳಸಿ ತೆಗೆಯಬೇಡಿ : ಯಾವುದೇ ಏಕಾದಶಿ, ರಾತ್ರಿ, ಭಾನುವಾರ, ಚಂದ್ರಗ್ರಹಣ ಮತ್ತು ಸೂರ್ಯ ಗ್ರಹಣದಲ್ಲಿ ತುಳಸಿ ಎಲೆಗಳನ್ನು ತೆಗೆಯುವುದು ಒಂದು ತಪ್ಪು ಎಂದು ಪರಿಗಣಿಸಲಾಗುತ್ತದೆ. ಈ ದಿನಗಳಲ್ಲಿ ತುಳಸಿ ಎಲೆಗಳನ್ನು ತೆಗೆಯುವುದು ಪೂಜೆಯ ಫಲವನ್ನು ನೀಡುವುದಿಲ್ಲ ಮತ್ತು ಮನೆಯಲ್ಲಿ ದುರಾದೃಷ್ಟ (Bad effect) ಉಂಟಾಗುತ್ತದೆ ಎಂಬ ನಂಬಿಕೆ. ಅಲ್ಲದೆ ಭಾನುವಾರದಂದು ತುಳಸಿ ಗಿಡಕ್ಕೆ ನೀರನ್ನು ಅರ್ಪಿಸಬಾರದು ಎಂದು ಸಹ ಹೇಳಲಾಗುತ್ತದೆ.
ತುಳಸಿ ಎಲೆಗಳನ್ನು ಉಗುರುಗಳಿಂದ ಕತ್ತರಿಸಬಾರದು : ಮನೆಯಲ್ಲಿ ತುಳಸಿ ಗಿಡವಿದ್ದರೆ ತುಳಸಿಯನ್ನು ಎಂದಿಗೂ ಕತ್ತಲೆಯಲ್ಲಿಡಬೇಡಿ. ತೆರೆದ ಜಾಗದಲಿ ಇರಿಸಿ ಮತ್ತು ಸಂಜೆಯಾಗುತ್ತಿದ್ದಂತೆ ಖಂಡಿತವಾಗಿಯೂ ಅದರ ಬಳಿ ದೀಪವನ್ನು ಬೆಳಗಿಸಿ. ತುಳಸಿ ಎಲೆಗಳನ್ನು ಕತ್ತರಿಸುವ ಮೊದಲು ಯಾವಾಗಲೂ ಕೈಮುಗಿದು ತೆಗೆದುಕೊಳ್ಳಬೇಕು. ತುಳಸಿ ಎಲೆಗಳನ್ನು ಉಗುರುಗಳ ಸಹಾಯದಿಂದ ತೆಗೆಯಬಾರದು. (Dont pluck tulsi)
ಅನಗತ್ಯವಾಗಿ ತೆಗೆಯಬೇಡಿ : ವಿನಾಕಾರಣ ತುಳಸಿ ಎಲೆಗಳನ್ನು ಕೀಳುವುದು ತಪ್ಪು ಎಂದು ಪರಿಗಣಿಸಲಾಗುತ್ತದೆ. ಧಾರ್ಮಿಕ ಅಥವಾ ಆರೋಗ್ಯ(health) ಕಾರಣಗಳಿಗಾಗಿ ಮಾತ್ರ ಅದನ್ನು ಮುರಿಯಬೇಕು. ಸ್ನಾನ ಮಾಡದೆ ತುಳಸಿ ಎಲೆಗಳನ್ನು ಮುಟ್ಟಬಾರದು. ತುಳಸಿ ಎಲೆಯಲ್ಲಿರುವ ಆಮ್ಲಗಳು ಹಲ್ಲುಗಳಿಗೆ ಹಾನಿಕಾರಕವಾಗಿರುವುದರಿಂದ ತುಳಸಿ ಎಲೆಗಳನ್ನು ತೆಗೆಯುವುದನ್ನು ತಪ್ಪಿಸಬೇಕು. ಇದನ್ನು ನೀರಿನಲ್ಲಿ ಅಥವಾ ಚಹಾದಲ್ಲಿ ಕುಡಿಯುವುದು ಹೆಚ್ಚು ಪ್ರಯೋಜನಕಾರಿ.
ಒಣ ಎಲೆಗಳನ್ನು ಎಸೆಯಬೇಡಿ: ಕೆಲವೊಮ್ಮೆ ಒಣಗಿದಾಗ ತುಳಸಿ ಎಲೆಗಳು (Dry tulsi leaves) ಕೀಳುತ್ತೇವೆ. ಇಂತಹ ಪರಿಸ್ಥಿತಿಯಲ್ಲಿ ಈ ಎಲೆಗಳನ್ನು ಎಸೆಯಲೂ ಬಾರದು, ಅವುಗಳ ಮೇಲೆ ಕಾಲಿಡಬಾರದು. ಈ ಒಣ ಎಲೆಯನ್ನು ತೊಳೆದು ತುಳಸಿ ಗಿಡದ ಮಣ್ಣಿನಲ್ಲಿ ಹಾಕಬೇಕು. ಇದು ಶುಭವೆಂದು ಪರಿಗಣಿಸಲಾಗುತ್ತದೆ,
ಮನೆಯಲ್ಲಿ ಇಡಬೇಡಿ ಒಣ ತುಳಸಿ ಗಿಡ : ತುಳಸಿ ಗಿಡ ಒಣಗಿದರೆ (dry tulsi plant) ಪವಿತ್ರ ನದಿ, ಬಾವಿ ಅಥವಾ ಸರೋವರಕ್ಕೆ ಹಾಕಿ. ಒಣ ತುಳಸಿ ಗಿಡವನ್ನು ಮನೆಯಲ್ಲಿ ಇಟ್ಟುಕೊಳ್ಳುವುದು ಅಶುಭ ಮತ್ತು ಕುಟುಂಬ ಸದಸ್ಯರಿಗೆ ದುರಾದೃಷ್ಟವನ್ನು ತರುತ್ತದೆ ಎಂದು ಶಾಸ್ತ್ರಗಳು ಹೇಳುತ್ತವೆ.
ಆಗ್ನೇಯ ದಿಕ್ಕಿನಲ್ಲಿ ನೆಡಬೇಡಿ : ತುಳಸಿ ಸಸ್ಯವನ್ನು ಎಂದಿಗೂ ಆಗ್ನೇಯ ದಿಕ್ಕಿನಲ್ಲಿ ನೆಡಬಾರದು. ಈ ದಿಕ್ಕನ್ನು ಬೆಂಕಿಯ ದಿಕ್ಕು ಎಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಈ ದಿಕ್ಕಿನಲ್ಲಿ ತುಳಸಿ ಗಿಡವನ್ನು ನೆಡುವುದನ್ನು ತಪ್ಪಿಸಿ. ತುಳಸಿ ಗಿಡವನ್ನು ನೆಲದಲ್ಲಿ ನೆಡಬಾರದು. ಶುಭ ಫಲಗಳಿಗಾಗಿ ತುಳಸಿ ಗಿಡವನ್ನು ಯಾವಾಗಲೂ ಕುಂಡದಲ್ಲಿ ನೆಡಬೇಕು.
ತುಳಸಿ ಗಿಡದ ಬಳಿ ಈ ವಸ್ತುಗಳನ್ನು ಇಡಬೇಡಿ : ತುಳಸಿ ಗಿಡವನ್ನು ಸ್ವಚ್ಛವಾದ ಸ್ಥಳದಲ್ಲಿ (clean place) ಇಡಬೇಕು. ಸಸ್ಯದ ಸುತ್ತಲಿನ ಪ್ರದೇಶವು ತೆರೆದಿರಬೇಕು ಮತ್ತು ಕಸ ಕಡ್ಡಿಗಳು, ಪೊರಕೆ ಮುಂತಾದ ಯಾವುದೇ ರೀತಿಯ ಕೊಳಕು ವಸ್ತುಗಳು ಇರಬಾರದು. ತುಳಸಿ ಗಿಡವನ್ನು ಯಾವುದೇ ಮುಳ್ಳಿನ ಗಿಡದೊಂದಿಗೆ ಇಡಬಾರದು.