- Home
- Astrology
- Festivals
- ಚಾಣಕ್ಯ ನೀತಿ: ಹೆಂಡತಿ ನಿಜವಾಗಿಯೂ ಪ್ರೀತಿಸುತ್ತಾಳೋ? ನಾಟಕ ಮಾಡ್ತಾಳೋ? ಗೊತ್ತಾಗೋದು ಯಾವಾಗ?
ಚಾಣಕ್ಯ ನೀತಿ: ಹೆಂಡತಿ ನಿಜವಾಗಿಯೂ ಪ್ರೀತಿಸುತ್ತಾಳೋ? ನಾಟಕ ಮಾಡ್ತಾಳೋ? ಗೊತ್ತಾಗೋದು ಯಾವಾಗ?
ಆಚಾರ್ಯ ಚಾಣಕ್ಯರು ಹೆಂಡತಿ, ಸೇವಕ, ಬಂಧು ಮತ್ತು ಮಿತ್ರರ ಪರೀಕ್ಷೆಯ ಬಗ್ಗೆ ತಿಳಿಸಿದ್ದಾರೆ. ಚಾಣಕ್ಯ ನೀತಿಯಲ್ಲಿರುವ ಅಂಶಗಳು ಏನು ಎಂಬುದರ ಮಾಹಿತಿಯನ್ನು ಈ ಲೇಖನ ಒಳಗೊಂಡಿದೆ.

ಆಚಾರ್ಯ ಚಾಣಕ್ಯ ತಮ್ಮ ಪುಸ್ತಕಗಳಲ್ಲಿ ಜೀವನ ನಿರ್ವಹಣೆಗೆ ಸಂಬಂಧಿಸಿದ ಹಲವು ಸಲಹೆಗಳನ್ನು ನೀಡಿದ್ದಾರೆ. ಈ ಸಲಹೆಗಳು ಇಂದಿಗೂ ನಮಗೆ ತುಂಬಾ ಉಪಯುಕ್ತ. ಈ ಸಲಹೆಗಳನ್ನು ಪಾಲಿಸುವುದರಿಂದ ನಾವು ಉತ್ತಮ ಜೀವನ ನಡೆಸಬಹುದು.
ಚಾಣಕ್ಯ ತಮ್ಮ ಒಂದು ನೀತಿಯಲ್ಲಿ ಹೆಂಡತಿಯ ಬಗ್ಗೆ ವಿಶೇಷ ವಿಷಯಗಳನ್ನು ಹೇಳಿದ್ದಾರೆ ಮತ್ತು ಹೆಂಡತಿ ಗಂಡನನ್ನು ನಿಜವಾಗ್ಲೂ ಪ್ರೀತಿಸುತ್ತಾಳೋ ಇಲ್ಲವೋ ಅಂತ ಒಂದು ಸಂದರ್ಭದಲ್ಲಿ ಗೊತ್ತಾಗುತ್ತೆ ಅಂತ ಹೇಳಿದ್ದಾರೆ.
ಚಾಣಕ್ಯ ನೀತಿ ಶ್ಲೋಕ
ಜಾನೀಯಾತ್ ಪ್ರೇಷಣೇ ಭೃತ್ಯಾನ್ ಬಾಂಧವಾನ್ ವ್ಯಸನಾಗಮೇ ।
ಮಿತ್ರಂ ಚಾಪತ್ತಿಕಾಲೇ ತು ಭಾರ್ಯಾಂ ಚ ವಿಭವಕ್ಷಯೇ ।।
ಅರ್ಥ- ಚಾಣಕ್ಯರ ಪ್ರಕಾರ, ಸೇವಕನ ಪರೀಕ್ಷೆ ಕೆಲಸದ ಸಮಯದಲ್ಲಿ, ಬಂಧುಗಳ ಪರೀಕ್ಷೆ ಕಷ್ಟದಲ್ಲಿ, ಮಿತ್ರನ ಪರೀಕ್ಷೆ ಸಂಕಷ್ಟದಲ್ಲಿ ಮತ್ತು ಹೆಂಡತಿಯ ಪರೀಕ್ಷೆ ದುರಾದೃಷ್ಟದ ಸಮಯದಲ್ಲಿ ಆಗುತ್ತದೆ.
ಹೆಂಡತಿಯ ಪರೀಕ್ಷೆ ಯಾವಾಗ ಮತ್ತು ಹೇಗೆ ಆಗುತ್ತದೆ?
ಚಾಣಕ್ಯರ ಪ್ರಕಾರ, ಯಾರಿಗಾದರೂ ದುರಾದೃಷ್ಟ ಆವರಿಸಿದಾಗ, ಪದೇ ಪದೇ ವಿಫಲತೆ ಎದುರಾದಾಗ, ಆ ಸಂದರ್ಭದಲ್ಲಿ ಹೆಂಡತಿಯ ಪ್ರಾಮಾಣಿಕತೆ ಮತ್ತು ಪ್ರೀತಿಯ ಪರೀಕ್ಷೆ ಆಗುತ್ತದೆ. ಅಂತಹ ಸಮಯದಲ್ಲಿ ಹೆಂಡತಿ ಗಂಡನ ಜೊತೆಗೆ ನಿಲ್ಲದಿದ್ದರೆ ಆಕೆಯ ಪ್ರೀತಿ ಸುಳ್ಳು ಅಂತ ಅರ್ಥ.
ಒಳ್ಳೆಯ ಸೇವಕನನ್ನು ಹೇಗೆ ಗುರುತಿಸುವುದು?
ಚಾಣಕ್ಯರ ಪ್ರಕಾರ, ಒಳ್ಳೆಯ ಸೇವಕನನ್ನು ಅವನ ಕೆಲಸ ನೋಡಿ ಗುರುತಿಸಬೇಕು. ಪದೇ ಪದೇ ಹೇಳಿದರೂ ತಪ್ಪು ಮಾಡುವ ಸೇವಕನನ್ನು ತಕ್ಷಣ ಬಿಟ್ಟುಬಿಡಬೇಕು. ಯಾಕೆಂದರೆ ಅಂತಹ ಸೇವಕರು ಯಜಮಾನನಿಗೆ ನಷ್ಟ ತರುತ್ತಾರೆ.
ಬಂಧುಗಳ ಪರೀಕ್ಷೆ ಯಾವಾಗ ಆಗುತ್ತದೆ?
ಜೀವನದಲ್ಲಿ ಕಷ್ಟದ ಸಮಯ ಬಂದಾಗ ಕುಟುಂಬದವರನ್ನು ಪರೀಕ್ಷಿಸಬೇಕು. ಅಂತಹ ಸಮಯದಲ್ಲಿ ಯಾರು ಜೊತೆಯಲ್ಲಿ ನಿಲ್ಲುತ್ತಾರೋ ಅವರೇ ನಿಜವಾದ ಹಿತೈಷಿಗಳು. ಉಳಿದವರೆಲ್ಲ ನಾಟಕ ಮಾಡುವವರು. ಆದ್ದರಿಂದ ಕಷ್ಟದಲ್ಲಿ ಜೊತೆಯಲ್ಲಿ ನಿಲ್ಲುವವರನ್ನೇ ನಂಬಿ.
ಒಳ್ಳೆಯ ಮಿತ್ರರನ್ನು ಹೇಗೆ ಪರೀಕ್ಷಿಸುವುದು?
ಒಳ್ಳೆಯ ಮಿತ್ರ ಯಾವುದೇ ಸಂದರ್ಭದಲ್ಲಿ ನಿಮ್ಮನ್ನು ಬಿಟ್ಟು ಹೋಗುವುದಿಲ್ಲ. ಸಂಕಷ್ಟದಲ್ಲಿ ಯಾರು ನಿಮ್ಮ ಜೊತೆಗೆ ನಿಲ್ಲುತ್ತಾರೋ ಅವರೇ ನಿಜವಾದ ಮಿತ್ರರು. ಅಂತಹ ಮಿತ್ರರೇ ನಿಮ್ಮನ್ನು ಸಂಕಷ್ಟದಿಂದ ಪಾರು ಮಾಡಬಲ್ಲವರು.
Disclaimer
ಈ ಲೇಖನದಲ್ಲಿರುವ ಮಾಹಿತಿಯನ್ನು ಜ್ಯೋತಿಷಿಗಳು ತಿಳಿಸಿದ್ದಾರೆ. ನಾವು ಕೇವಲ ಈ ಮಾಹಿತಿಯನ್ನು ನಿಮಗೆ ತಲುಪಿಸುವ ಮಾಧ್ಯಮ. ಬಳಕೆದಾರರು ಈ ಮಾಹಿತಿಯನ್ನು ಕೇವಲ ಮಾಹಿತಿ ಎಂದು ಪರಿಗಣಿಸಬೇಕು