ಚಂಪಾ ಷಷ್ಠಿಯ ವಿಶೇಷತೆ : ಶಿವ , ಸುಬ್ರಮಣ್ಯರ ಆರಾಧಾನ ದಿನ
ಚಂಪಾ ಷಷ್ಠಿ ಇದು ಶಿವ ಹಾಗೂ ಸುಬ್ರಮಣ್ಯನನ್ನು ಪೂಜಿಸುವ ಉತ್ಸವ . ಈ ಉತ್ಸವ ಆರು ದಿನಗಳ ಕಾಲ ನಡೆಯುತ್ತದೆ. ಮಹಾರಾಷ್ಟ್ರ ಮತ್ತು ಕರ್ನಾಟಕದ ಕೆಲವು ಭಾಗಗಳಲ್ಲಿ ಶಿವನು ಖಂಡೋಬ ರೂಪದಲ್ಲಿ ನೆಲೆಸಿದ್ದು ಚಂಪಾ ಷಷ್ಠಿಯಂದು ಈ ಭಾಗಗಳಲ್ಲಿ ಉತ್ಸವ ವಿಜೃಂಭಣೆಯಿಂದ ನಡೆಯುತ್ತದೆ. ಈ ಉತ್ಸವ ಮಾರ್ಗಶಿರ ಮಾಸದ ಶುಕ್ಲಪಕ್ಷದಂದು ನಡೆಯುತ್ತದೆ. ಕರ್ನಾಟಕದ ದಕ್ಷಿಣ ಭಾಗದಲ್ಲಿ ಸುಬ್ರಮಣ್ಯನನ್ನು ಈ ದಿನ ಆರಾಧಿಸುತ್ತಾರೆ. ಈ ಹಬ್ಬದ ಆಚರಣೆಯ ಮುಖ್ಯ ಉದ್ದೇಶ ಸಂತೋಷ, ನೆಮ್ಮದಿ , ಸುಖ, ಶಾಂತಿ ಆರೋಗ್ಯ , ಧನ್ಯಾತ್ಮಕ ಭಾವನೆಗಳು ಮನದಲ್ಲಿ ಉಂಟುಮಾಡಲಿವೆ ಎಂದು ಹೇಳುತ್ತಾರೆ.

<p>ಮಹಾರಾಷ್ಟ್ರದ ಪೂನಾದ ಜೆಜುರಿ ಎಂಬ ಸ್ಥಳದಲ್ಲಿ ಖಂಡೋಬ ದೇವಾಲಯವಿದೆ. ಇಲ್ಲಿ ಆರು ದಿನಗಳ ಕಾಲ ವಿಜೃಂಭಣೆಯಿಂದ ನಡೆಯುತ್ತದೆ. </p>
ಮಹಾರಾಷ್ಟ್ರದ ಪೂನಾದ ಜೆಜುರಿ ಎಂಬ ಸ್ಥಳದಲ್ಲಿ ಖಂಡೋಬ ದೇವಾಲಯವಿದೆ. ಇಲ್ಲಿ ಆರು ದಿನಗಳ ಕಾಲ ವಿಜೃಂಭಣೆಯಿಂದ ನಡೆಯುತ್ತದೆ.
<p>ಈ ಹಬ್ಬದಲ್ಲಿ ಎಲ್ಲ ರೀತಿಯ ಜನಗಳು ಸೇರುತ್ತಾರೆ. ಈ ದೇವಾಲಯದಲ್ಲಿ ಖಂಡೋಬಗೆ ತರಕಾರಿ, ಹಣ್ಣು, ಮರ ಸೇಬು ಹಾಗು ಅರಶಿನ ಹುಡಿಯಿಂದ ದೇವರನ್ನು ಪೂಜಿಸುತ್ತಾರೆ. ಈ ಆರು ದಿನಗಳ ಕಾಲ ವೃತವನ್ನು ಮಾಡುತ್ತಾರೆ. </p>
ಈ ಹಬ್ಬದಲ್ಲಿ ಎಲ್ಲ ರೀತಿಯ ಜನಗಳು ಸೇರುತ್ತಾರೆ. ಈ ದೇವಾಲಯದಲ್ಲಿ ಖಂಡೋಬಗೆ ತರಕಾರಿ, ಹಣ್ಣು, ಮರ ಸೇಬು ಹಾಗು ಅರಶಿನ ಹುಡಿಯಿಂದ ದೇವರನ್ನು ಪೂಜಿಸುತ್ತಾರೆ. ಈ ಆರು ದಿನಗಳ ಕಾಲ ವೃತವನ್ನು ಮಾಡುತ್ತಾರೆ.
<p>ಮುಂಜಾನೆ ಬೇಗ ಎದ್ದು ದೇವಾಲಯಕ್ಕೆ ತೆರಳಿ ದೀಪಹಚ್ಚುತ್ತಾರೆ. ಕೊನೆಯದಿನ ವಿಶೇಷವಾದ ನೈವೇದ್ಯ ಮಾಡಿ ಆರತಿ ಮಾಡುತ್ತಾರೆ. </p>
ಮುಂಜಾನೆ ಬೇಗ ಎದ್ದು ದೇವಾಲಯಕ್ಕೆ ತೆರಳಿ ದೀಪಹಚ್ಚುತ್ತಾರೆ. ಕೊನೆಯದಿನ ವಿಶೇಷವಾದ ನೈವೇದ್ಯ ಮಾಡಿ ಆರತಿ ಮಾಡುತ್ತಾರೆ.
<p>ಒಮ್ಮೆ ಇಬ್ಬರು ರಾಕ್ಷಸರು ಮಲ್ಲ ಮತ್ತು ಮಣಿ ಇವರ ಹಾವಳಿ ಸಹಿಸಲಾರದೆ ದೇವತೆಗಳು ಋಷಿಮುನಿಗಳು ಜನರು ಶಿವನ ಮೊರೆ ಹೋಗಲು ಶಿವನು ಖಂಡೋಬ ರೂಪದಲ್ಲಿ ಬಂದು ಇಬ್ಬರು ರಾಕ್ಷಸರನ್ನು ಸೋಲಿಸಿದಾಗ ಇಬ್ಬರು ಶರಣಾಗುತ್ತಾರೆ.</p>
ಒಮ್ಮೆ ಇಬ್ಬರು ರಾಕ್ಷಸರು ಮಲ್ಲ ಮತ್ತು ಮಣಿ ಇವರ ಹಾವಳಿ ಸಹಿಸಲಾರದೆ ದೇವತೆಗಳು ಋಷಿಮುನಿಗಳು ಜನರು ಶಿವನ ಮೊರೆ ಹೋಗಲು ಶಿವನು ಖಂಡೋಬ ರೂಪದಲ್ಲಿ ಬಂದು ಇಬ್ಬರು ರಾಕ್ಷಸರನ್ನು ಸೋಲಿಸಿದಾಗ ಇಬ್ಬರು ಶರಣಾಗುತ್ತಾರೆ.
<p style="text-align: justify;"> ಶಿವನಲ್ಲಿ ವರಕೇಳಿದ ಮಲ್ಲ ತಮ್ಮಜೊತೆ ಖಂಡೋಬ ರೂಪದಲ್ಲಿ ಇದ್ದು ಜನರಮನೋಕಾಮನೆಗಳ್ಳನ್ನು ಈಡೇರುವಂತೆ ಮಾಡಿ ಎಂದು ಕೇಳಿದಾಗ ಆಗಲಿ ಎಂದ ಶಿವನು ಖಂಡೋಬ ರೂಪದಲ್ಲಿ ನೆಲೆಸಿದರು . </p>
ಶಿವನಲ್ಲಿ ವರಕೇಳಿದ ಮಲ್ಲ ತಮ್ಮಜೊತೆ ಖಂಡೋಬ ರೂಪದಲ್ಲಿ ಇದ್ದು ಜನರಮನೋಕಾಮನೆಗಳ್ಳನ್ನು ಈಡೇರುವಂತೆ ಮಾಡಿ ಎಂದು ಕೇಳಿದಾಗ ಆಗಲಿ ಎಂದ ಶಿವನು ಖಂಡೋಬ ರೂಪದಲ್ಲಿ ನೆಲೆಸಿದರು .
<p style="text-align: justify;">ಈ ದೇವಾಲಯಗಳಲ್ಲಿ ಖಂಡೋಬ ಮೂರ್ತಿ ಜೊತೆ ಮಲ್ಲ, ಮಣಿಗಳ ಮೂರ್ತಿಗಳನ್ನು ಇಡುತ್ತಾರೆ. ಹಾಗಾಗಿ ಇಲ್ಲಿ ಈ ದಿನ ಚಂಪಾ ಷಷ್ಠಿ ವಿಜೃಂಭಣೆ ಯಿಂದ ಆಚರಿಸುತ್ತಾರೆ. </p>
ಈ ದೇವಾಲಯಗಳಲ್ಲಿ ಖಂಡೋಬ ಮೂರ್ತಿ ಜೊತೆ ಮಲ್ಲ, ಮಣಿಗಳ ಮೂರ್ತಿಗಳನ್ನು ಇಡುತ್ತಾರೆ. ಹಾಗಾಗಿ ಇಲ್ಲಿ ಈ ದಿನ ಚಂಪಾ ಷಷ್ಠಿ ವಿಜೃಂಭಣೆ ಯಿಂದ ಆಚರಿಸುತ್ತಾರೆ.
<p>ಇತ್ತ ಕರ್ನಾಟಕದ ದಕ್ಷಿಣ ಭಾಗದಲ್ಲಿ ಸುಬ್ರಮಣ್ಯ ದೇವಾಲಯ ಗಳಲ್ಲಿ ಚಂಪಾ ಷಷ್ಠಿ ಯಂದು ವಿಶೇಷ ಪೂಜೆ ಹಾಗೂ ರಥೊತ್ಸವ ವಿಜೃಂಭಣೆಯಿಂದ ನಡೆಯುತ್ತದೆ. </p>
ಇತ್ತ ಕರ್ನಾಟಕದ ದಕ್ಷಿಣ ಭಾಗದಲ್ಲಿ ಸುಬ್ರಮಣ್ಯ ದೇವಾಲಯ ಗಳಲ್ಲಿ ಚಂಪಾ ಷಷ್ಠಿ ಯಂದು ವಿಶೇಷ ಪೂಜೆ ಹಾಗೂ ರಥೊತ್ಸವ ವಿಜೃಂಭಣೆಯಿಂದ ನಡೆಯುತ್ತದೆ.
<p>ಆಶ್ಲೇಷ ಬಲಿ , ಸರ್ಪಸಂಸ್ಕಾರ ನಾಗಪ್ರತಿಷ್ಠೆ , ಅಲ್ಲದೆ ವಿಶೇಷ ಸೇವೆಗಳಾದ ಮಡೆ ಮಡಸ್ತಾನ , ಮಡಸ್ತಾನ ನಡೆಯುತ್ತದೆ. ಈ ಸೇವೆಗಳಿಂದ ಸರ್ವರೋಗ ಗುಣವಾಗಿ ಮನೋಭಿಲಾಶೆಗಳು ಪೂರ್ಣಗೊಳ್ಳುತ್ತದೆ ಎಂಬ ನಂಬಿಕೆ ಈಗಲೂ ಇದೆ.</p>
ಆಶ್ಲೇಷ ಬಲಿ , ಸರ್ಪಸಂಸ್ಕಾರ ನಾಗಪ್ರತಿಷ್ಠೆ , ಅಲ್ಲದೆ ವಿಶೇಷ ಸೇವೆಗಳಾದ ಮಡೆ ಮಡಸ್ತಾನ , ಮಡಸ್ತಾನ ನಡೆಯುತ್ತದೆ. ಈ ಸೇವೆಗಳಿಂದ ಸರ್ವರೋಗ ಗುಣವಾಗಿ ಮನೋಭಿಲಾಶೆಗಳು ಪೂರ್ಣಗೊಳ್ಳುತ್ತದೆ ಎಂಬ ನಂಬಿಕೆ ಈಗಲೂ ಇದೆ.
<p>ಜೊತೆಗೆ ಮಹಿಳೆಯರು ಈ ದಿನ ಉಪವಾಸ ಇರುತ್ತಾರೆ. ಮದ್ಯಾಹ್ನ ಮಡಿಯಾಗಿ ಅನ್ನ, ಸಾರು ತಯಾರಿಸಿ ಬಾಳೆ ಎಲೆ ಊಟ ಮಾಡುತ್ತಾರೆ. ನಂತರ ಎಲೆಯನ್ನು ಮರದ ಗೆಲ್ಲುಗಳ ನಡುವೆ ಸಿಕ್ಕಿಸುತ್ತಾರೆ, ಹೀಗೆ ಮಾಡಿದರೆ ಐಶ್ವರ್ಯ ವೃದ್ಧಿಯಾಗುತ್ತದೆ ಎನ್ನುವ ನಂಬಿಕೆ ಇದೆ. <br /> </p>
ಜೊತೆಗೆ ಮಹಿಳೆಯರು ಈ ದಿನ ಉಪವಾಸ ಇರುತ್ತಾರೆ. ಮದ್ಯಾಹ್ನ ಮಡಿಯಾಗಿ ಅನ್ನ, ಸಾರು ತಯಾರಿಸಿ ಬಾಳೆ ಎಲೆ ಊಟ ಮಾಡುತ್ತಾರೆ. ನಂತರ ಎಲೆಯನ್ನು ಮರದ ಗೆಲ್ಲುಗಳ ನಡುವೆ ಸಿಕ್ಕಿಸುತ್ತಾರೆ, ಹೀಗೆ ಮಾಡಿದರೆ ಐಶ್ವರ್ಯ ವೃದ್ಧಿಯಾಗುತ್ತದೆ ಎನ್ನುವ ನಂಬಿಕೆ ಇದೆ.
<p>ಈ ದಿನ ಕುಕ್ಕೆ ಸುಬ್ರಹ್ಮಣ್ಯ ದೇಗುಲ ಸೇರಿ ಕರ್ನಾಟಕ ಎಲ್ಲಾ ಸುಬ್ರಹ್ಮಣ್ಯ ದೇಗುಲಗಳಲ್ಲಿ ವಿಶೇಷ ರಥೋತ್ಸವ, ಪೂಜೆ ನಡೆಯುತ್ತದೆ. </p>
ಈ ದಿನ ಕುಕ್ಕೆ ಸುಬ್ರಹ್ಮಣ್ಯ ದೇಗುಲ ಸೇರಿ ಕರ್ನಾಟಕ ಎಲ್ಲಾ ಸುಬ್ರಹ್ಮಣ್ಯ ದೇಗುಲಗಳಲ್ಲಿ ವಿಶೇಷ ರಥೋತ್ಸವ, ಪೂಜೆ ನಡೆಯುತ್ತದೆ.