MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Astrology
  • Festivals
  • Scary Dreams: ಹಗಲು, ರಾತ್ರಿ ಕಾಡೋ ದುಃಸ್ವಪ್ನ ದೂರ ಮಾಡೋದು ಹೇಗೆ ?

Scary Dreams: ಹಗಲು, ರಾತ್ರಿ ಕಾಡೋ ದುಃಸ್ವಪ್ನ ದೂರ ಮಾಡೋದು ಹೇಗೆ ?

ಸತತ ಹಲವಾರು ದಿನಗಳವರೆಗೆ ದುಃಸ್ವಪ್ನಗಳು (Bad Dreams) ಸಂಭವಿಸಿದರೆ ಪದೇ ಪದೇ ಕನಸುಗಳಿಂದ ರಾತ್ರಿಯಲ್ಲಿ ಬೆಚ್ಚಿ ಬಿದ್ದು, ಎದ್ದೇಳುತ್ತಿದ್ದರೆ, ಅದನ್ನು ತಪ್ಪಿಸಲು ಕೆಲವು ಕ್ರಮಗಳನ್ನು (Remedies) ತೆಗೆದುಕೊಳ್ಳುವುದು ಉತ್ತಮ. ಅಗ್ನಿ ಪುರಾಣವು ಇಂತಹ ಕನಸುಗಳನ್ನು ತಪ್ಪಿಸಲು ಸುಲಭ ಮಾರ್ಗಗಳನ್ನು ನೀಡುತ್ತದೆ (Easy Remedies). 

2 Min read
Suvarna News | Asianet News
Published : Nov 16 2021, 10:46 AM IST
Share this Photo Gallery
  • FB
  • TW
  • Linkdin
  • Whatsapp
18

ಯಾವುದೇ ಕನಸಾದರೂ ಸರಿ, ಅದು ಬೀಳಲು ಅನೇಕ ಕಾರಣಗಳಿವೆ. ಅವು ವಿವಿಧ ಚಿಹ್ನೆಗಳನ್ನು ಸಹ ನೀಡುತ್ತವೆ. ಆದ್ದರಿಂದ ಕನಸುಗಳನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ. ಅದೇ ಸಮಯದಲ್ಲಿ, ನಿರಂತರವಾಗಿ ಬರುವ ಕನಸುಗಳು ಅಥವಾ ದುಃಸ್ವಪ್ನಗಳು (Scary Dreams) ನಿರಂತರವಾಗಿ ವಿವಿಧ ಭ್ರಮೆಗಳನ್ನು ಸೃಷ್ಟಿಸುತ್ತವೆ. ಇದು ನಮ್ಮನ್ನೇ ಬೆಚ್ಚಿ ಬೀಳಿಸುತ್ತದೆ. 

28

ಕೆಲವೊಮ್ಮೆ ಹಗಲಿನಲ್ಲಿ ಎದ್ದ ನಂತರವೂ ರಾತ್ರಿಯ ನಿದ್ರೆಯಲ್ಲಿ ಕಾಣುವ ಕನಸುಗಳು ಮನಸ್ಥಿತಿಯನ್ನು ಇನ್ನಷ್ಟು ಹದಗೆಡುವಂತೆ ಮಾಡುತ್ತದೆ. ಇಂತಹ ಭಯಾನಕ ಕನಸುಗಳನ್ನು ತೊಡೆದುಹಾಕಲು ಅಗ್ನಿ ಪುರಾಣದಲ್ಲಿ ಕೆಲವು ಸುಲಭ ಮಾರ್ಗಗಳಿವೆ (Easy Remedies). ನೀವು ಈ ಕ್ರಮಗಳಲ್ಲಿ ಒಂದನ್ನು ತೆಗೆದುಕೊಂಡರೂ,  ಭಯಾನಕ ಕನಸುಗಳನ್ನು ಸುಲಭವಾಗಿ ತೊಡೆದುಹಾಕಬಹುದು. 

38

ಅಂತಹ ಭಯಾನಕ ಕನಸುಗಳನ್ನು ತೊಡೆದುಹಾಕಿ : ಕನಸಿನಲ್ಲಿ ಹಾವುಗಳು (snake dream) ಕಂಡು ಬಂದರೆ, ಇದು ಪದೇ ಪದೇ ಭಯವನ್ನು ಉಂಟು ಮಾಡುತ್ತದೆ, ಶಿವ ದೇವಾಲಯಕ್ಕೆ ಬೆಳ್ಳಿ ಸರ್ಪಗಳನ್ನು ಪೂಜಿಸಿ ದಾನ ಮಾಡಿ. ಕನಸಿನಲ್ಲಿ ಹಾವು ಕಾಣಿಸಿಕೊಳ್ಳುವುದನ್ನು ನಿಲ್ಲಿಸುತ್ತದೆ. ಇದರೊಂದಿಗೆ ಸರ್ಪ ದೋಷ ನಿವಾರಣೆ ಮಾಡಿದಾಗ, ಕೆಟ್ಟ ಕನಸುಗಳು ದೂರವಾಗುತ್ತದೆ. 

48

ಮಹಾಮತ್ಯುಂಜಯ ಪಠ್ಯವು ಕನಸುಗಳನ್ನು ಜಯಿಸಲು ಮಾತ್ರವಲ್ಲದೆ ಅನೇಕ ಸಮಸ್ಯೆಗಳನ್ನು ನಿವಾರಿಸಲು ತುಂಬಾ ಪರಿಣಾಮಕಾರಿಯಾಗಿದೆ. ಆಗಾಗ್ಗೆ ದುಃಸ್ವಪ್ನಗಳು ಬಂದರೆ, ಕೆಲವು ದಿನಗಳ ವರೆಗೆ ಮಹಾಮತ್ಯುಂಜಯ ಪಠ್ಯವನ್ನು ಓದಿ. ಶೀಘ್ರದಲ್ಲೇ ಪರಿಹಾರ ವಾಗಲಿದೆ.  ಇದನ್ನು ಪ್ರತಿದಿನ ಪಠಿಸಿದರೆ ಉತ್ತಮ. 

58

ಪ್ರತಿದಿನ ಸಂಜೆ ತುಳಸಿ ಗಿಡದ (Tulsi plant) ಕೆಳಗೆ ದೀಪವನ್ನು ಹಚ್ಚಿ. ಇದು ನಿಮ್ಮ ಮನಸ್ಸನ್ನು ಶಾಂತ ಮತ್ತು ಸಕಾರಾತ್ಮಕವಾಗಿರಿಸುತ್ತದೆ. ಇದು ಕನಸುಗಳು ಬರುವುದನ್ನು ನಿಲ್ಲಿಸುತ್ತದೆ. ತುಳಸಿ ಗಿಡಕ್ಕೆ ಪೂಜೆ ಮಾಡುವುದು ಎಂದರೆ ದೇವರನ್ನು ಸಂತೃಪ್ತಿ ಪಡಿಸಿದಂತೆ. ಜೊತೆಗೆ ಮಾನಸಿಕ ನೆಮ್ಮದಿಯೂ ಸಿಗುತ್ತದೆ. 

68

ನಿಮಗೆ ಪ್ರತಿದಿನ ಕೆಟ್ಟ ಕನಸು ಬೀಳುತ್ತಿದ್ದರೆ, ಸರಿಯಾಗಿ ನಿದ್ರೆ ಮಾಡಲು ಸಾಧ್ಯವಾಗದಿದ್ದರೆ, ಅಥವಾ ಕೆಟ್ಟ ಕನಸಿನ ನೆನಪಿನಿಂದ ದಿನವಿಡೀ ಮನಸು ಹಾಳಾಗಿದ್ದರೆ ನೀವು ಈ ಉಪಾಯವನ್ನು ಸಹ ಪಾಲಿಸಬಹುದು. ಹೌದು. ಮುಂಜಾನೆ ಎದ್ದು ಸ್ನಾನ ಮಾಡಿ ಮತ್ತು ಯೋಗ್ಯ ಬ್ರಾಹ್ಮಣನಿಗೆ ಅಥವಾ ಯಾವುದೇ ಬಡ ಜನರಿಗೆ ಬಟ್ಟೆಗಳನ್ನು ದಾನ ಮಾಡಿ.

78

ಅಶುಭ ಸ್ವಪ್ನವಿದ್ದರೆ ದೇವಸ್ಥಾನಕ್ಕೆ ಹೋಗಿ ನಿಮ್ಮ ದೇವರ ದರ್ಶನ ಪಡೆಯಿರಿ. ಕೆಲವೊಮ್ಮೆ ದೇವರಿಗೆ ಹೇಳಿದ ಹರಕೆಗಳನ್ನು ಪೂರೈಸದೇ ಇದ್ದರೆ, ಇದರಿಂದ ಪದೇ ಪದೇ ಕನಸು ಬೀಳುತ್ತದೆ ಎಂದು ಹೇಳಲಾಗುತ್ತದೆ. ಇಂತಹ ಸಂದರ್ಭದಲ್ಲಿ ದೇಗುಲಕ್ಕೆ ಹೋಗಿ ಪೂಜೆ ಸಲ್ಲಿಸಿ ಬರುವುದು ಉತ್ತಮ ಎಂದು ಹೇಳಲಾಗುತ್ತದೆ. ಇದರಿಂದ ಕೆಟ್ಟ ಕನಸು ನಿವಾರಣೆಯಾಗುತ್ತದೆ.  

88

ಬೆಳಗ್ಗೆ ಸೂರ್ಯನಿಗೆ ನೀರು ಅರ್ಪಿಸಿ. ಇದರಿಂದ ವ್ಯಕ್ತಿಯ ಮನಸ್ಸು ಮತ್ತು ಆಲೋಚನೆಗಳು ಸಕಾರಾತ್ಮಕವಾಗಿರುತ್ತದೆ. ಅದೇ ಸಮಯದಲ್ಲಿ, ಅವನು ದುಃಸ್ವಪ್ನಗಳನ್ನು ಹೊಂದುವುದನ್ನು ನಿಲ್ಲಿಸುತ್ತಾನೆ. ಸೂರ್ಯನು ಪಾಸಿಟಿವ್ ಎನರ್ಜಿಯನ್ನು ಜಗಕ್ಕೆ ನೀಡುತ್ತಾನೆ. ಆದುದರಿಂದ ಸೂರ್ಯನಿಗೆ ನೀರು ಅರ್ಪಿಸುವುದು ಉತ್ತಮ. 

About the Author

SN
Suvarna News
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved