MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Astrology
  • Festivals
  • ಬೇಲೂರು ಚನ್ನಕೇಶವ ಬ್ರಹ್ಮ ರಥೋತ್ಸವ; ಕುರಾನ್ ಪಠಣ ಮಾಡದೆ ದೇವರಿಗೆ ವಂದನೆ ಸಮರ್ಪಿಸಿದ ಖಾದ್ರಿ

ಬೇಲೂರು ಚನ್ನಕೇಶವ ಬ್ರಹ್ಮ ರಥೋತ್ಸವ; ಕುರಾನ್ ಪಠಣ ಮಾಡದೆ ದೇವರಿಗೆ ವಂದನೆ ಸಮರ್ಪಿಸಿದ ಖಾದ್ರಿ

ವಿಶ್ವವಿಖ್ಯಾತ ಹಾಸನ ಜಿಲ್ಲೆಯ ಬೇಲೂರು ಚನ್ನಕೇಶವ ಸ್ವಾಮಿ  ದಿವ್ಯ ಬ್ರಹ್ಮ ರಥೋತ್ಸವವು ಸಡಗರ ಸಂಭ್ರಮದಿಂದ ಅದ್ದೂರಿಯಾಗಿ ಜರುಗಿತು. 

1 Min read
Ravi Janekal
Published : Apr 20 2024, 08:03 PM IST| Updated : Apr 20 2024, 08:12 PM IST
Share this Photo Gallery
  • FB
  • TW
  • Linkdin
  • Whatsapp
14

ಬೇಲೂರು ಪಟ್ಟಣದಲ್ಲಿರುವ ಶ್ರೀ ಚನ್ನಕೇಶವ ದೇವಾಲಯ   ವಿಶ್ವ ಪಾರಂಪರಿಕ ಪಟ್ಟಿಗೆ ಸೇರಿದ ಮೊದಲನೇ ವರ್ಷದ ಜಾತ್ರಾ ಮಹೋತ್ಸವದ  ಕಾರ್ಯಕ್ರಮ ಕಳೆದ 9  ದಿನಗಳಿಂದಲೇ ಆರಂಭಗೊಂಡು ,ಶಾಸ್ತ್ರೀಯ ವಿಧಿ ವಿಧಾನಗಳೊಂದಿಗೆ ನಿತ್ಯ ರಾತ್ರಿ ವೇಳೆ ಪ್ರಮುಖ ಉತ್ಸವಗಳಾದ ಕಲ್ಯಾಣೋತ್ಸವ, ಚಂದ್ರ ಮಂಡಲೊತ್ಸವ, ಸೂರ್ಯ ಮಂಡಲೋತ್ಸವ,ಹಂಸ ಉತ್ಸವ,ಬೆಳ್ಳಿ ಮಂಟಪೋತ್ಸವ,     ಹನುಮಂತೋತ್ಸವ, ಗರುಡೋತ್ಸವ,ಸೇರಿದಂತೆ ವಿವಿಧ ಪೂಜಾ ಕಾರ್ಯಕ್ರಮಗಳು ಅದ್ದೂರಿಯಾಗಿ ನೆರವೇರಿದವು . ದಿವ್ಯ ಬ್ರಹ್ಮ ರಥೋತ್ಸವ ಹಿನ್ನೆಲೆ ಶುಕ್ರವಾರ ಸಂಜೆ ಯಿಂದಲೆ ರಾಜ್ಯ ಹೊರ ರಾಜ್ಯಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿದ ಭಕ್ತಾದಿಗಳು ಮತ್ತು ಪ್ರವಾಸಿಗರು ನಗರದ ವಸತಿಗೃಹಗಳಲ್ಲಿ  ಮತ್ತು ದೇವಾಲಯದ ಒಳ ಮತ್ತು ಹೊರ ಭಾಗದ ಆವರಣದ ಬಳಿ ತಂಗಿದ್ದರು. 
 

24

 ಮಿಥುನ ಲಗ್ನದಲ್ಲಿ  ಶ್ರೀ ಚನ್ನಕೇಶವ ಸ್ವಾಮಿಯ ದಿವ್ಯ ಬ್ರಹ್ಮ ರಥೋತ್ಸವ ನಡೆಯಿತು. ಕಿರಣ್ ಲಗಾರಿ ಬಾರಿಸುವ ನಂತರ ಸಹಸ್ರಾರು ಸಂಖ್ಯೆಯಲ್ಲಿ ಬಂದಂತ ಭಕ್ತಾದಿಗಳು ಭಕ್ತಿ ಪೂರಕವಾಗಿ  ಮೂಲಸ್ಥಾನದಲ್ಲಿದ್ದ  ರಥವನ್ನು ದೇವಾಲಯದ ಆಗ್ನೇಯ ದಿಕ್ಕಿನ ಮೂಲೆಯ ಬಳಿ ಎಳೆದು ತರುವ ಮೂಲಕ ಅದ್ದೂರಿ ರಥೋತ್ಸವಕ್ಕೆ ಮೆರಗು ನೀಡಿದರು.
 

34

ರಥೋತ್ಸವ ಸಂದರ್ಭ ಶಾಸಕ ಎಚ್ ಕೆ ಸುರೇಶ್. ಮಾಜಿ ಸಚಿವ ಎಚ್ ಡಿ ರೇವಣ್ಣ,ಜಿಲ್ಲಾಧಿಕಾರಿ ಸತ್ಯಭಾಮ ,ಜಿಲ್ಲಾ ಪಂಚಾಯಿತಿ ಸಿಇಒ ಪೂರ್ಣಿಮಾ, ತಹಸಿಲ್ದಾರ್ ಮಮತಾ ಸೇರಿದಂತೆ ಇತರೆ ಜನಪ್ರತಿನಿಧಿಗಳು ಹಾಜರಿದ್ದರು.
 

44

ಮೌಲ್ವಿ ಭಾಷ ಖಾದ್ರಿ ಸಾಹೇಬ್ ರಥದ ಮುಂಭಾಗ ಕುರಾನ್ ಪಠಣ ಮಾಡದೆ ದೇಗುಲದ ಒಳ ಆವರಣದಲ್ಲಿ ದೇವರಿಗೆ ವಂದನೆ ಸಮರ್ಪಿಸಿ ದೇಗುಲದವರು ನೀಡುವ ಗೌರವ ಕಾಣಿಕೆ ಪಡೆದರು.

ವರದಿ: ಹರೀಶ್, ಏಷ್ಯಾ ನೆಟ್ ಸುವರ್ಣ ನ್ಯೂಸ್, ಹಾಸನ

About the Author

RJ
Ravi Janekal
ಪ್ರಸ್ತುತ, ಏಷಿಯಾನೆಟ್ ಸುವರ್ಣನ್ಯೂಸ್‌ನಲ್ಲಿ ಉಪ ಸಂಪಾದಕ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ನ್ಯೂಸ್ ಮಾನಿಟರಿಂಗ್ ಆಗಿ ಹಲವು ವರ್ಷಗಳ ಸೇವೆ, ಕೊರೊನಾ ವಾರಿಯರ್ಸ್ ಅವಾರ್ಡ್, ಮೂಲತಃ ರಾಯಚೂರು ಜಿಲ್ಲೆಯ ಜಾನೇಕಲ್ ಗ್ರಾಮದವರಾದ ಇವರು ಓದು, ಬರೆವಣಿಗೆ ಮತ್ತು ಸಾಹಿತ್ಯಾಸಕ್ತರು.
ಹಾಸನ
ಹಬ್ಬ

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved