MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Astrology
  • Festivals
  • ಅಂಬಾನಿಯಂತೆ ಶ್ರೀಮಂತರಾಗಬೇಕಾ? ಯಾವತ್ತೂ ಇಂಥ ತಪ್ಪುಗಳನ್ನು ಮಾಡ್ಬೇಡಿ!

ಅಂಬಾನಿಯಂತೆ ಶ್ರೀಮಂತರಾಗಬೇಕಾ? ಯಾವತ್ತೂ ಇಂಥ ತಪ್ಪುಗಳನ್ನು ಮಾಡ್ಬೇಡಿ!

ಮಾನವರು ಜೀವನದಲ್ಲಿ ಅನೇಕ ತಪ್ಪುಗಳನ್ನು ಮಾಡುತ್ತಾರೆ, ಆದರೆ ಅವುಗಳನ್ನು ಸಮಯಕ್ಕೆ ಸರಿಯಾಗಿ ಸರಿಪಡಿಸಿದರೆ, ಜೀವನ ಹಾಳಾಗದಂತೆ ಉಳಿಸಬಹುದು. ಆಚಾರ್ಯ ಚಾಣಕ್ಯ ಅಂತಹ ಕೆಲವು ತಪ್ಪುಗಳ ಬಗ್ಗೆ ಹೇಳಿದ್ದಾನೆ. 

1 Min read
Suvarna News
Published : Aug 16 2023, 11:52 AM IST
Share this Photo Gallery
  • FB
  • TW
  • Linkdin
  • Whatsapp
16

ತಪ್ಪು ಮಾಡುವುದು ಮಾನವನ ಸ್ವಭಾವ. ತಪ್ಪುಗಳನ್ನು ಮಾಡುವುದು ತಪ್ಪೋಲ್ಲ, ಆದರೆ ಅವನ್ನು ಸಮಯಕ್ಕೆ ಸರಿಯಾಗಿ ಸರಿಪಡಿಸದಿರುವುದು ಮತ್ತು ಪುನರಾವರ್ತಿಸುವುದು ತಪ್ಪು. ಆಚಾರ್ಯ ಚಾಣಕ್ಯ (Acharya Chanakya) ತನ್ನ ನೀತಿಶಾಸ್ತ್ರದಲ್ಲಿ ಮಾನವನ ಕೆಲವು ತಪ್ಪುಗಳು ಅವರನ್ನು ಬಡವರನ್ನಾಗಿ ಮಾಡಬಹುದು ಎಂದು ಹೇಳಿದ್ದಾನೆ. ಮಾನವರು ಯಾವಾಗಲೂ ಈ ತಪ್ಪುಗಳನ್ನು ಮಾಡುವುದನ್ನು ತಪ್ಪಿಸಬೇಕು. 
 

26

ನೀವು ಶ್ರೀಮಂತರಾಗಲು ಮತ್ತು ಸಂತೋಷದ ಜೀವನವನ್ನು (Happy Life) ನಡೆಸಲು ಬಯಸಿದರೆ, ಕೆಲವು ತಪ್ಪುಗಳನ್ನು ಮಾಡಬೇಡಿ ಎಂದಿದ್ದಾರೆ ಚಾಣಕ್ಯ. ಹಾಗಿದ್ರೆ ಯಾವ ತಪ್ಪುಗಳನ್ನು ಮಾಡಬಾರದು ಅವುಗಳ ಬಗ್ಗೆ ತಿಳಿಯೋಣ. 
 

36

ಕೊಳಕು
ಚಾಣಕ್ಯ ನೀತಿ ಪ್ರಕಾರ, ಜನರು ಕೊಳೆಯನ್ನು ತಪ್ಪಿಸಬೇಕು. ಯಾವಾಗಲೂ ನಿಮ್ಮನ್ನು ಸ್ವಚ್ಛವಾಗಿರಿಸಿಕೊಳ್ಳಿ. ಮನೆ ಮತ್ತು ಸುತ್ತಮುತ್ತಲಿನ ಪ್ರದೇಶಗಳನ್ನು ಸ್ವಚ್ಛವಾಗಿರಿಸಿಕೊಳ್ಳಿ (clean sarrounding). ತಾಯಿ ಲಕ್ಷ್ಮಿ ಯಾವಾಗಲೂ ಯಾವುದೇ ಕೊಳಕು ಇರದ, ಸಂಪೂರ್ಣ ಸ್ವಚ್ಚ ಸ್ಥಳಗಳಲ್ಲಿ ವಾಸಿಸುತ್ತಾಳೆ.

46

ದುಂದು ವೆಚ್ಚ
ಯಾವಾಗಲೂ ಹಣವನ್ನು ಬುದ್ಧಿವಂತಿಕೆಯಿಂದ ಖರ್ಚು ಮಾಡಬೇಕು. ಯೋಚಿಸದೇ ಹಣವನ್ನು ನೀರಿನಂತೆ (wasting money) ಚೆಲ್ಲುವುದರಿಂದ ಕೆಲವು ಸಮಯದಲ್ಲಿ ಶ್ರೀಮಂತ ವ್ಯಕ್ತಿಯೂ ಬಡವನಾಗುತ್ತಾನೆ. ಆದ್ದರಿಂದ, ನೀವು ಶ್ರೀಮಂತರಾಗಿರಲಿ ಅಥವಾ ಮಧ್ಯಮ ವರ್ಗದ ಜನರಿಗೆ ಆಗಲಿ, ಹಣವನ್ನು ವ್ಯರ್ಥ ಮಾಡಬೇಡಿ. ಹಣ ಹೂಡಿಕೆ ಮಾಡುವುದು ಮತ್ತು ಅಗತ್ಯವಿರುವವರಿಗೆ ಸಹಾಯ ಮಾಡುವುದು ಉತ್ತಮ, ಇದು ತಾಯಿ ಲಕ್ಷ್ಮಿಯನ್ನು ಸಂತೋಷಪಡಿಸುತ್ತದೆ.

56

ದುರಾಸೆ ಮತ್ತು ಅಹಂಕಾರ
ದುರಾಸೆ ಮತ್ತು ಅಹಂಕಾರಿ ವ್ಯಕ್ತಿ ಬಳಿ ಎಂದಿಗೂ ಹಣವಿಲ್ಲ. ಅಂತಹ ವ್ಯಕ್ತಿಯು ಬಡವನಾಗಿರುತ್ತಾನೆ. ಅಂತಹ ಜನರೊಂದಿಗೆ ತಾಯಿ ಲಕ್ಷ್ಮಿ ಎಂದಿಗೂ ಸಂತೋಷವಾಗಿರುವುದಿಲ್ಲ. ಆದುದರಿಂದ ದುರಾಸೆ ಮತ್ತು ಅಹಂಕಾರ ಬಿಟ್ಟು ಜೀವನ ನಡೆಸಿ. 

66

ಕೆಟ್ಟ ಸಹವಾಸ (bad company)
ಕೆಟ್ಟ ಸಹವಾಸವು ವ್ಯಕ್ತಿ ಜೀವನದಲ್ಲಿ ಸಾಕಷ್ಟು ಸಮಸ್ಯೆಗಳನ್ನು ಸೃಷ್ಟಿಸುತ್ತದೆ. ಸಂತೋಷದ ಜೀವನವನ್ನು ನಡೆಸುವ ವ್ಯಕ್ತಿಯೂ ನಾಶವಾಗುತ್ತಾನೆ. ಅವನ ಸಂಪತ್ತು (Wealth), ಸಂತೋಷ (Happiness), ಆರೋಗ್ಯ (Health), ಸಂಬಂಧಗಳು (Relationships) ಎಲ್ಲವೂ ಹದಗೆಡುತ್ತವೆ. ಅವನು ತಪ್ಪು ಅಥವಾ ಅನೈತಿಕ ಕೆಲಸಗಳನ್ನು (Illegal Works) ಮಾಡಲು ಪ್ರಾರಂಭಿಸುತ್ತಾನೆ. ಜನರು ಅನೈತಿಕವಾಗಿ ವರ್ತಿಸುವ ಮನೆಯಲ್ಲಿ ತಾಯಿ ಲಕ್ಷ್ಮಿ ಎಂದಿಗೂ ವಾಸಿಸುವುದಿಲ್ಲ.

About the Author

SN
Suvarna News
ಹಣ (Hana)
ಹಬ್ಬ

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved