MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ಬಿಗ್ ಬಾಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Astrology
  • Vaikuntha Ekadashi: ಇಸ್ಕಾನ್ ಹರೇ ಕೃಷ್ಣಗಿರಿ, ವೈಕುಂಠ ಗಿರಿಯಲ್ಲಿ ವೈಕುಂಠ ಏಕಾದಶಿ ಸಂಭ್ರಮ!

Vaikuntha Ekadashi: ಇಸ್ಕಾನ್ ಹರೇ ಕೃಷ್ಣಗಿರಿ, ವೈಕುಂಠ ಗಿರಿಯಲ್ಲಿ ವೈಕುಂಠ ಏಕಾದಶಿ ಸಂಭ್ರಮ!

Vaikuntha Ekadashi 2025: ವೈಕುಂಠ ಏಕಾದಶಿಯ ಶುಭ ದಿನದಂದು ಇಸ್ಕಾನ್ ಬೆಂಗಳೂರಿನ ಹರೇ ಕೃಷ್ಣ ಗಿರಿಯಲ್ಲಿ ಮುಂಜಾನೆ 3:00 ಗಂಟೆಗೆ ಸಂಭ್ರಮದ ಚಾಲನೆ ನೀಡಲಾಯಿತು. ಶ್ರೀ ಶ್ರೀನಿವಾಸ ಗೋವಿಂದ ಹಾಗೂ ಶ್ರೀ ರುಕ್ಮಿಣಿ ಸತ್ಯಭಾಮೆಯರ ಸಮೇತ ಶ್ರೀಕೃಷ್ಣನಿಗೆ ಸುಪ್ರಭಾತ ಸೇವೆಯನ್ನು ಸಲ್ಲಿಸಲಾಯಿತು

2 Min read
Author : Ravi Janekal
Published : Jan 02 2026, 06:13 PM IST
Share this Photo Gallery
  • FB
  • TW
  • Linkdin
  • Whatsapp
16
ಮುಂಜಾನೆಯ ಸುಪ್ರಭಾತ ಸೇವೆ ಮತ್ತು ವೈಕುಂಠ ದ್ವಾರದ ಉದ್ಘಾಟನೆ
Image Credit : Asianet News

ಮುಂಜಾನೆಯ ಸುಪ್ರಭಾತ ಸೇವೆ ಮತ್ತು ವೈಕುಂಠ ದ್ವಾರದ ಉದ್ಘಾಟನೆ

ವೈಕುಂಠ ಏಕಾದಶಿಯ ಶುಭ ದಿನದಂದು ಇಸ್ಕಾನ್ ಬೆಂಗಳೂರಿನ ಹರೇ ಕೃಷ್ಣ ಗಿರಿಯಲ್ಲಿ ಮುಂಜಾನೆ 3:00 ಗಂಟೆಗೆ ಸಂಭ್ರಮದ ಚಾಲನೆ ನೀಡಲಾಯಿತು. ಶ್ರೀ ಶ್ರೀನಿವಾಸ ಗೋವಿಂದ ಹಾಗೂ ಶ್ರೀ ರುಕ್ಮಿಣಿ ಸತ್ಯಭಾಮೆಯರ ಸಮೇತ ಶ್ರೀಕೃಷ್ಣನಿಗೆ ಸುಪ್ರಭಾತ ಸೇವೆಯನ್ನು ಸಲ್ಲಿಸಲಾಯಿತು. ಭಕ್ತರ ಸಡಗರದ ನಡುವೆ ವೈಕುಂಠ ದ್ವಾರವನ್ನು ಮುಕ್ತಗೊಳಿಸಲಾಗಿದ್ದು, ಭಕ್ತರು ಭಕ್ತಿಯಿಂದ 'ಗೋವಿಂದ ನಾಮ' ಸ್ಮರಣೆ ಮಾಡುತ್ತಾ ದ್ವಾರ ಪ್ರವೇಶ ಮಾಡಿದರು.

26
ಮೂಲ ವಿಗ್ರಹಗಳಿಗೆ ಭವ್ಯ ಮಹಾ ಅಭಿಷೇಕ
Image Credit : Asianet News

ಮೂಲ ವಿಗ್ರಹಗಳಿಗೆ ಭವ್ಯ ಮಹಾ ಅಭಿಷೇಕ

ಹಬ್ಬದ ಅಂಗವಾಗಿ ದೇವಾಲಯದ ಮೂಲ ವಿಗ್ರಹಗಳಿಗೆ ಅತ್ಯಂತ ಶ್ರದ್ಧೆಯಿಂದ ಮಹಾ ಅಭಿಷೇಕವನ್ನು ನೆರವೇರಿಸಲಾಯಿತು. ಹಾಲು, ಮೊಸರು, ಜೇನುತುಪ್ಪ, ಪಂಚಗವ್ಯ ಹಾಗೂ ವಿವಿಧ ಹಣ್ಣುಗಳ ರಸಗಳಿಂದ ದೇವರಿಗೆ ಸ್ನಾನ ಮಾಡಿಸಲಾಯಿತು. ನಂತರ ನೂರಾರು ಬಗೆಯ ಸುಗಂಧಭರಿತ ಹೂವುಗಳಿಂದ ಪುಷ್ಪ ಅಭಿಷೇಕ ಮಾಡುವ ಮೂಲಕ ಭಗವಂತನ ದರ್ಶನವನ್ನು ಇನ್ನಷ್ಟು ಮನಮೋಹಕವಾಗಿಸಲಾಯಿತು.

Related Articles

Related image1
ವೈಕುಂಠ ಏಕಾದಶಿ ಪುರಾಣ ಕಥೆ ಏನು? ಯಾಕೆ ಆಚರಣೆ ಮಾಡುತ್ತಾರೆ?
Related image2
ಬೆಂಗಳೂರಿನ ಟಿಟಿಡಿ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ, ಎಷ್ಟು ಗಂಟೆಯಿಂದ ದರ್ಶನ ಆರಂಭ, ಇಲ್ಲಿದೆ ಡೀಟೇಲ್ಸ್‌
36
ಅನಂತಶೇಷ ವಾಹನದಲ್ಲಿ ರಾಜಾಧಿರಾಜನ ಮೆರವಣಿಗೆ
Image Credit : Asianet News

ಅನಂತಶೇಷ ವಾಹನದಲ್ಲಿ ರಾಜಾಧಿರಾಜನ ಮೆರವಣಿಗೆ

ದರ್ಶನ ಮುಗಿಸಿ ಹೊರಬರುವ ಭಕ್ತರಿಗಾಗಿ ರಾಧಾಕೃಷ್ಣರ ಉತ್ಸವ ವಿಗ್ರಹಗಳನ್ನು ವಿಶೇಷವಾಗಿ ಅಲಂಕರಿಸಲಾದ 'ಅನಂತಶೇಷ ವಾಹನ'ದಲ್ಲಿ ಕುಳ್ಳಿರಿಸಲಾಗಿತ್ತು. ಹೂವಿನಿಂದ ಸಿಂಗರಿಸಲ್ಪಟ್ಟ ಈ ವಾಹನದಲ್ಲಿ ಭಗವಂತನನ್ನು ಕಣ್ತುಂಬಿಕೊಳ್ಳಲು ಭಕ್ತರು ಮುಗಿಬಿದ್ದರು. ರಾಜಾಜಿನಗರದ ದೇವಾಲಯದ ಆವರಣದಲ್ಲಿ ನಡೆದ ಈ ಮೆರವಣಿಗೆಯಲ್ಲಿ ಭಜನೆ ಮತ್ತು ಕೀರ್ತನೆಗಳು ಮುಗಿಲು ಮುಟ್ಟಿದ್ದವು.

46
ಗಣ್ಯರ ಆಗಮನ ಮತ್ತು ಧಾರ್ಮಿಕ ಸಂದೇಶ
Image Credit : Asianet News

ಗಣ್ಯರ ಆಗಮನ ಮತ್ತು ಧಾರ್ಮಿಕ ಸಂದೇಶ

ಈ ಪವಿತ್ರ ದಿನದಂದು ಇಸ್ರೋ ಅಧ್ಯಕ್ಷ ಎಸ್. ಸೋಮನಾಥ್, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಚಿತ್ರನಟ ಶಿವರಾಜ್ ಕುಮಾರ್ ಸೇರಿದಂತೆ ಹಲವು ಗಣ್ಯರು ಭೇಟಿ ನೀಡಿ ದರ್ಶನ ಪಡೆದರು. ಇಸ್ಕಾನ್ ಅಧ್ಯಕ್ಷ ಮಧು ಪಂಡಿತ್ ದಾಸರು ಭಕ್ತರನ್ನು ಉದ್ದೇಶಿಸಿ ಮಾತನಾಡಿ, ಕಲಿಯುಗದಲ್ಲಿ ಹರಿನಾಮ ಸಂಕೀರ್ತನೆಯೇ ಮೋಕ್ಷಕ್ಕೆ ದಾರಿ ಎಂಬ ಸಂದೇಶವನ್ನು ನೀಡಿದರು.

56
ವೈಕುಂಠ ಗಿರಿ ವಸಂತಪುರದಲ್ಲಿ ಲಕ್ಷಾಂತರ ಭಕ್ತರ ಸಮಾಗಮ
Image Credit : Asianet News

ವೈಕುಂಠ ಗಿರಿ ವಸಂತಪುರದಲ್ಲಿ ಲಕ್ಷಾಂತರ ಭಕ್ತರ ಸಮಾಗಮ

ವಸಂತಪುರದ ವೈಕುಂಠ ಗಿರಿಯಲ್ಲಿಯೂ ಹಬ್ಬದ ಸಂಭ್ರಮ ಕಳೆಗಟ್ಟಿತ್ತು. ತಿರುಪತಿಗೆ ಹೋಗಲು ಸಾಧ್ಯವಾಗದ ಸಾವಿರಾರು ಭಕ್ತರು ಇಲ್ಲಿನ ರಾಜಾಧಿರಾಜ ಶ್ರೀಕೃಷ್ಣನ ದರ್ಶನ ಪಡೆದರು. ಸುಮಾರು 1.5 ಲಕ್ಷಕ್ಕೂ ಅಧಿಕ ಭಕ್ತರು ಸರತಿ ಸಾಲಿನಲ್ಲಿ ನಿಂತು ಶಾಂತಿಯುತವಾಗಿ ದರ್ಶನ ಪಡೆದದ್ದು ಇಲ್ಲಿನ ವ್ಯವಸ್ಥಿತ ನಿರ್ವಹಣೆಗೆ ಸಾಕ್ಷಿಯಾಗಿತ್ತು.

66
ಲಡ್ಡು ಪ್ರಸಾದ ಮತ್ತು ನೂತನ ಸೌಲಭ್ಯಗಳ ಉದ್ಘಾಟನೆ
Image Credit : Asianet News

ಲಡ್ಡು ಪ್ರಸಾದ ಮತ್ತು ನೂತನ ಸೌಲಭ್ಯಗಳ ಉದ್ಘಾಟನೆ

ದರ್ಶನಕ್ಕೆ ಬಂದ ಪ್ರತಿಯೊಬ್ಬ ಭಕ್ತರಿಗೂ ದೇವಸ್ಥಾನದ ವತಿಯಿಂದ ವಿಶೇಷವಾಗಿ ತಯಾರಿಸಲಾದ ಕೇಸರಿ ಲಡ್ಡು ಪ್ರಸಾದವನ್ನು ವಿತರಿಸಲಾಯಿತು. ಇದೇ ಸಂದರ್ಭದಲ್ಲಿ ಭಕ್ತರ ಅನುಕೂಲಕ್ಕಾಗಿ ನಿರ್ಮಿಸಲಾದ 4 ಮಹಡಿಗಳ ನೂತನ ಕಟ್ಟಡ ಮತ್ತು ಪಾರ್ಕಿಂಗ್ ವ್ಯವಸ್ಥೆಯನ್ನು ಉದ್ಘಾಟಿಸಲಾಯಿತು. ಸುಗಮ ದರ್ಶನಕ್ಕೆ ಪೂರಕವಾದ ಈ ಸೌಲಭ್ಯಗಳು ಭಕ್ತರ ಮೆಚ್ಚುಗೆಗೆ ಪಾತ್ರವಾದವು.

About the Author

RJ
Ravi Janekal
ಪ್ರಸ್ತುತ, ಏಷಿಯಾನೆಟ್ ಸುವರ್ಣನ್ಯೂಸ್‌ನಲ್ಲಿ ಉಪ ಸಂಪಾದಕ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ನ್ಯೂಸ್ ಮಾನಿಟರಿಂಗ್ ಆಗಿ ಹಲವು ವರ್ಷಗಳ ಸೇವೆ, ಕೊರೊನಾ ವಾರಿಯರ್ಸ್ ಅವಾರ್ಡ್, ಮೂಲತಃ ರಾಯಚೂರು ಜಿಲ್ಲೆಯ ಜಾನೇಕಲ್ ಗ್ರಾಮದವರಾದ ಇವರು ಓದು, ಬರೆವಣಿಗೆ ಮತ್ತು ಸಾಹಿತ್ಯಾಸಕ್ತರು.
ಜ್ಯೋತಿಷ್ಯ
ಹಬ್ಬ

Latest Videos
Recommended Stories
Recommended image1
ಗುರು-ಮಂಗಲ ಪ್ರತಿಯತಿ ರಾಜಯೋಗ, 5 ರಾಶಿಗೆ ಆಸ್ತಿ, ಸಂಪತ್ತು
Recommended image2
2026 ರ ಈ ತಿಂಗಳು ಅಪಾಯಕಾರಿಯಾಗಬಹುದು, ಯಾವ ಜನರು ಯಾವಾಗ ಜಾಗರೂಕರಾಗಿರಬೇಕು ನೋಡಿ
Recommended image3
Vastu Tips: ಸಂಜೆ ಹೊತ್ತು ಈ ವಸ್ತುಗಳನ್ನು ಮಾಡಿದ್ರೆ ದಾನ, ಖಾಲಿಯಾಗುತ್ತೆ ನಿಮ್ಮ ಮನೆ ಖಜಾನೆ
Related Stories
Recommended image1
ವೈಕುಂಠ ಏಕಾದಶಿ ಪುರಾಣ ಕಥೆ ಏನು? ಯಾಕೆ ಆಚರಣೆ ಮಾಡುತ್ತಾರೆ?
Recommended image2
ಬೆಂಗಳೂರಿನ ಟಿಟಿಡಿ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ, ಎಷ್ಟು ಗಂಟೆಯಿಂದ ದರ್ಶನ ಆರಂಭ, ಇಲ್ಲಿದೆ ಡೀಟೇಲ್ಸ್‌
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved