ಮೋದಿ ಸಮಾವೇಶ ಸ್ಥಳದಲ್ಲಿ ಸ್ವಚ್ಛತೆ ನಡೆಸುತ್ತಿದ್ದವರಿಗೆ ಭೇಷ್ ಎಂದ ಡಿಸಿಪಿ ರವಿ!
ಅರಮನೆ ಮೈದಾನದಲ್ಲಿ ಶನಿವಾರ ಪ್ರಧಾನ ಮಂತ್ರಿಗಳ ಚುನಾವಣಾ ಪ್ರಚಾರ ಮುಗಿದ ಬಳಿಕ ಆ ಸ್ಥಳದಲ್ಲಿ ಸ್ವಯಂಪ್ರೇರೇರಿತರಾಗಿ ಸ್ವಚ್ಛತಾ ಕೆಲಸದಲ್ಲಿ ತೊಡಗಿದ್ದ ಸಾರ್ವಜನಿಕರನ್ನು ಪಶ್ಚಿಮ ವಿಭಾಗದ ಡಿಸಿಪಿ ರವಿ.ಡಿ.ಚೆನ್ನಣ್ಣನವರ್ ಅಭಿನಂದಿಸಿದ ಅಪರೂಪದ ಪ್ರಸಂಗ ಜರುಗಿದೆ.
ಶನಿವಾರ ಪ್ರಧಾನ ಮಂತ್ರಿಗಳ ಚುನಾವಣಾ ಪ್ರಚಾರ ಮುಗಿದ ಬಳಿಕ ಆ ಸ್ಥಳದಲ್ಲಿ ಸ್ವಯಂಪ್ರೇರೇರಿತರಾಗಿ ಸ್ವಚ್ಛತಾ ಕೆಲಸದಲ್ಲಿ ತೊಡಗಿದ್ದ ಸಾರ್ವಜನಿಕರು
ಸ್ಥಳಕ್ಕೆ ಧಿಡೀರ್ ಭೇಟಿ ನೀಡಿದ ಪಶ್ಚಿಮ ವಿಭಾಗದ ಡಿಸಿಪಿ ರವಿ. ಡಿ. ಚೆನ್ನಣ್ಣನವರ್
ಸಮಾವೇಶ ಮುಗಿದ ಬಳಿಕ ಕೆಲ ಮಹಿಳೆಯರು, ಮಕ್ಕಳು ಸೇರಿದಂತೆ ಕೆಲವರು ಅಲ್ಲಿ ಬಿದ್ದಿದ್ದ ಕಸವನ್ನು ಬ್ಯಾಗ್ಗಳಲ್ಲಿ ತುಂಬುತ್ತಿದ್ದ ದೃಶ್ಯ ಡಿಸಿಪಿ ಅವರ ಕಣ್ಣಿಗೆ ಬಿದ್ದಿದೆ
ಏನು ಮಾಡುತ್ತಿದ್ದೀರಿ? ಎಂದು ಡಿಸಿಪಿ ಪ್ರಶ್ನಿಸಿದಾಗ ‘ನಾವೆಲ್ಲಾ ಮೋದಿ ಅವರ ಬೆಂಬಲಿಗರು. 5 ವರ್ಷದಿಂದ ಪ್ರಧಾನಿಗಳ ಸ್ವಚ್ಛತಾ ಭಾರತ್ ಅಭಿಯಾನದಲ್ಲಿ ತೊಡಗಿಸಿಕೊಂಡಿದ್ದೇವೆ' ಎಂದ ಸಾರ್ವಜನಿಕರು
ಸಾರ್ವಜನಿಕರ ಈ ಸ್ವಚ್ಛತಾ ಕಾರ್ಯಕ್ಕೆ ಭೇಷ್ ಎಂದ ಡಿಸಿಪಿ ರವಿ
ಸ್ವಯಂ ಸೇವಕರೊಂದಿಗೆ ಸೆಲ್ಫಿಗೂ ಪೋಸ್ ನೀಡಿದ ರವಿ.ಡಿ.ಚೆನ್ನಣ್ಣನವರ್
ಕನಕಪುರ ರಸ್ತೆಯಲ್ಲಿರುವ ಶೋಭಾ ಹಿಲ್ವ್ಯೂ ಅಪಾರ್ಟ್ಮೆಂಟ್ನ ಚೈತನ್ಯ ಹಾಗೂ ತಂಡ ಸದಾ ತಮ್ಮ ಪರಿಸರವನ್ನು ಉತ್ತಮವಾಗಿಡುವಲ್ಲಿ ಕಾರ್ಯ ನಿರತರಾಗಿದೆ. ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಲು ಈ ತಂಡ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.