ಬಿಜೆಪಿ ಶಾಸಕರ ಅನುಪಸ್ಥಿತಿಯಲ್ಲಿ ನಾಮಪತ್ರ ಸಲ್ಲಿಸಿದ ತೇಜಸ್ವಿ!
ತೇಜಸ್ವಿನಿ ಅನಂತ್ ಕುಮಾರ್ ಕೈ ತಪ್ಪಿದ ಟಿಕೆಟ್ ಯುವ ಮುಖಂಡ ತೇಜಸ್ವಿ ಕೈ ಸೇರಿದೆ. ಇದಕ್ಕೆ ಕುಪಿತರಾದ ಬಿಜೆಪಿ ಶಾಸಕರು ತೇಜಸ್ವಿ ನಾಮಪತ್ರ ಸಲ್ಲಿಸುವಾಗ ಅನುಪಸ್ಥಿತರಿದ್ದರು.
ಬಿಜೆಪಿ ಎಂಪಿ ರಾಜೀವ್ ಹಾಗೂ ಇತರೆ ಮುಖಂಡರ ಉಪಸ್ಥಿತಿಯಲ್ಲಿ ನಾಮಪತ್ರ ಸಲ್ಲಿಸಿದ ತೇಜಸ್ವಿ ಸೂರ್ಯ.
ರೋಡ್ ಶೋ ಮೂಲಕ ತೆರಳಿ ನಾಮಪತ್ರ ಸಲ್ಲಿಸಿದ ಬೆಂಗಳೂರು ದಕ್ಷಿಣ ಬಿಜೆಪಿ ಅಭ್ಯರ್ಥಿ.
ತೇಜಸ್ವಿನಿ ಅನಂತ್ಕುಮಾರ್ ಅವರಿಗೆ ಟಿಕೆಟ್ ತಪ್ಪಿದ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರ ಆಕ್ರೋಶ.
ಯುವಕರಿಗೆ ಮಣೆ ಹಾಕಬೇಕೆಂಬ ದೃಷ್ಟಿಯಿಂದ ಸೂರ್ಯನಿಗೆ ಮಣೆ ಹಾಕಿದ ಬಿಜೆಪಿ ಹೈ ಕಮಾಂಡ್.
ಬೆಂಗಳೂರಿನ ದೊಡ್ಡ ಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಸೂರ್ಯ.