ಮಾತಲ್ಲೇ ಮೋಡಿ ಮಾಡುವ ತೇಜಸ್ವಿ!
ರಾಷ್ಟ್ರ ರಾಜಕಾರಣದಲ್ಲಿ ಬಹಳ ಕುತೂಹಲ ಮೂಡಿಸಿದ್ದ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಬಿಜೆಪಿಯು ಯುವ-ಮುಖಂಡ ತೇಜಸ್ವಿ ಸೂರ್ಯಗೆ ಟಿಕೆಟ್ ನೀಡಿದೆ. ಯಾರು ಈ ತೇಜಸ್ವಿ ಸೂರ್ಯ? ಇಲ್ಲಿದೆ ಸಂಪೂರ್ಣ ಮಾಹಿತಿ.
ಬಿಜೆಪಿ ಹಿರಿಯ ನಾಯಕರಾಗಿದ್ದ ಅನಂತ್ ಕುಮಾರ್ ಗರಡಿಯಲ್ಲಿ ಬೆಳೆದ ತೇಜಸ್ವಿ ಸೂರ್ಯ
ಹಿರಿಯ ಸಾಹಿತಿ ಎಸ್ ಎಲ್ ಭೈರಪ್ಪ ಎಂದರೆ ಇವರಿಗೆ ಅಪಾರ ಅಭಿಮಾನ
ಚಿಕ್ಕಂದಿನಿಂದಲೇ ಆರ್ಎಸ್ಎಸ್ , ಸಂಘ-ಪರಿವಾರದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡವರು.
ಅಣ್ಣ-ತಮ್ಮನಂತಿರುವ ತೇಜಸ್ವಿ- ಪ್ರತಾಪ್ ಸಿಂಹ, ಈ ಬಾರಿ ಇಬ್ಬರಿಗೂ ಟಿಕೆಟ್!
ಜಯನಗರ ಶಾಸಕರಾಗಿದ್ದ ವಿಜಯ್ ಕುಮಾರ್ ಜೊತೆ ನಿಕಟ ಸಂಪರ್ಕ ಹೊಂದಿದ್ದರು
ಸದ್ಯ ಬಿಜೆಪಿ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿಯಾಗಿರುವ ತೇಜಸ್ವಿ ಸೂರ್ಯ ಪಕ್ಷದ ಸಾಮಾಜಿಕ ಜಾಲತಾಣವನ್ನು ನಿಭಾಯಿಸುತ್ತಿದ್ದಾರೆ.
ಪಕ್ಷದ ಸಂಘಟನೆಗಳಲ್ಲಿ, ಪ್ರತಿಭಟನೆಗಳಲ್ಲಿ, ಹೋರಾಟಗಳಲ್ಲಿ ಮುಂಚೂಣಿಯಲ್ಲಿದ್ದಾರೆ.
ತೇಜಸ್ವಿ ಸೂರ್ಯ ವೃತ್ತಿಯಲ್ಲಿ ವಕೀಲರು