ಆಯೋಗದ ಮನಗೆದ್ದ ಮತದಾರರು: ಬಹುಮಾನ ಪಡೆದು ಬೀಗಿದರು!
ಮತ ಹಕ್ಕಿನಿಂದ ತಪ್ಪಿಸಿಕೊಳ್ಳಲು ಸಾವಿರಾರು ಕಾರಣಗಳಿರುತ್ತವೆ. ಆದರೆ, ತಮ್ಮ ಕರ್ತವ್ಯ ನಿರ್ವಹಿಸುವುದಾದರೆ ಎಂಥವರೂ, ಎಷ್ಟೇ ಕಷ್ಟವಾದರೂ ಮತಗಟ್ಟೆಗೆ ತೆರಳಿ, ತಮ್ಮ ಹಕ್ಕು ಚಲಾಯಿಸಿ ಬರುತ್ತಾರೆ. ಇಂಥವರಿಗೆ ಕರ್ನಾಟಕ ಚುನಾವಣಾ ಆಯೋಗ ನಡೆಸಿದ ಫೋಟೋ ಸ್ಪರ್ಧೆಯಲ್ಲಿ ಬಹುಮಾನ ಗಳಿಸಿರುವ ಪೋಟೋಗಳಿವು...
ನಡೆಯಲಾಗದ ವೃದ್ಧೆಗೆ ಮತ ಚಲಾಯಿಸಲು ಸಹಕರಿಸುತ್ತಿರುವ ಸ್ವಯಂಸೇವಕರು.
ಅಜ್ಜಿಗೂ ತನ್ನ ಹಕ್ಕು ಚಲಾಯಿಸಲು ಎಲ್ಲಿಲ್ಲದ ಉತ್ಸಾಹ. ದ್ವಿತೀಯ ಬಹುಮಾನ ಪಡೆದ ಫೋಟೋ.
ಕನ್ನಡಪ್ರಭದ ಗದಗ ಛಾಯಾಗ್ರಾಹಕ ಶಂಕರ್ ಗುರಿಕಾರ್ ಅವರ ಫೋಟೋಗೆ ತೃತೀಯ ಬಹುಮಾನ ಗಳಿಸಿದ್ದಾರೆ.
ಧರ್ಮ ಯಾವುದಾದರೇನು? ಮೊದಲು ನಾವು ಭಾರತೀಯರು: ಸಮಾಧಾನಕರ ಬಹುಮಾನ.
ಅಜ್ಜಿಗೂ ತನ್ನ ಹಕ್ಕು ಚಲಾಯಿಸಲು ಎಲ್ಲಿಲ್ಲದ ಉತ್ಸಾಹ. ಸಮಾಧಾನಕರ ಬಹುಮಾನ ಪಡೆದ ಫೋಟೋ.
ನಾವು ಅವಳಿ, ನಮಗೂ ಅವಳಿ. ಮತ ಹಾಕೋದ ಮಾತ್ರ ಮರೆಯೋಲ್ಲ ರೀ: ವಿಶೇಷ ಬಹುಮಾನ.