ಕಾಶಿಯಲ್ಲಿ ಮೋದಿ ವಿರುದ್ಧ ಪ್ರಿಯಾಂಕಾ ಸ್ಪರ್ಧಿಸದಿರಲು 5 ಕಾರಣಗಳು!
ಕಾಂಗ್ರೆಸ್ಸಿನ ನೂತನ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ದೇಗುಲ ನಗರಿ ವಾರಾಣಸಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸ್ಪರ್ಧಿಸಬಹುದು, ತನ್ಮೂಲಕ ಕಾಶಿಯಲ್ಲಿ ರೋಚಕ ಹಣಾಹಣಿ ನಡೆಯಬಹುದು ಎಂಬ ಎಲ್ಲ ಕುತೂಹಲಗಳಿಗೆ ಕಾಂಗ್ರೆಸ್ ತೆರೆ ಎಳೆದಿದೆ. 2014ರ ಲೋಕಸಭೆ ಚುನಾವಣೆಯಲ್ಲಿ ಮೋದಿ ಎದುರು ಹೀನಾಯವಾಗಿ ಸೋತು, ಮೂರನೇ ಸ್ಥಾನಕ್ಕೆ ಜಾರಿದ್ದ ಅಜಯ್ ರಾಯ್ ಅವರಿಗೆ ಟಿಕೆಟ್ ನೀಡಿದೆ. ಕಾಂಗ್ರೆಸ್ ಈ ಹೆಜ್ಜೆ ಯಾಕೆ ಇಟ್ಟಿತು? ಪ್ರಿಯಾಂಕಾ ಕಣದಿಂದ ಹಿಂದೆ ಸರಿಯಲು ಕಾರಣವೇನು? ಇಲ್ಲಿದೆ 5 ಕಾರಣಗಳು
1. ವಾರಾಣಸಿಯಲ್ಲಿ ಎಸ್ಪಿ- ಬಿಎಸ್ಪಿ ಮೈತ್ರಿಕೂಟದ ಬೆಂಬಲ ಸಿಗದೇ ಹೋದದ್ದು
2. ಕ್ಷೇತ್ರದಲ್ಲಿ ಗೆದ್ದ ಬಳಿಕ ನಡೆದಿರುವ ಅಭಿವೃದ್ಧಿಗಳು ಮೋದಿಗೆ ವರವಾಗಿರುವುದು
3. ಪ್ರಿಯಾಂಕಾ ಸ್ಪರ್ಧಿಸಿದರೆ, ಪಕ್ಷದ ಸಂಪನ್ಮೂಲ ಕೇವಲ ವಾರಾಣಸಿಗೆ ಸೀಮಿತದ ಸಾಧ್ಯತೆ
4. ಕೇವಲ ವಾರಾಣಸಿಗೆ ಗಮನ ಹರಿಸಿದರೆ ಉ.ಪ್ರದೇಶ ಇತರೆ ಕ್ಷೇತ್ರಗಳ ನಿರ್ಲಕ್ಷ್ಯದ ಭೀತಿ
5. ಭಾರೀ ಅಂತರದಲ್ಲಿ ಸೋಲಾದರೆ ಅದು ಪ್ರಿಯಾಂಕಾ ಮುಂದಿನ ಭವಿಷ್ಯಕ್ಕೆ ಮಾರಕ