MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • News
  • Crime
  • ಮಲಬಾರ್ ಮಲ್ಟಿಸ್ಟೇಟ್ ಆಗ್ರೋ ಕೋಪರೇಟಿವ್ ಸೊಸೈಟಿ ಹೆಸರನಲ್ಲಿ ಕೋಟಿ ಕೋಟಿ ಲೂಟಿ!

ಮಲಬಾರ್ ಮಲ್ಟಿಸ್ಟೇಟ್ ಆಗ್ರೋ ಕೋಪರೇಟಿವ್ ಸೊಸೈಟಿ ಹೆಸರನಲ್ಲಿ ಕೋಟಿ ಕೋಟಿ ಲೂಟಿ!

Malabar Multistate Agro Cooperative Society fraud case: ಒನ್ ಟು ಡಬ್ಬಲ್ ಲಾಭ ಬರುತ್ತೆ ಅಂದರೆ ಸಾಕು ಜನರು ನನಗೂ ಇರಲಿ, ನಮ್ಮ ಮಕ್ಕಳಿಗೂ ಇರಲಿ, ಮೊಮ್ಮಕ್ಕಳಿಗೂ ಆಗುತ್ತೆ ಅಂತ ಮುಗಿ ಬೀಳುವುದು ಇತ್ತೀಚಿನ ದಿನಗಳಲ್ಲಿ ಜಾಸ್ತಿಯೇ ಆಗಿದೆ ಎನ್ನುವುದಂತು ಸತ್ಯ. ಅದು ಸರಿ ಇದೆಯೋ ಇಲ್ವೋ, ಇಲ್ಲ ಮೋಸ ಆಗುತ್ತದೋ ಎನ್ನುವುದರ ಬಗ್ಗೆ ಆಲೋಚಿಸುವುದಕ್ಕೆ ಹೋಗಲ್ಲ. ಹಾಗೆಯೇ ಇಲ್ಲಿಯೂ ಲಾಭದ ಆಸೆಗೆ ಬಿದ್ದೋ ಇಲ್ಲ, ಪರಿಚಯದವರು ಎನ್ನುವ ಮುಲಾಜಿಗೆ ಬಿದ್ದೋ ಲಕ್ಷ ಲಕ್ಷ ಹಣ ಹೂಡಿಕೆ ಮಾಡಿ ಈಗ ತಾವು ಹಾಕಿ ಅಸಲು ಇಲ್ಲ ಎನ್ನುವಂತೆ ಎಲ್ಲವನ್ನೂ ಕಳೆದುಕೊಂಡಿದ್ದಾರೆ. 

2 Min read
Author : Ravi Janekal
Published : Oct 22 2024, 10:17 PM IST
Share this Photo Gallery
  • FB
  • TW
  • Linkdin
  • Whatsapp
13

ಹೌದು ಕೇರಳ ಮೂಲದ ಮಲಬಾರ್ ಮಲ್ಟಿಸ್ಟೇಟ್ ಆಗ್ರೋ ಕೋಪರೇಟಿವ್ ಸೊಸೈಟಿ ಹೆಸರಿನಲ್ಲಿ ಕೆಲಸ ಮಾಡುತ್ತಿದ್ದ ಕಂಪನಿಯೊಂದು ಕೊಡಗಿನ ನೂರಾರು ಜನರಿಗೆ ಲಕ್ಷ ಲಕ್ಷ ರೂಪಾಯಿಗೆ ಟೋಪಿ ಹಾಕಿ ರಾತ್ರೋ ರಾತ್ರಿ ಬಾಗಿಲು ಮುಚ್ಚಿಕೊಂಡು ಎಸ್ಕೇಪ್ ಆಗಿದೆ. ಹೌದು ಕೇಂದ್ರ ಕೋಪರೇಟಿವ್ ಸೊಸೈಟಿ ನಿಯಮಗಳ ಪ್ರಕಾರ ನೋಂದಣಿ ಮಾಡಿದ್ದೇವೆ ಎಂದು ನಂಬಿಸಿದ ಕಂಪನಿಯು ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿ, ಕುಶಾಲನಗರ, ಗೋಣಿಕೊಪ್ಪ ವಿರಾಜಪೇಟೆ ಸೇರಿದಂತೆ ವಿವಿಧೆಡೆ ತನ್ನ ಶಾಖೆಗಳನ್ನು ತೆರೆದು ಕಳೆದ ಎರಡು ವರ್ಷಗಳಿಂದ ಕಾರ್ಯ ನಿರ್ವಹಿಸುತಿತ್ತು. ಜನರಿಂದ ಡೈಲಿ ಪಿಗ್ಮಿ, ಆರ್ ಡಿ ಹಾಗೂ ಎಫ್ಡಿಗಳನ್ನು ಸಂಗ್ರಹಿಸಿ ಕೋಟ್ಯಂತರ ರೂಪಾಯಿ ಹಣ ಸಂಗ್ರಹಿಸಿದೆ. 

23

ಜಿಲ್ಲೆಯ ಎಲ್ಲಾ ತಾಲ್ಲೂಕು ಕೇಂದ್ರಗಳಲ್ಲೂ ಶಾಖೆಗಳನ್ನು ತೆರೆದು ಸ್ಥಳೀಯರನ್ನೇ ವ್ಯವಸ್ಥಾಪಕರು, ಸಿಬ್ಬಂದಿ ಅಂತ ನೇಮಿಸಿ ಕಾರ್ಯ ನಿರ್ವಹಿಸಿದೆ. ಎರಡು ವರ್ಷಗಳಿಂದ ಹಣ ಸಂಗ್ರಹಿಸುತ್ತಿದ್ದ ಕಂಪನಿಯ ಮಾಲೀಕರು ಎಲ್ಲಾ ಹಣವನ್ನು ಕ್ಯಾಶ್ ಮೂಲಕವೇ ಕೇರಳಕ್ಕೆ ಕೊಂಡೊಯ್ದಿದ್ದಿದ್ದಾರೆ. ಜೊತೆಗೆ ಬಹುತೇಕ ಹಣವನ್ನು ಆನ್ಲೈನ್ ಮೂಲಕ ವರ್ಗಾವಣೆ ಮಾಡಿಕೊಳ್ಳಲಾಗಿದೆ. ಹೀಗೆ ಕೋಟಿ ಕೋಟಿ ಹಣವನ್ನು ಲಪಟಾಯಿಸುತ್ತಿದ್ದಂತೆ ಮಾಲೀಕರು ಇತ್ತ ತಿರುಗಿ ನೋಡಿಲ್ಲ. ಆದರೆ ಹೀಗೆ ಮೋಸವಾದ ಎರಡು ತಿಂಗಳ ಬಳಿಕವೂ ಕೆಲವು ಸಿಬ್ಬಂದಿ ಜನರಿಂದ ಪಿಗ್ಮಿ, ಆರ್ಡಿ ಹೆಸರಿನಲ್ಲಿ ಹಣ ಸಂಗ್ರಹಿಸಿದ್ದಾರೆ. ಎರಡು ವರ್ಷಗಳಿಂದ ಕಟ್ಟಿರುವ ಪಿಗ್ಮಿ ಮೆಚ್ಯುರಿಟಿ ಆಗಿದ್ದು ಅದನ್ನು ವಾಪಸ್ ಕೊಡಿಸುವಂತೆ ಕೇಳಿದಾಗ ಪಿಗ್ಮಿ ಕಟ್ಟಿಸಿಕೊಳ್ಳುತ್ತಿದ್ದವರು ಪಿಗ್ಮಿ ಸಂಗ್ರಹಕ್ಕೆ ಬರುವುದನ್ನೇ ನಿಲ್ಲಿಸಿದ್ದಾರೆ. ಆಗ ಅನುಮಾನ ಬಂದಿದ್ದರಿಂದ ಜನರು ಹೋಗಿ ನೋಡಲಾಗಿ ಅಲ್ಲಿ ಕಚೇರಿಯೇ ಮುಚ್ಚಿರುವುದು ಬೆಳಕಿಗೆ ಬಂದಿದೆ. ಇದರಿಂದ ಎಚ್ಚೆತ್ತುಕೊಂಡ ಜನರು ಗೋಣಿಕೊಪ್ಪ, ಕುಶಾಲನಗರ ಮಡಿಕೇರಿ ಮುಂತಾದೆಡೆಗಳಲ್ಲಿ ಮಲಬಾರ್ ಮಲ್ಟಿಸ್ಟೇಟ್ ಆಗ್ರೋ ಕೋಪರೇಟಿವ್ ಸೊಸೈಟಿ ವಿರುದ್ಧ ದೂರು ನೀಡಿದ್ದಾರೆ.

33

 ಈ ಕುರಿತು ಮಾಹಿತಿ ನೀಡಿರುವ ಕೊಡಗು ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಅವರು ಹಣ ಸಂಗ್ರಹಿಸಿರುವ ಯಾವುದಕ್ಕೂ  ಯಾವುದೇ ದಾಖಲೆಗಳಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಕಂಪನಿಯನ್ನು ನಿಯಮಗಳ ಪ್ರಕಾರ ನೊಂದಣಿಯನ್ನೇ ಮಾಡಿಲ್ಲ. ಅಧಿಕ ಪ್ರಮಾಣದ ಬಡ್ಡಿ ಕೊಡುತ್ತೇವೆ ಎಂದು ನಂಬಿಸಿ ಜನರಿಂದ ಹಣ ವಸೂಲಿ ಮಾಡಿ ಮೋಸ ಮಾಡಿರುವುದು ಕಂಡುಬಂದಿದೆ. ಜಿಲ್ಲೆಯ ಎಲ್ಲೆಡೆ ಯಾರೂ ಕೂಡ ಈ ಕಂಪನಿ ಅಥವಾ ಕಂಪನಿಯ ಸಿಬ್ಬಂದಿಗೆ ಹಣ ಪಾವತಿಸಬೇಡಿ. ಹಣ ಕಟ್ಟಿ ಕಳೆದುಕೊಂಡಿರುವವರು ನಿಮ್ಮ ಹತ್ತಿರದ ಪೊಲೀಸ್  ಠಾಣೆಗಳಿಗೆ ದೂರು ನೀಡಿ. ಕಂಪನಿಯ ಮಾಲೀಕರನ್ನು ಈಗಾಗಲೇ ಬಂಧಿಸಿದ್ದು, ಅವರ ಆಸ್ತಿಪಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡು ಮಾರಾಟ ಮಾಡಿ ಅದರಿಂದ ಬಂದ ಹಣವನ್ನು ಜನರಿಗೆ ಕೊಡಿಸುವ ಪ್ರಯತ್ನ ನಡೆಯುತ್ತಿದೆ ಎಂದಿದ್ದಾರೆ. ಒಟ್ಟಿನಲ್ಲಿ ಅಧಿಕ ಬಡ್ಡಿಯ ಆಸೆಗೆ ಒಳಗಾದ ಜನರು ಮೋಸ ಹೋಗಿರುವುದಂತು ಸತ್ಯ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

RJ
Ravi Janekal
ಪ್ರಸ್ತುತ, ಏಷಿಯಾನೆಟ್ ಸುವರ್ಣನ್ಯೂಸ್‌ನಲ್ಲಿ ಉಪ ಸಂಪಾದಕ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ನ್ಯೂಸ್ ಮಾನಿಟರಿಂಗ್ ಆಗಿ ಹಲವು ವರ್ಷಗಳ ಸೇವೆ, ಕೊರೊನಾ ವಾರಿಯರ್ಸ್ ಅವಾರ್ಡ್, ಮೂಲತಃ ರಾಯಚೂರು ಜಿಲ್ಲೆಯ ಜಾನೇಕಲ್ ಗ್ರಾಮದವರಾದ ಇವರು ಓದು, ಬರೆವಣಿಗೆ ಮತ್ತು ಸಾಹಿತ್ಯಾಸಕ್ತರು.
ಕೊಡಗು

Latest Videos
Recommended Stories
Recommended image1
Telangana Crime: ಮಗು ಅಳ್ತಿದೆ ಅಂತಾ ಬಾಯಿಗೆ ಬಟ್ಟೆ ತುರುಕಿ, ಉರಿವ ಬೆಂಕಿಯಲ್ಲಿ ಜೀವಂತ ಸುಟ್ಟ ತಾಯಿ!
Recommended image2
Mallikarjuna Mutya: ಅಪ್ರಾಪ್ತ ಬಾಲಕಿಯ ಅಪ್ಪಿಕೊಂಡು ಮುದ್ದಾಟ, ಯಾದಗಿರಿಯ ಮಲ್ಲಿಕಾರ್ಜುನ ಮುತ್ಯಾ ಮೇಲೆ ಬಿತ್ತು ಕೇಸ್‌!
Recommended image3
ನಿರ್ಭಯಾ ಕೇಸ್​ನಿಂದ ಶಿವಮೊಗ್ಗದ ಸಂಕೇತ್​ ಕೊ*ಲೆಯವರೆಗೆ ಅದೇ ಅಪ್ರಾಪ್ತರು! ಸತ್ಯ ಮಾತ್ರ ಘನಘೋರ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved