ಜ್ಯೋತಿಷಿ ಮಾತು ಎಬ್ಬಿಸಿತು ಬಿರುಗಾಳಿ : ನವವಿವಾಹಿತೆ ಕೊನೆಗೆ ಪ್ರಾಣವನ್ನೇ ಬಿಟ್ಟಳು
ಜ್ಯೋತಿಷಿ ಮಾತು ಕೇಳಿ ಆ ಕುಟುಂಬದಲ್ಲಿ ಬಿರುಗಾಳಿಯೇ ಎದ್ದಿತು. ಮದುವೆಯಾದ ಮೇಲೆ ಕುಟುಂಬದ ನೆಮ್ಮದಿ ಕೆಡಿಸಿದ ಜ್ಯೋತಿಷಿಯಿಂದ ಆಕೆ ಪ್ರಾಣವನ್ನೇ ಕಳೆದುಕೊಳ್ಳಬೇಕಾಯ್ತು
ಮಕ್ಕಳಾಗಲ್ಲ ಎಂದು ಜ್ಯೋತಿಷಿ ಹೇಳಿದಕ್ಕೆ ನವವಿವಾಹಿತೆಗೆ ಗಂಡನ ಮನೆಯಿಂದ ಕಿರುಕುಳ
ಗಂಡನ ಮನೆಯ ಕಿರುಕುಳ ತಾಳಲಾರದೆ ನವವಿವಾಹಿತೆ ಆತ್ಮಹತ್ಯೆ, ಅಶ್ವಿನಿ(25) ಆತ್ಮಹತ್ಯೆಗ ಶರಣಾದ ನವ ವಿವಾಹಿತೆ
ಹೆಣ್ಣೂರು ಠಾಣಾ ವ್ಯಾಪ್ತಿಯ ಹೊರಮಾವು ಮನೆಯಲ್ಲಿ ಘಟನೆ
ಕಳೆದ ಫೆಬ್ರವರಿಲ್ಲಿ ಯುವರಾಜ್ ಜತೆ ಅಶ್ವಿನಿಗೆ ಮದುವೆ . ಮದುವೆಯ ಬಳಿಕ ಜಾತಕವನ್ನ ಜ್ಯೋತಿಷಿ ಬಳಿ ಕೇಳಿದ್ದ ಹುಡುಗನ ಪೋಷಕರು
ಅಶ್ವಿನಿಗೆ ಮಕ್ಕಳಾಗಲ್ಲ ಎಂದು ಹೇಳಿದ್ದ ಜ್ಯೋತಿಷಿ . ಜ್ಯೋತಿಷಿ ಮಾತು ನಂಬಿ ಅಶ್ವಿನಿಗೆ ಕಿರಿಕುಳನೀಡ್ತಿದ್ದ ಯುವರಾಜ್ ಪೋಷಕರು. ಇದೇ ವಿಚಾರಕ್ಕೆ ಗಂಡ ಹೆಂತಿ ನಡುವೆ ಜಗಳ
ಪ್ರತಿ ದಿನದಂತೆ ನೆನ್ನೆ ಕೂಡ ದಂಪತಿಗಳ ನಡುವೆ ನಡೆದಿದ್ದ ಜಗಳ .ಇಂದು ಬೆಳಗ್ಗೆ ಅಶ್ವಿನಿ ಮೃತ ದೇಹ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ
ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲು. ಸದ್ಯ ಅಶ್ವಿನಿ ಪತಿ ಯುವರಾಜ್ ನನ್ನು ವಶಕ್ಕೆ ಪಡೆದಿರೋ ಹೆಣ್ಣೂರು ಪೊಲೀಸ್ರು