- Home
- Sports
- Cricket
- RCB ಪರ ಇಷ್ಟೆಲ್ಲ ಹೋರಾಡಿದ್ರೂ ರಜತ್ ಪಾಟಿದಾರ್ಗೆ ಮಾತ್ರ ವಿಲನ್ ಆದ ವಿಧಿ; ಕೊನೆಗೂ ಸತ್ಯ ಹೊರಬಂತು!
RCB ಪರ ಇಷ್ಟೆಲ್ಲ ಹೋರಾಡಿದ್ರೂ ರಜತ್ ಪಾಟಿದಾರ್ಗೆ ಮಾತ್ರ ವಿಲನ್ ಆದ ವಿಧಿ; ಕೊನೆಗೂ ಸತ್ಯ ಹೊರಬಂತು!
Rcb Captain Rajat Patidar: ಕಳೆದ ಎರಡು ವರ್ಷಗಳಿಂದ ಕ್ಯಾಪ್ಟನ್ ಆಗಿ ಆರ್ಸಿಬಿ ತಂಡವನ್ನು ಮುನ್ನಡೆಸುತ್ತಿರುವ ರಜತ್ ಪಾಟಿದಾರ್ಗೆ ಮಾತ್ರ ಸುವರ್ಣಾವಕಾಶ ಮಾತ್ ಸಿಕ್ಕಿಲ್ಲ. ಹೌದು, ಇಂಡಿಯಾ T20I ತಂಡಕ್ಕೆ ಅವರಿನ್ನೂ ಆಯ್ಕೆಯೇ ಆಗಿಲ್ಲ. ಈ ಬಗ್ಗೆ ರಜತ್ ಪಾಟೀದಾರ್ ಮಾತನಾಡಿದ್ದಾರೆ.

ಸಖತ್ ಆಗಿ ಆಡಿದ ರಜತ್
ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ (IPL) ಸಿಕ್ಕಾಪಟ್ಟೆ ರನ್ ತಂದುಕೊಟ್ಟು, ವಿಕೆಟ್ ಪಡೆದಿರುವ ರಜತ್ ನಿಜಕ್ಕೂ ತುಂಬ ಪ್ರೌಢಿಮೆ ಹೊಂದಿದ್ದಾರೆ. ಅಷ್ಟೇ ಅಲ್ಲದೆ ನೀಟ್ ಆಗಿ ತಂಡವನ್ನು ಕೂಡ ಮುನ್ನಡೆಸುತತಿದ್ದಾರೆ. 2025 ರ ಆರಂಭ ಆಗೋ ಮುನ್ನ ಕ್ಯಾಪ್ಟನ್ ಪಟ್ಟ ಪಡೆದಿದ್ದ ರಜತ್ ಅವರು ಕೊನೆಗೂ ಟ್ರೋಫಿ ಪಡೆಯುವಲ್ಲಿ ಯಶಸ್ವಿಯಾದರು. 18 ವರ್ಷಗಳ ಬಳಿಕ ಟ್ರೋಫಿ ಸಿಕ್ಕಿತ್ತು.
ಆ ಆಟ ನೋಡಿ ವಿರಾಟ್ ಕೊಹ್ಲಿಯೇ ದಂಗಾದ್ರು
ರಜತ್ ಅವರು ಈ ಬಾರಿ ಕೂಡ 14 ಪಂದ್ಯಗಳಲ್ಲಿ 44.18 ರ ಸರಾಸರಿ, 196.76 ರ ಸ್ಟ್ರೈಕ್ ರೇಟ್ನಲ್ಲಿ 486 ರನ್ಗಳನ್ನು ಗಳಿಸಿದ್ದಾರೆ. ಕ್ವಾಲಿಫೈಯರ್ 1 ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ಕೇವಲ 33 ಎಸೆತಗಳಲ್ಲಿ 93 ರನ್ ಚಚ್ಚಿದ್ದರು. ಆಗ ವಿರಾಟ್ ಕೊಹ್ಲಿ ಅವ್ರೇ ದಂಗಾಗಿ ಈ ಹೊಡಿಬಡಿ ಆಟವನ್ನು ನೋಡಿದ್ದರು.
ರಜತ್ ಪಾಟಿದಾರ್ ಏನಂದ್ರು?
“ನಾನು ಸದ್ಯಕ್ಕೆ ಇಂಡಿಯನ್ ಟೀಂಗೆ ಆಯ್ಕೆ ಆಗುವ ಆಲೋಚನೆಯಲ್ಲಿ ಇಲ್ಲ. ಹೀಗಾಗಿ ಇದರ ಬಗ್ಗೆ ಯೋಚನೆ ಮಾಡಿಲ್ಲ" ಎಂದು ರಜತ್ ಅವರು ನೇರವಾಗಿ ಹೇಳಿದ್ದಾರೆ.
ಆರ್ಸಿಬಿ ತಂಡದಲ್ಲಿ ವಿರಾಟ್ ಕೊಹ್ಲಿ, ಟಿಮ್ ಡೇವಿಡ್,ದೇವದತ್ ಪಡಿಕ್ಕಲ್, ಫಿಲ್ ಸಾಲ್ಟ್, ವೆಂಕಟೇಶ್ ಅಯ್ಯರ್ ಅವರಂತಹ ಟೀಂ ಹೊಂದಿದೆ. ಇಂಥ ತಂಡವನ್ನು ನಾಯಕ ರಜತ್ ಪಾಟಿದಾರ್ ಮುನ್ನಡೆಸುತ್ತಿದ್ದಾರೆ.
ಹೆಚ್ಚು ರನ್ ಪಡೆದಿರೋ RCB
ಈ ಬಾರಿಯಂತೂ ಆರ್ಸಿಬಿ ತಂಡದಷ್ಟು ಬೇರೆ ಯಾವುದೇ ಟೀಂ ಕೂಡ 200 ಕ್ಕೂ ಹೆಚ್ಚು ರನ್ಗಳನ್ನು ಪಡೆದಿಲ್ಲ. ಒಟ್ಟಿನಲ್ಲಿ ಕಳೆದ ಎರಡು ವರ್ಷಗಳಿಂದ ಪಾಟಿದಾರ್ ಮಾತ್ರ ಕೂಲ್ ಆಗಿ ಕ್ಯಾಪ್ಟನ್ಸಿ ಮಢುತ್ತಿದ್ದಾರೆ. ಒಟ್ಟಿನಲ್ಲಿ BCCI ಪಾಟಿದಾರ್ಗೆ ಚಾನ್ಸ್ ಕೊಡುತ್ತಿಲ್ಲವಾ? ಇವರು ಮನಸ್ಸು ಮಾಡುತ್ತಿಲ್ಲವಾ ಎನ್ನೋದು ಅರ್ಥ ಆಗ್ತಿಲ್ಲ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.

