ಪ್ಲೀಸ್ ನನ್ನ ಬಳಿ ಟಿಕೆಟ್ ಕೇಳ್ಭೇಡಿ, ಮನೆಯಲ್ಲೇ ಮ್ಯಾಚ್ ಎಂಜಾಯ್ ಮಾಡಿ: ಕೊಹ್ಲಿ ಪೋಸ್ಟ್ ವೈರಲ್
ಕ್ರಿಕೆಟ್ ವಿಶ್ವಕಪ್ 2023 (World Cup 2023) ಪ್ರಾರಂಭವಾಗುತ್ತಿರುವ ಹಿನ್ನಲೆಯಲ್ಲೇ ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ಅವರ ಸೋಶಿಯಲ್ ಮೀಡಿಯಾ ಪೋಸ್ಟ್ವೊಂದು ಸಖತ್ ಟ್ರೆಂಡ್ ಆಗಿದೆ. ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ (Anushka Sharma) ಅವರ ಇನ್ಸ್ಟಾಗ್ರಾಮ್ನಲ್ಲಿ ಟಿಕೆಟ್ಗಳನ್ನು ಕೇಳಬೇಡಿ ಎಂದು ಸ್ನೇಹಿತರನ್ನು ಕೇಳುವ ಪೋಸ್ಟ್ ವೈರಲ್ ಆಗಿದೆ,
ಅಕ್ಟೋಬರ್ 5 ರಂದು ಐಸಿಸಿ ಕ್ರಿಕೆಟ್ ವಿಶ್ವಕಪ್ 2023 ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ನ್ಯೂಜಿಲೆಂಡ್ ವಿರುದ್ಧ ಸೆಣಸುವುದರೊಂದಿಗೆ ಪ್ರಾರಂಭವಾಗಲಿದೆ.
ಟೂರ್ನಮೆಂಟ್ ಪ್ರಾರಂಭವಾಗುವ ಮುನ್ನವೇ, ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ತಾರೆ ಪತ್ನಿ ಅನುಷ್ಕಾ ಶರ್ಮಾ ಬುಧವಾರ ತಮ್ಮ ಸ್ನೇಹಿತರು ಮತ್ತು ಕುಟುಂಬಕ್ಕೆ Instagram ನಲ್ಲಿ ವಿನಂತಿಸಿದ್ದಾರೆ.
ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಅವರು ಐಸಿಸಿ ಕ್ರಿಕೆಟ್ ವಿಶ್ವಕಪ್ 2023 ಟಿಕೆಟ್ಗಾಗಿ ಸ್ನೇಹಿತರು ಮತ್ತು ಕುಟುಂಬವನ್ನು ಸಂಪರ್ಕಿಸದಂತೆ ವಿನಂತಿಸಿದ್ದಾರೆ.
ಅವರ ಇನ್ಸ್ಟಾಗ್ರಾಮ್ ಪೋಸ್ಟ್ ಟಿಕೆಟ್ಗಳನ್ನು ಕೇಳಬೇಡಿ ಎಂದು ಸ್ನೇಹಿತರನ್ನು ಕೇಳುವ ಪೋಸ್ಟ್ ಈಗ ಟ್ರೆಂಡ್ ಆಗುತ್ತಿದೆ
'ವಿಶ್ವಕಪ್ ಸಮೀಪಿಸುತ್ತಿರುವಾಗ, ಪಂದ್ಯಾವಳಿಯುದ್ದಕ್ಕೂ ಟಿಕೆಟ್ಗಾಗಿ ನನ್ನನ್ನು ವಿನಂತಿಸಬೇಡಿ ಎಂದು ನನ್ನ ಎಲ್ಲಾ ಸ್ನೇಹಿತರಿಗೆ ನಾನು ವಿನಮ್ರವಾಗಿ ವಿನಂತಿಸುತ್ತೇನೆ. ದಯವಿಟ್ಟು ನಿಮ್ಮ ಮನೆಗಳಿಂದಲೇ ಮ್ಯಾಚ್ ಆನಂದಿಸಿ' ಎಂದು ವಿರಾಟ್ ಕೊಹ್ಲಿ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಸ್ನೇಹಿತರನ್ನು ವಿನಂತಿಸಿಕೊಂಡಿದ್ದಾರೆ.
ಅನುಷ್ಕಾ ತಮ್ಮ ಇನ್ಸ್ಟಾಗ್ರಾಮ್ ಮೂಲಕ ಕೊಹ್ಲಿ ಅವರ ಪೋಸ್ಟ್ ಅನ್ನು ಹಂಚಿಕೊಂಡು ದಯವಿಟ್ಟು ನಿಮ್ಮ ಸಂದೇಶಗಳಿಗೆ ಉತ್ತರಿಸದಿದ್ದರೆ, ಸಹಾಯ ಮಾಡಲು ನನ್ನನ್ನು ವಿನಂತಿಸಬೇಡಿ. ನೀವು ಅರ್ಥಮಾಡಿಕೊಂಡಿದ್ದಕ್ಕೆ ಧನ್ಯವಾದಗಳು,' ಎಂದು ಇನ್ನಷ್ಟು ಸೇರಿಸಿದ್ದಾರೆ.
ಗುವಾಹಟಿಯಲ್ಲಿ ಇಂಗ್ಲೆಂಡ್ ವಿರುದ್ಧದ ಮೊದಲ ಅಭ್ಯಾಸದ ನಂತರ ವಿರಾಟ್ ಕೊಹ್ಲಿ ತಮ್ಮ ಪತ್ನಿ ಅನುಷ್ಕಾ ಶರ್ಮ ಅವರೊಂದಿಗೆ ಇರಲು ಮುಂಬೈಗೆ ತೆರಳಿದ್ದರು.
ಪ್ರೆಗ್ನೆನ್ಸಿ ಊಹಾಪೋಹಗಳು ಹರಿದಾಡುತ್ತಿರುವ ಮಧ್ಯೆ ಅನುಷ್ಕಾ ಛಾಯಾಗ್ರಾಹಕರಿಗೆ ಪೋಸ್ ನೀಡದಿರಲು ನಿರ್ಧರಿಸಿದರು. ಅವರ ಈ ನಡೆ ಆಕೆಯ ಎರಡನೇ ಗರ್ಭಧಾರಣೆಯ ಸುತ್ತಲಿನ ವದಂತಿಗಳನ್ನು ತೀವ್ರಗೊಳಿಸಿದೆ
ಕಳೆದ ವಾರಾಂತ್ಯದಿಂದ ಅವರು ಎರಡನೇಯ ಬಾರಿ ತಾಯಿ ಆಗಲಿರುವ ಬಗ್ಗೆ ರೂಮರ್ಗಳು ಪ್ರಾರಂಭವಾಯಿತು, ಆದರೂ ಅನುಷ್ಕಾ ಊಹಾಪೋಹಗಳನ್ನು ದೃಢಪಡಿಸದೆ , ನಿರಾಕರಿಸದೆ ಮೌನವನ್ನು ಕಾಪಾಡಿಕೊಂಡಿದ್ದಾರೆ.
ಅನುಷ್ಕಾ, ಡಿಸೆಂಬರ್ 2017 ರಲ್ಲಿ ಕೊಹ್ಲಿಯನ್ನು ವಿವಾಹವಾದರು. ಈ ಜೋಡಿಯು ಜನವರಿ 11, 2021 ರಂದು ತಮ್ಮ ಚೊಚ್ಚಲ ಮಗುವಾದ ವಾಮಿಕಾ ಅವರನ್ನು ಸ್ವಾಗತಿಸಿದರು.
ಅನುಷ್ಕಾ ಮುಂಬರುವ ಚಲನಚಿತ್ರದಲ್ಲಿ ಮಾಜಿ ಭಾರತೀಯ ಕ್ರಿಕೆಟಿಗ ಜೂಲನ್ ಗೋಸ್ವಾಮಿ ಅವರ ಪಾತ್ರದ ಮೂಲಕ ಐದು ವರ್ಷಗಳ ವಿರಾಮದ ನಂತರ ಚಿತ್ರರಂಗಕ್ಕೆ ಮರಳಿದ್ದಾರೆ.