MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Sports
  • Cricket
  • ಅದೊಂದು ಕಾರಣಕ್ಕಾಗಿ ವಿಂಡೀಸ್‌ ವಿರುದ್ಧ ದಕ್ಷಿಣ ಆಫ್ರಿಕಾ ಗೆಲ್ಲಲಿ ಅಂತ ಪ್ರಾರ್ಥಿಸುತ್ತಿದೆ ಟೀಂ ಇಂಡಿಯಾ!

ಅದೊಂದು ಕಾರಣಕ್ಕಾಗಿ ವಿಂಡೀಸ್‌ ವಿರುದ್ಧ ದಕ್ಷಿಣ ಆಫ್ರಿಕಾ ಗೆಲ್ಲಲಿ ಅಂತ ಪ್ರಾರ್ಥಿಸುತ್ತಿದೆ ಟೀಂ ಇಂಡಿಯಾ!

ಅಹಮದಾಬಾದ್‌: ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಸೂಪರ್-8 ಹಂತದ ಪಂದ್ಯದಲ್ಲಿಂದು ವೆಸ್ಟ್ ಇಂಡೀಸ್ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಮುಖಾಮುಖಿಯಾಗುತ್ತಿದ್ದು, ಈ ಪಂದ್ಯದ ಫಲಿತಾಂಶದ ಮೇಲೆ ಟೀಂ ಇಂಡಿಯಾ ಕಣ್ಣಿಟ್ಟಿದೆ. ಈ ಮ್ಯಾಚ್ ಹರಿಣಗಳು ಗೆಲ್ಲಲಿ ಎಂದು ಭಾರತ ಪ್ರಾರ್ಥಿಸುತ್ತಿದೆ. 

1 Min read
Author : Naveen Kodase
Published : Feb 26 2026, 11:23 AM IST
Share this Photo Gallery
  • FB
  • TW
  • Linkdin
  • Whatsapp
16
ಇಂದು ದಕ್ಷಿಣ ಆಫ್ರಿಕಾ ವೆಸ್ಟ್ ಇಂಡೀಸ್ ಫೈಟ್
Image Credit : X@ProteasMenCSA

ಇಂದು ದಕ್ಷಿಣ ಆಫ್ರಿಕಾ-ವೆಸ್ಟ್ ಇಂಡೀಸ್ ಫೈಟ್

ಈ ಬಾರಿ ಟಿ20 ವಿಶ್ವಕಪ್‌ನ ಸೂಪರ್‌-8 ಹಂತದ ಮಹತ್ವದ ಪಂದ್ಯದಲ್ಲಿ ಗುರುವಾರ ದಕ್ಷಿಣ ಆಫ್ರಿಕಾ ಹಾಗೂ ಮಾಜಿ ಚಾಂಪಿಯನ್‌ ವೆಸ್ಟ್‌ಇಂಡೀಸ್‌ ಮುಖಾಮುಖಿಯಾಗಲಿವೆ.

26
ದಕ್ಷಿಣ ಆಫ್ರಿಕಾ ಗೆಲುವಿಗೆ ಭಾರತ ಪ್ರಾರ್ಥನೆ
Image Credit : Getty

ದಕ್ಷಿಣ ಆಫ್ರಿಕಾ ಗೆಲುವಿಗೆ ಭಾರತ ಪ್ರಾರ್ಥನೆ

ಸೂಪರ್‌-8ನಲ್ಲಿ ಗೆದ್ದು ಶುಭಾರಂಭ ಮಾಡಿರುವ ಈ ಎರಡು ತಂಡಗಳ ನಡುವಿನ ಪಂದ್ಯ ಭಾರತಕ್ಕೂ ಅನಿವಾರ್ಯವಾಗಿದೆ. ದಕ್ಷಿಣ ಆಫ್ರಿಕಾ ಗೆಲ್ಲಲು ಭಾರತ ಪ್ರಾರ್ಥಿಸಲಿದ್ದು, ವೆಸ್ಟ್‌ಇಂಡೀಸ್‌ ಗೆದ್ದರೆ ಭಾರತಕ್ಕೆ ಸಂಕಷ್ಟ ಎದುರಾಗಲಿದೆ.

Related Articles

Related image1
ಟಿ20 ವಿಶ್ವಕಪ್: ಜಿಂಬಾಬ್ವೆ ವಿರುದ್ಧ ಭಾರತಕ್ಕೆ ಇಂದು ಮಾಡು-ಮಡಿ ಪಂದ್ಯ!
Related image2
ಟಿ20 ವಿಶ್ವಕಪ್ ಸೆಮಿಫೈನಲ್‌ ರೇಸ್‌ನಿಂದ ಶ್ರೀಲಂಕಾ ಔಟ್! ಕಿವೀಸ್ ಕನಸು ಜೀವಂತ
36
ಈಗಾಗಲೇ ಹರಿಣಗಳ ಎದುರು ಸೋತಿರುವ ಭಾರತ
Image Credit : X

ಈಗಾಗಲೇ ಹರಿಣಗಳ ಎದುರು ಸೋತಿರುವ ಭಾರತ

ಭಾರತ ಈಗಾಗಲೇ ದ.ಆಫ್ರಿಕಾ ವಿರುದ್ಧ ಸೋತಿದೆ. ತಂಡ ಸೆಮಿಫೈನಲ್‌ ತಲುಪಲು ಕೊನೆ 2 ಪಂದ್ಯದಲ್ಲಿ ಗೆಲ್ಲಬೇಕಿರುವುದು ಮಾತ್ರವಲ್ಲದೇ, ದ.ಆಫ್ರಿಕಾ ಕೂಡಾ 2 ಪಂದ್ಯದಲ್ಲಿ ಜಯಿಸಬೇಕು. ಆಗ ಭಾರತಕ್ಕೆ ಸೆಮಿಫೈನಲ್‌ ಅವಕಾಶ ಸಿಗಲಿದೆ.

46
ವೆಸ್ಟ್‌ ಇಂಡೀಸ್ ಗೆದ್ದರೇ ಭಾರತದ ಹಾದಿ ಕಠಿಣ
Image Credit : Getty

ವೆಸ್ಟ್‌ ಇಂಡೀಸ್ ಗೆದ್ದರೇ ಭಾರತದ ಹಾದಿ ಕಠಿಣ

ಒಂದು ವೇಳೆ ವಿಂಡೀಸ್‌ ಗೆದ್ದರೆ ಆಗ ಭಾರತ ಕೊನೆ 2 ಪಂದ್ಯದಲ್ಲಿ ಗೆದ್ದರೂ ಸೆಮೀಸ್‌ಗೇರುವುದು ಸುಲಭವಲ್ಲ. ನೆಟ್‌ ರನ್‌ರೇಟ್‌ ಮೇಲೆ ಸೆಮಿಫೈನಲ್ ಭವಿಷ್ಯ ನಿರ್ಧಾರವಾಗಲಿದೆ. ಹೀಗಾಗಿಯೇ ದ.ಆಫ್ರಿಕಾದ ಗೆಲುವು ಭಾರತದ ಸೆಮಿಫೈನಲ್‌ ಹಾದಿಯನ್ನು ಸುಗಮಗೊಳಿಸಲಿದೆ.

56
ಎರಡು ತಂಡಗಳಲ್ಲಿದ್ದಾರೆ ಬಲಾಢ್ಯ ಆಟಗಾರರು
Image Credit : Getty

ಎರಡು ತಂಡಗಳಲ್ಲಿದ್ದಾರೆ ಬಲಾಢ್ಯ ಆಟಗಾರರು

ಇನ್ನು, ಈ ಪಂದ್ಯದಲ್ಲಿ ದ.ಆಫ್ರಿಕಾ-ವಿಂಡೀಸ್‌ ತಂಡಗಳಿಂದ ಪ್ರಬಲ ಪೈಪೋಟಿ ಎದುರಾಗುವುದು ಖಚಿತ. ದ.ಆಫ್ರಿಕಾದಲ್ಲಿ ಮಾರ್ಕ್‌ರಮ್‌, ಡಿ ಕಾಕ್‌, ಮಿಲ್ಲರ್‌, ಟ್ರಿಸ್ಟನ್ ಸ್ಟಬ್ಸ್‌, ಡೆವಾಲ್ಡ್‌ ಬ್ರೆವಿಸ್‌, ಲುಂಗಿ ಎನ್‌ಗಿಡಿ, ರಬಾಡ ಸೇರಿ ಪ್ರಮುಖರಿದ್ದು, ವಿಂಡೀಸ್‌ ತಂಡ ಹೆಟ್ಮೇಯರ್‌, ರುಥರ್‌ಫೋರ್ಡ್‌, ರೋವ್ಮನ್‌ ಪೊವೆಲ್‌, ಹೋಲ್ಡರ್‌, ಗುಟಕೇಶ್‌ ಮೋಟಿಯನ್ನು ಹೆಚ್ಚಾಗಿ ನೆಚ್ಚಿಕೊಂಡಿದೆ.

66
ಪಂದ್ಯ ಆರಂಭ & ನೇರ ಪ್ರಸಾರ
Image Credit : Getty

ಪಂದ್ಯ ಆರಂಭ & ನೇರ ಪ್ರಸಾರ

ವೆಸ್ಟ್ ಇಂಡೀಸ್ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಪಂದ್ಯವು ಇಂದು ಮಧ್ಯಾಹ್ನ 3 ಗಂಟೆಯಿಂದ ಆರಂಭವಾಗಲಿದ್ದು, ಸ್ಟಾರ್ ಸ್ಪೋರ್ಟ್ಸ್ ಹಾಗೂ ಜಿಯೋ ಹಾಟ್‌ಸ್ಟಾರ್‌ನಲ್ಲಿ ನೇರಪ್ರಸಾರವಾಗಲಿದೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

NK
Naveen Kodase
ನವೀನ್ ಕೊಡಸೆ ಏಷ್ಯಾನೆಟ್ ಕನ್ನಡದಲ್ಲಿ ಮುಖ್ಯ ಉಪಸಂಪಾದಕ. ಕಳೆದ 9 ವರ್ಷಗಳಿಂದಲೂ ಮಾಧ್ಯಮ ಜಗತ್ತಿನಲ್ಲಿದ್ದೇನೆ. ಅಪ್ಪಟ ಮಲೆನಾಡಿನ ಹುಡುಗ. ಕುವೆಂಪು ವಿವಿಯ ಪತ್ರಿಕೋದ್ಯಮ ಪದವಿ ಇದೆ. ರಾಜ್‌ ನ್ಯೂಸ್‌ ಮೂಲಕ ಮಾಧ್ಯಮ ಲೋಕಕ್ಕೆ ಕಾಲಿಟ್ಟವನು. ಡಿಜಿಟಲ್‌ ಮಾಧ್ಯಮ ಲೋಕದಲ್ಲಿ ಪಳಗಿದರೂ, ಕಲಿಯೋದಿದೆ ಅಪಾರ. ಕ್ರೀಡೆ, ರಾಜಕೀಯ, ಸಾಹಿತ್ಯದಲ್ಲಿದೆ ಆಸಕ್ತಿ. ಕ್ರೀಡಾ ಸುದ್ದಿಯೇ ನನ್ನ ಜೀವಾಳ.
ಕ್ರಿಕೆಟ್
ಐಸಿಸಿ ಟಿ20 ವಿಶ್ವಕಪ್
ಟೀಮ್ ಇಂಡಿಯಾ
ದಕ್ಷಿಣ ಆಫ್ರಿಕಾ

Latest Videos
Recommended Stories
Recommended image1
ಟಿ20 ವಿಶ್ವಕಪ್: ಜಿಂಬಾಬ್ವೆ ವಿರುದ್ಧ ಭಾರತಕ್ಕೆ ಇಂದು ಮಾಡು-ಮಡಿ ಪಂದ್ಯ!
Recommended image2
ಟಿ20 ವಿಶ್ವಕಪ್ ಸೆಮಿಫೈನಲ್‌ ರೇಸ್‌ನಿಂದ ಶ್ರೀಲಂಕಾ ಔಟ್! ಕಿವೀಸ್ ಕನಸು ಜೀವಂತ
Recommended image3
ರಣಜಿ ಟ್ರೋಫಿ ಫೈನಲ್: ಎರಡನೇ ದಿನವೂ ಜಮ್ಮು-ಕಾಶ್ಮೀರ ಪ್ರಾಬಲ್ಯ, 6ಕ್ಕೆ 527 ರನ್!
Related Stories
Recommended image1
ಟಿ20 ವಿಶ್ವಕಪ್: ಜಿಂಬಾಬ್ವೆ ವಿರುದ್ಧ ಭಾರತಕ್ಕೆ ಇಂದು ಮಾಡು-ಮಡಿ ಪಂದ್ಯ!
Recommended image2
ಟಿ20 ವಿಶ್ವಕಪ್ ಸೆಮಿಫೈನಲ್‌ ರೇಸ್‌ನಿಂದ ಶ್ರೀಲಂಕಾ ಔಟ್! ಕಿವೀಸ್ ಕನಸು ಜೀವಂತ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved