MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Sports
  • Cricket
  • ಕೆಕೆಆರ್‌ಗೆ ಐಪಿಎಲ್ 2024 ಕಿರೀಟ: ಮೋದಿಯನ್ನು ನಿರ್ಲಕ್ಷಿಸಿದ್ರೂ, ಶ್ರೇಯಸ್ ಅಯ್ಯರ್‌ಗೇ ಗೆಲುವಾಯ್ತೆಂದ ನೆಟ್ಟಿಗರು!

ಕೆಕೆಆರ್‌ಗೆ ಐಪಿಎಲ್ 2024 ಕಿರೀಟ: ಮೋದಿಯನ್ನು ನಿರ್ಲಕ್ಷಿಸಿದ್ರೂ, ಶ್ರೇಯಸ್ ಅಯ್ಯರ್‌ಗೇ ಗೆಲುವಾಯ್ತೆಂದ ನೆಟ್ಟಿಗರು!

Sunrisers Hyderabad ಮಣಿಸಿ Kolkata Knight Riders 2024ರ ಐಪಿಎಲ್ ಟ್ರೋಫಿ ಗೆದ್ದಿದೆ. ಚೆನ್ನೈನಲ್ಲಿ ನಡೆದ ಅಂತಿಮ ಹಣಾಹಣಿಯಲ್ಲಿ ಮೂರನೇ ಬಾರಿಗೆ ಟ್ರೋಫಿಯನ್ನು ಮುಡಿಗೇರಿಸಿಕೊಂಡಿದೆ ಕೆಕೆಆರ್. ಇದರಲ್ಲಿ ತಂಡದ ಶ್ರಮವಿದೆ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಅದರಲ್ಲಿಯೂ ನಾಯಕ ಶ್ರೇಯಸ್ ಅಯ್ಯರ್‌ಗೆ ಗೆಲುವಿನ ಕೀರ್ತಿ ಸಲ್ಲುತ್ತದೆ. ಆದರೆ, ನೆಟ್ಟಿಗರು ಇದೀಗ ಈ ಗೆಲುವಲ್ಲೂ ರಾಜಕಾರಣ ಮಾಡುತ್ತಿದ್ದಾರೆ. ಯಾವತ್ತೂ ಮೋದಿಗೆ ಶ್ರೇಯಸ್ ಅಯ್ಯರ್ ಮಣೆ ಹಾಕಿಲ್ಲ, ಬಿಜೆಪಿ ಕಡೆಗೆ ವಾಲಿಲ್ಲ. ಆದರೂ, ಲಕ್ ಅಯ್ಯರ್ ಜೊತೆಗಿದ್ದು, ತಮ್ಮ ನಾಯಕತ್ವದಲ್ಲಿ ಟ್ರೋಫಿ ಮುಡಿಗೇರಿಸಿಕೊಂಡಿದ್ದಾರೆಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಲಾಗಿದ್ದು, ಈ ಬಗ್ಗೆ ಪರ-ವಿರೋಧ ಚರ್ಚೆ ನಡೆಯುತ್ತಿದೆ.  

2 Min read
Author : Naveen Kodase
Published : May 27 2024, 01:39 PM IST
Share this Photo Gallery
  • FB
  • TW
  • Linkdin
  • Whatsapp
112

Amockxi FC ಎಂಬ ಟ್ವಿಟರ್ ಖಾತೆಯಲ್ಲಿ ಈ ಪೋಸ್ಟ್ ಹಾಕಲಾಗಿದ್ದು, ಇದೊಂದು ಕಾಮೆಂಟರ್ ಅಕೌಂಟ್ ಎಂಬುವುದು ಸ್ಪಷ್ಟವಾಗುತ್ತದೆ. ಆರ್‌ಜಿ ಎಂದೂ ಬಯೋನಲ್ಲಿ ಮೆನ್ಷನ್ ಮಾಡಲಾಗಿದೆ.

212

ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ 2023ರ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಅಂತಿಮ ಹಣಾಹಣಿಯಲ್ಲಿ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಮುಗ್ಗರಿಸಿ ನಿರಾಸೆ ಅನುಭವಿಸಿತ್ತು.

312

ಈ ವೇಳೆ ನಮ್ಮ ದೇಶದ ತಂಡ ಸೋತಾಗ ಪ್ರಧಾನಿ ನರೇಂದ್ರ ಮೋದಿ ಟೀಂ ಇಂಡಿಯಾ ಡ್ರೆಸ್ಸಿಂಗ್ ರೂಮಿಗೆ ಹೋಗಿ ಭಾರತೀಯ ಕ್ರಿಕೆಟಿಗರನ್ನು ಸಂತೈಸಿದ್ದರು.

412

ಆದರೆ ಆಗ ಡ್ರೆಸ್ಸಿಂಗ್‌ ರೂಂನಲ್ಲಿದ್ದ ಟೀಂ ಇಂಡಿಯಾ ಕ್ರಿಕೆಟಿಗ ಶ್ರೇಯಸ್ ಅಯ್ಯರ್, ಪ್ರಧಾನಿ ಮೋದಿಯನ್ನು ಇಗ್ನೋರ್ ಮಾಡಿದ್ದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು!

512

ಅಷ್ಟೇ ಅಲ್ಲ ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಯನ್ನು ರಾಜಕೀಯ ಕಾರ್ಯಕ್ರಮ ಮಾಡಲಾಗಿತ್ತು. ಅದಕ್ಕೂ ಶ್ರೇಯಸ್ ಅಯ್ಯರ್ ಮಣೆಯನ್ನೇ ಹಾಕಲಿಲ್ಲವಂತೆ.

612

ಇನ್‌ಸ್ಟಾಗ್ರಾಮ‌್ನಲ್ಲಿ ಧೈರ್ಯವಾಗಿ ಶ್ರೇಯಸ್ ಅಯ್ಯರ್, ಮೋದಿ ಸರ್ಕಾರದ ಕಟು ವಿಮರ್ಶಕರಾಗಿರುವ ಧ್ರುವ್ ರಾಥಿಯನ್ನು ಫಾಲೋ ಮಾಡಿದರು ಇದೀಗ ಐಪಿಎಲ್ ಟ್ರೋಫಿ ಗೆಲ್ಲುವಲ್ಲಿಯೂ ಶ್ರೇಯಸ್ ಯಶಸ್ವಿಯಾಗಿದ್ದಾರೆಂಬ ಪೋಸ್ಟಿನಲ್ಲಿ ಹೇಳಲಾಗಿದ್ದು, ಇದರ ಪರ, ವಿರೋಧ ಚರ್ಚೆಗಳು ನಡೆಯುತ್ತಿವೆ. 

712

ಕೆಕೆಆರ್ ಐಪಿಎಲ್ ಗೆದ್ದಿದ್ದಕ್ಕೆ ಜೂನ್ 4ರ ನಂತರ ರಾಹುಲ್ ಗಾಂಧಿ ಪಿಎಂ ಆಗ್ತಾರಾ ಎಂಬಲ್ಲಿಂದ ಹಿಡಿದು, ಈ ಮ್ಯಾಚನ್ನು ಜೇ ಮೆಹ್ತಾ ಫಿಕ್ಸ್ ಮಾಡಿದ್ದರೆನ್ನುವಲ್ಲಿಗೆ  ಈ ಪೋಸ್ಟ್ ಬಗ್ಗೆ ಚರ್ಚೆಯಾಗುತ್ತಿದೆ.

812

ಇದರಿಂದ ನರೇಂದ್ರ ಮೋದಿ ಡಿಕ್ಟೇಟರ್ ಅಲ್ಲ ಎಂಬುವುದೂ ಸಾಬೀತಾಗಿದೆ ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದು, ಇದು ಕಾಂಗ್ರೆಸ್ ಟೂಲ್ ಕಿಟ್ಎಂಬ ಆರೋಪವೂ ಕೇಳಿ ಬರುತ್ತಿದೆ.

912

ಇನ್ನು ದ್ರಾವಿಡ ಟೀಮ್ ಸೋತಿದ್ದಕ್ಕೆ ಸೆಲೆಬ್ರೇಟ್ ಮಾಡುತ್ತಿದ್ದು, ಉನ್ನತ ವರ್ಗದವರ ಕ್ಯಾಪ್ಟೆನ್ಸಿಯಲ್ಲಿ ಟೀಂ ಗೆದ್ದಿದ್ದಕ್ಕೆ ಕಾಂಗ್ರೆಸ್ ಸಂಭ್ರಮಿಸುತ್ತಿದೆ, ಎಂಬ ಕಮೆಂಟ್ ಸಹ ಬಂದಿದೆ.

1012

ಒಟ್ಟಿನಲ್ಲಿ ಕ್ರಿಕೆಟ್ ಗೆಲುವನ್ನು, ಅದರಲ್ಲಿಯೂ ಐಪಿಎಲ್ ಗೆಲುವಲ್ಲೂ ರಾಜಕಾರಣ ಮಾಡಿದ ಟ್ವೀಟಿಗೆ ಜನರು ವಿರೋಧ ವ್ಯಕ್ತಪಡಿಸುತ್ತಿದ್ದು, ಸಂಬಂಧವೇ ಇಲ್ಲದಂತೆ ಚರ್ಚೆ ಜೋರಾಗಿಯೇ ನಡೆಯುತ್ತಿದೆ.

1112

ಆದರೆ, ಈ ಚರ್ಚೆಗೆ ಮತ್ತೊಂದು ಟ್ವಿಸ್ಟ್ ಸಿಕ್ಕಿದ್ದು, ರಣದೀಪ್ ಸಿಸೋಡಿಯಾ ಎಂಬುವರ ಕಮೆಂಟ್‌ನಿಂದ. ಕೆಕೆಆರ್ ಗೆದ್ದಿದ್ದು ಸುಳ್ಳಲ್ಲ. ಅದರಲ್ಲಿ ಶ್ರೇಯಸ್ ಅಯ್ಯರ್ ಸ್ಟ್ರಾಟಜಿಯೊಂದಿಗೆ, ಗೌತಮ್ ಗಂಭೀರ್ ಕೋಚಿಂಗ್ ಸಹ ಅಷ್ಟೇ ಮುಖ್ಯವಾಗಿತ್ತು. ಗೌತಮ್ ಬಿಜೆಪಿಗ ಎನ್ನುವುದರ ಮೂಲಕ ಚರ್ಚೆ ಮತ್ತೊಂದೆಡೆ ಎಳೆದುಕೊಂಡು ಹೋಗಿದೆ.

1212

ಐಪಿಎಲ್ ಒಂದು ಜೋಕ್, ಜಾಗತಿಕ ಮಟ್ಟದ ಟಿ20 ಮ್ಯಾಚಿನಲ್ಲಿ ಹೋರಾಡಲು ಅಸಮರ್ಥನಾಗೋ ಬ್ಯಾಟ್ಸ್‌ಮನ್, ಈ ಟೂರ್ನಿಯಲ್ಲಿ ಚಚ್ಚಿ ಹಾಕುತ್ತಾನೆ. ಅದು ಹೇಗೆ ಎಂಬುವುದೇ ಅರ್ಥವಾಗುತವುದಿಲ್ಲೆಂಬ ಅಭಿಪ್ರಾಯವೂ ವ್ಯಕ್ತವಾಗಿದೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

NK
Naveen Kodase
ನವೀನ್ ಕೊಡಸೆ ಏಷ್ಯಾನೆಟ್ ಕನ್ನಡದಲ್ಲಿ ಮುಖ್ಯ ಉಪಸಂಪಾದಕ. ಕಳೆದ 9 ವರ್ಷಗಳಿಂದಲೂ ಮಾಧ್ಯಮ ಜಗತ್ತಿನಲ್ಲಿದ್ದೇನೆ. ಅಪ್ಪಟ ಮಲೆನಾಡಿನ ಹುಡುಗ. ಕುವೆಂಪು ವಿವಿಯ ಪತ್ರಿಕೋದ್ಯಮ ಪದವಿ ಇದೆ. ರಾಜ್‌ ನ್ಯೂಸ್‌ ಮೂಲಕ ಮಾಧ್ಯಮ ಲೋಕಕ್ಕೆ ಕಾಲಿಟ್ಟವನು. ಡಿಜಿಟಲ್‌ ಮಾಧ್ಯಮ ಲೋಕದಲ್ಲಿ ಪಳಗಿದರೂ, ಕಲಿಯೋದಿದೆ ಅಪಾರ. ಕ್ರೀಡೆ, ರಾಜಕೀಯ, ಸಾಹಿತ್ಯದಲ್ಲಿದೆ ಆಸಕ್ತಿ. ಕ್ರೀಡಾ ಸುದ್ದಿಯೇ ನನ್ನ ಜೀವಾಳ.
ಬಿಸಿಸಿಐ
ಕ್ರಿಕೆಟ್
ಗೌತಮ್ ಗಂಭೀರ್
ನರೇಂದ್ರ ಮೋದಿ
ಶ್ರೇಯಸ್ ಅಯ್ಯರ್
ಟೀಮ್ ಇಂಡಿಯಾ

Latest Videos
Recommended Stories
Recommended image1
Probable 11 ರಿಂಕು ಬೆನ್ನಲ್ಲೇ ಮತ್ತೊಬ್ಬ ಫಿನೀಶರ್ ಔಟ್, ಭಾರತ ವಿಂಡೀಸ್ ಪಂದ್ಯಕ್ಕೆ ಕುಲ್ದೀಪ್ ವಾಪಸ್
Recommended image2
ವನೀಝಾ ಜೊತೆ 4ನೇ ಮದುವೆಗೆ ಸಜ್ಜಾದ್ರಾ ಸಾನಿಯಾ ಮಿರ್ಜಾ ಮಾಜಿ ಪತಿ ಮಲ್ಲಿಕ್? ಯಾರೀಕೆ?
Recommended image3
ಭ್ರಮನಿರಸನಗೊಂಡ ಕರ್ನಾಟಕ, ರಣಜಿ ಕಿರೀಟ ಗೆದ್ದು ಭಾರತದ ಹೊಸ ಕ್ರಿಕೆಟ್ ರಾಜನಾದ ಜಮ್ಮು-ಕಾಶ್ಮೀರ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved