MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Sports
  • Cricket
  • ಫಲ ನೀಡಿದ ಆಯ್ಕೆ ಸಮಿತಿ, ಟೀಮ್ ಮ್ಯಾನೇಜ್‌ಮೆಂಟ್ ಕಠಿಣ ನಿರ್ಧಾರ! ಕೊನೆಗೂ ಬಯಲಾಯ್ತು ಗೆಲುವಿನ ಗುಟ್ಟು!

ಫಲ ನೀಡಿದ ಆಯ್ಕೆ ಸಮಿತಿ, ಟೀಮ್ ಮ್ಯಾನೇಜ್‌ಮೆಂಟ್ ಕಠಿಣ ನಿರ್ಧಾರ! ಕೊನೆಗೂ ಬಯಲಾಯ್ತು ಗೆಲುವಿನ ಗುಟ್ಟು!

ಬೆಂಗಳೂರು: ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಸೂರ್ಯಕುಮಾರ್ ಯಾದವ್ ನೇತೃತ್ವದ ಟೀಂ ಇಂಡಿಯಾ ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ಯಶಸ್ವಿಯಾಗಿದೆ. ಟೀಂ ಇಂಡಿಯಾ ಗೆಲುವಿಗೆ ನಿಜವಾದ ಕಾರಣ ಆಯ್ಕೆ ಸಮಿತಿಯ ಕಠಿಣ ನಿರ್ಧಾರ ಎನ್ನುವುದು ಬಹುತೇಕ ಮಂದಿಗೆ ಗೊತ್ತಿಲ್ಲ. 

1 Min read
Author : Naveen Kodase
Published : Mar 09 2026, 11:52 AM IST
Share this Photo Gallery
  • FB
  • TW
  • Linkdin
  • Whatsapp
16
ಟೀಂ ಇಂಡಿಯಾ ಗೆಲುವಿನಲ್ಲಿ ಆಯ್ಕೆ ಸಮಿತಿ ಪಾತ್ರ
Image Credit : Gemini

ಟೀಂ ಇಂಡಿಯಾ ಗೆಲುವಿನಲ್ಲಿ ಆಯ್ಕೆ ಸಮಿತಿ ಪಾತ್ರ

ಭಾರತದ ವಿಶ್ವಕಪ್‌ ಗೆಲುವಿನ ಹಿಂದೆ ಆಟಗಾರರ ಕೊಡುಗೆ ಮಾತ್ರವಲ್ಲದೆ ಬಿಸಿಸಿಐ, ತಂಡದ ಆಯ್ಕೆ ಸಮಿತಿಯ ಕಠಿಣ ನಿರ್ಧಾರಗಳೂ ಪ್ರಮುಖ ಪಾತ್ರ ವಹಿಸಿವೆ. ಮುಖ್ಯಸ್ಥ ಅಜಿತ್‌ ಅಗರ್ಕರ್‌ ನೇತೃತ್ವದ ಆಯ್ಕೆ ಸಮಿತಿಯು ತೆರೆಮರೆಯಲ್ಲಿ ನಿರ್ವಹಿಸಿದ ಪಾತ್ರ, ಭಾರತಕ್ಕೆ ವಿಶ್ವಕಪ್‌ ತಂದುಕೊಡಲು ನೆರವಾಯಿತು.

26
ಶುಭ್‌ಮನ್ ಗಿಲ್ ಕೈಬಿಟ್ಟು ಇಶಾನ್‌ ಕಿಶನ್‌ಗೆ ಬುಲಾವ್ ನೀಡಿದ್ದು
Image Credit : Getty

ಶುಭ್‌ಮನ್ ಗಿಲ್ ಕೈಬಿಟ್ಟು ಇಶಾನ್‌ ಕಿಶನ್‌ಗೆ ಬುಲಾವ್ ನೀಡಿದ್ದು

ಟೆಸ್ಟ್‌, ಏಕದಿನ ನಾಯಕನಾಗಿರುವ ಶುಭ್‌ಮನ್‌ ಗಿಲ್‌ರನ್ನು ಟಿ20ಯಲ್ಲೂ ಬೆಳೆಸುವುದು ಆಯ್ಕೆ ಸಮಿತಿ ನಿರ್ಧಾರವಾಗಿತ್ತು. ಆದರೆ ಲಯದ ಕಾರಣಕ್ಕೆ ವಿಶ್ವಕಪ್‌ಗೂ ಮುನ್ನ ಅವರನ್ನು ತಂಡದಿಂದ ಹೊರಗಿಡುವ ದಿಟ್ಟ ನಿರ್ಧಾರ ಕೈಗೊಂಡು, ಇಶಾನ್‌ ಕಿಶನ್‌ರನ್ನು ಸೇರಿಸಿಕೊಂಡಿತು. ಇದು ಹಲವರನ್ನು ಅಚ್ಚರಿಗೆ ದೂಡಿದರೂ ತಂಡದ ವಿಚಾರದಲ್ಲಿ ಸರಿಯಾದ ನಿರ್ಧಾರವೇ ಆಗಿತ್ತು. ಇಶಾನ್‌ ಅಕ್ಷರಶಃ ಅಬ್ಬರಿಸಿ, ಪ್ರಮುಖ ಪಂದ್ಯಗಳಲ್ಲಿ ಗೆಲುವಿನ ರೂವಾರಿಯಾದರು.

Related Articles

Related image1
ಅಹಮದಾಬಾದಲ್ಲಿ ಚೇಂಜ್‌ ಆಯ್ತು ಭಾರತದ ಅದೃಷ್ಟ! ಕಪ್ ಗೆದ್ದು ಕಳಂಕ ತೊಳೆದ ಟೀಂ ಇಂಡಿಯಾ
Related image2
ಭಾರತದ ಟಿ20 ವಿಶ್ವಕಪ್ ಗೆಲುವು: ನಿರ್ಣಾಯಕ ಹಂತಗಳಲ್ಲಿ ಮಿಂಚಿದ ಟೀಂ ಇಂಡಿಯಾದ ಸೂಪರ್ ಸ್ಟಾರ್ಸ್
36
ಹರ್ಷಿತ್ ರಾಣಾ ಬದಲಿಗೆ ಮೊಹಮ್ಮದ್ ಸಿರಾಜ್‌ಗೆ ಮಣೆ ಹಾಕಿದ್ದು
Image Credit : BCCI\Twitter

ಹರ್ಷಿತ್ ರಾಣಾ ಬದಲಿಗೆ ಮೊಹಮ್ಮದ್ ಸಿರಾಜ್‌ಗೆ ಮಣೆ ಹಾಕಿದ್ದು

ಹರ್ಷಿತ್‌ ರಾಣಾ ಗಾಯಕೊಂಡ ಕಾರಣ ಅವರಿಗೆ ಸಮರ್ಥ ಬದಲಿ ಆಟಗಾರನಾಗಿ ಮೊಹಮ್ಮದ್‌ ಸಿರಾಜ್‌ರನ್ನು ಆಯ್ಕೆ ಮಾಡಿದ್ದು ಕೂಡಾ ಸಮಿತಿಯ ಮಹತ್ವದ ನಿರ್ಧಾರ. ಅಮೆರಿಕ ವಿರುದ್ಧ ಪಂದ್ಯದಲ್ಲಿ ಸಿರಾಜ್‌ ಆಡಿ 3 ವಿಕೆಟ್‌ ಕಿತ್ತರು. ಟೂರ್ನಿಯುದ್ದಕ್ಕೂ ಸಮರ್ಥ ಬದಲಿ ಆಟಗಾರರ ಕೊರತೆ ತಂಡಕ್ಕೆ ಎದುರಾಗಲೇ ಇಲ್ಲ.

46
ನಿರ್ಣಾಯಕ ಘಟ್ಟದಲ್ಲಿ ಸಂಜುಗೆ ಅವಕಾಶ ನೀಡಿದ್ದು
Image Credit : X

ನಿರ್ಣಾಯಕ ಘಟ್ಟದಲ್ಲಿ ಸಂಜುಗೆ ಅವಕಾಶ ನೀಡಿದ್ದು

ಇನ್ನು, ನಿರ್ಣಾಯಕ ಘಟ್ಟದಲ್ಲಿ ಸಂಜು ಸ್ಯಾಮ್ಸನ್‌ರನ್ನು ಆರಂಭಿಕರಾಗಿ ಕಣಕ್ಕಿಳಿಸಲು ತಂಡದ ಆಡಳಿತಕ್ಕೆ ಆಯ್ಕೆ ಸಮಿತಿ ಸಲಹೆ ನೀಡಿತು. ಇದು ತಂಡದ ಚಿತ್ರಣವೇ ಬದಲಾಗುವಂತೆ ಮಾಡಿತು. ಅದುವರೆಗೂ ಆರಂಭಿಕ ಜೋಡಿ ವೈಫಲ್ಯ ಅನುಭವಿಸಿದ್ದರೆ, ಸಂಜು ಆಗಮನದ ಬಳಿಕ ಆ ಸಮಸ್ಯೆ ಕಂಡುಬರಲಿಲ್ಲ.

56
ಅಭಿಷೇಕ್ ಶರ್ಮಾ, ಸೂರ್ಯಕುಮಾರ್ ಯಾದವ್ ಮೇಲೆ ವಿಶ್ವಾಸವಿಟ್ಟ ಟೀಮ್ ಮ್ಯಾನೇಜ್‌ಮೆಂಟ್
Image Credit : X/@BCCI

ಅಭಿಷೇಕ್ ಶರ್ಮಾ, ಸೂರ್ಯಕುಮಾರ್ ಯಾದವ್ ಮೇಲೆ ವಿಶ್ವಾಸವಿಟ್ಟ ಟೀಮ್ ಮ್ಯಾನೇಜ್‌ಮೆಂಟ್

ಕಳಪೆ ಆಟದ ಹೊರತಾಗಿಯೂ ವಿಶ್ವ ನಂ.1 ಬ್ಯಾಟರ್‌ ಅಭಿಷೇಕ್‌ ಶರ್ಮಾ ಮೇಲೆ ನಂಬಿಕೆ ಇಟ್ಟು ಆಡಿಸಿದ್ದು, ದುಬಾರಿಯಾಗುತ್ತಿದ್ದರೂ ವಿಶ್ವ ನಂ.1 ಬೌಲರ್‌ ವರುಣ್‌ ಚಕ್ರವರ್ತಿಯನ್ನು ಕಣಕ್ಕಿಳಿಸಿದ್ದು ಆಟಗಾರರ ಆತ್ಮವಿಶ್ವಾಸ ಹೆಚ್ಚಿಸಿದ್ದಲ್ಲದೇ, ಫೈನಲ್‌ನಲ್ಲಿ ಅದರ ಯಶಸ್ಸನ್ನೂ ತಂಡ ಪಡೆದುಕೊಂಡಿತು.

66
ಸತತ ಎರಡನೇ ಬಾರಿಗೆ ಭಾರತ ಟಿ20 ವಿಶ್ವಕಪ್ ಒಡೆಯ
Image Credit : ANI

ಸತತ ಎರಡನೇ ಬಾರಿಗೆ ಭಾರತ ಟಿ20 ವಿಶ್ವಕಪ್ ಒಡೆಯ

ಒಟ್ಟಾರೆಯಾಗಿ ಗೌತಮ್ ಗಂಭೀರ್ ಮಾರ್ಗದರ್ಶನ, ಸೂರ್ಯಕುಮಾರ್ ಯಾದವ್ ಅವರ ಚಾಣಾಕ್ಷ ನಾಯಕತ್ವ ಹಾಗೂ ಟೀಮ್ ಮ್ಯಾನೇಜ್‌ಮೆಂಟ್ ದಿಟ್ಟ ನಿರ್ಧಾರದ ಫಲವಾಗಿ ಟೀಂ ಇಂಡಿಯಾ ಸತತ ಎರಡನೇ ಬಾರಿಗೆ ಚುಟುಕು ಕ್ರಿಕೆಟ್ ಸಾಮ್ರಾಟನನ್ನಾಗಿ ಮಾಡಿದೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

NK
Naveen Kodase
ನವೀನ್ ಕೊಡಸೆ ಏಷ್ಯಾನೆಟ್ ಕನ್ನಡದಲ್ಲಿ ಮುಖ್ಯ ಉಪಸಂಪಾದಕ. ಕಳೆದ 9 ವರ್ಷಗಳಿಂದಲೂ ಮಾಧ್ಯಮ ಜಗತ್ತಿನಲ್ಲಿದ್ದೇನೆ. ಅಪ್ಪಟ ಮಲೆನಾಡಿನ ಹುಡುಗ. ಕುವೆಂಪು ವಿವಿಯ ಪತ್ರಿಕೋದ್ಯಮ ಪದವಿ ಇದೆ. ರಾಜ್‌ ನ್ಯೂಸ್‌ ಮೂಲಕ ಮಾಧ್ಯಮ ಲೋಕಕ್ಕೆ ಕಾಲಿಟ್ಟವನು. ಡಿಜಿಟಲ್‌ ಮಾಧ್ಯಮ ಲೋಕದಲ್ಲಿ ಪಳಗಿದರೂ, ಕಲಿಯೋದಿದೆ ಅಪಾರ. ಕ್ರೀಡೆ, ರಾಜಕೀಯ, ಸಾಹಿತ್ಯದಲ್ಲಿದೆ ಆಸಕ್ತಿ. ಕ್ರೀಡಾ ಸುದ್ದಿಯೇ ನನ್ನ ಜೀವಾಳ.
ಕ್ರಿಕೆಟ್
ಐಸಿಸಿ ಟಿ20 ವಿಶ್ವಕಪ್
ಟೀಮ್ ಇಂಡಿಯಾ
ಅಜಿತ್ ಅಗರ್ಕರ್

Latest Videos
Recommended Stories
Recommended image1
ಭಾರತದ ಟಿ20 ವಿಶ್ವಕಪ್ ಗೆಲುವು: ನಿರ್ಣಾಯಕ ಹಂತಗಳಲ್ಲಿ ಮಿಂಚಿದ ಟೀಂ ಇಂಡಿಯಾದ ಸೂಪರ್ ಸ್ಟಾರ್ಸ್
Recommended image2
ಅಹಮದಾಬಾದಲ್ಲಿ ಚೇಂಜ್‌ ಆಯ್ತು ಭಾರತದ ಅದೃಷ್ಟ! ಕಪ್ ಗೆದ್ದು ಕಳಂಕ ತೊಳೆದ ಟೀಂ ಇಂಡಿಯಾ
Recommended image3
T20 ವಿಶ್ವಕಪ್ ಗೆಲುವಿನ ಹಾದಿಯಲ್ಲಿ ಭಾರತೀಯರು ಎಂದಿಗೂ ಮರೆಯಲಾಗದ ಆರು ಸೂಪರ್ ಕ್ಷಣಗಳು
Related Stories
Recommended image1
ಅಹಮದಾಬಾದಲ್ಲಿ ಚೇಂಜ್‌ ಆಯ್ತು ಭಾರತದ ಅದೃಷ್ಟ! ಕಪ್ ಗೆದ್ದು ಕಳಂಕ ತೊಳೆದ ಟೀಂ ಇಂಡಿಯಾ
Recommended image2
ಭಾರತದ ಟಿ20 ವಿಶ್ವಕಪ್ ಗೆಲುವು: ನಿರ್ಣಾಯಕ ಹಂತಗಳಲ್ಲಿ ಮಿಂಚಿದ ಟೀಂ ಇಂಡಿಯಾದ ಸೂಪರ್ ಸ್ಟಾರ್ಸ್
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved