MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Sports
  • Cricket
  • ಭಾರತ ಮಹಿಳಾ ಕ್ರಿಕೆಟ್‌ ತಂಡವು ನಾಕೌಟ್‌ನಲ್ಲಿ ಮುಗ್ಗರಿಸಲು ಕಾರಣವೇನು..? ಇಲ್ಲಿವೆ ನೋಡಿ ಇಂಟ್ರೆಸ್ಟಿಂಗ್ ಸಂಗತಿ

ಭಾರತ ಮಹಿಳಾ ಕ್ರಿಕೆಟ್‌ ತಂಡವು ನಾಕೌಟ್‌ನಲ್ಲಿ ಮುಗ್ಗರಿಸಲು ಕಾರಣವೇನು..? ಇಲ್ಲಿವೆ ನೋಡಿ ಇಂಟ್ರೆಸ್ಟಿಂಗ್ ಸಂಗತಿ

ಬೆಂಗಳೂರು(ಫೆ.25): ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ ಐಸಿಸಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಭಾರತ ಮಹಿಳಾ ಕ್ರಿಕೆಟ್‌ ತಂಡವು ಸೆಮಿಫೈನಲ್‌ನಲ್ಲೇ ಮುಗ್ಗರಿಸಿ ನಿರಾಸೆ ಅನುಭವಿಸಿದೆ. ಈ ಮೂಲಕ ಚೊಚ್ಚಲ ಐಸಿಸಿ ಟ್ರೋಫಿ ಗೆಲ್ಲುವ ಅವಕಾಶವನ್ನು ಮತ್ತೊಮ್ಮೆ ಕೈಚೆಲ್ಲಿದೆ. ಭಾರತ ತಂಡವು ಈ ಬಾರಿಯ ಟಿ20 ವಿಶ್ವಕಪ್ ಟೂರ್ನಿಯಲ್ಲಿ ನಾಕೌಟ್ ಹಂತದಲ್ಲಿ ಮುಗ್ಗರಿಸಿದ್ದೇಕೆ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ..

1 Min read
Naveen Kodase
Published : Feb 25 2023, 11:05 AM IST
Share this Photo Gallery
  • FB
  • TW
  • Linkdin
  • Whatsapp
15
Image credit: Getty

Image credit: Getty

1. ಟೂರ್ನಿಯುದ್ದಕ್ಕೂ ಕಳಪೆ ಫೀಲ್ಡಿಂಗ್‌. ಸೆಮೀಸ್‌ನಲ್ಲೂ ಆಸೀಸ್‌ನ ಬೆಥ್ ಮೂನಿ ಹಾಗೂ ಮೆಗ್‌ ಲ್ಯಾನಿಂಗ್‌ರ ಕ್ಯಾಚ್‌ ಕೈಚೆಲ್ಲಿದ ಭಾರತೀಯರು.
 

25

2. ಬ್ಯಾಟರ್‌ಗಳ ಸಾಧಾರಣ ಸ್ಟ್ರೈಕ್‌ರೇಟ್‌. ಶಫಾಲಿ ವರ್ಮಾ, ದೀಪ್ತಿ ಶರ್ಮಾ, ಯಸ್ತಿಕಾ ಭಾಟಿಯಾ ಟೂರ್ನಿಯಲ್ಲಿ 110ಕ್ಕೂ ಕಡಿಮೆ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್‌ ಮಾಡಿದರು. ಅತಿಯಾದ ಡಾಟ್‌ಬಾಲ್‌ಗಳಿಂದಾಗಿ ತಂಡದ ಮೇಲೆ ಒತ್ತಡ ಹೆಚ್ಚಾಯ್ತು.
 

35

3. ಸ್ಪಿನ್ನರ್‌ಗಳ ದಯನೀಯ ವೈಫಲ್ಯ. ಒಂದೂ ವಿಕೆಟ್‌ ಇಲ್ಲದೆ ಟೂರ್ನಿ ಮುಗಿಸಿದ ರಾಜೇಶ್ವರಿ ಗಾಯಕ್ವಾಡ್‌. ದೀಪ್ತಿ ಶರ್ಮಾ, ರಾಧಾ ಯಾದವ್‌ರಿಂದಲೂ ಸಾಧಾರಣ ಪ್ರದರ್ಶನ. ಬಹುತೇಕ ಸರಣಿಗಳಲ್ಲಿ ಸ್ಪಿನ್ನರ್‌ಗಳೇ ತಂಡದ ಅಸ್ತ್ರವಾಗಿದ್ದರು

45

4. ಫಿಟ್ನೆಸ್‌ ಕೊರತೆ. ಭಾರತದ ಹಲವು ಆಟಗಾರ್ತಿಯರು ಮೈದಾನದಲ್ಲಿ ಚುರುಕಾಗಿ ಕಾಣಲಿಲ್ಲ. ಎದುರಾಗಳಿಗೆ ಹಲವು ಸನ್ನಿವೇಶಗಳಲ್ಲಿ ಸುಲಭವಾಗಿ ರನ್‌ ಬಿಟ್ಟುಕೊಟ್ಟ ತಂಡ. ಇದು ಸೆಮೀಸ್‌ನಲ್ಲಿಯೂ ಮರುಕಳಿಸಿತು.
 

55

5. ಖಾಯಂ ಕೋಚ್‌ಗಳ ಕೊರತೆ. ವಿಶ್ವಕಪ್‌ಗೆ 2 ತಿಂಗಳಿದ್ದಾಗ ಕೋಚ್‌ ಬದಲಾಯಿಸಿದ ಬಿಸಿಸಿಐ. ಇದು ತಂಡದ ಮೇಲೆ ಪರಿಣಾಮ ಬೀರಿತು. ಲೀಗ್ ಹಂತದಲ್ಲಿ ಅದ್ಭುತ ಲಯ ಹೊಂದಿದ್ದ ಭಾರತ, ನಾಕೌಟ್‌ನಲ್ಲಿ ದಿಟ್ಟ ಮನೋಭಾವ ತೋರಿತಾದರೂ, ಕೊನೆಯಲ್ಲಿ ಒತ್ತಡದ ಪರಿಸ್ಥಿತಿ ನಿಭಾಯಿಸಲು ವಿಫಲವಾಯಿತು.

About the Author

NK
Naveen Kodase
ನವೀನ್ ಕೊಡಸೆ ಏಷ್ಯಾನೆಟ್ ಕನ್ನಡದಲ್ಲಿ ಮುಖ್ಯ ಉಪಸಂಪಾದಕ. ಕಳೆದ 9 ವರ್ಷಗಳಿಂದಲೂ ಮಾಧ್ಯಮ ಜಗತ್ತಿನಲ್ಲಿದ್ದೇನೆ. ಅಪ್ಪಟ ಮಲೆನಾಡಿನ ಹುಡುಗ. ಕುವೆಂಪು ವಿವಿಯ ಪತ್ರಿಕೋದ್ಯಮ ಪದವಿ ಇದೆ. ರಾಜ್‌ ನ್ಯೂಸ್‌ ಮೂಲಕ ಮಾಧ್ಯಮ ಲೋಕಕ್ಕೆ ಕಾಲಿಟ್ಟವನು. ಡಿಜಿಟಲ್‌ ಮಾಧ್ಯಮ ಲೋಕದಲ್ಲಿ ಪಳಗಿದರೂ, ಕಲಿಯೋದಿದೆ ಅಪಾರ. ಕ್ರೀಡೆ, ರಾಜಕೀಯ, ಸಾಹಿತ್ಯದಲ್ಲಿದೆ ಆಸಕ್ತಿ. ಕ್ರೀಡಾ ಸುದ್ದಿಯೇ ನನ್ನ ಜೀವಾಳ.
ಕ್ರಿಕೆಟ್
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved