ಮಹಾರಾಷ್ಟ್ರದಲ್ಲಿ ಪರಿಸ್ಥಿತಿ ಗಂಭೀರ; ನೆರವಿಗೆ ಧಾವಿಸಿದ ಅಜಿಂಕ್ಯ ರಹಾನೆ!
ಕೊರೋನಾ ವೈರಸ್ ದೇಶದಲ್ಲಿ ತೀವ್ರ ವೇಗದಲ್ಲಿ ಹರಡುತ್ತಿದೆ. ಅದರಲ್ಲೂ ಮಹಾರಾಷ್ಟ್ರದಲ್ಲಿ ಪರಿಸ್ಥಿತಿ ಗಂಭೀರವಾಗಿದೆ. ಇಂದು(ಮಾ.29) ಮೂವರು ಬಲಿಯಾಗೋ ಮೂಲಕ ಮಹಾರಾಷ್ಟ್ರದಲ್ಲಿ ಸಾವಿನ ಸಂಖ್ಯೆ 7ಕ್ಕೇರಿದೆ. ಕೇಂದ್ರ ಸರ್ಕಾರದ ಸಹಭಾಗಿತ್ವದಲ್ಲಿ ಮಹಾರಾಷ್ಟ್ರ ಸರ್ಕಾರ ವೈರಸ್ ಹರಡುವುದನ್ನು ತಡೆಯಲು ಹಾಗೂ ಸೋಂಕಿತರ ಚಿಕಿತ್ಸೆಗೆ ಶ್ರಮವಹಿಸುತ್ತಿದೆ. ಸರ್ಕಾರದ ಹೋರಾಟಕ್ಕೆ ಸಚಿನ್ ತೆಂಡುಲ್ಕರ್ ಸೇರಿದಂತೆ ಹಲವು ದಿಗ್ಗಜರು ಕೈಜೋಡಿಸಿದ್ದಾರೆ. ಇದೀಗ ಸರ್ಕಾರದ ನೆರವಿಗೆ ಅಜಿಂಕ್ಯ ರಹಾನೆ ಧಾವಿಸಿದ್ದಾರೆ.
ಮಹಾರಾಷ್ಟ್ರದಲ್ಲಿ ಕೊರೋನಾ ವೈರಸ್ ಗಂಭೀರ ಪರಿಸ್ಥಿತಿ ನಿರ್ಮಾಣ ಮಾಡಿದೆ
ಮುಂಬೈ ಮಹಾನಗರದಲ್ಲಿ ತೀವ್ರ ವೇಗದಲ್ಲಿ ವೈರಸ್ ಹರಡುತ್ತಿದೆ
ಸಚಿನ್ ತೆಂಡುಡಲ್ಕರ್ ಬೆನ್ನಲ್ಲೇ ಸರ್ಕಾರಕ್ಕೆ ದೇಣಿಗೆ ನೀಡಿದ ಅಜಿಂಕ್ಯ ರಹಾನೆ
10 ಲಕ್ಷ ರೂಪಾಯಿ ಹಣ ಮಹಾರಾಷ್ಟ ಪರಿಹಾರ ನಿಧಿಗೆ ನೀಡಿದ ರಹಾನೆ
ಸಮುದ್ರದೊಳಗೆ ನನ್ನ ಸಣ್ಣ ಹನಿ ಎಂದು ಟ್ವೀಟ್ ಮಾಡಿದ ರಹಾನೆ
ನಾನು ನನ್ನ ಕೈಲಾದ ಸಹಾಯ ಮಾಡುತ್ತೇನೆ, ಎಲ್ಲರೂ ಮನೆಯಲ್ಲೇ ಇರಿ ಎಂದು ಮನವಿ ಮಾಡಿದ ರಹಾನೆ
ಸುರೇಶ್ ರೈನಾ, ಸಚಿನ್ ತೆಂಡುಲ್ಕರ್ ಬಳಿಕ ಪರಿಹಾರ ನಿಧಿಗೆ ಹಣ ನೀಡಿದ 3ನೇ ಕ್ರಿಕೆಟಿಗ
ಸುರೇಶ್ ರೈನಾ ಒಟ್ಟು 52 ಲಕ್ಷ ರೂಪಾಯಿ ಹಣ ದೇಣಿಗೆ ನೀಡಿದ್ದಾರೆ
ಸಚಿನ್ ತೆಂಡುಲ್ಕರ್ 50 ಲಕ್ಷ ರೂಪಾಯಿ ಹಣ ದೇಣಿಗೆ ನೀಡಿದ್ದಾರೆ