ಸಿಲ್ಸಿಲಾದಲ್ಲಿ ಬಳಿಕ ಅಮಿತಾಬ್ ಜೊತೆ ಸಡನ್ ಆಗಿ ರೇಖಾ ನಟನೆ ನಿಲ್ಲಿಸಿದ್ದೇಕೆ?
ರೇಖಾ ಅವರು ಸಿಲ್ಸಿಲಾ ನಂತರ ಅಮಿತಾಬ್ ಬಚ್ಚನ್ ಅವರ ಜೊತೆ ಯಾಕೆ ಕೆಲಸ ಮಾಡಲಿಲ್ಲ ಅಂತ ತಿಳ್ಕೊಳ್ಳೋಣ. ಅವರ ನಿರ್ಧಾರದ ಹಿಂದಿನ ಕಾರಣ ಇಲ್ಲಿದೆ.

ಅಮಿತಾಬ್ ಬಚ್ಚನ್ ಮತ್ತು ರೇಖಾ ಅವರ ಸಂಬಂಧ ಬಾಲಿವುಡ್ನಲ್ಲಿ ಚರ್ಚಿತ ವಿಷಯ. 'ದೋ ಅಂಜಾನೆ' ಚಿತ್ರದ ಸೆಟ್ನಲ್ಲಿ ಅವರ ಪ್ರೇಮಕಥೆ ಶುರುವಾಯ್ತು. ಆಗಲೇ ಅಮಿತಾಬ್ ಮದುವೆಯಾಗಿದ್ರು. ರೇಖಾ 'ಮತ್ತೊಬ್ಬ ಮಹಿಳೆ' ಎಂದು ಹೆಸರುವಾಸಿಯಾದರು.
ಫಿಲ್ಮ್ಫೇರ್ಗೆ ನೀಡಿದ ಹಳೆಯ ಸಂದರ್ಶನದಲ್ಲಿ, ರೇಖಾ ಸಿಲ್ಸಿಲಾ ನಂತರ ಅಮಿತಾಬ್ ಜೊತೆ ಏಕೆ ಕೆಲಸ ಮಾಡಲಿಲ್ಲ ಎಂದು ಹೇಳಿದ್ದಾರೆ. ಅದನ್ನ ತಮ್ಮ 'ನಷ್ಟ' ಅಂತ ಬಣ್ಣಿಸಿದ್ದಾರೆ. "ಅಮಿತಾಜಿ ಜೊತೆ ಮತ್ತೆ ನಟಿಸಲು ಕಾಯುವುದು ಸಾರ್ಥಕ" ಎಂದಿದ್ದಾರೆ. "ಎಲ್ಲವೂ ಸರಿಯಾದ ಸಮಯದಲ್ಲಿ ಸರಿಯಾದ ಕಾರಣಕ್ಕೆ ನಡೆಯುತ್ತದೆ. ಸಬ್ರ್ ಕಾ ಫಲ್ ಮೀಠಾ ಹೋತಾ ಹೈ."
ಅಮಿತಾಬ್ ಜಯಾ ಭಾದುರಿ ಅವರನ್ನು ಮದುವೆಯಾದ ನಂತರ ಪರಿಸ್ಥಿತಿ ಬದಲಾಯಿತು. ರೇಖಾ ಜೊತೆಗಿನ ಅವರ ಸಂಬಂಧದ ಗಾಳಿ ಸುದ್ದಿಗಳು ಅವರ ದಾಂಪತ್ಯದಲ್ಲಿ ಉದ್ವಿಗ್ನತೆ ಸೃಷ್ಟಿಸಿತು. 'ಮುಖದ್ದರ್ ಕಾ ಸಿಕಂದರ್' ಚಿತ್ರದಲ್ಲಿ ತಮ್ಮಿಬ್ಬರ ಪ್ರೇಮ ದೃಶ್ಯಗಳನ್ನು ನೋಡಿ ಜಯಾ ಅಳುತ್ತಿದ್ದ ಕ್ಷಣವನ್ನು ರೇಖಾ ನೆನಪಿಸಿಕೊಂಡಿದ್ದಾರೆ. ಅಮಿತಾಬ್ ಇನ್ನು ಮುಂದೆ ತನ್ನ ಜೊತೆ ಕೆಲಸ ಮಾಡುವುದಿಲ್ಲ ಎಂದು ಚಿತ್ರರಂಗದ ಒಳಗಿನವರು ತಿಳಿಸಿದ್ದಾರೆ ಎಂದು ರೇಖಾ ಹೇಳಿದ್ದಾರೆ.
ಜಯಾ ಮೊದಲು 'ಸಿಲ್ಸಿಲಾ' ಚಿತ್ರದಲ್ಲಿ ಕೆಲಸ ಮಾಡಲು ವಿರೋಧ ವ್ಯಕ್ತಪಡಿಸಿದ್ದರು. ಆದರೆ ಕ್ಲೈಮ್ಯಾಕ್ಸ್ನಲ್ಲಿ ಗಂಡ-ಹೆಂಡತಿ ಒಂದಾಗುವುದನ್ನು ನೋಡಿ ಒಪ್ಪಿಕೊಂಡರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.