ಪೋಲಿಸರ ವರ್ತನೆ ಖಂಡಿಸಿ, ರೈತರ ಪರ ಟ್ವೀಟ್ ಮಾಡಿದ ರಂಗೀಲಾ ನಟಿ
ಹರಿಯಾಣದ ಕುರುಕ್ಷೇತ್ರದಲ್ಲಿ ಕೇಂದ್ರ ಸರ್ಕಾರದ ಕೃಷಿ ನೀತಿಗಳ ವಿರುದ್ಧ ಭಾರತೀಯ ರೈತ ಸಂಘ ಮತ್ತು ಇತರ ರೈತ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ. ಅದೇ ಸಮಯದಲ್ಲಿ, ಪ್ರತಿಭಟನೆಯನ್ನು ಚದುರಿಸಲು ಪೊಲೀಸರು ಲಾಠಿಚಾರ್ಜ್ ಮಾಡಿದ್ದು, ಎಲ್ಲಡೆಯಿಂದ ಖಂಡನೆ ವ್ಯಕ್ತವಾಗುತ್ತಿದೆ. ರಂಗೀಲಾ ನಟಿ ಊರ್ಮಿಳಾ ಮಾತೋಂಡ್ಕರ್ ಪೊಲೀಸರು ರೈತರ ಮೇಲೆ ಮಾಡಿದ ಲಾಠಿಚಾರ್ಜ್ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ಟ್ವೀಟ್ ಗಮನ ಸೆಳೆಯುತ್ತಿದೆ. ಇದನ್ನು ದುರದೃಷ್ಟಕರ ಘಟನೆ ಎಂದು ಟ್ವೀಟ್ ಮಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವ ಈ ನಟಿ ಬಗ್ಗೆ ಒಂದಿಷ್ಟು.
ಕೇಂದ್ರ ಸರಕಾರದ ರೈತ ವಿರೋಧಿ ನೀತಿ ವಿರುದ್ಧವಾಗಿ ರೈತರು ಪ್ರತಿಭಟಿಸುತ್ತಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ ಈ ಬಾಲಿವುಡ್ ನಟಿ ಸಮಾಜದ ಹಲವು ಓರೆ ಕೋರೆಗಳ ವಿರುದ್ಧ ಮಾತನಾಡುತ್ತಿರುತ್ತಾರೆ.
ಕೇಂದ್ರ ಸರ್ಕಾರದ ಕೃಷಿ ನೀತಿಗಳ ವಿರುದ್ಧ ಭಾರತೀಯ ರೈತ ಸಂಘ ಮತ್ತು ಇತರ ರೈತ ಸಂಘಟನೆಗಳು ಪ್ರತಿಭಟನೆ ನೆಡೆಸುತ್ತಿವೆ.
ಈ ಸಮಯದಲ್ಲಿ ರೈತರ ಮೇಲೆ ಫೋಲಿಸರು ಲಾಠಿ ಚಾರ್ಜ್ ಮಾಡಿದ ವಿರುದ್ದ ರಂಗೀಲಾ ನಟಿ ಊರ್ಮಿಳಾ ಅಕ್ಷೇಪ ವ್ಯಕ್ತಪಡಿಸಿದ್ದಾರೆ.
ಟ್ವೀಟ್ ಮಾಡುವ ಮೂಲಕ ಪೋಲಿಸರ ಈ ಕ್ರಮವನ್ನು ಖಂಡಿಸಿದ್ದಾರೆ.
ನಮ್ಮ ಈ ವ್ಯವಸ್ಥೆಯಲ್ಲಿ ಅನ್ನದಾತನ ಮೇಲೆ ಕೈ ಮಾಡುವುದಕ್ಕಿಂತ ಮತ್ತೊಂದು ದುರಂತವಿಲ್ಲ. ಇದೊಂದು ದುರಾದೃಷ್ಟಕರ ಘಟನೆ, ಎಂದು ಟ್ವೀಟ್ ಮಾಡಿದ್ದಾರೆ ಬಾಲಿವುಡ್ ನಟಿ ಊರ್ಮಿಳಾ.
ರೈತರ ಪರವಾಗಿ ಮಾಡಿದ ಈ ಟ್ವೀಟ್ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿದೆ.
ಇದೇ ಸಮಯದಲ್ಲಿ, 1995ರ ಬಾಲಿವುಡ್ ಸೂಪರ್ ಡೂಪರ್ ಹಿಟ್ ಸಿನಿಮಾ ರಂಗೀಲಾ 25 ವರ್ಷ ಪೂರೈಸಿದೆ.
ಊರ್ಮಿಳಾ ರಂಗೀಲಾದ 25ನೇ ವರ್ಷದ ನೆನಪಿನಲ್ಲಿ ಇನ್ಸ್ಟಾಗ್ರಾಮ್ನಲ್ಲಿ ಈ ಪೋಸ್ಟ್ ಶೇರ್ ಮಾಡಿಕೊಂಡಿದ್ದಾರೆ.
ಮಿಡ್ಲ್ ಕ್ಲಾಸ್ ಜೀವನಕ್ಕೆ ಹತ್ತಿರವಾದ ಈ ಸಿನಿಮಾದ ಹಾಡು, ಸಂಗೀತ ಹಾಗೂ ಕಥೆ ಇನ್ನೂ ಜನರ ಮನಸ್ಸಿನಲ್ಲಿ ಉಳಿದಿದೆ.
ನಿರ್ದೇಶಕ ರಾಜ್ ಗೋಪಾಲ್ ವರ್ಮರಿಗೆ ಬಾಲಿವುಡ್ನಲ್ಲಿ ದೊಡ್ಡ ಬ್ರೇಕ್ ಕೊಟ್ಟ ಸಿನಿಮಾ ರಂಗೀಲಾ.
ಎ. ಆರ್. ರೆಹಮಾನ್ ಅವರನ್ನು ಬಾಲಿವುಡ್ಗೆ ಪರಿಚಯಿಸಿದ ಸಿನಿಮಾ ಇದು.
ರಂಗೀಲಾದಲ್ಲಿನ ಟಪೋರಿ ಭಾಷೆ ಟ್ರೆಂಡ್ ಸೃಷ್ಟಿಸಿತ್ತು. ಜೊತೆಗೆ ವಿಲನ್ ಇಲ್ಲದೇ ಇರುವುದು ಈ ಸಿನಿಮಾದ ಇನ್ನೊಂದು ವಿಶೇಷ.
ಮಾತೋಂಡ್ಕರ್ ಮಾರ್ಚ್ 3, 2016 ರಂದು ಕಾಶ್ಮೀರ ಮೂಲದ ಉದ್ಯಮಿ ಕಮ್ ಮಾಡೆಲ್ ಮೊಹ್ಸಿನ್ ಅಖ್ತರ್ ಮಿರ್ ಅವರನ್ನು ವಿವಾಹವಾದರು.
ನಟನೆ ಅಷ್ಟೇ ಅಲ್ಲದೇ ರಾಜಕೀಯಕ್ಕೂ ಪ್ರವೇಶಿಸಿರುವ ನಟಿ 2019 ಲೋಕಸಭಾ ಚುನಾವಣೆಯಲ್ಲಿ ಮುಂಬೈ ಉತ್ತರ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಸೋತಿದ್ದರು. ನಂತರ ಅವರು ಪಕ್ಷಕ್ಕೆ ರಾಜೀನಾಮೆಯನ್ನೂ ನೀಡಿದರು.