ಮತ್ತೊಂದು ಜನ್ಮವಿದ್ದರೆ ಕನ್ನಡ ನಾಡಲ್ಲಿ ಹುಡ್ತೀನಿ ಅಂತಿದ್ರು SPB: ಇಲ್ಲಿವೆ ಅಪರೂಪದ ಫೋಟೋಸ್
ದೇಶಾದ್ಯಂತ ಬಹಳಷ್ಟು ಜನರ ಅಚ್ಚುಮೆಚ್ಚಿನ ಮಧುರ ಕಂಠದ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ನಿಧನರಾಗಿದ್ದಾರೆ. ಕರ್ನಾಟಕದ ಬಗ್ಗೆ ಅತೀವ ಪ್ರೀತಿ ಇಟ್ಟುಕೊಂಡಿದ್ದ ಗಾಯಕ ಇಲ್ಲಿನ ಚಿತ್ರರಂಗ, ಜನರ ಜೊತೆ ವಿಶೇಷ ಸಂಬಂಧ ಹೊಂದಿದ್ದರು. ಇಲ್ಲಿವೆ ಎಸ್ಪಿಬಿ ಅವರ ಕೆಲವು ಅಪರೂಪದ ಫೋಟೋಸ್
1966ರಲ್ಲೇ ಕನ್ನಡದಲ್ಲಿ ಹಾಡಿದ ಬಾಲಸುಬ್ರಹ್ಮಣ್ಯಂ ನಕ್ಕರೆ ಅದೇ ಸ್ವರ್ಗ ಚಿತ್ರಕ್ಕೆ ದನಿ ನೀಡಿದ್ದರು.
ಕರ್ನಾಟಕದ ಬಗ್ಗೆ ಅತೀವ ಪ್ರೀತಿ ಇಟ್ಟುಕೊಂಡಿದ್ದ ಗಾಯಕ ಇಲ್ಲಿನ ಚಿತ್ರರಂಗ, ಜನರ ಜೊತೆ ವಿಶೇಷ ಸಂಬಂಧ ಹೊಂದಿದ್ದರು.
ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರಿಂದ ಸನ್ಮಾನ ಸ್ವೀಕರಿಸಿದ ಕ್ಷಣ
ಗಾಯಕ ಕೆಜೆ ಯೇಸುದಾಸ್ ಅವರೊಂದಿಗೆ ಎಸ್ಪಿಬಿ
ಗಾಯನದಲ್ಲಷ್ಟೇ ಅಲ್ಲದೆ, ನಟನೆ, ಸಂಗೀತ ಸಂಯೋಜನೆ, ಚಲನಚಿತ್ರ ನಿರ್ಮಾಣ, ಹಿನ್ನೆಲೆ ಧ್ವನಿ, ಸಂಗೀತ ಕಾರ್ಯಕ್ರಮಗಳ ನಿರ್ವಹಣೆಯಲ್ಲೂ ಎಸ್ಪಿಬಿ ನಿರಂತರ ಸಾಧನೆ ಮಾಡಿದ್ದಾರೆ.
ಕನ್ನಡದಲ್ಲಿ ಒಂದೇ ದಿನ 17 ಗೀತೆಗಳನ್ನು ಧ್ವನಿಮುದ್ರಿಸಿದ್ದರು.
ಇದು ಅವರ ಸಾಮರ್ಥ್ಯ, ಅವರಿಗಿದ್ದ ಬೇಡಿಕೆ, ಅವರಿಗಿರುವ ವೈಶಾಲ್ಯತೆಗಳಿಗೆನಿದರ್ಶನ.
ಇದು ಅವರ ಸಾಮರ್ಥ್ಯ, ಅವರಿಗಿದ್ದ ಬೇಡಿಕೆ, ಅವರಿಗಿರುವ ವೈಶಾಲ್ಯತೆಗಳಿಗೆನಿದರ್ಶನ.
‘ಸ್ನೇಹದ ಕಡಲಲ್ಲಿ ಎಂದು ಹಾಡಿದಾಗ’ ಶ್ರೀನಾಥ್ ಗರಿಗೆದರಿಬಿಟ್ಟರು.
‘ಎಲ್ಲಿರುವೇ ಮನವ ಕಾಡುವ ರೂಪಸಿಯೇ’ ಎಂದು ಅನಂತ್ ನಾಗ್ ಆಕಾಶಕ್ಕೆ ಹಾರಿದರು.
‘ನಲಿವಾ ಗುಲಾಬಿ ಹೂವೆ’ ಎಂದು ಶಂಕರ್ ಭಾವಸ್ಥರಾದರು.
ಮತ್ತೊಂದು ಜನ್ಮವೊಂದು ಇದ್ದರೆ ಕನ್ನಡ ನಾಡಿನಲ್ಲಿಯೇ ಹುಟ್ಟುವುದಾಗಿ ಸದಾ ಹೇಳುತ್ತಿದ್ದ ಬಾಲು ಸರ್ ಸಂಗೀತ ಲೋಕವನ್ನು ಅಗಲಿದ್ದು ತುಂಬಲಾರದ ನಷ್ಟ.
ಗಣ್ಯರ ಜೊತೆ ವೇದಿಕೆಯಲ್ಲಿ ಎಸ್ಪಿಬಿ, ಹಳೆಯ ಫೋಟೋ
ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಜೊತೆ ಎಸ್ಪಿಬಿ
ಎಚ್.ಡಿ. ಕುಮಾರಸ್ವಾಮಿ, ಬಿ.ಎಸ್ ಯಡಿಯೂರಪ್ಪ ಅವರಿಂದ ಎಸ್ಪಿಬಿ ಗೌರವಿಸಲ್ಪಟ್ಟ ಕ್ಷಣ
ಕಾರ್ಯಕ್ರಮವೊಂದರಲ್ಲಿ ವೇದಿಕೆಯಲ್ಲಿ ಎಸ್ಪಿಬಿ
ರಾಜಕೀಯ ಮುಖಂಡರಿಂದ ಗೌರವಿಸಲ್ಪಟ್ಟ ಕ್ಷಣ
ಎಸ್ಪಿಬಿಯವರಿಗೆ ಶಾಲು ಹೊದೆಸಿ ಸನ್ಮಾನಿಸುತ್ತಿರುವ ಬಿಎಸ್ವೈ
ಕುಮಾರಸ್ವಾಮಿ ಅವರಿಂದ ಸನ್ಮಾನಿಸಲ್ಪಟ್ಟ ನಂತರ
ನಿತ್ಯೋತ್ಸವ ಕವಿ ನಿಸಾರ್ ಅಹ್ಮದ್ ಜೊತೆಗೆ ಕುಶಲ ಮಾತುಕತೆ
ಚಿಕ್ಕಮಗಳೂರು ರಂಭಾಪುರಿ ಪೀಠಕ್ಕೆ ಭೇಟಿ ನೀಡಿದ್ದ ಎಸ್ಪಿಬಿ. ಪತ್ನಿ ಸಮೇತರಾಗಿ ರಂಭಾಪುರಿ ಜಗದ್ಗುರುಗಳ ಆಶೀರ್ವಾದ ಪಡೆದಿದ್ದ ಎಸ್ ಪಿ ಬಾಲಸುಬ್ರಮಣ್ಯಂ. ಡಾಕ್ಟರ್ ವೀರಸೋಮೇಶ್ವರ ಜಗದ್ಗುರುಗಳೂ ಎಸ್ ಪಿ ಬಾಲಸುಬ್ರಮಣ್ಯ ದಂಪತಿಗಳಿಗೆ ಸನ್ಮಾನ ಮಾಡಿದ್ದರು