ಸುಳ್ಳು ಆರೋಪ ಮಾಡಿದ ನೆರೆ ಮನೆಯವರ ವಿರುದ್ಧ ರಿಯಾ ಕೇಸ್: ಬೆಂಬಲಿಸಿದ ರಿತೇಶ್
ಇತ್ತೀಚೆಗಷ್ಟೇ ಜೈಲಿನಿಂದ ಹೊರಬಂದ ಬಾಲಿವುಡ್ ನಟಿ ರಿಯಾ ಚಕ್ರವರ್ತಿ | ನೆರೆ ಮನೆಯವರ ವಿರುದ್ಧ ಕ್ರಮ | ಬೆಂಬಲಿಸಿದ ನಟ ರಿತೇಶ್ ದೇಶ್ಮುಖ್
ನನ್ನ ವಿರುದ್ಧ ಸುಳ್ಳು ಆರೋಪ ಮಾಡಲಾಗಿದೆ ಎಂದು ಆರೋಪಿಸಿ ಬಾಲಿವುಡ್ ನಟಿ ರಿಯಾ ಚಕ್ರವರ್ತಿ ಎಸ್ಐಟಿ ಮತ್ತು ಸಿಬಿಐಗೆ ಪತ್ರ ಬರೆದಿದ್ದಾರೆ.
ತಪ್ಪು ಆರೋಪ ಮಾಡಿ ತನಿಖೆಯ ದಾರಿ ತಪ್ಪಿಸಿದ್ದಾರೆ ಎಂದು ನಟಿ ಆರೋಪಿಸಿದ್ದಾರೆ.
ರಿಯಾ ಚಕ್ರವರ್ತಿ ನೆರೆ ಮನೆಯವರಾದ ಡಿಂಪಲ್ ತವನಿ ರಿಯಾ ಜೂನ.13ರಂದು ಸುಶಾಂತ್ ಸಿಂಗ್ ರಜಪೂತ್ನನ್ನು ಭೇಟಿಯಾಗಿದ್ದರು ಎಂದು ಹೇಳಿದ್ದರು.
ಇದು ನನ್ನ ವಿರುದ್ಧದ ಸುಳ್ಳು ಆರೋಪ, ತನಿಖೆ ದಾರಿ ತಪ್ಪಿಸಲು ಈ ರೀತಿ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ ರಿಯಾ.
ಸುಶಾಂತ್ ಸಾವಿಗೆ ಸಂಬಂಧಿಸಿ ಸಿಬಿಐನಿಂದ ನಾನು 5 ದಿನ ವಿಚಾರಣೆಗೊಳಪಟ್ಟಿದ್ದೆ. ಈ ಸಂದರ್ಭ ಬಹಳಷ್ಟು ಮಾಧ್ಯಮ ತಮ್ಮದೇ ಸ್ವಾರ್ಥಕ್ಕಾಗಿ ಯಾವುದೇ ಸಾಕ್ಷಿ ಇಲ್ಲದೆ ತನ್ನ ಬಗ್ಗೆ ತಪ್ಪು ತಪ್ಪಾಗಿ ಸುದ್ದಿ ಮಾಡಿದ್ದಾರೆ ಎಂದು ನಟಿ ಆರೋಪಿಸಿದ್ದಾರೆ.
ಫೇಮಸ್ ಆಗೋ ಉದ್ದೇಶದಿಂದ ಡಿಂಪಲ್ ಮಾಧ್ಯಮಗಳ ಬಳಿ ಸುಳ್ಳು ಹೇಳಿದ್ದರು ಎಂದು ರಿಯಾ ಲಾಯರ್ ಹೇಳಿದ್ದಾರೆ.
ಇದೀಗ ನಟ ರಿತೇಶ್ ದೇಶ್ಮುಖ ಕೂಡಾ ರಿಯಾ ಬೆಂಬಲಕ್ಕೆ ಬಂದಿದ್ದಾರೆ. ಮೋರ್ ಪವರ್ ಟು ಯು - ಯಾವುದೂ ಸತ್ಯಕ್ಕಿಂತ ಬಲಶಾಲಿಯಲ್ಲ ಎಂದು ಟ್ವೀಟ್ ಮಾಡಿದ್ದಾರೆ.
ರಿಯಾ ಚಕ್ರವರ್ತಿ 28 ದಿನಗಳ ಕಾಲ ನ್ಯಾಯಾಂಗ ಬಂಧನದಲ್ಲಿದ್ದರು.
ನಟಿಯ ಸಹೋದರ ಶೋವಿಕ್ ಈಗಲೂ ಜೈಲಿನಲ್ಲಿದ್ದಾರೆ.