- Home
- Entertainment
- Cine World
- ಮಹೇಶ್ಬಾಬು & ರಾಜಮೌಳಿ ಕಾಂಬಿನೇಷನ್ ‘SSMB 29’ ಸಿನಿಮಾ ರಾಮಾಯಣದ ಆಧಾರಿತವೇ?: ಸಂಜೀವಿನಿ ಹೊಸ ಕೆತೆಯೇನು?
ಮಹೇಶ್ಬಾಬು & ರಾಜಮೌಳಿ ಕಾಂಬಿನೇಷನ್ ‘SSMB 29’ ಸಿನಿಮಾ ರಾಮಾಯಣದ ಆಧಾರಿತವೇ?: ಸಂಜೀವಿನಿ ಹೊಸ ಕೆತೆಯೇನು?
#SSMB29: ಮಹೇಶ್ ಬಾಬು ಮತ್ತು ರಾಜಮೌಳಿ ಕಾಂಬಿನೇಷನ್ನಲ್ಲಿ ಬರುತ್ತಿರುವ SSMB29 ರಾಮಾಯಣದ ಸ್ಫೂರ್ತಿಯಿಂದ ಮೂಡಿ ಬರುತ್ತಿದೆ ಎಂಬ ಮಾಹಿತಿ ಇದೆ. ಹಾಗಾದರೆ ರಾಮಾಯಣದ ಯಾವ ಘಟ್ಟದ ಆಧಾರದ ಮೇಲೆ ಈ ಸಿನಿಮಾ ಇರಲಿದೆ ನೋಡೋಣ.

#SSMB29: ಸೂಪರ್ ಸ್ಟಾರ್ ಮಹೇಶ್ ಬಾಬು ಜೊತೆ ನಿರ್ದೇಶಕ ರಾಜಮೌಳಿ ನಿರ್ಮಿಸುತ್ತಿರುವ ಸಿನಿಮಾ SSMB29. ‘#SSMB29’ ವರ್ಕಿಂಗ್ ಟೈಟಲ್. ಚಿತ್ರೀಕರಣ ಪ್ರಾರಂಭವಾದಾಗಿನಿಂದ ಪ್ರೇಕ್ಷಕರಲ್ಲಿ ಆಸಕ್ತಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ರೆಗ್ಯುಲರ್ ಶೂಟಿಂಗ್ ಕೆಲವು ದಿನಗಳ ಹಿಂದೆ ಒಡಿಶಾದಲ್ಲಿ ಪ್ರಾರಂಭವಾಯಿತು. ಈ ಭಾರಿ ಬಜೆಟ್ ಫಾರೆಸ್ಟ್ ಅಡ್ವೆಂಚರಸ್ ಆಕ್ಷನ್ ಫಿಲ್ಮ್ನಲ್ಲಿ ಕಥೆ ಏನು ಎಂಬುದು ಹೊರಗೆ ಬರದಿದ್ದರೂ, ಅವರವರಿಗೆ ತೋಚಿದ ಊಹೆಗಳನ್ನು ಮಾಡುತ್ತಿದ್ದಾರೆ. ಮಹೇಶ್ ಬಾಬು, ಪೃಥ್ವಿರಾಜ್ ಸುಕುಮಾರನ್ ಅವರು ಭಾಗವಹಿಸಿದ್ದು, ರಾಜಮೌಳಿ ಪ್ರಮುಖ ಸನ್ನಿವೇಶಗಳನ್ನು ಚಿತ್ರೀಕರಿಸುತ್ತಿದ್ದಾರೆ. ಈ ನಡುವೆ ಒಂದು ಹೊಸ ಕಥೆ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಅದರ ಪ್ರಕಾರ ರಾಮಾಯಣದ ಒಂದು ಶ್ರೇಷ್ಠ ಎಪಿಸೋಡ್ ಆಧಾರಿತವಾಗಿದೆ ಎಂದು ಹೇಳುತ್ತಿದ್ದಾರೆ. ಹಾಗಾದರೆ ಆ ಎಪಿಸೋಡ್ ಯಾವುದು?
ಈ ಚಿತ್ರಕ್ಕೆ ಪೌರಾಣಿಕ ಟಚ್ ಇದೆ, ರಾಮಾಯಣದ ಕೆಲವು ಮುಖ್ಯ ಘಟನೆಗಳನ್ನು ಸ್ಫೂರ್ತಿಯಾಗಿ ತೆಗೆದುಕೊಂಡು, ಇಂದಿನ ಆಧುನಿಕ ಕಾಲಕ್ಕೆ ಅನ್ವಯಿಸಿ, ಈ ಕಥೆಯನ್ನು ವಿಜಯೇಂದ್ರ ಪ್ರಸಾದ್ ರೆಡಿ ಮಾಡಿದ್ದಾರೆ ಎಂಬ ಮಾಹಿತಿ ಇದೆ. ರಾಮಾಯಣದಲ್ಲಿನ ಪ್ರಮುಖ ಘಟ್ಟವಾದ ಲಕ್ಷ್ಮಣನನ್ನು ಬದುಕಿಸಲು ಸಂಜೀವಿನಿಗಾಗಿ ಹನುಮಂತ ಹೋದ ಎಪಿಸೋಡ್. ಆ ಕಾನ್ಸೆಪ್ಟ್ ಅನ್ನು ಆಧಾರವಾಗಿಟ್ಟುಕೊಂಡು ಮಾಡರ್ನ್ ಕಾಲಕ್ಕೆ ತಕ್ಕಂತೆ ಬದಲಾಯಿಸಿದಂತೆ ಕಾಣುತ್ತದೆ.
ಈ ಕಥೆಯಲ್ಲಿ ಕೂಡ ಒಂದು ಜೀವವನ್ನು ಉಳಿಸಲು ಸಂಜೀವನಿಯಂತಹ ಮೆಡಿಸಿನ್ ಹುಡುಕುತ್ತಾ ಮಹೇಶ್ ಬಾಬು ಈ ಜರ್ನಿಯನ್ನು ಮಾಡುತ್ತಾನೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಕಥೆಯಲ್ಲಿ ಕಾಶಿ ನಗರಕ್ಕೂ ಪ್ರಾಮುಖ್ಯತೆ ಇದೆಯಂತೆ. ಇದರಲ್ಲಿ ನಿಜವೆಷ್ಟೋ ತಿಳಿಯಲು ಇನ್ನೂ ಕೆಲವು ದಿನ ಕಾಯಬೇಕಿದೆ. ಅದಕ್ಕಾಗಿ ಕಾಶಿ ನಗರವನ್ನು ಹೋಲುವ ಸೆಟ್ ಅನ್ನು ಹೈದರಾಬಾದ್ನಲ್ಲಿ ಹಾಕಲು ಯೂನಿಟ್ ಆಲೋಚಿಸುತ್ತಿದೆ ಎಂದು ತಿಳಿದುಬಂದಿದೆ.
ಇನ್ನು ಮಹೇಶ್ ಗ್ಲೋಬಲ್ ಟ್ರೋಟಿಂಗ್ (ಪ್ರಪಂಚ ಸುತ್ತುವ ಮನುಷ್ಯ) ಕಾನ್ಸೆಪ್ಟ್ನೊಂದಿಗೆ ಸಿನಿಮಾ ಮಾಡುತ್ತಿದ್ದಾರೆ ಎಂದು ಹೇಳಿರುವುದರಿಂದ ಆಡಿಯೆನ್ಸ್ನಲ್ಲಿರುವ ನಿರೀಕ್ಷೆಗಳು ಅಷ್ಟಿಷ್ಟಲ್ಲ. ಪ್ರಸ್ತುತ ಈ ಸಿನಿಮಾದ ಶೂಟಿಂಗ್ ಒಡಿಶಾದಲ್ಲಿ ನಡೆಯುತ್ತಿದೆ. ಮಹೇಶ್, ಪೃಥ್ವಿರಾಜ್, ಪ್ರಿಯಾಂಕಾ ಅವರ ಕಾಂಬಿನೇಷನ್ ಸೀನ್ಸ್ಗಳನ್ನು ಚಿತ್ರೀಕರಿಸಲಾಗುತ್ತಿದೆ. ಈ ಸಿನಿಮಾದ ಶೂಟಿಂಗ್ನ ಒಂದು ವಿಡಿಯೋ ಹೊರಬಂದಿದೆ. ಇದರಿಂದ ಇನ್ನೂ ಹೆಚ್ಚಿನ ಬಿಗಿ ಭದ್ರತೆಯೊಂದಿಗೆ ಈ ಸಿನಿಮಾದ ಚಿತ್ರೀಕರಣ ನಡೆಯುತ್ತಿದೆ ಎಂದು ತಿಳಿದುಬಂದಿದೆ. ಈ ತಿಂಗಳ 28ರವರೆಗೆ ತೊಲೋಮಾಲಿ, ದೇವ್ಮಾಲಿ, ಮಾಚ್ಖಂಡ್ ಪ್ರದೇಶಗಳಲ್ಲಿನ ಆಯ್ಕೆ ಮಾಡಿದ ಸ್ಥಳಗಳಲ್ಲಿ ಚಿತ್ರೀಕರಣ ನಡೆಯಲಿದೆ. ತೊಲೋಮಾಲಿ ಪರ್ವತದ ಮೇಲೆ ದೊಡ್ಡ ಸೆಟ್ ಹಾಕಲಾಗಿದೆ. ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವ ಪ್ರಿಯಾಂಕಾ ಚೋಪ್ರಾ ಇನ್ನೂ ಕೆಲವು ದಿನಗಳಲ್ಲಿ ಶೂಟಿಂಗ್ನಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿದುಬಂದಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.