ಪ್ರೇಮ್ ಕಹಾನಿ - ಕ್ರಿಕೆಟಿಗನಿಗೆ ಕೈ ಕೊಟ್ರಾ ಮಾಧುರಿ ದೀಕ್ಷಿತ್?
ಈ ಕ್ವಾರೆಂಟೈನ್ ಸಮಯದಲ್ಲಿ ಸೆಲೆಬ್ರೆಟಿಗಳ ಹಲವು ವಿಷಯಗಳು ವೈರಲ್ ಆಗುತ್ತಿವೆ. ಅವರ ಹಳೆಯ ಲವ್ ಸ್ಟೋರಿಗಳು ಸಹ ಅವುಗಳಲ್ಲಿ ಸೇರಿವೆ. ನಿಮಗೆ ತಿಳಿದಿರುವಂತೆ ಫಿಲ್ಮಂ ಸ್ಟಾರ್ಗಳಿಗೂ ಕ್ರಿಕೆಟಿಗೂ ಹಳೆಯ ನಂಟು. ಹಳೆಯ ಹೊಸ ಹಲವು ಪ್ರೇಮ್ ಕಹಾನಿಗಳಿವೆ ಈ ಎರಡೂ ಕ್ಷೇತ್ರಗಳಲ್ಲಿ ಹೆಸರು ಮಾಡಿದವರ ನಡುವೆ. ಬಾಲಿವುಡ್ ದಿವಾ ಮಾಧುರಿ ದಿಕ್ಷಿತ್ ಮತ್ತು ಕ್ರಿಕೆಟಿಗ ಅಜಯ್ ಜಡೇಜಾರ ನಡುವಿನ ಪ್ರೀತಿ ಹಳೆದಾದರೂ ಈಗ ಮತ್ತೆ ಸೋಶಿಯಲ್ ಮಿಡೀಯಾದಲ್ಲಿ ಸದ್ದು ಮಾಡುತ್ತಿದೆ.
ಬಾಲಿವುಡ್ನ ದಿವಾ ಮಾಧುರಿ ದಿಕ್ಷೀತ್ರ ಅಫೇರ್ಗಳಿಗೇನು ಕಡಿಮೆ ಇಲ್ಲ. ಅವರ ಹೆಸರನ್ನು ಸಹನಟ ಅನಿಲ್ ಕಪೂರ್, ಜಾಕಿ ಶ್ರಾಫ್ಗಳ ಜೊತೆ ಅಲ್ಲದೆ ಹಲವು ನಟರೊಂದಿಗೆ ಆಗಾಗ ಕೇಳಿ ಬರುತ್ತಿತ್ತು. ಆದರೆ ಅವರು ಯಾವುದಕ್ಕೂ ಪ್ರತಿಕ್ರಿಯೆ ನೀಡಲಿಲ್ಲ.
ಸುದ್ದಿಯ ಪ್ರಕಾರ, ಮಾಧುರಿಗೆ ಕ್ರಿಕೆಟಿಗ ಅಜಯ್ ಜಡೇಜಾ ಮೇಲೆ ಪ್ರೀತಿ ಇತ್ತು ಆದರೆ ಜಡೇಜಾ ಮಾಡಿದ ತಪ್ಪಿನಿಂದ ಅವರ ಹೃದಯ ಮುರಿಯಿತು.
ಅನೇಕ ಸೂಪರ್ಹಿಟ್ ಚಿತ್ರಗಳಲ್ಲಿ ಕೆಲಸ ಮಾಡಿದ ಮಾಧುರಿ, ಪತ್ರಿಕೆಯ ಫೋಟೋಶೂಟ್ ವೇಳೆ ಇಬ್ಬರೂ ಭೇಟಿಯಾಗಿದ್ದರು. ಆಗ ಕ್ರಿಕೆಟಿಗ ಅಜಯ್ ಜಡೇಜಾ ಅವರತ್ತ ಆಕರ್ಷಿತರಾದರು.
ರಾಜ ಮನೆತನಕ್ಕೆ ಸೇರಿದ ಜಡೇಜಾ ಮನೆಯಲ್ಲಿ ಮಾಧುರಿಯೊಟ್ಟಿಗಿನ ಸಂಬಂಧಕ್ಕೆ ಗ್ರೀನ್ ಸಿಗ್ನಲ್ ಸಿಗಲಿಲ್ಲ. ಅಲ್ಲದೇ ಮ್ಯಾಚ್ ಫಿಕ್ಸಿಂಗ್ನಲ್ಲಿ ಜಡೇಜಾ ಹೆಸರು ಕೇಳಿ ಬಂದ ನಂತರ ಇವರಿಬ್ಬರ ಸಂಬಂಧವೇ ಮುರಿಯಿತು.
ಮೊದಲ ಮೀಟ್ನಲ್ಲೇ ಅಜಯ್ಗೆ ಮಾಧುರಿ ತುಂಬಾ ಪ್ರಭಾವಿತರಾಗಿ ಆಕರ್ಷಿತರಾಗಿದ್ದರು. ಈ ಸಂಬಂಧದ ಕಥೆಗಳು ಬಿ-ಟೌನ್ನಲ್ಲಿ ಚರ್ಚೆಯ ವಿಷಯವಾಯಿತು.
ಅದೇ ಸಮಯದಲ್ಲಿ, ನಿರ್ದೇಶಕರು ಸಹ ತಮ್ಮ ಚಿತ್ರಕ್ಕಾಗಿ ಹೊಸ ಜೋಡಿಯನ್ನು ಹುಡುಕುತ್ತಿದ್ದರು.ಮಾಧುರಿಯ ಶಿಫಾರಸಿನ ಮೇರೆಗೆ ನಿರ್ಮಾಪಕ ಅಜಯ್ ಅವರನ್ನು ಚಿತ್ರದಲ್ಲಿ ತೆಗೆದುಕೊಳ್ಳುವುದಾಗಿ ಘೋಷಿಸಿದ್ದರಂತೆ.
ಪ್ರೀತಿಯಲ್ಲಿ ಬಿದ್ದ ಪರಿಣಾಮ ಜಡೇಜಾರ ಆಟದ ಮೇಲೆ ಆಗ ತೊಡಗಿತು. ಇಬ್ಬರ ಸಂಬಂಧದ ಕಥೆಗಳು ಮಾಧ್ಯಮಗಳಲ್ಲಿ ಬರಲಾರಂಭಿಸಿದವು.
ಜಡೇಜಾ ಅವರ ಕುಟುಂಬಕ್ಕೆ ಇದು ಇಷ್ಟವಾಗಲಿಲ್ಲ. ಕುಟುಂಬದ ಒತ್ತಡದಲ್ಲಿ, ಅಜಯ್ ಆಟದತ್ತ ಗಮನ ಹರಿಸಲು ಪ್ರಾರಂಭಿಸಿದರು.
ನಂತರ ಮಾಧುರಿ ಇತರೆ ಸಹ ನಟರೊಂದಿಗೂ ಕೇಳಿ ಬರಲು ಆರಂಭವಾಯಿತು.
ಇದರ ನಂತರ ಮಾಧುರಿ ಸಂಜಯ್ ದತ್ ಅವರನ್ನು ಇಷ್ಟಪಡಲು ಪ್ರಾರಂಭಿಸಿದರು. 1991 ರ ಸಾಜನ್ ಚಿತ್ರದ ಶೂಟಿಂಗ್ ಸಮಯದಲ್ಲಿ ಸಂಜಯ್ ಮತ್ತು ಮಾಧುರಿ ಹತ್ತಿರವಾದರು. ಇಬ್ಬರೂ ಪರಸ್ಪರ ಹತ್ತಿರವಾಗಿ ಮದುವೆಯಾಗಲು ಯೋಜಿಸುತ್ತಿದ್ದರು.
ಆದರೆ 'ಖಳ್ ನಾಯಕ್ ಚಿತ್ರದ ಸಮಯದಲ್ಲಿ ಸಂಜಯ್ ಜೈಲಿಗೆ ಹೋದಾಗ ಮತ್ತೆ ಮಾಧುರಿಯ ಲವ್ ಸ್ಟೋರಿಗೆ ಹ್ಯಾಪಿ ಎಂಡಿಂಗ್ ಸಿಗಲಿಲ್ಲ.