MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Cine World
  • ದುಡ್ಡಿಗಾಗಿ ಪರದಾಡುತ್ತಿದ್ದ ದಿನಗಳ ಬಗ್ಗೆ ಬಾಯಿಬಿಟ್ಟ ಕರೀನಾ ಕಪೂರ್‌ ತಂದೆ!

ದುಡ್ಡಿಗಾಗಿ ಪರದಾಡುತ್ತಿದ್ದ ದಿನಗಳ ಬಗ್ಗೆ ಬಾಯಿಬಿಟ್ಟ ಕರೀನಾ ಕಪೂರ್‌ ತಂದೆ!

70ರ ದಶಕದ ನಟ ಹಾಗೂ ಕರೀನಾ ಕಪೂರ್‌ ತಂದೆ ರಣಧೀರ್ ಕಪೂರ್‌ ಅವರ ಅವರ ಹಳೆಯ ಸಂದರ್ಶನವು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ, ಅದರಲ್ಲಿ ಅವರು ತಮ್ಮ ಹಿಂದಿನ ದಿನಗಳನ್ನು ನೆನಪಿಸಿಕೊಂಡರು. ಈ ಸಮಯದಲ್ಲಿ, ಅವರು ತಮ್ಮ ಹಣಕಾಸಿನ ಸ್ಥಿತಿಯ ಬಗ್ಗೆ ಮಾತನಾಡಿ, ಕಷ್ಟದ ದಿನಗಳನ್ನು ನೆನಪಿಸಿಕೊಂಡಿದ್ದಾರೆ. 

2 Min read
Author : Suvarna News | Asianet News
Published : Aug 30 2021, 04:15 PM IST
Share this Photo Gallery
  • FB
  • TW
  • Linkdin
  • Whatsapp
111

2014ರಲ್ಲಿ ರೆಡಿಫ್ ಜೊತೆಯ ಮಾತುಕತೆ ಸಮಯದಲ್ಲಿ, ರಣಧೀರ್ ತನ್ನ ವೈಯಕ್ತಿಕ ಜೀವನದ ಬಗ್ಗೆ ಅನೇಕ  ವಿಷಯಗಳನ್ನು ಬಹಿರಂಗಪಡಿಸಿದ್ದರು. ಅರ್ಥಿಕ ಬಿಕ್ಕಟ್ಟಿನಿಂದ ಪಾರಾಗಲು ಮತ್ತು ಖರ್ಚುಗಳನ್ನು ನಿರ್ವಹಿಸಲು ಕಷ್ಟಪಟ್ಟ ದಿನಗಳ ಬಗ್ಗೆ ಮಾತನಾಡಿದ್ದರು ಕರೀನಾ ಕಪೂರ್‌ ತಂದೆ.

211

ರಣಧೀರ್ ಕಪೂರ್ 1971ರಲ್ಲಿ ಕಲ್ ಆಜ್ ಔರ್ ಕಲ್ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ನಾಯಕ ನಟನ ಜೊತೆಯಲ್ಲಿ ಅವರು ಈ ಚಿತ್ರದ ನಿರ್ದೇಶಕರಾಗಿದ್ದರು. ಈ ಚಿತ್ರದಲ್ಲಿ ಅವರು ತಮ್ಮ ಪತ್ನಿ ಬಬಿತಾ ಜೊತೆ ತೆರೆ ಹಂಚಿಕೊಂಡರು. 

311

ಚಿತ್ರದಲ್ಲಿ, ಅವರು ತಮ್ಮ ತಂದೆ ರಾಜ್ ಕಪೂರ್ ಮತ್ತು ಅಜ್ಜ ಪೃಥ್ವಿರಾಜ್ ಕಪೂರ್ ಜೊತೆ ಕಾಣಿಸಿಕೊಂಡರು. ಆದರೆ, ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಫ್ಲಾಪ್ ಆಗಿತ್ತು .2014 ರಲ್ಲಿ, ಅವರು ತಮ್ಮ ಸಂದರ್ಶನವೊಂದರಲ್ಲಿ ತಮ್ಮ ಮನೆಯ ಆರ್ಥಿಕ ಸ್ಥಿತಿ ಮತ್ತು ವೆಚ್ಚಗಳ ಬಗ್ಗೆ ಮುಕ್ತವಾಗಿ ಮಾತನಾಡಿದರು. 

411

ಇಂದಿನ ಪೀಳಿಗೆ ಸಾಕಷ್ಟು ಹಣವನ್ನು ಗಳಿಸುತ್ತಿದೆ. ಆದರೆ ಅವರ ಸಮಯದಲ್ಲಿ ಹೀಗೆ ಇರಲಿಲ್ಲ. ಅವರು ಕುಟುಂಬವನ್ನು ಬೆಳೆಸಲು ಕಷ್ಟಪಟ್ಟು ಕೆಲಸ ಮಾಡಬೇಕಾಗಿತ್ತು ಎಂದು ಸಂದರ್ಶನದಲ್ಲಿ ತಮ್ಮ ಹಳೆ ದಿನಗಳನ್ನು ನೆನಪು ಮಾಡಿಕೊಂಡಿದ್ದರು.

511

ಅವರ ಇಬ್ಬರು ಮಕ್ಕಳು ಕರೀಷ್ಮಾ-ಕರೀನಾರ ಶಾಲಾ ಫೀಸ್‌, ಮನೆಯ ವಿದ್ಯುತ್ ಬಿಲ್, ಪತ್ನಿ ಬಬಿತಾ ಅವರ ಖರ್ಚು ಮತ್ತು ಅವರ ಸ್ವಂತ ಸ್ಕಾಚ್‌ಗಾಗಿ ಹಣವನ್ನು ಹೊಂದಿಸಿಲು ಹಗಲಿರುಳು ಶ್ರಮಿಸಬೇಕಾಗಿತ್ತು. ಆ ಸಮಯದಲ್ಲಿ ಚಲನಚಿತ್ರಗಳು ಮಾತ್ರ ಅವರ ಗಳಿಕೆಯ ಸಾಧನವಾಗಿತ್ತು ಎಂದು ರಣಧೀರ್ ಕಪೂರ್ ಹೇಳಿದ್ದರು.

611

ಇಂದು ನಾನು ಚಿಕ್ಕವನಾಗಿರಬೇಕಾಗಿತ್ತು ಎಂದು ಬಯಸುತ್ತೇನೆ. ಇಂದಿನ ನಟರು ಎಷ್ಟು ಹಣ ಗಳಿಸುತ್ತಾರೆ. ಇಂದಿನ ನಟ ವರ್ಷಕ್ಕೆ ಒಂದು ಸಿನಿಮಾ ಮಾಡುತ್ತಾರೆ. ಅವರು ಅನುಮೋದನೆಗಳು, ಇವೆಂಟ್ಸ್‌ ಮತ್ತು ಹಲವು ಇತರ ಮೂಲಗಳಿಂದ ಹಣವನ್ನು ಗಳಿಸುತ್ತಾರೆ. ಆದರೆ ನಮ್ಮ ಕಾಲದಲ್ಲಿ ಹೀಗಿರಲಿಲ್ಲ. ನಮ್ಮನ್ನು ಮತ್ತು ನಮ್ಮ ಕುಟುಂಬ ಸದಸ್ಯರನ್ನು ಬೆಂಬಲಿಸಲು ನಾವು ಒಂದು ವರ್ಷದಲ್ಲಿ ಹಲವು ಚಿತ್ರಗಳಲ್ಲಿ ಕೆಲಸ ಮಾಡಬೇಕಾಗಿತ್ತು. ಏಕೆಂದರೆ ಆ ಸಮಯದಲ್ಲಿ  ಅದು ಒಂದೇ ದಾರಿ ಇತ್ತು, ಎಂದು ಹೇಳಿದ್ದರು.

711

ರಣಧೀರ್ ಅವರನ್ನು ಮದುವೆಯಾಗಲು ಬಬಿತಾರಿಗೆ ಸಿನಿಮಾ ಕೆರಿಯರ್‌ ತೊರೆಯಬೇಕು ಎಂದು ಷರತ್ತನ್ನು ಹಾಕಿದ್ದರು. ಅದರಂತೆ ಪ್ರೀತಿಗಾಗಿ, ಬಬಿತಾ ಚಲನಚಿತ್ರಗಳಿಂದ ದೂರವಾದರು. ಇಬ್ಬರೂ 1971ರಲ್ಲಿ ವಿವಾಹವಾದರು. 

811

ಮದುವೆ ನಂತರ, ರಣಧೀರ್ ಮತ್ತು ಬಬಿತಾ ಪ್ರತ್ಯೇಕ ಫ್ಲಾಟ್‌ನಲ್ಲಿ ವಾಸಿಸಲು ಆರಂಭಿಸಿದರು. ಕರಿಷ್ಮಾ 1974ರಲ್ಲಿ ಮತ್ತು ಕರೀನಾ 1980 ರಲ್ಲಿ ಜನಿಸಿದರು. ಬಬಿತಾ ತಮ್ಮ ಚಲನಚಿತ್ರ ವೃತ್ತಿ ಜೀವನವನ್ನು ತೊರೆದರು. ಆದರೆ ಅವರು ತಮ್ಮ ಹೆಣ್ಣು ಮಕ್ಕಳನ್ನು ನಟಿಯಾಗಿ ಮಾಡಲು ಬಯಸಿದ್ದರು.  

911

ತನ್ನ ಕುಡಿಯುವ ಅಭ್ಯಾಸ ಬಬಿತಾರಿಗೆ ಇಷ್ಟವಾಗುತ್ತಿರಲ್ಲಿಲ್ಲ. ಅವರು ಪತಿ ಕುಡಿಯುವುದನ್ನು ವಿರೋಧಿಸಿದರು. ಈ ಕಾರಣದಿಂದಾಗಿ ಇಬ್ಬರ ನಡುವಿನ ಅಂತರವು ಹೆಚ್ಚುತ್ತಲೇ ಇತ್ತು  ಎಂದು ಸಂದರ್ಶನವೊಂದರಲ್ಲಿ, ರಣಧೀರ್ ಬಹಿರಂಗಪಡಿಸಿದ್ದರು. 

1011

ನಾನು ತುಂಬಾ ಕುಡಿದು ತಡವಾಗಿ ಮನೆಗೆ ಬರುತ್ತಿದ್ದ ಒಬ್ಬ ಭಯಂಕರ ವ್ಯಕ್ತಿ ಎಂದು ಅವಳು ಭಾವಿಸಿದ್ದಳು. ಅವಳು ಅದನ್ನು ಇಷ್ಟಪಡಲಿಲ್ಲ. ಅವಳು ಈ ರೀತಿ ಬದುಕಲು ಬಯಸಲಿಲ್ಲ. ಅವಳು ಬಯಸಿದ ರೀತಿಯಲ್ಲಿ ಬದುಕಲು ನಾನು ಬಯಸಲಿಲಲ್ಲ ಎಂದು ಹೇಳಿದ್ದರು ರಣಧೀರ್‌.

1111

ನಾವು ಪ್ರೇಮ ವಿವಾಹವಾಗಿದ್ದೆವು. ಆದರೂ ಅವಳು ನಾನು ಇರುವ ಹಾಗೇ ನನ್ನನ್ನು ಸ್ವೀಕರಿಸಲಿಲ್ಲ, ಎಂದು ಹೇಳಿದ ರಣಧೀರ್‌ ಕಪೂರ್‌ಗೆ ಅವರ ವಿಚ್ಛೇದನದ ಬಗ್ಗೆ ಕೇಳಿದಾಗ  - ಏಕೆ ವಿಚ್ಛೇದನ? ನಾವೇಕೆ ವಿಚ್ಛೇದನ ಪಡೆಯಬೇಕು? ನನಗೂ ಮತ್ತೆ ಮದುವೆಯಾಗಲು ಇಷ್ಟವಿರಲಿಲ್ಲ ಮತ್ತು ಅವಳಿಗೂ ಸಹ ಎಂದು ಹೇಳಿದ್ದರು. 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SN
Suvarna News

Latest Videos
Recommended Stories
Recommended image1
ಮಕ್ಕಳ ಬಗ್ಗೆ ರಶ್ಮಿಕಾ ಮಂದಣ್ಣ ಮಾತು, ಆಗಲೇ ತಾಯಿಯಾದ ಫೀಲಿಂಗ್! ಶೀಘ್ರದಲ್ಲೇ ನಟನೆಗೆ ಗುಡ್‌ಬೈ?
Recommended image2
ರಶ್ಮಿಕಾ ಸೊಸೆಯಾಗಿ ಬಂದಿದ್ದೇ ತಡ 'ತೆಲುಗು ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ಸ್ಕಾಲರ್‌ಶಿಪ್' ಘೋಷಿಸಿದ ವಿಜಯ್ ದೇವರಕೊಂಡ
Recommended image3
ಜೋಸೆಫ್‌ ವಿಜಯ್‌ ಜೊತೆಗಿನ ಸಂಬಂಧದ ನಡುವೆಯೇ ತಮಿಳುನಾಡಿನ ಜಯಲಲಿತಾ ಆಗ್ತಾರಾ ನಟಿ ತ್ರಿಶಾ, ಇದಕ್ಕೆ ಕಾರಣವೂ ಇದೆ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved