ನೀತು ಪಾರ್ಟಿಯಲ್ಲಿ ಕಾಣಿಸಿಕೊಂಡು ನೆಟ್ಟಿಗರಿಂದ ಟ್ರೋಲ್ಗೊಳಗಾದ ಕರಣ್!
ಸುಶಾಂತ್ ಸಿಂಗ್ ರಜಪೂತ್ ಸಾವಿನ ನಂತರ, ಕರಣ್ ಜೋಹರ್ ನೆಪೋಟಿಸಂ (ಸ್ವಜನಪಕ್ಷಪಾತ) ಟೀಕೆಗೆ ಗುರಿಯಾಗಿದ್ದಾರೆ. ಇತ್ತೀಚೆಗೆ, ಕರಣ್ ಜೋಹರ್ ಆಪ್ತರೊಬ್ಬರು ಮಾಧ್ಯಮಕ್ಕೆ ತಿಳಿಸಿದ್ದರು, ಟ್ರೋಲಿಂಗ್ನಿಂದ ಕರಣ್ ತುಂಬಾ ಹರ್ಟ್ ಆಗಿದ್ದು, ಮಾತನಾಡಲು ಸಹ ಸಾಧ್ಯವಾಗಲಿಲ್ಲ ಎಂದಿದ್ದರು. ಆದರೆ, ಸಂಜೆ ಹೊತ್ತಿಗೆ, ರಣಬೀರ್ ಕಪೂರ್ ತಾಯಿ ನೀತು ಕಪೂರ್ ಹುಟ್ಟುಹಬ್ಬದ ಪಾರ್ಟಿಯಲ್ಲಿ ಕರಣ್ ಜೋಹರ್ ಕಾಣಿಸಿಕೊಂಡಾಗ, ಅವರ ಸ್ನೇಹಿತನ ಸುಳ್ಳು ಬಯಲಾಗಿದೆ. ಜನರು ಆತನನ್ನು ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡುತ್ತಿದ್ದಾರೆ.
ಬುಧವಾರ ರಾತ್ರಿ ನೀತು ಕಪೂರ್ ತಮ್ಮ ಬರ್ಥ್ಡೇ ಪಾರ್ಟಿಯ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಕರಣ್ ಜೋಹರ್ ಅಲ್ಲದೆ, ಪುತ್ರ ರಣಬೀರ್ ಕಪೂರ್ ಮತ್ತು ಮಗಳು ರಿದ್ಧಿಮಾ ಸೇರಿ ಇತರೆ ಕುಟುಂಬ ಸದಸ್ಯರೂ ಕಾಣಿಸಿಕೊಂಡಿದ್ದಾರೆ.
ನೀತು ಕಪೂರ್ ಪಾರ್ಟಿಯಲ್ಲಿ ಕಾಣಿಸಿಕೊಂಡ ಕರಣ್ ಜೋಹರ್ ಸಖತ್ ಟ್ರೋಲ್ಗೆ ಒಳಗಾಗಿದ್ದಾರೆ.
ನೀತು ಕಪೂರ್ ಶೇರ್ ಮಾಡಿದ ಫೋಟೋದಲ್ಲಿ ಕರಣ್ ಜೋಹರ್ನನ್ನು ನೋಡಿದ ನಂತರ, - 'ಕರಣ್ ಜೋಹರ್ ಕೆಟ್ಟದಾಗಿ ಹರ್ಟ್ ಆಗಿದ್ದಾರೆ, ಎಂದು ನಾನು ಎಲ್ಲೋ ಓದಿದ್ದೇನೆ. ಆದರೆ ಇಲ್ಲಿ ಚೆನ್ನಾಗಿ ಕಾಣುತ್ತಿದ್ದಾರೆ' ಎಂದು ವ್ಯಕ್ತಿಯೊಬ್ಬರು ಬರೆದಿದ್ದಾರೆ .
ಕರಣ್ ಜೋಹರ್ ಬೆಕ್ಕಿನ ನಾಯಿಯಂತೆ ಅಳುತ್ತಿದ್ದಾನೆ ಎಂದು ನಾವು ಕೇಳಿದ್ದೇವೆ. ನೆಪ ಮತ್ತು ಬೂಟಾಟಿಕೆಯ ಅಸಹನೀಯ ಮಟ್ಟ' ಎಂದು ಇನ್ನೊಬ್ಬರು ಧ್ವನಿ ಜೋಡಿಸಿದ್ದಾರೆ.
ಈ ಹಿಂದೆ ಸಂದರ್ಶನವೊಂದರಲ್ಲಿ, ಕರಣ್ ಜೋಹರ್ ಆಪ್ತರೊಬ್ಬರು, ಸುಶಾಂತ್ ಮರಣದ ನಂತರ, ಕರಣ್ ವಿರುದ್ಧ ಹೆಚ್ಚುತ್ತಿರುವ ದ್ವೇಷದಿಂದ ತೀವ್ರವಾಗಿ ಕುಸಿದಿದ್ದಾರೆ. ಅವರು ನಿರಂತರವಾಗಿ ಅಳುತ್ತಿದ್ದಾರೆ ಮತ್ತು ಏನನ್ನೂ ಮಾತನಾಡುವ ಸ್ಥಿತಿಯಲ್ಲಿಲ್ಲ ಎಂದು ಹೇಳಿದ್ದರು.
ಈ ಸಮಯದಲ್ಲಿ ಅವರು ಯಾವ ಪರಿಸ್ಥಿತಿಗಳನ್ನು ಎದುರಿಸುತ್ತಿದ್ದಾರೆಂದು ಅವರೇ ಹೇಳಬೇಕು. ಸುಶಾಂತ್ ಅವರ ಮರಣದ ನಂತರ, ಜನರು ತಮ್ಮ ಕೋಪವನ್ನುಅವರ ಮೇಲೆ ವ್ಯಕ್ತಪಡಿಸಿದ ರೀತಿಯನ್ನು ನೋಡಿ ಅವರು ತೀವ್ರವಾಗಿ ನೋವಾಗಿದೆ. ನಿಜವಾಗಿಯೂ ಎಲ್ಲವನ್ನೂ ಡಿಸರ್ವ್ ಮಾಡುತ್ತೀನಾ ಎಂದು ಅವರು ಹೆಚ್ಚಾಗಿ ಕೇಳುತ್ತಾರೆ? ಎಂದು ಜೋಹರ್ ಫ್ರೆಂಡ್ ಹೇಳಿದ್ದಾರೆ.
ಕರಣ್ ಜೋಹರ್ಗೆ ಕ್ಲೋಸ್ ಇರುವ ಪ್ರತಿಯೊಬ್ಬರೂ ಸಾರ್ವಜನಿಕರ ಗುರಿಯಾಗಿದ್ದಾರೆ ಇದಕ್ಕಾಗಿ ಫಿಲ್ಮ್ಮೇಕರ್ ತಮ್ಮನ್ನು ತಾವು ತಪ್ಪಿತಸ್ಥರೆಂದು ಪರಿಗಣಿಸುತ್ತಿದ್ದಾರೆ.
ಅವರ 3 ವರ್ಷದ ಮಕ್ಕಳನ್ನು ಕೊಲ್ಲುವುದಾಗಿ ಬೆದರಿಕೆಗಳು ಬರುತ್ತಿವೆ. ಅವರು ಅಳುತ್ತಿದ್ದಾರೆ ಮತ್ತು ನಾನೇನು ಮಾಡಿದೆ, ನನ್ನನ್ನೇಕೆ ಗುರಿಯಾಗಿಸಲಾಗುತ್ತಿದೆ ಎಂದು ಕರಣ್ ಬೇಸರ ವ್ಯಕ್ತಪಡಿಸಿದ್ದರು ಎನ್ನಲಾಗಿತ್ತು. ಏನೋ ಒಟ್ಟಿನಲ್ಲಿ ಕರಣ್ ಬುದ್ಧಿ ಬಗ್ಗೆ ಬಾಲಿವುಡ್ನಲ್ಲಿ ಸಿಕ್ಕಾಪಟ್ಟೆ ಅಪಸ್ವರಗಳು ಕೇಳಿ ಬರುತ್ತಿರುವುದಂತೂ ಸುಳ್ಳಲ್ಲ.