MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Cine World
  • ಜಗಪತಿ ಬಾಬುಗೆ 5 ವರ್ಷ ತನ್ನ ಸಿನಿಮಾದಿಂದ ಬ್ಯಾನ್ ಮಾಡಿದ ಜೂನಿಯರ್ ಎನ್.ಟಿ.ಆರ್!

ಜಗಪತಿ ಬಾಬುಗೆ 5 ವರ್ಷ ತನ್ನ ಸಿನಿಮಾದಿಂದ ಬ್ಯಾನ್ ಮಾಡಿದ ಜೂನಿಯರ್ ಎನ್.ಟಿ.ಆರ್!

ತೆಲುಗು ಚಿತ್ರರಂಗದ ಪ್ಯಾನ್ ಇಂಡಿಯಾ ಜೂನಿಯರ್ ಎನ್.ಟಿ.ಆರ್ ಅವರು ಇನ್ನೊಬ್ಬ ಸ್ಟಾರ್ ನಟ ಜಗಪತಿ ಬಾಬು ಅವರಿಗೆ ನಾಲ್ಕೈದು ವರ್ಷ ಕಾಣಿಸಬೇಡ ಅಂತ ಬೈದು ತಮ್ಮ ಸಿನಿಮಾಗಳಿಂದ ಬ್ಯಾನ್ ಮಾಡಿದ್ದರು ಎಂಬ ವಿಚಾರ ಮುನ್ನೆಲೆಗೆ ಬಂದಿದೆ.  ಒಂದು ಸಿನಿಮಾದಲ್ಲಿ ಜಗಪತಿ ಬಾಬು ಡಾಮಿನೇಟ್ ಮಾಡಿದ್ದೇ ಇದಕ್ಕೆ ಕಾರವೆಂದು ಅವರು ಹೇಳಿದ್ದಾರೆ. ಹೀಗಾಗಿ, 6 ವರ್ಷವಾದರೂ ಅವರೊಂದಿಗೆ ಸಿನಿಮಾ ಮಾಡಿಲ್ಲ..

2 Min read
Author : Sathish Kumar KH
Published : Nov 16 2024, 03:30 PM IST
Share this Photo Gallery
  • FB
  • TW
  • Linkdin
  • Whatsapp
16

ಈಗಿನ ಟಾಲಿವುಡ್‌ನ ದೊಡ್ಡ ನಟರಲ್ಲಿ ಎನ್.ಟಿ.ಆರ್ ಒಬ್ಬರು. ಒಳ್ಳೆ ನಟನೆ ಜೊತೆಗೆ ಚೆನ್ನಾಗಿ ಡ್ಯಾನ್ಸ್ ಮಾಡ್ತಾರೆ. ಹಾಡು ಕೂಡ ಹೇಳ್ತಾರೆ. ಎನ್.ಟಿ.ಆರ್ ಅದ್ಭುತ ನಟ ಅಂತ ಹಿರಿಯ ನಟರು ಓಪನ್ ಆಗೇ ಹೇಳಿದ್ದಾರೆ. ಆದರೆ ಎನ್.ಟಿ.ಆರ್ ಅವರನ್ನು ಹಿರಿಯ ಸ್ಟಾರ್ ನಟ ಜಗಪತಿ ಬಾಬು ಅವರು ಡಾಮಿನೇಟ್ ಮಾಡಿದ್ದರಂತೆ. ಹೀಗಾಗಿ, ಜ್ಯೂ.ಎನ್‌ಟಿಆರ್ ಬೇಸರ ಪಟ್ಟುಕೊಂಡಿದ್ದಾರೆ ಎಂಬುದು ಇದೀಗ ಬಹಿರಂಗವಾಗಿದೆ.

26

ಅರವಿಂದ ಸಮೇತ ವೀರ ರಾಘವ ಚಿತ್ರದಲ್ಲಿ ಎನ್.ಟಿ.ಆರ್ ಹೀರೋ, ಜಗಪತಿ ಬಾಬು ವಿಲನ್ ಆಗಿದ್ದರು. ಕ್ರೂರಿ ಫ್ಯಾಕ್ಷನಿಸ್ಟ್ ಆಗಿ ಜಗಪತಿ ಬಾಬು ಪಾತ್ರ ಇರುತ್ತದೆ. ಎನ್.ಟಿ.ಆರ್ ಕೂಡ ಫ್ಯಾಕ್ಷನಿಸ್ಟ್ ಆದರೂ ನಂತರ ಒಳ್ಳೆಯವನಾಗಿ ಕಾಣಿಸಿಕೊಳ್ಳುತ್ತಾರೆ. ಅವರ ನಟನೆ ಸೆಟಲ್ಡ್‌ ಆಗಿರುತ್ತದೆ. ನಿರ್ದೇಶಕ ತ್ರಿವಿಕ್ರಮ್ ಫ್ಯಾಕ್ಷನಿಸಂನಲ್ಲಿ ಎನ್.ಟಿ.ಆರ್ ಹೀರೋಯಿಸಂ ಅನ್ನು ಹೊಸದಾಗಿ ತೋರಿಸೋ ಪ್ರಯತ್ನ ಮಾಡಿದ್ದರು.

36

ಆದರೆ, ತನ್ನ ಪಾತ್ರಕ್ಕಿಂತ ಜಗಪತಿ ಬಾಬು ಮಾಡಿದ ಬಸಿರೆಡ್ಡಿ ಪಾತ್ರ ಚೆನ್ನಾಗಿದೆ ಅಂತ ಎನ್.ಟಿ.ಆರ್ ಹೇಳಿದ್ದರಂತೆ. ಇದೇ ವಿಚಾರ ಮುಂದಿಟ್ಟುಕೊಂಡು ಜಗಪತಿ ಬಾಬು ಅವರನ್ನ ದಿನಾ ಕಾಲೆಳೆಯುತ್ತಿದ್ದರು. ಒಂದು ಸಂದರ್ಶನದಲ್ಲಿ ಜಗಪತಿ ಬಾಬು ಮಾತಾಡ್ತಾ, 'ಅರವಿಂದ ಸಮೇತ ಚಿತ್ರದಲ್ಲಿ ನನ್ನದು ತುಂಬಾ ಅದ್ಭುತವಾದ ಪಾತ್ರ. ಕಥೆಗೆ ಚೆನ್ನಾಗಿ ವರ್ಕ್ ಆಗಿದೆ. ದುರಾದೃಷ್ಟವಶಾತ್ ನನ್ನದು ಆಕ್ರಮಣಕಾರಿ ಪಾತ್ರ, ತಾರಕ್ ನಿಷ್ಕ್ರಿಯ ಪಾತ್ರ ಮಾಡಿದರು' ಎಂದು ಹೇಳಿದರು.

46
ಜಗಪತಿ ಬಾಬು

ಜಗಪತಿ ಬಾಬು

ಅರವಿಂದ ಸಮೇತ ಬಿಡುಗಡೆ ಸಮಾರಂಭದಲ್ಲಿ ಕೂಡ ಜ್ಯೂ.ಎನ್‌ಟಿಆರ್ ಅವರು, 'ಮೊದಲು ಬಸಿರೆಡ್ಡಿ ನೆನಪಿಗೆ ಬರ್ತಾನೆ. ಆಮೇಲೆ ನಾನು ನೆನಪಿಗೆ ಬರ್ತೀನಿ' ಅಂತ ಸ್ವತಃ ಹೇಳಿದ್ದರು. ಅಷ್ಟು ದೊಡ್ಡ ಹೀರೋ ಅಂಥ ಹೇಳಿಕೆ ಕೊಡೋದೇ ಸಾಹಸ. ಆಮೇಲೆ ನನ್ನ ಜೊತೆ, 'ಬಾಬು ಇನ್ನೂ ನಿಮಗೂ ನನಗೂ ಮುಗಿದೋಯ್ತು. ನೀವು ತಾರಕ್ ಜೊತೆ ಆಟ ಆಡ್ತಿದ್ದೀರ. ಅದು ಸರಿಯಲ್ಲ. ಒಂದು 4-5 ವರ್ಷ ನನಗೆ ಕಾಣಿಸಬೇಡಿ' ಎಂದು ಹೇಳಿದ್ದರು. ಅವರು ತೋರಿಸಿದ ಪ್ರೀತಿ, ಅವರು ಪ್ರೀತಿಯಿಂದಲೇ ಹೇಳಿರುವುದು ನನ್ನ ನಟನೆಗೆ ಕೊಟ್ಟ ಗೌರವವಾಗಿದೆ ಎಂದು ಜಗಪತಿ ಬಾಬು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

56
ಅರವಿಂದ ಸಮೇತ

ಅರವಿಂದ ಸಮೇತ

ಈ ಮೂಲಕ ತನ್ನೊಂದಿಗೆ ಸ್ವಲ್ಪ ದಿನ ತನ್ನ ಸಿನಿಮಾಗಳಲ್ಲಿ ನೀವು ನಟಿಸಬೇಡಿ ಅಂತ ಎನ್.ಟಿ.ಆರ್ ಪರೋಕ್ಷವಾಗಿ ಹೇಳಿದ್ದರು ಎಂಬುದನ್ನು ಜಗಪತಿ ಬಾಬು ತಿಳಿಸಿದ್ದಾರೆ. ಅರವಿಂದ ಸಮೇತ ವೀರ ರಾಘವ 2018 ರಲ್ಲಿ ಬಿಡುಗಡೆಯಾಯಿತು. ಈವರೆಗೆ 6 ವರ್ಷಗಳಲ್ಲಿ ಎನ್.ಟಿ.ಆರ್ ನಟಿಸಿದ್ದು ಎರಡೇ ಚಿತ್ರಗಳಲ್ಲಿ. ಒಂದು ಆರ್.ಆರ್.ಆರ್, ಇನ್ನೊಂದು ದೇವರ. ಈ ಎರಡೂ ಚಿತ್ರಗಳಲ್ಲಿ ಜಗಪತಿ ಬಾಬು ಅವರೊಂದಿಗೆ ನಟಿಸಿಲ್ಲ. ಇನ್ನುಮುಂದೆ ನಟಿಸುತ್ತಾರೋ ಇಲ್ಲವೋ ಕಾದು ನೋಡಬೇಕಿದೆ.

 

66

ಈಗ ಎನ್.ಟಿ.ಆರ್ ವಾರ್ 2 ಚಿತ್ರೀಕರಣದಲ್ಲಿ ಭಾಗವಹಿಸ್ತಿದ್ದಾರೆ. ಹೃತಿಕ್ ರೋಷನ್ ಜೊತೆ ಮಾಡ್ತಿರೋ ಮಲ್ಟಿಸ್ಟಾರರ್ ಈ ಚಿತ್ರ. ವಾರ್ 2 ಆದ್ಮೇಲೆ ಪ್ರಶಾಂತ್ ನೀಲ್ ಜೊತೆ ಸಿನಿಮಾ ಮಾಡ್ತಾರೆ. ಇದರ ಬಗ್ಗೆ ಅಧಿಕೃತ ಘೋಷಣೆ ಆಗಿದೆ. ದೇವರ 2 ಸಿನಿಮಾನೂ ಎನ್.ಟಿ.ಆರ್ ಪೂರ್ಣಗೊಳಿಸಬೇಕಿದೆ. ದೇವರ 2 ಇರೋದಿಲ್ಲ ಅನ್ನೋ ಪ್ರಚಾರ ನಡೀತಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SK
Sathish Kumar KH
ವಿಜಯನಗರ ಜಿಲ್ಲೆ ಕಂದಗಲ್‌ಪುರ ಗ್ರಾಮದವನು ಮೂಲತಃ ಶಿಕ್ಷಕ. ಆದರೆ, ಆಕರ್ಷಿಸಿದ್ದು ಪತ್ರಿಕೋದ್ಯಮ. ಎಂಟು ವರ್ಷಗಳಿಂದ ಪ್ರಜಾವಾಣಿ, ವಿಜಯವಾಣಿ ನಂತರ ಇದೀಗ ಏಷ್ಯಾನೆಟ್ ಕನ್ನಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಕರ್ನಾಟಕ ರಾಜಕಾರಣ ನೆಚ್ಚಿನ ಕ್ಷೇತ್ರ. ಡಿಜಿಟಲ್ ಮಾಧ್ಯಮಕ್ಕನುಗುಣವಾಗಿ ಶಿಕ್ಷಣ, ಆರೋಗ್ಯ, ಸಿನಿಮಾ ಸುದ್ದಿಗಳನ್ನೂ ಬರೆಯುತ್ತೇನೆ. ಕ್ರಿಕೆಟ್, ಕೃಷಿ ಇಷ್ಟ. ಓದು ನೆಚ್ಚಿನ ಹವ್ಯಾಸ.
ಜೂನಿಯರ್ ಎನ್.ಟಿ.ಆರ್

Latest Videos
Recommended Stories
Recommended image1
Viral Pics: ವಿಜಯ್‌ ದೇವರಕೊಂಡ ತಾಳಿ ಕಟ್ಟುವ ವೇಳೆ ಭಾವುಕಳಾಗಿ ಕಣ್ಣೀರಿಟ್ಟ ರಶ್ಮಿಕಾ ಮಂದಣ್ಣ!
Recommended image2
ಮುಂಬೈನಲ್ಲಿ ಮಂಗಳೂರು ಬೆಡಗಿ ಶಿಲ್ಪಾ ಶೆಟ್ಟಿ ಮೊದಲ ಬೀಚ್ ಕ್ಲಬ್ ಶುರು; ದೇವಲೋಕವೋ ಪ್ರೇಮಲೋಕವೋ ಎಂಬಂತಿದೆ!
Recommended image3
ಸಂಭ್ರಮದಿಂದ ಪತಿ ಪರಿಚಯಿಸುತ್ತಲೇ ಒಂದೇ ಪೋಸ್ಟ್‌ನಲ್ಲಿ ಟೀಕೆಗೂ ಉತ್ರರಿಸಿದ್ರಾ ರಶ್ಮಿಕಾ ಮಂದಣ್ಣ?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved