ಸಲ್ಮಾನ್ ಖಾನ್ ಮೇಲಿತ್ತು ಸ್ನೇಹಜೀವ ರಿಷಿ ಕಪೂರ್ಗೆ ಮುನಿಸು!
ಚಲನಚಿತ್ರೋದ್ಯಮದಲ್ಲಿ, ಸೆಲೆಬ್ರೆಟಿಗಳ ನಡುವೆ ಪರಸ್ಪರ ಸಂಬಂಧ ಕೆಲಮೊಮ್ಮೆ ಚೆನ್ನಾಗಿದ್ದರೆ ಕೆಲವೊಮ್ಮೆ ಹದಗಟ್ಟಿರುತ್ತದೆ. ಕೆಲವರ ನಡುವೆ ಕೊನೆವರೆಗೂ ಸ್ನೇಹ ನೇರವೇರುವುದೇ ಇಲ್ಲ. ಬಾಲಿವುಡ್ನ ಹಿರಿಯ ನಟ ನಾಲ್ಕು ದಿನಗಳ ಹಿಂದೆ ನಿಧನರಾಗಿದ್ದಾರೆ. ಅವರ ಜೀವನದ ಹಲವು ವಿಷಯ ಹಾಗೂ ಸಂಬಂಧಗಳು ಚರ್ಚೆಯಾಗುತ್ತಿವೆ ಈಗ. ರಿಷಿ ಕಪೂರ್ ಸ್ನೇಹಮಯ ವ್ಯಕ್ತಿಯಾಗಿದ್ದರೂ ಇಂಡಸ್ಟ್ರಿಯಲ್ಲಿ ಒಬ್ಬ ಸ್ಟಾರ್ನ ಜೊತೆ ಸಂಬಂಧ ಹೇಳಿಕೊಳ್ಳುವ ಹಾಗೇನೂ ಇರಲಿಲ್ಲ. ಆ ಸ್ಟಾರ್ ಸಲ್ಮಾನ್ ಖಾನ್ ಅವರೇ ಆಗಿದ್ದರು. ಹೌದು ಬಾಲಿವುಡ್ನ ಈ ನಟರ ನಡುವೆಯ ಸಂಬಂಧ ಕೊನೆವರೆಗೂ ಚೆನ್ನಾಗಿರಲಿಲ್ಲ.
ಒಬ್ಬರಿಗೊಬ್ಬರನ್ನು ನೋಡಿದರೆ ಕಿಡಿಕಾರುತ್ತಿದ್ದ ಬಾಲಿವುಡ್ ಸ್ಟಾರ್ ರಿಷಿ ಕಪೂರ್ ಹಾಗೂ ಸಲ್ಮಾನ್.
ಮೊದಲು ಹೀಗಿರಲಿಲ್ಲ. ರಿಷಿ ಕಪೂರ್ ಮತ್ತು ಸಲ್ಮಾನ್ ಖಾನ್ ನಡುವೆ ಸರಿಯಿದ್ದ ಸಂಬಂಧ ನಿಧಾನವಾಗಿ ಬಿರುಕು ಬಿಡಲಾರಂಭಿಸಿತ್ತು.
ಮೀಡಿಯಾ ರಿಪೋರ್ಟ್ಗಳ ಪ್ರಕಾರ ಇನ್ನೂ ರಣಬೀರ್ ಕಪೂರ್ ಸಿನಿಮಾಕ್ಕೆ ಕಾಲಿಡುವ ಮುಂಚಿನಿಂದ ಈ ನಟರ ನಡುವೆ ದ್ವೇಷ ಶುರುವಾಗಿದ್ದಂತೆ.
ಪಬ್ವೊಂದರಲ್ಲಿ ಸಲ್ಮಾನ್ ಮತ್ತು ಸಂಜಯ್ ದತ್ತ್ ಪಾರ್ಟಿ ಮಾಡುತ್ತಿದ್ದಾಗ ಅಲ್ಲಿಗೆ ಫ್ರೆಂಡ್ಸ್ಗಳ ಜೊತೆ ಬಂದ ರಣಬೀರ್ ಕಪೂರ್ ಹಾಗೂ ಇವರ ನಡುವೆ ಶುರುವಾದ ಜಗಳ ಹೊಡೆದಾಟಕ್ಕೆ ತಿರುಗಿತ್ತು. ಆ ಸಮಯದಲ್ಲಿ ಸಲ್ಮಾನ್ ರಣಬೀರ್ ಕೆನ್ನೆಗೆ ಸಹ ಹೊಡೆದಿದ್ದರಂತೆ.
ಈ ಜಗಳದ ನಂತರ ಸಲ್ಮಾನ್ ಪರವಾಗಿ ಸಲೀಂ ಖಾನ್ ರಿಷಿ ಅವರ ಬಳಿಯಲ್ಲಿ ಕ್ಷಮೆ ಕೇಳಿದ್ದರಂತೆ. ನಂತರದ ದಿನಗಳಲ್ಲಿ ಈ ಸ್ಟಾರ್ಗಳ ನಡುವೆ ಎಲ್ಲಾ ಸರಿಯಾದ ಹಾಗೆ ಇತ್ತು.
ರಣಬೀರ್ ಬಾಲಿವುಡ್ನಲ್ಲಿ ನೆಲೆಯೂರಲು ಪ್ರಯತ್ನಿಸುತ್ತಿದ್ದ ದಿನಗಳಲ್ಲಿ ಕತ್ರೀನಾ ಕೈಫ್ಗೆ ಹತ್ತಿರವಾಗಲು ಪ್ರಾರಂಭಿಸಿದ್ದರು. ಆ ದಿನಗಳಲ್ಲಿ ಸಲ್ಮಾನ್ ಹಾಗೂ ನಟಿ ಕತ್ರೀನಾ ಡೇಟ್ ಮಾಡುತ್ತಿದ್ದಾರೆ ಎಂದು ಚರ್ಚೆಯಾಗುತ್ತಿತ್ತು. ರಣಬೀರ್ ಜೊತೆಗೆ ಕೆಲಸ ಮಾಡುತ್ತಾ ಕತ್ರೀನಾ ಸಲ್ಮಾನ್ನಿಂದ ದೂರವಾಗ ತೊಡಗಿದರು. ಹೀಗೆ ರಣಬೀರ್ ಅವರಿಬ್ಬರ ಬ್ರೇಕ್ ಅಪ್ಗೆ ಕಾರಣವಾದರು.
ಸೋನಂ ಕಪೂರ್ಳ ರಿಸೆಪ್ಷನ್ನಲ್ಲಿ ರಿಷಿ ಕಪೂರ್ರಿಗೆ ಸಲ್ಮಾನ್ ಸರಿಯಾಗಿ ಗ್ರೀಟ್ ಸಹ ಮಾಡಲಿಲ್ಲ. ಇದರಿಂದ ರಿಷಿ ಸಿಟ್ಟಾಗಿ ಸಲ್ಮಾನ್ ಬಗ್ಗೆ ಸಹೋದರ ಸೋಹಿಲ್ ಖಾನ್ ಹೆಂಡತಿ ಸೀಮಾ ಖಾನ್ಗೆ ದೂರತ್ತಾ ಬೈಯ್ದಿದ್ದರಂತೆ. ಈ ವಿಷಯ ಸಲ್ಲುಗೆ ತಿಳಿದು ಸಿಟ್ಟಾಗಿ ಇಬ್ಬರ ನಡುವೆ ಜಟಾಪಟಿ ನೆಡೆಯಿತು.
ಇದರ ನಂತರ ಸಲ್ಮಾನ್ ರಿಷಿ ಕಪೂರ್ರ ಹೆಸರು ಎತ್ತದ,'ನನಗೆ ಹಾಗೂ ನನ್ನ ಪರಿವಾರದ ಸದಸ್ಯರಿಗೆ ಯಾರಾದರೂ ಅವಮಾನ ಮಾಡಿದರೆ, ನಾನು ಅವರಿಗೆ ಗೌರವ ಕೊಡಲು ಸಾಧ್ಯವಿಲ್ಲ. ಈ ರೀತಿ ಒಂದು ಅಥವಾ ಎರಡು ಫ್ಯಾಮಿಲಿಗಳಿವೆ ಅಲ್ಲಿಂದ ಪ್ರೀತಿ ಮತ್ತು ಗೌರವ ಸಿಗಲಿಲ್ಲ. ಇಂಡಸ್ಟ್ರಿಯ ಕೆಲವು ಜನರಿಗೆ ನಮ್ಮ ಮನೆಗೆ ಯಾವಾಗಲೂ ಸ್ವಾಗತವಿಲ್ಲ,' ಎಂದು ಗುಡುಗಿದ್ದರಂತೆ.
ಇವೆಲ್ಲದರ ನಂತರ ರಿಷಿ ಕಪೂರ್ ಇನ್ನಿಲ್ಲ ಎಂಬ ಸುದ್ದಿ ತಿಳಿದಾಗ ಬಾಲಿವುಡ್ನ ಸೂಪರ್ ಸ್ಟಾರ್ ದುಃಖಗೊಂಡಿದ್ದರು. 'ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ ಚಿಂಟೂ ಸರ್.. ಹೇಳಿದ್ದು ಕೇಳಿದ್ದಕ್ಕೆ ಕ್ಷಮೆ..... ಕುಟುಂಬ ಮತ್ತು ಸ್ನೇಹಿತರಿಗೆ ಧೈರ್ಯ, ಬೆಳಕು ಮತ್ತು ಶಾಂತಿ ಸಿಗಲಿ' ಎಂದು ಟ್ವೀಟ್ ಮಾಡಿ ಹಿರಿಯ ನಟ ರಿಷಿ ಕಪೂರ್ ಅಂತಿಮ ನಮನ ಸಲ್ಲಿಸಿದ್ದರು ಸಲ್ಲು ಬಾಯ್.