ಇಮ್ರಾನ್ ಹಶ್ಮಿ ಹಣ ಸಂಪಾದಿಸಲು ಸಿನಿಮಾ ಮಾಡೋಲ್ವಂತೆ!
ಬಾಲಿವುಡ್ನ ಮರ್ಡರ್ ಸಿನಿಮಾ ನಟ ಇಮ್ರಾನ್ ಹಶ್ಮಿ ತಮ್ಮ ಸಿನಿಮಾ, ವೃತ್ತಿ ಜೀವನ ಹಾಗೂ ಬಾಲಿವುಡ್ ಬಗ್ಗೆ ಮಾತನಾಡಿದ್ದಾರೆ. ಸಿನಿಮಾ ಮಾಡುವುದು ಹಣ ಸಂಪಾದಿಸಲು ಅಲ್ಲ ಎಂದಿದ್ದಾರೆ ಇಮ್ರಾನ್. ಮತ್ತೇನಕ್ಕಂತೆ?

<p>ಬಾಲಿವುಡ್ ನಟ ಇಮ್ರಾನ್ ಹಶ್ಮಿ ಎಂದಿಗೂ ಹಣದ ಬಗ್ಗೆ ಚಿಂತಿಸೋಲ್ವಂತೆ. ಆಗಾಗ್ಗೆ ತಮ್ಮ ನೈತಿಕತೆ ಬಗ್ಗೆ ಮಾತನಾಡುವ ಅವರು ಉತ್ತಮ ಚಲನಚಿತ್ರಗಳನ್ನು ಮಾಡಲು ಬಯಸುತ್ತಾರೆ ಮತ್ತು ಹಣದ ಬಗ್ಗೆ ಯೋಚಿಸೋಲ್ಲ ಅಂದಿದ್ದಾರೆ.</p>
ಬಾಲಿವುಡ್ ನಟ ಇಮ್ರಾನ್ ಹಶ್ಮಿ ಎಂದಿಗೂ ಹಣದ ಬಗ್ಗೆ ಚಿಂತಿಸೋಲ್ವಂತೆ. ಆಗಾಗ್ಗೆ ತಮ್ಮ ನೈತಿಕತೆ ಬಗ್ಗೆ ಮಾತನಾಡುವ ಅವರು ಉತ್ತಮ ಚಲನಚಿತ್ರಗಳನ್ನು ಮಾಡಲು ಬಯಸುತ್ತಾರೆ ಮತ್ತು ಹಣದ ಬಗ್ಗೆ ಯೋಚಿಸೋಲ್ಲ ಅಂದಿದ್ದಾರೆ.
<p>ಸಂದರ್ಶನವೊಂದರಲ್ಲಿ ಹಶ್ಮಿ, ಹಣಕ್ಕೋಸ್ಕರ ಚಿತ್ರ ಮಾಡೋದಲ್ಲ. ಅದರಲ್ಲಿ ಸಿಗೋ ಫೇಮ್ ನನಗೆ ಮುಖ್ಯ. ಖುಷಿಗೆ ಆದ್ಯತೆ ಕೊಡುತ್ತೇನೆ, ಎಂದಿದ್ದರು. </p>
ಸಂದರ್ಶನವೊಂದರಲ್ಲಿ ಹಶ್ಮಿ, ಹಣಕ್ಕೋಸ್ಕರ ಚಿತ್ರ ಮಾಡೋದಲ್ಲ. ಅದರಲ್ಲಿ ಸಿಗೋ ಫೇಮ್ ನನಗೆ ಮುಖ್ಯ. ಖುಷಿಗೆ ಆದ್ಯತೆ ಕೊಡುತ್ತೇನೆ, ಎಂದಿದ್ದರು.
<p>ನಂಗೆ ನಾನು ಮಾಡಿರುವ ಕೆಲಸಗಳ ಮೇಲೆ ಹೆಮ್ಮೆ ಇದೆ. ಮಾಡಿದ್ದಕ್ಕೆ ಪಶ್ಚಾತ್ತಾಪವಿಲ್ಲ. ನಾನು ಈ ಸ್ಥಿತಿಯಲ್ಲಿ ಇರಲು ಮಾಡಿರುವ ಚಿತ್ರಗಳೇ ಕಾರಣ. ಗಳಿಸಿದ್ದು ದುಡ್ಡು ಮಾತ್ರವಲ್ಲ. ಬಹಳಷ್ಟನ್ನು ಪಡೆದುಕೊಂಡಿದ್ದೇನೆ, ಎನ್ನುತ್ತಾರೆ ಕಿಂಗ್ ಆಫ್ ಕಿಸ್.</p><p> </p>
ನಂಗೆ ನಾನು ಮಾಡಿರುವ ಕೆಲಸಗಳ ಮೇಲೆ ಹೆಮ್ಮೆ ಇದೆ. ಮಾಡಿದ್ದಕ್ಕೆ ಪಶ್ಚಾತ್ತಾಪವಿಲ್ಲ. ನಾನು ಈ ಸ್ಥಿತಿಯಲ್ಲಿ ಇರಲು ಮಾಡಿರುವ ಚಿತ್ರಗಳೇ ಕಾರಣ. ಗಳಿಸಿದ್ದು ದುಡ್ಡು ಮಾತ್ರವಲ್ಲ. ಬಹಳಷ್ಟನ್ನು ಪಡೆದುಕೊಂಡಿದ್ದೇನೆ, ಎನ್ನುತ್ತಾರೆ ಕಿಂಗ್ ಆಫ್ ಕಿಸ್.
<p>ಯಾವುದೇ ಕೆಲಸವಿರಲಿ, ಅದನ್ನು ಮಾಡುವುದು ಸಾಕಷ್ಟು ವಿಷಯಗಳನ್ನು ಕಲಿಯಲು. ಮನುಷ್ಯ ತಪ್ಪು ಮಾಡೋದು ಸಹಜ. ಆ ತಪ್ಪುಗಳೊಂದಿಗೆ ಆತ ಬೆಳೆಯಬೇಕು. ಮಾಡೋ ಕೆಲಸಕ್ಕೆ ನಾವು ನ್ಯಾಯ ಒದಗಿಸುವುದು ಮುಖ್ಯ. ಆಗ ನಮ್ಮನ್ನು ನಾವು ಮರು ಶೋಧಿಸಬಹುದು, ಎಂದು ಕಲಕಿಯೆ ಮಹತ್ವ ಹಾಗೂ ಜೀವನದ ಪಾಠ ಹೇಳುತ್ತಾರೆ, ಹಶ್ಮಿ.</p><p> </p>
ಯಾವುದೇ ಕೆಲಸವಿರಲಿ, ಅದನ್ನು ಮಾಡುವುದು ಸಾಕಷ್ಟು ವಿಷಯಗಳನ್ನು ಕಲಿಯಲು. ಮನುಷ್ಯ ತಪ್ಪು ಮಾಡೋದು ಸಹಜ. ಆ ತಪ್ಪುಗಳೊಂದಿಗೆ ಆತ ಬೆಳೆಯಬೇಕು. ಮಾಡೋ ಕೆಲಸಕ್ಕೆ ನಾವು ನ್ಯಾಯ ಒದಗಿಸುವುದು ಮುಖ್ಯ. ಆಗ ನಮ್ಮನ್ನು ನಾವು ಮರು ಶೋಧಿಸಬಹುದು, ಎಂದು ಕಲಕಿಯೆ ಮಹತ್ವ ಹಾಗೂ ಜೀವನದ ಪಾಠ ಹೇಳುತ್ತಾರೆ, ಹಶ್ಮಿ.
<p style="text-align: justify;">ಹೊಸಬರಿಂದ ಯಾವುದೇ ಒತ್ತಡವನ್ನು ಅನುಭವಿಸುವುದಿಲ್ಲ, ಬದಲಿಗೆ ಅವರಿಂದ ಕಲಿಯಲು ಸಾಕಷ್ಟು ವಿಷಯಗಳಿವೆ ಎಂದು ಅವನು ಭಾವಿಸುತ್ತಾರೆ ಮರ್ಡರ್ 2 ನಟ .</p>
ಹೊಸಬರಿಂದ ಯಾವುದೇ ಒತ್ತಡವನ್ನು ಅನುಭವಿಸುವುದಿಲ್ಲ, ಬದಲಿಗೆ ಅವರಿಂದ ಕಲಿಯಲು ಸಾಕಷ್ಟು ವಿಷಯಗಳಿವೆ ಎಂದು ಅವನು ಭಾವಿಸುತ್ತಾರೆ ಮರ್ಡರ್ 2 ನಟ .
<p>'ಉದ್ಯಮದಲ್ಲಿ ನನಗೆ ಎಂದಿಗೂ ಅಸುರಕ್ಷಿತ ಭಾವನೆ ಇಲ್ಲ. ಈ ಕ್ಷೇತ್ರ ವಿಶಾಲವಾಗಿದೆ. ಯಾವಾಗಲೂ ಪ್ರತಿಭೆಯನ್ನು ಸ್ವಾಗತಿಸುತ್ತದೆ. ಇಲ್ಲಿ ಅನೇಕ ಹೊಸ ಮಾರ್ಗಗಳಿವೆ. ಎಲ್ಲಾ ರೀತಿಯ ಚಲನಚಿತ್ರಗಳನ್ನು ನಿರ್ಮಿಸಲಾಗುತ್ತಿದೆ', ಎನ್ನೋದು ಇಮ್ರಾನ್ ಅಭಿಪ್ರಾಯ.</p>
'ಉದ್ಯಮದಲ್ಲಿ ನನಗೆ ಎಂದಿಗೂ ಅಸುರಕ್ಷಿತ ಭಾವನೆ ಇಲ್ಲ. ಈ ಕ್ಷೇತ್ರ ವಿಶಾಲವಾಗಿದೆ. ಯಾವಾಗಲೂ ಪ್ರತಿಭೆಯನ್ನು ಸ್ವಾಗತಿಸುತ್ತದೆ. ಇಲ್ಲಿ ಅನೇಕ ಹೊಸ ಮಾರ್ಗಗಳಿವೆ. ಎಲ್ಲಾ ರೀತಿಯ ಚಲನಚಿತ್ರಗಳನ್ನು ನಿರ್ಮಿಸಲಾಗುತ್ತಿದೆ', ಎನ್ನೋದು ಇಮ್ರಾನ್ ಅಭಿಪ್ರಾಯ.
<p>'ಮುಖ್ಯವಾದುದು ಪ್ರತಿಭೆ. ಅದಿದ್ದರೆ ನಿಮಗೆ ಅವಕಾಶಗಳು ಸಿಗುತ್ತವೆ. ಎಲ್ಲರಿಗೂ ಕೆಲಸವಿದೆ. ವಾಸ್ತವವಾಗಿ, ನಾವು ಹೊಸಬರಿಂದ ಕಲಿಯಬೇಕು. ಅವರು ಹೊಸ ಆಲೋಚನೆಗಳನ್ನು ತರುತ್ತಾರೆ' ಎಂದ ನಟ ಇಮ್ರಾನ್ ಹಶ್ಮಿ. </p>
'ಮುಖ್ಯವಾದುದು ಪ್ರತಿಭೆ. ಅದಿದ್ದರೆ ನಿಮಗೆ ಅವಕಾಶಗಳು ಸಿಗುತ್ತವೆ. ಎಲ್ಲರಿಗೂ ಕೆಲಸವಿದೆ. ವಾಸ್ತವವಾಗಿ, ನಾವು ಹೊಸಬರಿಂದ ಕಲಿಯಬೇಕು. ಅವರು ಹೊಸ ಆಲೋಚನೆಗಳನ್ನು ತರುತ್ತಾರೆ' ಎಂದ ನಟ ಇಮ್ರಾನ್ ಹಶ್ಮಿ.