ನಲ್ಲೆ ಫೋಟೋ ಹಾಕಿದ್ದ ರಾಣಾಗೆ ಬೆತ್ತಲೆ ಪ್ರತಿಭಟನಾಕಾರ್ತಿ ಶ್ರೀರೆಡ್ಡಿ ಕಾಟ!
ತೆಲುಗಿನ ರಾಣಾ ದಗ್ಗುಬಾಟಿ ತಮ್ಮ ಮನದನ್ನೆಯನ್ನು ಜಗತ್ತಿಗೆ ಪರಿಚಯ ಮಾಡಿಕೊಟ್ಟಿದ್ದಾರೆ. ರಾಣಾ ಅವರಿಗೆ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ. ಆದರೆ ಎಲ್ಲದಕ್ಕಿಂತ ಮುಖ್ಯ ಎನ್ನುವಂತೆ ನಟಿ ಶ್ರೀ ರೆಡ್ಡಿ ವಿಶಿಷ್ಟವಾಗಿ ಅಭಿನಂದನೆ ಹೇಳಿದ್ದಾರೆ. ಏನ್ ಕತೆ ನಿಮ್ಮ ಮುಂದೆ ಇಡುತ್ತಿದ್ದೇವೆ ನೋಡಿ ...
ವಿವಾದ ಎಬ್ಬಿಸುವುದರಲ್ಲಿ ಶ್ರೀರೆಡ್ಡಿ ಎತ್ತಿದ ಕೈ.
ಒಳಾಂಗಣ ವಿನ್ಯಾಸಕಿ ಆಗಿರುವ ಮಿಹೀಕಾ ಬಜಾಜ್ ಜೊತೆ ರಾಣಾ ಪೋಟೋ ಶೇರ್ ಮಾಡಿದ ನಂತ ನಟಿ ಶ್ರೀರೆಡ್ಡಿ ಕೂಡ ವಿಶ್ ಮಾಡಿದ್ದಾರೆ.
ತೆಲುಗು ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ಕರ್ಮಕಾಂಡ ಇದೆ ಎಂದು ಒಂದೆರಡು ವರ್ಷಗಳ ಹಿಂದೆ ಅವರು ಆರೋಪ ಮಾಡಿದ್ದರು. ಕೆಲವರ ಹೆಸರನ್ನೂ ಬಹಿರಂಗವಾಗಿ ಪ್ರಸ್ತಾಪಿಸಿದ್ದರು.
ಇದೇ ರಾಣಾ ದಗ್ಗುಬಾಟಿ ಸಹೋದರ ಅಭಿರಾಮ್ ದಗ್ಗುಬಾಟಿ ವಿರುದ್ಧವೂ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದರು ಶ್ರೀ ರೆಡ್ಡಿ.
ರಾಣಾ ಸಹೋದರನ ಮೇಲೆ ಕೆಂಡ ಕಾರಿದ್ದ ರೆಡ್ಡಿ ತಾವು ಮತ್ತು ಅಭಿರಾಮ್ ತೀರಾ ಆಪ್ತವಾಗಿರುವ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದರು.
ಈಗ ಸಹೋದರ ಮೇಲಿನ ಸಿಟ್ಟಿಗೆ ರಾಣಾಗೆ ವ್ಯಂಗ್ಯಭರಿತ ವಿಶ್ ಮಾಡಿದ್ದಾರೆ.
ರಾಣಾ ಅವರೇ, ನೀವು ಏನೆಲ್ಲ ಅನುಭವಿಸಿದ್ದೀರಿ ಎಂಬುದು ನನಗೆ ಗೊತ್ತು. ನಿಮ್ಮ ಹುಡುಗಿಯ ಜೊತೆ ಒಳ್ಳೆಯ ಜೀವನ ನಡೆಸಿ. ಎಂದು ಫೇಸ್ಬುಕ್ನಲ್ಲಿ ಶ್ರೀರೆಡ್ಡಿ ಪೋಸ್ಟ್ ಮಾಡಿದ್ದಾರೆ.
ಏನ್ನೆಲ್ಲ ಅನುಭವಿಸಿದ್ದೀರಿ ಎಂಬುದು ವ್ಯಂಗ್ಯವೋ, ಸಕಾರಾತ್ಮಕವಾಗಿ ಹೇಳಿದ್ದೋ ರೆಡ್ಡಿಯವರೇ ಬಹಿರಂಗ ಮಾಡಬೇಕು.
ಒಮ್ಮೆ ರಾಣಾ ಅವರನ್ನು ಬಾವ ಎಂತಲೂ. ಒಮ್ಮೆ ಸರ್ ಎಂತಲೂ ಕರೆಯುವ ರೆಡ್ಡಿ ಮಾತಿಗೆ ಅರ್ಥ ಹುಡುಕಿಕೊಳ್ಳುವುದು ನಿಮಗೆ ಬಿಟ್ಟಿದ್ದು .
ಶ್ರೀ ರೆಡ್ಡಿ ಯೂಟ್ಯೂಬ್ ಚಾನಲ್ ನಡೆಸಿ ಸೌಂದರ್ಯದ ಬಗ್ಗೆ ಟಿಪ್ಸ್ ನೀಡುತ್ತಾರೆ.