'ಭಾರತವನ್ನು ಸಿರಿಯಾ ಎಂದವರ ಮನೆ ಒಡೆದು ಹಾಕಲಿಲ್ಲ'
ಮುಂಬೈ(ಸೆ. 21) ಬಾಲಿವುಡ್ ನಟಿ ಕಂಗನಾ ರಣಾವತ್ ಈ ಬಾರಿ ರಾಹುಲ್ ಗಾಂಧಿ ವಿಚಾರ ಇಟ್ಟುಕೊಂಡು ವಾಗ್ದಾಳಿ ಮಾಡಿದ್ದಾರೆ. ಮುಂಬೈ ಬಗ್ಗೆ ನಾನು ನೀಡಿದ್ದ ಹೇಳಿಕೆಗೆ ಈಗಲೂ ಬದ್ಧ ಎಂದಿರುವ ನಟಿ ರಾಹುಲ್ ಗಾಂಧಿ ಭಾರತವನ್ನು ಸಿರಿಯಾ ಎಂದು ಕರೆದಾಗ ಈಗ ಮಾತನಾಡುತ್ತಿರುವವರು ಎಲ್ಲಿದ್ದರು ಎಂದು ಪ್ರಶ್ನೆ ಮಾಡಿದ್ದಾರೆ.

ಮುಂಬೈ ಪಾಕ್ ಆಕ್ರಮಿತ ಕಾಶ್ಮೀರದಂತೆ ಭಾಸವಾಗುತ್ತಿದೆ ಎಂದು ಕಂಗನಾ ನೀಡಿದ್ದ ಹೇಳಿಕೆ ನಂತರ ಅನೇಕ ಬೆಳವಣಿಗೆಗಳು ಆಗಿದ್ದವು.

ಶೀವಸೇನೆ ಮತ್ತು ಕಂಗನಾ ನಡುವೆ ವಾಗ್ವಾದ ನಡೆದಿತ್ತು.. ಮುಂಬೈಗೆ ಹೇಗೆ ಬರುತ್ತೀರಿ ಎಂದು ಶಿವಸೇನೆ ಮುಖಂಡರು ಸವಾಲು ಹಾಕಿದ್ದರು.
ಇದಕ್ಕೆ ಉತ್ತರ ನೀಡಿದ್ದ ಕಂಗನಾ ತಾಕತ್ತಿದ್ದರೆ ತಡೆಯಿರಿ ಎಂದು ಸವಾಲು ಹಾಕಿದ್ದು ಅಲ್ಲದೇ ಮುಂಬೈಗೆ ಬಂದಿಳಿದಿದ್ದರು.
ಈ ವೇಳೆ ಕೇಂದ್ರ ಗೃಹ ಇಲಾಖೆ ಕಂಗನಾಗೆ ವೈ ಪ್ಲಸ್ ಸೆಕ್ಯೂರಿಟಿಯನ್ನು ನೀಡಿತ್ತು.
ಕಂಗನಾ ಮುಂಬೈಗೆ ಆಗಮಿಸಿದ ದಿನವೇ ಅವರ ಕಚೇರಿಯನ್ನು ಒಡೆದು ಹಾಕಲಾಗಿತ್ತು.
ಮಹಾರಾಷ್ಟ್ರ ಸರ್ಕಾರ ನನ್ನ ಹೇಳೀಕೆ ಇಟ್ಟುಕೊಂಡು ಗುಂಪುನ ಕಟ್ಟಿಸಿಕೊಂಡು ದಾಳಿ ಮಾಡುವ ಯತ್ನ ಮಾಡುತ್ತಿದೆ ಎಂದು ಕಂಗನಾ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
ರಾಹುಲ್ ಗಾಂಧಿ ಭಾರತವನ್ನು ಸಿರಿಯಾ ಎಂದು ಕರೆದಾಗ ಬಾಯಿ ಮುಚ್ಚಿಕೊಂಡಿದ್ದ ಇವರು ಈಗ ಮಾತನಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಆಗ ಯಾರ ಮನೆಯನ್ನು ಒಡೆದು ಹಾಕಲಿಲ್ಲ. ನಾನು ಸಿರಿಯಾ ಎಂದೇ ಕರೆಯಬೇಕಿತ್ತಾ? ಎಂದು ವ್ಯಂಗ್ಯವಾಡಿದ್ದಾರೆ.