MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Business
  • ದಕ್ಷಿಣ ಭಾರತದ ಮೊದಲ ವಿಶ್ರಾಂತಿ ಕೇಂದ್ರವನ್ನು ಬೆಂಗಳೂರಿನಲ್ಲಿ ಸ್ಥಾಪಿಸಿದ ಜೊಮೆಟೋ

ದಕ್ಷಿಣ ಭಾರತದ ಮೊದಲ ವಿಶ್ರಾಂತಿ ಕೇಂದ್ರವನ್ನು ಬೆಂಗಳೂರಿನಲ್ಲಿ ಸ್ಥಾಪಿಸಿದ ಜೊಮೆಟೋ

ಬೆಂಗಳೂರು (ಜೂ.11): ಬೆಂಗಳೂರಿನ ವೆಗಾ ಸಿಟಿ ಮಾಲ್‌ ಹೊಸ   ಜೊಮೆಟೋ ವಿಶ್ರಾಂತಿ ಕೇಂದ್ರವನ್ನು ಸ್ಥಾಪಿಸಲಾಗಿದೆ. ಇದು ದಕ್ಷಿಣ ಭಾರತದ ಮೊದಲ ವಿಶ್ರಾಂತಿ ಕೇಂದ್ರ ಎಂದು ಹೇಳಲಾಗಿದ್ದು, ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ (Tejasvi Surya) ಅವರು ಉದ್ಘಾಟನೆ ಮಾಡಿದರು.

1 Min read
Gowthami K
Published : Jun 11 2023, 11:50 PM IST
Share this Photo Gallery
  • FB
  • TW
  • Linkdin
  • Whatsapp
14

ಈ ಬಗ್ಗೆ ಟ್ವೀಟ್ ಮಾಡಿರುವ ಸಂಸದ ಸೂರ್ಯ ಅವರು ಜೊಮೆಟೋ  ಮತ್ತು ವೆಗಾ ಸಿಟಿ ಮಾಲ್‌ ಸಹಯೋಗದೊಂದಿಗೆ ವೇಗಾ ಸಿಟಿ ಮಾಲ್‌ನಲ್ಲಿ ಡೆಲಿವರಿ ಪಾಲುದಾರರಿಗಾಗಿ ದಕ್ಷಿಣ ಭಾರತದ ಮೊದಲ ವಿಶ್ರಾಂತಿ ಕೇಂದ್ರವನ್ನು ತೆರೆಯಲಾಗಿದ್ದು. ಪ್ರಥಮ ಚಿಕಿತ್ಸೆ, ಕುಡಿಯುವ ನೀರು ಮತ್ತು ಸ್ವಚ್ಛವಾದ ವಿಶ್ರಾಂತಿ ಕೊಠಡಿ, ಚಾರ್ಜಿಂಗ್ ಪಾಯಿಂಟ್ ಗಳಂತಹ ಅಗತ್ಯ ಸೌಕರ್ಯಗಳನ್ನು ಒಳಗೊಂಡಿದೆ.  ಎಲ್ಲಾ ವಿತರಣಾ ಪಾಲುದಾರರಿಗೆ ವಿಶ್ರಾಂತಿ, ಹೊಸ ಉತ್ಸಾಹಕ್ಕೆ ಉತ್ತಮ  ಸ್ಥಳವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಟ್ವೀಟ್ ಮಾಡಿದ್ದಾರೆ. 

24

ಈ ಹಿಂದೆ ಜೊಮೆಟೋ ಮಾತ್ರವಲ್ಲದೆ ಇತರ ಬ್ರ್ಯಾಂಡ್‌ಗಳ ಡೆಲಿವರಿ ಬಾಯ್ಸ್ ಸಹ ಇಂತಹ ವಿಶ್ರಾಂತಿ ಕೇಂದ್ರಗಳನ್ನು ಪ್ರವೇಶಿಸಬಹುದು ಎಂದು  ಘೋಷಿಸಿತ್ತು. ಈ ವರ್ಷದ ಫೆಬ್ರವರಿಯಲ್ಲಿ, ಜೊಮೆಟೋ ಸಿಇಒ ಡಿಪಿಂದರ್ ಗೋಯಲ್ ಬರೆದಿದ್ದಾರೆ, 'ದಿ ಶೆಲ್ಟರ್ ಪ್ರಾಜೆಕ್ಟ್' ಅನ್ನು ಘೋಷಿಸುತ್ತಿದ್ದೇವೆ – ನಾವು ವಿವಿಧ ಕಂಪನಿಗಳ ವಿತರಣಾ ಪಾಲುದಾರರ ಯೋಗಕ್ಷೇಮವನ್ನು ಬೆಂಬಲಿಸಲು ಸಾರ್ವಜನಿಕ ಮೂಲಸೌಕರ್ಯಗಳನ್ನು   ನಿರ್ಮಿಸಲು ಪ್ರಾರಂಭಿಸಿದ್ದೇವೆ ಎಂದು ಹೇಳಿದ್ದರು.

34

ಹೈ-ಸ್ಪೀಡ್ ಇಂಟರ್ನೆಟ್, ಪ್ರಥಮ ಚಿಕಿತ್ಸೆ, ಫೋನ್ ಚಾರ್ಜಿಂಗ್ ಸೌಲಭ್ಯ, ವಾಶ್‌ರೂಮ್‌ಗಳು ಮತ್ತು ಕುಡಿಯುವ ನೀರು ಇತರ ಕಂಪನಿಗಳ ಡೆಲಿವರಿ ಏಜೆಂಟ್‌ಗಳಿಗೂ ಈ ಸೌಕರ್ಯಗಳು ವಿಶ್ರಾಂತಿ ಕೇಂದ್ರದಲ್ಲಿ ಮುಕ್ತವಾಗಿರುತ್ತದೆ  ಎಂದು ಜೊಮಾಟೊ ಮೊದಲೇ ಘೋಷಿಸಿತ್ತು. .

44

ಬೆಂಗಳೂರಿನ ಎಲ್ಲಾ Zomato ಡೆಲಿವರಿ ಪಾಲುದಾರರಿಗೆ ವಿಶ್ರಾಂತಿ ಕೇಂದ್ರವು ತೆರೆದಿರುತ್ತದೆ. ಇದು ಬೆಳಿಗ್ಗೆ 10 ರಿಂದ ರಾತ್ರಿ 10 ರವರೆಗೆ ತೆರೆದಿರುತ್ತದೆ. ದಕ್ಷಿಣ ಭಾರತದ ಇತರ ನಗರಗಳಲ್ಲಿ ಹೆಚ್ಚಿನ ವಿಶ್ರಾಂತಿ ಕೇಂದ್ರಗಳನ್ನು ಸ್ಥಾಪಿಸುವ ಯೋಜನೆಯನ್ನು Zomato ಹೊಂದಿದೆ. ಜೊಮಾಟೊದ ಪ್ರಧಾನ ಕಛೇರಿ ಇರುವ ಗುರ್‌ಗಾಂವ್‌ನಲ್ಲಿ ಕೆಲವು ವಿಶ್ರಾಂತಿ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ.

About the Author

GK
Gowthami K
ಒನ್ ಇಂಡಿಯಾ, ಡೈಲಿಹಂಟ್‌, ವಿಜಯ ಕರ್ನಾಟಕ ವೆಬ್‌, ಈಗ ಏಷ್ಯಾನೆಟ್ ಕನ್ನಡ ಸೇರಿ 10 ವರ್ಷಗಳಿಂದಲೂ ಡಿಜಿಟಲ್ ಮಾಧ್ಯಮದಲ್ಲಿದ್ದೇನೆ. ಉಜಿರೆಯ ಎಸ್‌ಡಿಎಂನಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯಾಗಿದೆ. ಸುಳ್ಯ ತಾಲೂಕಿನ ಕುಕ್ಕುಜಡ್ಕದವಳು. ಉದ್ಯೋಗ, ರಾಜಕೀಯ, ದೇಶ-ವಿದೇಶ, ವಿಜ್ಞಾನ ಮತ್ತು ವಾಣಿಜ್ಯ, ಸಿನೆಮಾವೆಂದರೆ ಹೆಚ್ಚು ಆಸಕ್ತಿ. ಹಿನ್ನೆಲೆ ಧ್ವನಿ ನೀಡುವುದು ಹವ್ಯಾಸ.
ಬೆಂಗಳೂರು
ಜೊಮಾಟೊ
ಆಹಾರ
ತೇಜಸ್ವಿ ಸೂರ್ಯ
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved