MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Business
  • ಆಸ್ತಿಗಾಗಿ 9ವರ್ಷ ಅಪ್ಪನನ್ನೇ ಬೀದಿಲಿಟ್ಟ ರೇಮಂಡ್‌ ಮುಖ್ಯಸ್ಥನಿಗೆ ಹೆಂಡತಿ ಬಿಟ್ಟು ಹೋದ ಮೇಲೆ ತಂದೆ ಬೇಕಾಯ್ತು!

ಆಸ್ತಿಗಾಗಿ 9ವರ್ಷ ಅಪ್ಪನನ್ನೇ ಬೀದಿಲಿಟ್ಟ ರೇಮಂಡ್‌ ಮುಖ್ಯಸ್ಥನಿಗೆ ಹೆಂಡತಿ ಬಿಟ್ಟು ಹೋದ ಮೇಲೆ ತಂದೆ ಬೇಕಾಯ್ತು!

ದೇಶದ ಅತ್ಯಂತ ಹಳೆಯ ವ್ಯಾಪಾರ ಕುಟುಂಬಗಳಲ್ಲಿ ಪ್ರಮುಖರು ಎನಿಸಿರುವ ರೇಮಂಡ್ ಗ್ರೂಪ್‌ನ ಸಿಂಘಾನಿಯಾ ಕುಟುಂಬವು ತನ್ನ ವ್ಯಾಪಾರ ಉದ್ಯಮಗಳಿಗಾಗಿ ಹೆಚ್ಚಾಗಿ ಪ್ರಚಾರದಲ್ಲಿತ್ತು. ಆದರೆ, ಇತ್ತೀಚಿನ ವರ್ಷಗಳಲ್ಲಿ ಕೌಟುಂಬಿಕ ಕಲಹಗಳಿಂದಲೂ ಸುದ್ದಿಯಾಗಿತ್ತು. ಇದೀಗ ತಂದೆ ಮಗ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.

2 Min read
Author : Suvarna News
Published : Mar 24 2024, 04:56 PM IST
Share this Photo Gallery
  • FB
  • TW
  • Linkdin
  • Whatsapp
19

ಈ ಹಿಂದೆ ಅಂಬಾನಿಗಿಂತಲೂ ಶ್ರೀಮಂತ ವ್ಯಕ್ತಿಯಾಗಿದ್ದ ರೇಮಂಡ್ಸ್  ಮಾಜಿ ಅಧ್ಯಕ್ಷ ವಿಜಯಪತ್ ಸಿಂಘಾನಿಯಾ ಮತ್ತು ಈಗ ರೇಮಂಡ್ ಕಂಪನಿಯ ಎಂಡಿ ಆಗಿರುವ ಪುತ್ರ ಗೌತಮ್ ಸಿಂಘಾನಿಯಾ ನಡುವಿನ ಭಿನ್ನಾಭಿಪ್ರಾಯ, ಇದರ ಜೊತೆಗೆ  ಗೌತಮ್ ಪತ್ನಿ ನವಾಜ್ ಮೋದಿಯೊಂದಿಗಿನ ವಿಚ್ಛೇದನ ಪ್ರಕ್ರಿಯೆ ವಿವಾದಗಳಿಂದ ಇತ್ತೀಚೆಗೆ ದೇಶ ಮಟ್ಟದಲ್ಲಿ  ಸುದ್ದಿಯಾಗಿತ್ತು.

29

ಇದೀಗ ಕೌಟುಂಬಿಕ ಕಲಹದ ಬಳಿಕ ಗೌತಮ್ ಸಿಂಘಾನಿಯಾ ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ಚಿತ್ರವನ್ನು ಹಂಚಿಕೊಂಡಿದ್ದಾರೆ, ಸುಮಾರು ಒಂಬತ್ತು ವರ್ಷಗಳ ನಂತರ  ತಮ್ಮ ತಂದೆಯೊಂದಿಗೆ ಕಾಣಿಸಿಕೊಂಡಿದ್ದಾರೆ.  ಆಶ್ಚರ್ಯವೆಂದರೆ ಕಳೆದ ಒಂದು ದಶಕದಲ್ಲಿ, ತಂದೆ ಮತ್ತು ಮಗನ ನಡುವೆ ಮಾತುಕತೆಯೇ ಇರಲಿಲ್ಲ ಎಂಬುದು ಗಮನಾರ್ಹ ಸಂಗತಿ.

39

ರೇಮಂಡ್ ಗ್ರೂಪ್‌ನ ಅಡಿಪಾಯವನ್ನು 1925 ರಲ್ಲಿ ಜವಳಿ ಗಿರಣಿಯಾಗಿ ಹಾಕಲಾಯಿತು, ಕಂಬಳಿಗಳು ಮತ್ತು ಮಿಲಿಟರಿ ಸಮವಸ್ತ್ರಗಳನ್ನು ಉತ್ಪಾದಿಸಲಾಯಿತು. ನಂತರ 1940 ರಲ್ಲಿ ಕೈಲಾಸಪತ್ ಸಿಂಘಾನಿಯಾರಿಂದ ರೇಮಂಡ್ ಎಂದು ಮರುನಾಮಕರಣ ಮಾಡಲಾಯಿತು. ಸಿಂಘಾನಿಯಾ ಕುಟುಂಬವು ಚುಕ್ಕಾಣಿ ಹಿಡಿದಿದ್ದರಿಂದ,  ಗಿರಣಿಯಲ್ಲಿನ ಬಟ್ಟೆಯತ್ತ ಬದಲಾಯಿತು ಮತ್ತು ಅದು ಖ್ಯಾತಿಯನ್ನು ಗಳಿಸಿದಂತೆ, ವ್ಯಾಪಾರವು ವಿಸ್ತರಿಸಿತು. 

49

ಮೊದಲ ರೇಮಂಡ್ ಶೋರೂಮ್ ಅನ್ನು 1958 ರಲ್ಲಿ ಮುಂಬೈನಲ್ಲಿ ತೆರೆಯಲಾಯಿತು, ಇದು ಅಗಾಧ ಪ್ರತಿಕ್ರಿಯೆಯನ್ನು ಪಡೆಯಿತು. ತರುವಾಯ, ಸಿಂಘಾನಿಯಾ ಕುಟುಂಬವು ವಿದೇಶದಿಂದ ಯಂತ್ರೋಪಕರಣಗಳನ್ನು ಆಮದು ಮಾಡಿಕೊಂಡಿತು, ಉತ್ಪಾದನೆ ಮತ್ತು ವ್ಯಾಪಾರವನ್ನು ಹೆಚ್ಚಿಸಿತು. 1980 ರಲ್ಲಿ, ಕೈಲಾಸಪತ್ ಸಿಂಘಾನಿಯಾ ತನ್ನ ಸೋದರಳಿಯ ವಿಜಯಪತ್ ಸಿಂಘಾನಿಯಾಗೆ ಗುಂಪಿನ ಅಧಿಕಾರವನ್ನು ಹಸ್ತಾಂತರಿಸಿದರು. 

59

ಇದಾದ ನಂತರ ಅವರು ಹೊಸ ಆಲೋಚನೆಗಳು ಮತ್ತು ಉತ್ಪನ್ನಗಳ ಮೇಲೆ ಕೆಲಸ ಮಾಡಿದರು, ರೇಮಂಡ್ ಅನ್ನು ಜಾಗತಿಕವಾಗಿ ಗುರುತಿಸಲ್ಪಟ್ಟ ಬ್ರ್ಯಾಂಡ್ ಆಗಿ ಮಾಡಿದರು. ಕ್ರಮೇಣ, ರೇಮಂಡ್ ಭಾರತದಲ್ಲಿ ಮಾತ್ರವಲ್ಲದೆ ಅಂತರರಾಷ್ಟ್ರೀಯ ಮಟ್ಟದಲ್ಲಿಯೂ ಮನ್ನಣೆ ಗಳಿಸಿದರು ಮತ್ತು ವಿಜಯಪತ್ ಸಿಂಘಾನಿಯಾ ದೇಶದ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾದರು.  
 

69

2015 ರ ನಂತರ ವಿಜಯಪತ್ ಸಿಂಘಾನಿಯಾ ಜೀವನವು ವಿಭಿನ್ನ ತಿರುವು ಪಡೆಯಿತು. ವಿಜಯಪತ್ ಸಿಂಘಾನಿಯಾ ಅವರು 2015 ರಲ್ಲಿ ರೇಮಂಡ್ ಗ್ರೂಪ್‌ನ ಅಧಿಕಾರವನ್ನು ತಮ್ಮ ಮಗ ಗೌತಮ್ ಸಿಂಘಾನಿಯಾಗೆ ಹಸ್ತಾಂತರಿಸುವುದಾಗಿ ಘೋಷಿಸುವವರೆಗೂ ಎಲ್ಲವೂ ಸುಗಮವಾಗಿ ನಡೆಯುತ್ತಿತ್ತು. ಅಲ್ಲಿಂದ ಅವರ ಬದುಕು ಬದಲಾಯಿತು. ತಂದೆ ಮತ್ತು ಮಗನ ನಡುವಿನ ಆಸ್ತಿ ವಿವಾದಗಳು ಬೀದಿಗೆ ಬಂತು. ಇದು 2017 ರಲ್ಲಿ ಸಾರ್ವಜನಿಕ ವಾಗ್ವಾದದಲ್ಲಿ ಕೊನೆಗೊಂಡಿತು. 
 

79

ವಿಜಯಪತ್ ಸಿಂಘಾನಿಯಾ ಅವರು ಗೌತಮ್ ಸಿಂಘಾನಿಯಾ ಅವರನ್ನು ದಕ್ಷಿಣ ಮುಂಬೈನ ಜೆಕೆ ಹೌಸ್‌ನಿಂದ ಕೌಟುಂಬಿಕ ವಿವಾದಗಳ ಕಾರಣದಿಂದ ಹೊರ ಹಾಕಿದರು. ಪತ್ನಿ ಕೂಡ ಅದಾಗಲೇ ಮೃತಪಟ್ಟಿದ್ದು, ಒಬ್ಬಂಟಿಯಾಗಿ ಬಾಡಿಗೆ ಮನೆಯಲ್ಲಿ ಜೀವನ ಸಾಗಿಸುತ್ತಿದ್ದರು. ವಿಜಯಪತ್ ಸಿಂಘಾನಿಯಾ ಅವರು ತಮ್ಮ ಮಗನಿಗೆ ಎಲ್ಲವನ್ನೂ ನೀಡುವ ಮೂಲಕ ದೊಡ್ಡ ತಪ್ಪು ಮಾಡಿದ್ದೇನೆ ಎಂದು ಹಲವಾರು ಬಾರಿ  ಹೇಳಿಕೊಂಡಿದ್ದರು. ಗೌತಮ್ ಸಿಂಘಾನಿಯಾ ಮತ್ತು ಪತ್ನಿ ನವಾಜ್ ಮೋದಿ ನಡುವೆ ವಿಚ್ಛೇದನ ಪ್ರಕ್ರಿಯೆಗಳು ನಡೆಯುತ್ತಿರುವಾಗ, ವಿಜಯಪತ್ ಸಿಂಘಾನಿಯಾ ಬಹಿರಂಗವಾಗಿ ಸೊಸೆಯ ಪರವಾಗಿ ನಿಂತರು. ಗೌತಮ್ ಸಿಂಘಾನಿಯಾ  ತನ್ನನ್ನು ನಿಯಂತ್ರಣದಲ್ಲಿ ಇಡುತ್ತಾನೆ. ಆವರು ಸೊಕ್ಕಿನವರು ಎಂದು ನವಾಜ್ ಮೋದಿ ಆರೋಪಿಸಿದರು. 

89

ವಿಜಯಪತ್ ಸಿಂಘಾನಿಯಾ ಒಮ್ಮೆ ಬ್ಯುಸಿನೆಸ್ ಟುಡೇಗೆ  ಜೊತೆಗೆ ಮಾತನಾಡುತ್ತಾ ನನಗೆ ಯಾವುದೇ ವ್ಯವಹಾರವಿಲ್ಲ. ಗೌತಮ್  ನನಗೆ ಕಂಪನಿಯ ಕೆಲವು ಭಾಗಗಳನ್ನು ನೀಡಲು ಒಪ್ಪಿಕೊಂಡಿದ್ದ ಆದರೆ ಬಳಿಕ ಕೊಡದೆ ಮೋಸ ಮಾಡಿದ. ಹಾಗಾಗಿ, ನನ್ನ ಬಳಿ ಏನೂ ಇಲ್ಲ. ನಾನು ಅವನಿಗೆ ಎಲ್ಲವನ್ನೂ ಕೊಟ್ಟೆ. ಅಪ್ಪಿತಪ್ಪಿ ನನ್ನ ಬಳಿ ಸ್ವಲ್ಪ ಹಣ ಉಳಿದುಕೊಂಡಿದ್ದು, ಇಂದು ಅದರಿಂದ ಬದುಕುತ್ತಿದ್ದೇನೆ. ಇಲ್ಲದಿದ್ದರೆ, ನಾನು ರಸ್ತೆಯಲ್ಲಿರುತ್ತಿದ್ದೆ ಎಂದಿದ್ದರು.

99

ಮಾರ್ಚ್ 20 ರಂದು, ಗೌತಮ್ ಸಿಂಘಾನಿಯಾ  ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ  ತಂದೆ ಜೊತೆಗಿರುವ ಚಿತ್ರವನ್ನು ಹಂಚಿಕೊಂಡು  "ನನ್ನ ತಂದೆ ಇಂದು ಮನೆಯಲ್ಲಿರಲು ಮತ್ತು ಅವರ ಆಶೀರ್ವಾದವನ್ನು ಪಡೆಯಲು ಸಂತೋಷವಾಗಿದೆ. ಅಪ್ಪಾ ನಿಮಗೆ ಯಾವಾಗಲೂ ಆರೋಗ್ಯವಾಗಿರಲಿ" ಎಂದು ಶೀರ್ಷಿಕೆ ನೀಡಿದ್ದಾರೆ. ಇದಕ್ಕೆ ಕೆಲವರು ಹೆಂಡತಿ ದೂರಾಗಿ ಒಬ್ಬಂಟಿಯಾದ ಬಳಿಕ ಅಪ್ಪನ ಬೆಲೆ ಗೊತ್ತಾಗಿದೆ ಎಂದು ಕಮೆಂಟ್‌ ಮಾಡಿದ್ದಾರೆ.

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

About the Author

SN
Suvarna News

Latest Videos
Recommended Stories
Recommended image1
ತನ್ನ ಬಾಯಲ್ಲಿ ಕೇಸರಿ ಹೇಳಿ, ಜನರ ಬಾಯಿಗೆ ವಿಸ್ಕಿಬಿಟ್ಟು ಕೋಟಿ ಕೋಟಿ ಗಳಿಸಿದ ಬಾಲಿವುಡ್ ನಟ ಅಜಯ್ ದೇವಗನ್!
Recommended image2
ಟೆಂಪಲ್ ಸ್ಟಾರ್ಟ್ಅಪ್ ನೇಮಕಾತಿ ಆರಂಭ, ಒಂದೇ ಕಂಡೀಷನ್ ದೇಹದ ಫ್ಯಾಟ್ ಶೇ.16ರ ಒಳಗಿರಬೇಕು
Recommended image3
GPay,PhonePe, PayTM ಠಕ್ಕರ್‌ ಕೊಡಲು ಭಾರತಕ್ಕೆ ಬರ್ತಿದೆ Apple Pay!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved