ಕಾರವಾರ ಕೋಆಪರೇಟೀವ್ ಬ್ಯಾಂಕ್ ಲೈಸೆನ್ಸ್ ರದ್ದುಗೊಳಿಸಿದ ಆರ್ಬಿಐ, ಠೇವಣಿದಾರರ ಕತೆ?
ಕಾರವಾರದ ಜನಪ್ರಿಯ ನಗರ ಸಹಕಾರಿ ಬ್ಯಾಂಕಿನ ಪರವಾನಗಿಯನ್ನು ಆರ್ಬಿಐ ರದ್ದುಗೊಳಿಸಿದೆ. ಇದೀಗ ಈ ಬ್ಯಾಂಕ್ನಲ್ಲಿ ಠೇವಣಿ ಇಟ್ಟವರ ಕತೆ ಏನು? RBI ಹೇಳಿದ್ದೇನು?
15

Image Credit : getty / ani
ಆರ್ಬಿಐ ಮಹತ್ವದ ನಿರ್ಧಾರ: ಕಾರವಾರ ಬ್ಯಾಂಕ್ ಪರವಾನಗಿ ರದ್ದು
ಆರ್ಬಿಐ ಮತ್ತೊಂದು ಬ್ಯಾಂಕಿಗೆ ಆಘಾತ ನೀಡಿದೆ. ಕರ್ನಾಟಕದ ಕಾರವಾರ ನಗರ ಸಹಕಾರಿ ಬ್ಯಾಂಕಿನ ಪರವಾನಗಿಯನ್ನು ರದ್ದುಗೊಳಿಸಿದೆ. ನಿರ್ವಹಣಾ ಲೋಪಗಳಿಂದಾಗಿ ಆರ್ಬಿಐ ಈ ನಿರ್ಧಾರ ಕೈಗೊಂಡಿದೆ. ಬ್ಯಾಂಕ್ ಆರ್ಥಿಕವಾಗಿ ದುರ್ಬಲವಾಗಿದೆ, ಮತ್ತು ಅಗತ್ಯ ಬಂಡವಾಳ ಹಾಗೂ ಆದಾಯವನ್ನು ಕಾಯ್ದುಕೊಳ್ಳಲು ವಿಫಲವಾಗಿದೆ ಎಂದು ಆರ್ಬಿಐ ತಿಳಿಸಿದೆ.
25
Image Credit : our own
ಕಾರವಾರ ಸಹಕಾರಿ ಬ್ಯಾಂಕ್: ಆರ್ಥಿಕ ದುರ್ಬಲತೆ ಪ್ರಮುಖ ಕಾರಣ
ಈ ಸಹಕಾರಿ ಬ್ಯಾಂಕ್ ರಾಷ್ಟ್ರೀಯ ಬ್ಯಾಂಕಿಂಗ್ ಮಾನದಂಡಗಳನ್ನು ಪಾಲಿಸುವಲ್ಲಿ ವಿಫಲವಾಗಿದೆ. ಅಗತ್ಯ ಬಂಡವಾಳ ಅನುಪಾತಗಳನ್ನು ಪೂರೈಸಿಲ್ಲ. ಬ್ಯಾಂಕ್ ಚೇತರಿಸಿಕೊಳ್ಳುವ ಸಾಧ್ಯತೆಗಳಿಲ್ಲ ಎಂದು ಆರ್ಬಿಐ ಗುರುತಿಸಿದೆ. ಕೋಆಪರೇಟೀವ್ ಬ್ಯಾಂಕ್ನಲ್ಲಿನ ನಿಯಮ ಪಾಲನೆಯಲ್ಲೂ ಉಲ್ಲಂಘನೆಯಾಗಿದೆ ಎಂದಿದೆ.
35
Image Credit : Getty
ಕಾರವಾರ ಸಹಕಾರಿ ಬ್ಯಾಂಕ್: ಗ್ರಾಹಕರಿಗೆ 5 ಲಕ್ಷ ರೂ.ವರೆಗೆ ರಕ್ಷಣೆ
ಠೇವಣಿದಾರರಿಗೆ DICGC ಮೂಲಕ ರಕ್ಷಣೆ ಒದಗಿಸಲಾಗಿದೆ. ಆರ್ಬಿಐ ಪ್ರಕಾರ, ಶೇ.92.9ರಷ್ಟು ಠೇವಣಿದಾರರು 5 ಲಕ್ಷ ರೂ. ಒಳಗಿನ ಠೇವಣಿ ಹೊಂದಿದ್ದಾರೆ. ಅವರು ಪೂರ್ಣ ಮೊತ್ತವನ್ನು ಮರಳಿ ಪಡೆಯಲು ಅರ್ಹರಾಗಿರುತ್ತಾರೆ ಎಂದಿದೆ.
45
Image Credit : our own
ಕಾರವಾರ ಸಹಕಾರಿ ಬ್ಯಾಂಕ್ ಗ್ರಾಹಕರಿಗೆ ಸಲಹೆಗಳು
ಕಾರ್ವಾರ್ ಸಹಕಾರಿ ಬ್ಯಾಂಕಿನ ಪರವಾನಗಿ ರದ್ದತಿಯಿಂದಾಗಿ ಅನೇಕ ಗ್ರಾಹಕರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. 5 ಲಕ್ಷ ರೂ.ವರೆಗೆ ಮಾತ್ರ ಭರವಸೆ ನೀಡಿರುವುದು ಕೂಡ ಗ್ರಾಹಕರನ್ನು ಚಿಂತೆಗೀಡು ಮಾಡಿದೆ. ಠೇವಣಿ ಮರುಪಡೆಯಲು DICGC ವೆಬ್ಸೈಟ್ನಿಂದ ಕ್ಲೈಮ್ ಫಾರ್ಮ್ ಡೌನ್ಲೋಡ್ ಮಾಡಿಕೊಳ್ಳಬಹುದು.
55
Image Credit : getty
ಸಹಕಾರಿ ಬ್ಯಾಂಕ್ಗಳು ಏಕೆ ಕುಸಿಯುತ್ತಿವೆ?
ಈ ಘಟನೆ, ವಿಶೇಷವಾಗಿ ಸಣ್ಣ ಪಟ್ಟಣಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಹಕಾರಿ ಬ್ಯಾಂಕ್ಗಳ ಸ್ಥಿರತೆಯ ಬಗ್ಗೆ ಮತ್ತೊಮ್ಮೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಗ್ರಾಹಕರು ತಮ್ಮ ಬ್ಯಾಂಕಿನ ಆರ್ಥಿಕ ಸ್ಥಿತಿಯ ಬಗ್ಗೆ ಅರಿವು ಹೊಂದಿರಬೇಕು ಮತ್ತು ಆರ್ಬಿಐ ಸಾರ್ವಜನಿಕ ಅಧಿಸೂಚನೆಗಳನ್ನು ಅನುಸರಿಸಬೇಕು.
Latest Videos