ಈ ದಿನಾಂಕದಂದು ಹುಟ್ಟಿದವರು ತಿರುಮಲಕ್ಕೆ ಒಮ್ಮೆಯಾದರೂ ಹೋಗ್ಲೇಬೇಕು.. ಯಾಕೆ ಗೊತ್ತಾ?
ಸಂಖ್ಯಾಶಾಸ್ತ್ರದ ಪ್ರಕಾರ, ನಿಮ್ಮ ಜನ್ಮ ದಿನಾಂಕಕ್ಕೆ ಅನುಗುಣವಾಗಿ ನಿರ್ದಿಷ್ಟ ದೇವಸ್ಥಾನಕ್ಕೆ ಭೇಟಿ ನೀಡಿದರೆ ಆಧ್ಯಾತ್ಮಿಕ ಶಕ್ತಿ ಹೆಚ್ಚುತ್ತದೆ. ಯಾವ ದಿನಾಂಕದಂದು ಹುಟ್ಟಿದವರು ಯಾವ ದೇವಸ್ಥಾನಕ್ಕೆ ಭೇಟಿ ನೀಡಬೇಕು ಎಂಬುದನ್ನು ಇಲ್ಲಿ ತಿಳಿಯಿರಿ.
16

Image Credit : Getty
ಜನ್ಮ ದಿನಾಂಕ
ನಿಮ್ಮ ಜನ್ಮ ದಿನಾಂಕದ ಆಧಾರದ ಮೇಲೆ ಮೂಲಾಂಕವನ್ನು ತಿಳಿಯಬಹುದು. ಉದಾಹರಣೆಗೆ, ನೀವು 1, 10, 19, 28 ರಂದು ಜನಿಸಿದರೆ, ನಿಮ್ಮ ಮೂಲಾಂಕ 1 ಆಗುತ್ತದೆ. (1+0=1, 1+9=10 -> 1+0=1). ಹೀಗೆ ನಿಮ್ಮ ಜನ್ಮ ದಿನಾಂಕದ ಅಂಕೆಗಳನ್ನು ಕೂಡಿಸಿದಾಗ ಬರುವ ಒಂದೇ ಅಂಕೆಯೇ ನಿಮ್ಮ ಮೂಲಾಂಕ.
26
Image Credit : Stockphoto
ಮೂಲಾಂಕ 1
ಮೂಲಾಂಕ 1 (ಸೂರ್ಯ) ಜನ್ಮ ದಿನಾಂಕಗಳು: 1, 10, 19, 28. ಈ ಸಂಖ್ಯೆಯ ಅಧಿಪತಿ ಸೂರ್ಯ. ಧೈರ್ಯ ಮತ್ತು ನಾಯಕತ್ವ ಇವರ ಪ್ರಮುಖ ಲಕ್ಷಣಗಳು. ಹಿಮಾಚಲ ಪ್ರದೇಶದ ಚಾಮುಂಡಾದೇವಿ ದೇವಾಲಯ ಇವರಿಗೆ ತುಂಬಾ ಅನುಕೂಲಕರ. ಈ ದೇವಾಲಯವು ಇವರ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ.
36
Image Credit : drs_fitness_ Instagram
ಮೂಲಾಂಕ 2& 3
ಮೂಲಾಂಕ 2 (ಚಂದ್ರ): ಜನ್ಮ ದಿನಾಂಕಗಳು: 2, 11, 20, 29. ಚಂದ್ರನು ಭಾವನೆಗಳ ಸಂಕೇತ. ಇವರಿಗೆ ರಾಮೇಶ್ವರಂ ದೇವಾಲಯವು ಶುಭವನ್ನು ನೀಡುತ್ತದೆ. ಈ ಜ್ಯೋತಿರ್ಲಿಂಗದ ದರ್ಶನ ಮನಸ್ಸಿಗೆ ಶಾಂತಿ ನೀಡುತ್ತದೆ.ಮೂಲಾಂಕ 3 (ಗುರು): ಜನ್ಮ ದಿನಾಂಕಗಳು: 3, 12, 21, 30. ಗುರು ಜ್ಞಾನ ಮತ್ತು ಆಧ್ಯಾತ್ಮಿಕತೆಯ ಸೂಚಕ. ಗುಜರಾತ್ನ ಸೋಮನಾಥ ದೇವಾಲಯ ಇವರಿಗೆ ಅನುಕೂಲಕರ. ಇಲ್ಲಿ ಪ್ರಾರ್ಥನೆ ಸಲ್ಲಿಸಿದರೆ ಆಧ್ಯಾತ್ಮಿಕ ಶಕ್ತಿ ಹೆಚ್ಚುತ್ತದೆ ಎಂಬ ನಂಬಿಕೆ ಇದೆ.
46
Image Credit : tripadvisor, TTD website
ಮೂಲಾಂಕ 4 &5
ಮೂಲಾಂಕ 4 (ರಾಹು): ಜನ್ಮ ದಿನಾಂಕಗಳು: 4, 13, 22, 31. ರಾಹುವಿನ ಪ್ರಭಾವ ಇರುವವರು ಜೀವನದಲ್ಲಿ ಅಡೆತಡೆಗಳನ್ನು ಎದುರಿಸುತ್ತಾರೆ. ಈ ದಿನಾಂಕಗಳಲ್ಲಿ ಜನಿಸಿದವರು ತಿರುಮಲ ಬಾಲಾಜಿ ದೇವಾಲಯಕ್ಕೆ ಭೇಟಿ ನೀಡುವುದು ಶುಭಕರ.ಮೂಲಾಂಕ 5 (ಬುಧ): ಜನ್ಮ ದಿನಾಂಕಗಳು: 5, 14, 23. ಬುಧ ಗ್ರಹವು ಬುದ್ಧಿವಂತಿಕೆ ಮತ್ತು ಮಾತಿನ ಸಂಕೇತ. ಮುಂಬೈನ ಸಿದ್ಧಿವಿನಾಯಕ ದೇವಾಲಯ ಇವರಿಗೆ ಅನುಕೂಲಕರ. ಗಣೇಶನ ದರ್ಶನದಿಂದ ಅಡೆತಡೆಗಳು ದೂರವಾಗುತ್ತವೆ ಎಂಬ ನಂಬಿಕೆ ಇದೆ.
56
Image Credit : Instagram kamakhya_saktipeeth
ಮೂಲಾಂಕ 6 &7
ಮೂಲಾಂಕ 6 (ಶುಕ್ರ): ಜನ್ಮ ದಿನಾಂಕಗಳು: 6, 15, 24. ಶುಕ್ರನು ಸೌಂದರ್ಯ ಮತ್ತು ಪ್ರೀತಿಯ ಸಂಕೇತ. ಅಸ್ಸಾಂನ ಕಾಮಾಕ್ಯ ದೇವಿ ದೇವಾಲಯವು ಇವರಿಗೆ ಶಕ್ತಿಯನ್ನು ನೀಡುತ್ತದೆ.ಮೂಲಾಂಕ 7 (ಕೇತು): ಜನ್ಮ ದಿನಾಂಕಗಳು: 7, 16, 25. ಇವರಿಗೆ ಆಧ್ಯಾತ್ಮಿಕ ಒಲವು ಹೆಚ್ಚು. ಉಜ್ಜಯಿನಿಯ ಮಹಾಕಾಳೇಶ್ವರ ದೇವಾಲಯಕ್ಕೆ ಒಮ್ಮೆಯಾದರೂ ಭೇಟಿ ನೀಡಬೇಕು.ಮೂಲಾಂಕ 8 (ಶನಿ): ಜನ್ಮ ದಿನಾಂಕಗಳು: 8, 17, 26. ಶನಿಯ ಪ್ರಭಾವವು ಕಷ್ಟ ಮತ್ತು ಶ್ರಮವನ್ನು ಸೂಚಿಸುತ್ತದೆ. ಮಹಾರಾಷ್ಟ್ರದ ಭೀಮಾಶಂಕರ ಜ್ಯೋತಿರ್ಲಿಂಗ ಇವರಿಗೆ ಅನುಕೂಲಕರ.
66
Image Credit : Getty
ಮೂಲಾಂಕ 9
ಮೂಲಾಂಕ 9 (ಮಂಗಳ): ಜನ್ಮ ದಿನಾಂಕಗಳು: 9, 18, 27. ಮಂಗಳ ಗ್ರಹವು ಶಕ್ತಿ ಮತ್ತು ಧೈರ್ಯದ ಸಂಕೇತ. ವಾರಣಾಸಿಯ ಕಾಶಿ ವಿಶ್ವನಾಥ ದೇವಾಲಯದ ದರ್ಶನದಿಂದ ಇವರಿಗೆ ಶುಭಫಲಗಳು ಸಿಗುತ್ತವೆ ಎಂಬ ನಂಬಿಕೆ ಇದೆ.ಜನ್ಮ ದಿನಾಂಕದ ಪ್ರಕಾರ ದೇವಸ್ಥಾನಕ್ಕೆ ಏಕೆ ಭೇಟಿ ನೀಡಬೇಕು? ಪ್ರತಿ ಸಂಖ್ಯೆಗೂ ಒಂದು ವಿಶೇಷ ಶಕ್ತಿ ಇರುತ್ತದೆ. ಅದಕ್ಕೆ ಹೊಂದುವ ದೇವಸ್ಥಾನಕ್ಕೆ ಭೇಟಿ ನೀಡಿದರೆ ಆಧ್ಯಾತ್ಮಿಕ ಶಾಂತಿ, ಧೈರ್ಯ ಮತ್ತು ಯಶಸ್ಸು ಸಿಗುತ್ತದೆ. ಗ್ರಹ ದೋಷಗಳು ಕಡಿಮೆಯಾಗುತ್ತವೆ ಎಂದು ನಂಬಲಾಗಿದೆ.ಗಮನಿಸಿ: ಇಲ್ಲಿ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಇದಕ್ಕೆ ಯಾವುದೇ ವೈಜ್ಞಾನಿಕ ಆಧಾರಗಳಿಲ್ಲ. ಇದು ಸಂಪೂರ್ಣವಾಗಿ ನಂಬಿಕೆಗೆ ಸಂಬಂಧಿಸಿದ ವಿಷಯ. ಭಕ್ತಿ ಮತ್ತು ಒಳ್ಳೆಯ ಸಂಕಲ್ಪವಿದ್ದರೆ, ಯಾವುದೇ ದೇವಾಲಯವು ಮನಸ್ಸಿಗೆ ಶಾಂತಿಯನ್ನು ನೀಡುತ್ತದೆ.
Latest Videos