ಕೋಡಿ ಮಠದ ಸ್ವಾಮೀಜಿ ಹೇಳಿದ ಭವಿಷ್ಯಗಳು ಒಂದೊಂದೇ ನಿಜವಾಗುತ್ತಿದ್ದು, ಇದೀಗ ಮತ್ತೊಂದು ಭಾರೀ ಅನಾಹುತವೊಂದು ಕಾದಿದೆ ಎಂದು ಸ್ವಾಮೀಜಿ ಹೇಳಿದ್ದಾರೆ.

ಗದಗ[ಅ.22]: ರಾಜ್ಯದಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ಸುರಿಯುತ್ತಿದ್ದು, ಈ ಹಿಂದೆ ಕೋಡಿ ಮಠದ ಸ್ವಾಮೀಜಿ ಹೇಳಿದ ಭವಿಷ್ಯ ನಿಜವಾದಂತಾಗಿದೆ. 

Add Asianetnews Kannada as a Preferred SourcegooglePreferred

ಜಲಪ್ರಳಯದ ಕುರಿತು ಆಗಷ್ಟ್ 12 ರಂದು ಗದಗದಲ್ಲಿ ಕೋಡಿ ಮಠದ ಸ್ವಾಮೀಜಿ ಭವಿಷ್ಯ ನುಡಿದಿದ್ದರು. ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಶ್ರೀಗಳು

ಈಗಾಗಿರೋ ಅನಾಹುತ ಶ್ರಾವಣ‌ ಮುಗಿಯೋವರೆಗೂ‌ ಮುಂದುವರೆಯುತ್ತದೆ. ಕಾರ್ತಿಕ ಮಾಸದಲ್ಲೂ ಕಾದಿದೆ ಅಪಾಯ ಎಂದಿದ್ದು ಇದೀಗ ಭವಿಷ್ಯವು ನಿಜವಾಗುತ್ತಿದೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಇಷ್ಟೇ ಅಲ್ಲದೇ ಮುಂದಿನ ದಿನಗಳಲ್ಲಿ ಭೂ-ಆಘಾತ, ವಾಯು ಆಘಾತಗಳೂ ಕಾದಿವೆ. ದೊಡ್ಡ ದೊಡ್ಡ ನಗರಗಳಲ್ಲಿ ಕಟ್ಟಡಗಳು ಧರೆಗುರುಳುತ್ತವೆ. ಜಗತ್ತೆ ಕಂಡರಿಯದ ಆಘಾತ ಆಗುವ ಲಕ್ಷಣಗಳಿವೆ ಎಂದಿದ್ದು, ಸದ್ಯ ಸಂಭವಿಸುತ್ತಿರುವ ಭಾರಿ ಮಳೆ, ಜಲಪ್ರಳಯದ ಸ್ಥಿಯಿಂದ ನಿಜವಾಗುತ್ತಿದೆ ಭವಿಷ್ಯವಾಣಿ ಎನ್ನಲಾಗುತ್ತಿದೆ.

ಅ.22ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ