Asianet Suvarna News Asianet Suvarna News

ಬಿಎಫ್‌ಸಿ ಎದುರು ಮೈದಾನ ತೊರೆದಿದ್ದಕ್ಕೆ ಕೇರಳ ಬ್ಲಾಸ್ಟರ್ಸ್‌ ವಿಷಾದ..!

ಐಎಸ್ಎಲ್ ಟೂರ್ನಿಯಲ್ಲಿ ಬಿಎಫ್‌ಸಿ ಎದುರಿನ ಪಂದ್ಯದ ಮಧ್ಯದಲ್ಲೇ ಮೈದಾನ ತೊರೆದಿದ್ದ ಕೇರಳ ಬ್ಲಾಸ್ಟರ್ಸ್‌
ಐಎ​ಸ್‌​ಎಲ್‌ ಪ್ಲೇ-ಆಫ್‌ ಪಂದ್ಯ​ದಲ್ಲಿ ನಡೆದಿದ್ದ ಘಟನೆಗೆ ಕೇರಳ ವಿಷಾದ
ಭವಿಷ್ಯದಲ್ಲಿ ಇಂತಹ ಘಟನೆಗಳು ಮರು​ಕ​ಳಿಸದಂತೆ ನೋಡಿ​ಕೊ​ಳ್ಳು​ತ್ತೇ​ವೆ ಎಂದ ಕೋಚ್ ಇವಾನ್‌ ವುಕೊ​ಮ​ನೋ​ವಿಚ್‌

Kerala Blasters apologise for ISL walkout against BFC match Vukomanovic regrets being part of it kvn
Author
First Published Apr 4, 2023, 10:30 AM IST

ನವ​ದೆ​ಹ​ಲಿ(ಏ.04): ಬೆಂಗ​ಳೂರು ಎಫ್‌ಸಿ ವಿರು​ದ್ಧ​ದ ಐಎ​ಸ್‌​ಎಲ್‌ ಪ್ಲೇ-ಆಫ್‌ ಪಂದ್ಯ​ದಲ್ಲಿ ಅರ್ಧ​ದ​ಲ್ಲೇ ಮೈದಾನ ತೊರೆ​ದಿದ್ದ ಘಟ​ನೆಗೆ ಸಂಬಂಧಿ​ಸಿ​ದಂತೆ ಕೇರಳ ಬ್ಲಾಸ್ಟ​ರ್ಸ್‌ ಹಾಗೂ ತಂಡದ ಇವಾನ್‌ ವುಕೊ​ಮ​ನೋ​ವಿಚ್‌ ವಿಷಾದ ವ್ಯಕ್ತ​ಪ​ಡಿ​ಸಿ​ದ್ದಾರೆ. ಈ ಬಗ್ಗೆ ಹೇಳಿಕೆ ಬಿಡು​ಗಡೆ ಮಾಡಿದ ಕೇರಳ ಬ್ಲಾಸ್ಟ​ರ್ಸ್‌, ‘ಬಿ​ಎ​ಫ್‌ಸಿ ವಿರು​ದ್ಧದ ಘಟ​ನೆಗೆ ಪ್ರಾಮಾ​ಣಿಕ ವಿಷಾದ ವ್ಯಕ್ತ​ಪ​ಡಿ​ಸು​ತ್ತಿ​ದ್ದೇವೆ. ಮೈದಾನ ತೊರೆ​ಯುವ ನಮ್ಮ ನಿರ್ಧಾರ ದುರ​ದೃ​ಷ್ಟ​ಕರ ಹಾಗೂ ಆ ಕ್ಷಣದ ಆವೇ​ಶ​ದಲ್ಲಿ ನಡೆದ ಘಟನೆ. ಭವಿಷ್ಯದಲ್ಲಿ ಇಂತಹ ಘಟನೆಗಳು ಮರು​ಕ​ಳಿಸದಂತೆ ನೋಡಿ​ಕೊ​ಳ್ಳು​ತ್ತೇ​ವೆ’ ಎಂದಿದೆ. 

ಇವಾನ್‌ ಕೂಡಾ ಟ್ವಿಟ​ರ್‌​ನಲ್ಲಿ ಹೇಳಿಕೆ ಬಿಡು​ಗಡೆ ಮಾಡಿ, ತಮ್ಮ ನಡೆಗೆ ವಿಷಾದ ವ್ಯಕ್ತ​ಪ​ಡಿ​ಸಿ​ದ್ದಾ​ರೆ. ಕ್ಷಮೆ​ಯಾ​ಚಿ​ಸ​ಬೇ​ಕೆಂಬ ಭಾರ​ತೀಯ ಫುಟ್ಬಾಲ್‌ ಫೆಡ​ರೇ​ಶ​ನ್‌​(​ಎ​ಐ​ಎ​ಫ್‌​ಎ​ಫ್‌) ಆದೇಶ ಪಾಲಿಸಿದ ಕೇರ​ಳ ತಂಡ ಹೆಚ್ಚುವರಿ 2 ಕೋಟಿ ರುಪಾಯಿ ದಂಡ ಪಾವತಿಯಿಂದ ತಪ್ಪಿಸಿಕೊಂಡಿದೆ.

ವಿವಾದದ ಹಿನ್ನೆಲೆ: ಮಾರ್ಚ್‌ 3ಕ್ಕೆ ಬೆಂಗ​ಳೂ​ರಿನ ಕಂಠೀ​ರವ ಕ್ರೀಡಾಂಗ​ಣ​ದಲ್ಲಿ ನಡೆದ ಪಂದ್ಯ​ದಲ್ಲಿ ಬಿಎ​ಫ್‌​ಸಿಯ ಸುನಿಲ್‌ ಚೆಟ್ರಿ ಬಾರಿ​ಸಿದ ಫ್ರೀ ಕಿಕ್‌ ಗೋಲ​ನ್ನು ವಿರೋ​ಧಿಸಿ ಕೇರಳ ಆಟ​ಗಾ​ರರು ಆಟ ನಿಲ್ಲಿಸಿ ಮೈದಾನ ತೊರೆ​ದಿ​ದ್ದರು. ಹೀಗಾಗಿ ಕೇರಳ ಬ್ಲಾಸ್ಟರ್‌ ತಂಡಕ್ಕೆ ಭಾರ​ತೀಯ ಫುಟ್ಬಾಲ್‌ ಫೆಡ​ರೇ​ಶ​ನ್‌​(​ಎ​ಐ​ಎ​ಫ್‌​ಎ​ಫ್‌) ಶಿಸ್ತು ಸಮಿತಿ 4 ಕೋಟಿ ರುಪಾಯಿ ದಂಡ ವಿಧಿ​ಸಿ​, 10 ದಿನಗಳ ಒಳಗೆ ಬಹಿ​ರಂಗ ಕ್ಷಮೆ​ಯಾ​ಚಿ​ಸು​ವಂತೆ ಸೂಚಿ​ಸಿತ್ತು. ಅಲ್ಲದೇ ಕೋಚ್‌ ಇವಾನ್‌ರನ್ನು 10 ಪಂದ್ಯ​ಗಳಿಂದ ಅಮಾ​ನ​ತು ಮಾಡಿ, 5 ಲಕ್ಷ ರು. ದಂಡ ಪಾವ​ತಿ​ಸಲು ಸೂಚಿ​ಸಿ ಬಹಿ​ರಂಗ ಕ್ಷಮೆ​ಯಾ​ಚ​ನೆಗೂ ಆದೇ​ಶಿ​ಸಿ​ತ್ತು. ಆದೇಶ ಉಲ್ಲಂಘಿಸಿದರೆ 2 ಕೋಟಿ ರುಪಾಯಿ ಹೆಚ್ಚುವರಿ ದಂಡ ಹಾಕುವುದಾಗಿ ಎಐಎಫ್‌ಎಫ್‌ ಷರತ್ತು ಹಾಕಿತ್ತು.

ವನಿ​ತಾ ಫುಟ್ಬಾಲ್‌: ರಾಜ್ಯ​ಕ್ಕೆ ಇಂದು ಬಿಹಾರ ಸವಾ​ಲು

ಬೆಂಗಳೂರು: 27ನೇ ರಾಷ್ಟ್ರೀಯ ಮಹಿಳಾ ಫುಟ್ಬಾಲ್‌ ಚಾಂಪಿಯನ್‌ಶಿಪ್‌ನಲ್ಲಿ ಮಂಗ​ಳ​ವಾ​ರ ಕರ್ನಾಟಕ ತನ್ನ 3ನೇ ಪಂದ್ಯವನ್ನು ಬಿಹಾರ ವಿರುದ್ಧ ಆಡ​ಲಿದ್ದು, ಹ್ಯಾಟ್ರಿಕ್‌ ಗೆಲು​ವಿನ ನಿರೀ​ಕ್ಷೆ​ಯ​ಲ್ಲಿ​ದೆ. ಗುಂಪು-6ರಲ್ಲಿ ಸ್ಥಾನ ಪಡೆದಿರುವ ಕರ್ನಾಟಕ, ಮೊದಲ ಪಂದ್ಯದಲ್ಲಿ ಗುಜರಾತ್‌ ವಿರುದ್ಧ 9-1 ಗೋಲುಗಳಲ್ಲಿ ಗೆಲುವು ಸಾಧಿಸಿತ್ತು. 

ಅಂತಿಮ ಘಟ್ಟದತ್ತ ಕೊಡವ ಕೌಟುಂಬಿಕ ಹಾಕಿ; ಇಂದಿನಿಂದ ಪ್ರಿ ಕ್ವಾರ್ಟರ್‌ ಫೈನಲ್‌

2ನೇ ಪಂದ್ಯ​ದಲ್ಲಿ ಅಸ್ಸಾಂ ವಿರುದ್ಧ 3-1 ಗೋಲುಗಳ ಗೆಲುವು ಕಂಡಿದ್ದ ರಾಜ್ಯ ತಂಡ ಸದ್ಯ 6 ಅಂಕ ಗಳಿಸಿ ಗುಂಪಿನಲ್ಲಿ ಅಗ್ರಸ್ಥಾನದಲ್ಲಿದೆ. ಗುಂಪಿನಲ್ಲಿ ಅಗ್ರಸ್ಥಾನ ಪಡೆಯುವ ತಂಡ ನೇರವಾಗಿ ಪ್ರಧಾನ ಸುತ್ತಿಗೇರಲಿದ್ದು, 2ನೇ ಸ್ಥಾನ ಪಡೆಯುವ ತಂಡ ಪ್ರಧಾನ ಸುತ್ತಿಗೇರಲು ಉಳಿದ ಫಲಿತಾಂಶಗಳ ಮೇಲೆ ಅವಲಂಬಿತಗೊಳ್ಳಬೇಕಿದೆ.

ಏಪ್ರಿಲ್ 25ರಿಂದ ಇಂಡಿ​ಯ​ನ್‌ ವುಮೆನ್ಸ್‌ ಲೀಗ್‌ ಫುಟ್ಬಾ​ಲ್‌

ನವ​ದೆ​ಹ​ಲಿ: 6ನೇ ಆವೃ​ತ್ತಿಯ ಇಂಡಿ​ಯನ್‌ ವುಮೆನ್ಸ್‌ ಲೀಗ್‌​(​ಐ​ಡ​ಬ್ಲ್ಯು​ಎ​ಲ್‌) ಫುಟ್ಬಾಲ್‌ ಟೂರ್ನಿ ಏ.25ರಿಂದ ಆರಂಭ​ವಾ​ಗ​ಲಿದೆ ಎಂದು ಭಾರ​ತೀಯ ಫುಟ್ಬಾಲ್‌ ಫೆಡ​ರೇ​ಶನ್‌(ಎ​ಐ​ಎ​ಫ್‌​ಎ​ಫ್‌​) ಘೋಷಿ​ಸಿ​ದೆ. ಟೂರ್ನಿ​ಯಲ್ಲಿ 16 ತಂಡ​ಗಳು ಪಾಲ್ಗೊ​ಳ್ಳ​ಲಿದ್ದು, 8 ತಂಡ​ಗಳು 2 ಗುಂಪು​ಗ​ಳ​ನ್ನಾಗಿ ವಿಂಗ​ಡಿ​ಸ​ಲಾ​ಗಿದೆ. ಪ್ರತಿ ಗುಂಪಿ​ನಿಂದ ಅಗ್ರ 4 ತಂಡ​ಗಳು ನಾಕೌಟ್‌ ಹಂತ ಪ್ರವೇ​ಶಿ​ಸ​ಲಿದೆ ಎಂದು ಎ​ಐ​ಎ​ಫ್‌​ಎ​ಫ್‌​ ತಿಳಿ​ಸಿದೆ. ಅಲ್ಲದೇ ಈ ಬಾರಿ ತಂಡ​ದಲ್ಲಿ ಮೂವರು ವಿದೇಶಿ ಆಟ​ಗಾ​ರ​ರಿಗೆ ಅವ​ಕಾಶ ನೀಡ​ಲಾ​ಗಿದೆ. ಕಳೆದ ಆವೃ​ತ್ತಿ​ಯಲ್ಲಿ ಗೋಕು​ಲಂ ಕೇರಳ ಚಾಂಪಿ​ಯನ್‌ ಆಗಿತ್ತು.

Follow Us:
Download App:
  • android
  • ios