Asianet Suvarna News Asianet Suvarna News

ಐಎ​ಸ್‌​ಎಲ್‌: ಪ್ಲೇಆ​ಫ್‌​ನ​ಲ್ಲಿ ಬಿಎ​ಫ್‌​ಸಿ​-ಕೇರಳ ಕಾದಾಟಕ್ಕೆ ವೇದಿಕೆ ಸಜ್ಜು

ಇಂಡಿಯನ್ ಸೂಪರ್ ಲೀಗ್‌ನಲ್ಲಿ ಬೆಂಗಳೂರು ಎಫ್‌ಸಿ ಪ್ಲೇ ಆಫ್‌ಗೆ ಲಗ್ಗೆ
ಪ್ಲೇ ಆಫ್‌ ಪಂದ್ಯದಲ್ಲಿ ಬಿಎಫ್‌ಸಿ ತಂಡಕ್ಕೆ ಕೇರಳ ಎಫ್‌ಸಿ ಸವಾಲು
ಮುಂಬೈ, ಹೈದ​ರಾ​ಬಾದ್‌ ನೇರ​ವಾಗಿ ಸೆಮಿ​ಫೈ​ನ​ಲ್‌​ಗೇ​ರಿ​ವೆ

Indian Super League Bengaluru FC take on Kerala FC Challenge in ISL Play offs kvn
Author
First Published Feb 27, 2023, 12:03 PM IST

ಬೆಂಗ​ಳೂ​ರು(ಫೆ.27): ಇಂಡಿ​ಯನ್‌ ಸೂಪರ್‌ ಲೀಗ್‌​(​ಐ​ಎ​ಸ್‌​ಎ​ಲ್‌) ಫುಟ್ಬಾಲ್‌ ಟೂರ್ನಿಯ ಪ್ಲೇ-ಆಫ್‌​ನಲ್ಲಿ ಬೆಂಗ​ಳೂರು ಎಫ್‌ಸಿ ತಂಡ ಮಾರ್ಚ್‌ 3ರಂದು ನಗ​ರದ ಕಂಠೀ​ರವ ಕ್ರೀಡಾಂಗ​ಣ​ದಲ್ಲಿ ಕೇರಳ ಬ್ಲಾಸ್ಟರ್ಸ್‌ ವಿರುದ್ಧ ಸೆಣ​ಸಲಿದೆ. ಲೀಗ್‌ನ 20 ಪಂದ್ಯ​ಗ​ಳಲ್ಲಿ ಬಿಎ​ಫ್‌ಸಿ 11 ಗೆಲುವಿನೊಂದಿಗೆ 34 ಅಂಕ​ಗ​ಳಿಸಿ 4ನೇ, ಕೇರಳ 10 ಗೆಲು​ವಿ​ನೊಂದಿಗೆ 31 ಅಂಕ ಸಂಪಾ​ದಿಸಿ 5ನೇ ಸ್ಥಾನಿ​ಯಾ​ಯಿತು. 

ಇತ್ತೀ​ಚೆ​ಗೆ ಕಂಠೀ​ರ​ವ​ದಲ್ಲೇ ಬಿಎ​ಫ್‌​ಸಿ-ಕೇರಳ ಲೀಗ್‌ ಪಂದ್ಯದ ವೇಳೆ ಉಭಯ ತಂಡ​ಗಳ ಅಭಿ​ಮಾ​ನಿ​ಗಳ ನಡುವೆ ಘರ್ಷಣೆ ಉಂಟಾ​ಗಿತ್ತು. ಹೀಗಾಗಿ ಮತ್ತೊಂದು ಸುತ್ತಿನ ಪಂದ್ಯ ಭಾರೀ ಕುತೂ​ಹಲ ಮೂಡಿ​ಸಿದೆ. ಟೂರ್ನಿಯ ಮತ್ತೊಂದು ಪ್ಲೇ-ಆಫ್‌​ನಲ್ಲಿ ಒಡಿ​ಶಾ-ಎಟಿಕೆ ಸೆಣ​ಸಲಿವೆ. ಮುಂಬೈ, ಹೈದ​ರಾ​ಬಾದ್‌ ನೇರ​ವಾಗಿ ಸೆಮಿ​ಫೈ​ನ​ಲ್‌​ಗೇ​ರಿ​ವೆ.

ಸ್ಟಾಫರ್ಡ್‌ ಕಪ್‌ ಫುಟ್ಬಾಲ್‌: ಬಿಎ​ಫ್‌​ಸಿಗೆ 1-2 ಸೋಲು

ಬೆಂಗ​ಳೂ​ರು: ಸ್ಟಾಫರ್ಡ್‌ ಚಾಲೆಂಜ್‌ ಕಪ್‌ ಫುಟ್ಬಾಲ್‌ ಟೂರ್ನಿ​ಯಲ್ಲಿ ಐಎ​ಸ್‌​ಎಲ್‌ ಮಾಜಿ ಚಾಂಪಿ​ಯನ್‌ ಬೆಂಗ​ಳೂ​ರು ಎಫ್‌ಸಿ ಭಾನು​ವಾರ ಡೆಲ್ಲಿ ಎಫ್‌ಸಿ ವಿರುದ್ಧ 1-2 ಗೋಲು​ಗ​ಳಿಂದ ಸೋಲ​ನು​ಭ​ವಿ​ಸಿದೆ. ಆರಂಭಿಕ ಪಂದ್ಯ​ದಲ್ಲಿ ಶ್ರೀನಿಧಿ ಡೆಕ್ಕನ್‌ ವಿರುದ್ಧ ಡ್ರಾಗೆ ತೃಪ್ತಿಪ​ಟ್ಟು​ಕೊಂಡಿದ್ದ ಬಿಎ​ಫ್‌ಸಿ 2ನೇ ಪಂದ್ಯ​ದಲ್ಲೂ ನಿರೀ​ಕ್ಷಿತ ಪ್ರದ​ರ್ಶನ ತೋರ​ಲಿಲ್ಲ.

ದಿನದ ಇತರೆ ಪಂದ್ಯ​ಗ​ಳಲ್ಲಿ ಶ್ರೀನಿಧಿ ಡೆಕ್ಕನ್‌ ತಂಡ ಕೆಂಕ್ರೆ ಎಫ್‌ಸಿ ವಿರುದ್ಧ 2-0 ಗೆಲುವು ಸಾಧಿ​ಸಿತು. ಚೆನ್ನೈ​ಯಿನ್‌ ಎಫ್‌ಸಿ ಹಾಗೂ ಕಿಕ್‌​ಸ್ಟಾ​ರ್ಚ್‌ ಎಫ್‌ಸಿ ನಡು​ವಿನ ಪಂದ್ಯ 2-2 ಗೋಲು​ಗ​ಳಿಂದ ಡ್ರಾಗೊಂಡಿತು. ಕೇರಳ ಯುನೈ​ಟೆಡ್‌ ವಿರುದ್ಧ ಎಆ​ರ್‌​ಎ ಎಫ್‌​ಸಿ 5-0 ಗೆಲುವು ಸಾಧಿ​ಸಿತು.

ಮೇಲ್ವಿಚಾ​ರಣೆ ಸಮಿ​ತಿ ಬಗ್ಗೆ ವಿನೇಶ್‌ ಫೋಗಟ್‌ ಬೇಸರ!

ನವ​ದೆ​ಹ​ಲಿ: ಭಾರ​ತೀಯ ಕುಸ್ತಿ ಫೆಡ​ರೇ​ಶ​ನ್‌​(​ಡ​ಬ್ಲ್ಯು​ಎ​ಫ್‌​ಐ) ಅಧ್ಯಕ್ಷ ಬ್ರಿಜ್‌ ಭೂಷಣ್‌ ಮೇಲಿನ ಗಂಭೀರ ಆರೋ​ಪ​ಗಳ ತನಿ​ಖೆಯ ಮೇಲ್ವಿ​ಚಾ​ರ​ಣೆಗೆ ನೇಮಿ​ಸಿ​ರುವ ಸಮಿತಿ ಬಗ್ಗೆಯೂ ತಾರಾ ಕುಸ್ತಿ​ಪಟು ವಿನೇಶ್‌ ಫೋಗಾಟ್‌ ಅಸ​ಮಾ​ಧಾನ ಹೊರ​ಹಾ​ಕಿ​ದ್ದಾರೆ. 

PSL 2023: ಲಕ್ಷಾಂತರ ಮೌಲ್ಯದ 8 ಭದ್ರತಾ ಕ್ಯಾಮರಾಗಳನ್ನೇ ಕದ್ದೊಯ್ದ ಖದೀಮರು..! ಇದು ಪಾಕ್ ಹಣೆಬರಹ

‘ಪ್ರಕ​ರ​ಣದ ಸೂಕ್ಷ್ಮ ಮಾಹಿ​ತಿ​ಗ​ಳನ್ನು ಮೇಲ್ವಿ​ಚಾ​ರಣಾ ಸಮಿತಿ ಹಾಗೂ ತನಿಖಾ ಸಮಿತಿ ಎರಡರಲ್ಲೂ ಇರುವ ಸದ​ಸ್ಯರೊಬ್ಬ​ರು ಮಾಧ್ಯ​ಮ​ಗ​ಳಿಗೆ ಬಹಿ​ರಂಗ​ಪ​ಡಿ​ಸು​ತ್ತಿ​ದ್ದಾ​ರೆ. ಹೀಗಾಗಿ ಈ ಸಮಿ​ತಿಯ ಮೇಲೆ ವಿಶ್ವಾಸ ಕಳೆ​ದು​ಕೊಂಡಿ​ದ್ದೇ​ನೆ. ಕೂಡಲೇ ಅವ​ರನ್ನು ಸಮಿ​ತಿ​ಯಿಂದ ವಜಾ​ಗೊ​ಳಿ​ಸ​ಬೇ​ಕು’ ಎಂದು ಕೇಂದ್ರ ಕ್ರೀಡಾ ಸಚಿ​ವ ಅನು​ರಾಗ್‌ ಠಾಕೂ​ರ್‌ಗೆ ಮನವಿ ಮಾಡಿ​ದ್ದಾರೆ. ದಿಗ್ಗಜ ಬಾಕ್ಸ​ರ್‌ ಮೇರಿ ಕೋಮ್‌, ಮಾಜಿ ಕುಸ್ತಿ​ಪಟು ಯೋಗೇ​ಶ್ವರ ದತ್‌ ಈ ಎರಡೂ ಸಮಿ​ತಿ​ಗ​ಳ​ಲ್ಲಿ​ದ್ದಾ​ರೆ.

ಬ್ಯಾಡ್ಮಿಂಟನ್‌ ಟೂರ್ನಿ: ಕರ್ನಾ​ಟ​ಕಕ್ಕೆ ನಿರಾ​ಸೆ

ಪುಣೆ: 84ನೇ ರಾಷ್ಟ್ರೀಯ ಬ್ಯಾಡ್ಮಿಂಟನ್‌ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾ​ಟ​ಕದ ಶಟ್ಲ​ರ್‌​ಗಳು ಭಾನು​ವಾರ ಭಾರೀ ನಿರಾಸೆ ಅನು​ಭ​ವಿ​ಸಿ​ದ್ದಾರೆ. ಪುರುಷರ ಡಬಲ್ಸ್‌ನಲ್ಲಿ ಶಶಾಂಕ್‌ ಹಾಗೂ ಪೃಥ್ವಿ ಜೋಡಿ ಕ್ವಾರ್ಟರ್‌ ಫೈನ​ಲ್‌​ನಲ್ಲಿ ಹರಿ​ಹ​ರ​ಣ್‌-ರುಬಾನ್‌ ಕುಮಾರ್‌ ವಿರುದ್ಧ 24-26, 23-25 ನೇರ ಗೇಮ್‌​ಗ​ಳಲ್ಲಿ ಸೋತು ಅಭಿ​ಯಾನ ಕೊನೆ​ಗೊ​ಳಿ​ಸಿತು. 

ಮಹಿಳಾ ಡಬಲ್ಸ್‌ನ ಪ್ರಿ ಕ್ವಾರ್ಟ​ರ್‌​ನಲ್ಲಿ ಶಿಖಾ ಗೌತಮ್‌-ಅಶ್ವಿನಿ ಭಟ್‌ ಜೋಡಿ ತ್ರೀಸಾ ಜಾಲಿ-ಗಾಯತ್ರಿ ಜೋಡಿಗೆ ಶರ​ಣಾ​ಯಿತು. ಪುರುಷರ ಸಿಂಗಲ್ಸ್‌ನಲ್ಲಿ ಭಾರ್ಗವ್‌, ಪುರುಷರ ಡಬಲ್ಸ್‌ನಲ್ಲಿ ನಿತಿನ್‌-ವೈಭವ್‌ ಕೂಡಾ ಪ್ರಿ ಕ್ವಾರ್ಟ​ರ್‌ನಲ್ಲೇ ಸೋತು ಹೊರ​ಬಿ​ದ್ದರು. ಮಿಶ್ರ ಡಬಲ್ಸ್‌ನಲ್ಲಿ ನಿತಿನ್‌ ಹಾಗೂ ಜನನಿ ಜೋಡಿಯೂ ಅಭಿ​ಯಾನ ಕೊನೆ​ಗೊ​ಳಿ​ಸಿ​ತು.

ಲಾಹೋರ್‌ ಕ್ರಿಕೆಟ್‌ ಸ್ಟೇಡಿಯಂನಲ್ಲಿ 8 ಸಿಸಿಟೀವಿ ಕಳವು!

ಲಾಹೋರ್‌: ಪಾಕಿಸ್ತಾನ ಸೂಪರ್‌ ಲೀಗ್‌(ಪಿಎಸ್‌ಎಲ್‌) ಪಂದ್ಯಗಳ ವೇಳೆ ಭದ್ರತೆಗೆಂದು ಇಲ್ಲಿನ ಗಡಾಫಿ ಕ್ರೀಡಾಂಗಣದಲ್ಲಿ ಅಳವಡಿಸಲಾಗಿದ್ದು 8 ಸಿಸಿಟೀವಿ ಕ್ಯಾಮೆರಾಗಳು ಕಳವಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಜೊತೆಗೆ ಫೈಬರ್‌ ಕೇಬಲ್‌ಗಳು, ಜೆನರೇಟರ್‌ನ ಬ್ಯಾಟರಿಗಳನ್ನೂ ಸಹ ಕದಿಯಲಾಗಿದೆ ಎನ್ನಲಾಗಿದೆ. ಈ ಸಂಬಂಧ ಕ್ರೀಡಾಂಗಣ ಸಿಬ್ಬಂದಿ ಸ್ಥಳೀಯ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Follow Us:
Download App:
  • android
  • ios