Asianet Suvarna News Asianet Suvarna News

ಗುರುನಾನಕ್ ಜಯಂತಿ ಯಾವಾಗ? ಸಿಖ್ ಧರ್ಮದ ಸಂಸ್ಥಾಪಕರ ಬಗ್ಗೆ ನಿಮಗೆಷ್ಟು ಗೊತ್ತು?

ಕಾರ್ತಿಕ ಮಾಸದ ಹುಣ್ಣಿಮೆಯಂದು ಸಿಖ್ ಧರ್ಮದ ಸಂಸ್ಥಾಪಕ ಗುರುನಾನಕ್ ಅವರ ಜನ್ಮದಿನವನ್ನು ಪ್ರಕಾಶ ಉತ್ಸವ ಎಂದು ಆಚರಿಸಲಾಗುತ್ತದೆ. ಈ ದಿನವನ್ನು ಪ್ರಕಾಶ್ ಉತ್ಸವ ಅಥವಾ ಗುರು ಪರ್ವ್ ಎಂದೂ ಕರೆಯುತ್ತಾರೆ.

When is Guru Nanak Jayanti Know why Prakash Utsav is celebrated skr
Author
First Published Nov 6, 2022, 4:10 PM IST | Last Updated Nov 6, 2022, 4:10 PM IST

ಗುರುನಾನಕ್ ಜಿ ಅವರು ಸಿಖ್ ಧರ್ಮದ ಸ್ಥಾಪಕರು ಮತ್ತು ಮೊದಲ ಸಿಖ್ ಗುರು. ಅವರು 1469ರಲ್ಲಿ ಕಾರ್ತಿಕ ಪೂರ್ಣಿಮೆಯ ದಿನದಂದು ಜನಿಸಿದರು. ಆದ್ದರಿಂದ ಪ್ರತಿ ವರ್ಷ ಕಾರ್ತಿಕ ಮಾಸದ ಹುಣ್ಣಿಮೆಯಂದು ಗುರುನಾನಕ್ ಜಯಂತಿಯನ್ನು ಪ್ರಪಂಚದಾದ್ಯಂತ ಆಚರಿಸಲಾಗುತ್ತದೆ. ಈ ವರ್ಷ ಗುರುನಾನಕ್ ಜಯಂತಿಯನ್ನು ನವೆಂಬರ್ 8ರಂದು ಆಚರಿಸಲಾಗುತ್ತದೆ. ಈ ಜನ್ಮ ವಾರ್ಷಿಕೋತ್ಸವವು ಸಿಖ್ ಧರ್ಮದ ಅನುಯಾಯಿಗಳಿಗೆ ಬಹಳ ವಿಶೇಷವಾಗಿದೆ. ಇದನ್ನು ಪ್ರಕಾಶ್ ಉತ್ಸವ ಅಥವಾ ಗುರು ಪರ್ವ್ ಎಂದೂ ಕರೆಯುತ್ತಾರೆ. ಗುರುನಾನಕ್ ಜಯಂತಿ ಆಚರಣೆಯು ಪೂರ್ಣಿಮಾ ದಿನಕ್ಕೆ ಎರಡು ದಿನಗಳ ಮೊದಲು ಪ್ರಾರಂಭವಾಗುತ್ತದೆ. ಇದು ಅಖಂಡ ಪಥ, ನಾಗರ ಕೀರ್ತನ್ ಮುಂತಾದ ಆಚರಣೆಗಳನ್ನು ಒಳಗೊಂಡಿದೆ. ಗುರುನಾನಕ್ ಜಯಂತಿಯ ದಿನದಂದು ದೇಶಾದ್ಯಂತ ಗುರುದ್ವಾರಗಳನ್ನು ಅಲಂಕರಿಸಲಾಗುತ್ತದೆ, ಈ ಸಮಯದಲ್ಲಿ ಹೆಚ್ಚಿನ ಸಂಖ್ಯೆಯ ಭಕ್ತರು ಗುರುದ್ವಾರಗಳಿಗೆ ಭೇಟಿ ನೀಡುತ್ತಾರೆ.

ಆಚರಣೆಗಳು
ಪ್ರಕಾಶ್ ಉತ್ಸವಕ್ಕೆ ಎರಡು ದಿನಗಳ ಮೊದಲು ಆಚರಣೆಗಳ ಸಂಪೂರ್ಣ ಸರಣಿ ನಡೆಯುತ್ತದೆ. ಮೊದಲ ದಿನ ಗುರುದ್ವಾರಗಳನ್ನು ಹೂವುಗಳು ಮತ್ತು ದೀಪಗಳಿಂದ ಅಲಂಕರಿಸಲಾಗುತ್ತದೆ. ಅಮೃತ ವೇಳೆಯಲ್ಲಿ ಮುಖ್ಯ ದಿನದಂದು ಉತ್ಸವಗಳು ಪ್ರಾರಂಭವಾಗುತ್ತವೆ. ಬೆಳಿಗ್ಗೆ ಭಜನೆಗಳನ್ನು ಪಠಿಸಲಾಗುತ್ತದೆ, ನಂತರ ಕಥೆ ಮತ್ತು ಕೀರ್ತನೆಗಳನ್ನು ಓದಲಾಗುತ್ತದೆ. ಪ್ರಾರ್ಥನೆಯ ನಂತರ, ಸಿಖ್ಖರು ಲಂಗರ್‌ಗಾಗಿ ಒಟ್ಟುಗೂಡುತ್ತಾರೆ. ಲಂಗರ್ ನಂತರ, ಕಥಾ ಮತ್ತು ಕೀರ್ತನೆಯ ಪಠಣ ಮುಂದುವರಿಯುತ್ತದೆ. ರಾತ್ರಿಯಲ್ಲಿ ಗುರ್ಬಾನಿ ಹಾಡುವುದರೊಂದಿಗೆ ಹಬ್ಬವು ಕೊನೆಗೊಳ್ಳುತ್ತದೆ. ಗುರುನಾನಕ್ ಜಯಂತಿಯ ಪವಿತ್ರ ಸಂದರ್ಭದಲ್ಲಿ ಸಿಖ್ ಸಮುದಾಯದ ಜನರು ಅನೇಕ ಸ್ಥಳಗಳಲ್ಲಿ ಲಂಗರ್ ನಡೆಸುತ್ತಾರೆ. ಕಧಿ ರೈಸ್, ಪೂರಿ ಆಲೂಗಡ್ಡೆ, ದಾಲ್ ರೋಟಿ ಮತ್ತು ಖೀರ್‌ನಂತಹ ಶುದ್ಧ ಸಸ್ಯಾಹಾರಿ ಆಹಾರವನ್ನು ಈ ಲಂಗರ್‌ಗಳಲ್ಲಿ ವಿತರಿಸಲಾಗುತ್ತದೆ.

Weekly Love Horoscope: ಸಂಗಾತಿಯ ನಡುವಳಿಕೆಯಿಂದ ಈ ರಾಶಿಗೆ ಅನುಮಾನ

ಪ್ರಕಾಶ ಉತ್ಸವವು ಕಾರ್ತಿಕ ಮಾಸದ ಹುಣ್ಣಿಮೆಯಂದು ಬರುತ್ತದೆ. ಕಾರ್ತಿಕ ಪೂರ್ಣಿಮೆಯು ವರ್ಷದ ಪವಿತ್ರ ಹುಣ್ಣಿಮೆಗಳಲ್ಲಿ ಒಂದಾಗಿದೆ. ಈ ದಿನದಂದು ಮಾಡುವ ದಾನ ಕಾರ್ಯಗಳು ವಿಶೇಷವಾಗಿ ಫಲಪ್ರದವಾಗಿವೆ. ಈ ದಿನ ದೀಪಗಳನ್ನು ದಾನ ಮಾಡುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ.

ಗುರುನಾನಕ್ ಅವರ ಪರಿಚಯ
ಗುರು ನಾನಕ್ ದೇವ್ ಅವರು ರಾಯ್ ಭೋಯ್ ಕಿ ತಲ್ವಂಡಿಯಲ್ಲಿ ಅಂದರೆ ಆಧುನಿಕ ಪಾಕಿಸ್ತಾನದಲ್ಲಿ ಲಾಹೋರ್ ಬಳಿಯ ನಾನಕಾ ಸಾಹಿಬ್‌ನಲ್ಲಿ ಜನಿಸಿದರು. 1469ರಲ್ಲಿ ಕಟ್ಟಕ್ ಪುರನ್ಮಾಶಿಯಲ್ಲಿ ಕಲ್ಯಾಣ್ ಚಂದ್ ದಾಸ್ ಬೇಡಿ ಮತ್ತು ಮಾತಾ ತ್ರಿಪ್ತ ದಂಪತಿಗೆ ಜನಿಸಿದರು. ಯಾವುದೇ ಸಾಮಾನ್ಯ ವ್ಯಕ್ತಿ ಸ್ಪಷ್ಟ ಮನಸ್ಸಾಕ್ಷಿಯೊಂದಿಗೆ, ದೇವರೊಂದಿಗೆ ಸಂಪರ್ಕ ಹೊಂದಬಹುದು ಮತ್ತು ಒಬ್ಬ ಸರ್ವಶಕ್ತನಿದ್ದಾನೆ ಎಂದು ಅವರು ನಂಬಿದ್ದರು. ಈ ದೇವರು ಶಾಶ್ವತ ಸತ್ಯವನ್ನು ಸಂಕೇತಿಸುತ್ತಾನೆ ಎಂದವರು ಪ್ರತಿಪಾದಿಸಿದ್ದರು. ಗುರು ನಾನಕ್ ದೇವ್ ಅವರ ಬೋಧನೆಗಳು ಗುರು ಗ್ರಂಥ ಸಾಹಿಬ್‌ನಲ್ಲಿ (ಸಿಖ್ಖರ ಪವಿತ್ರ ಪುಸ್ತಕ) 974 ಕಾವ್ಯಾತ್ಮಕ ಸ್ತೋತ್ರಗಳ ರೂಪದಲ್ಲಿವೆ ಮತ್ತು ಗುರುಮುಖಿ ಲಿಪಿಯಲ್ಲಿ ದಾಖಲಿಸಲಾಗಿದೆ. 

ವಾರ ಭವಿಷ್ಯ: ಮಿಥುನಕ್ಕೆ ಸಂಬಂಧದಲ್ಲೂ ಏರಿಳಿತ, ವೃತ್ತಿಯಲ್ಲೂ ಅಸಮಾಧಾನ

ಗುರು ಗ್ರಂಥ ಸಾಹಿಬ್‌ನ ಮುಖ್ಯ ಶ್ಲೋಕಗಳು ಬ್ರಹ್ಮಾಂಡದ ಸೃಷ್ಟಿಕರ್ತ ಒಬ್ಬನೇ ಎಂದು ವಿವರಿಸುತ್ತವೆ. ಅವರ ವಚನಗಳು ಮಾನವೀಯತೆ, ಸಮೃದ್ಧಿ ಮತ್ತು ಎಲ್ಲರಿಗೂ ಸಾಮಾಜಿಕ ನ್ಯಾಯಕ್ಕಾಗಿ ನಿಸ್ವಾರ್ಥ ಸೇವೆಯನ್ನು ಬೋಧಿಸುತ್ತವೆ.

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

Latest Videos
Follow Us:
Download App:
  • android
  • ios