Asianet Suvarna News Asianet Suvarna News

ಶಿವರಾತ್ರಿಯಂದೇ ಕಾದ ಬಂಡೆಯ ಮೇಲೆ ನೀರು ಪ್ರತ್ಯಕ್ಷ!

ಬಿರು ಬೇಸಿಗೆಯಲ್ಲಿಯೂ ಇಲ್ಲಿನ ಬೆಟ್ಟದ ತುದಿಯಲ್ಲಿ ಕಾದ ಬಂಡೆಯ ಮೇಲೆ ತಂಪಾದ ಸಿಹಿ ನೀರು ಜಿನುಗುತ್ತದೆಈ ಪ್ರಕೃತಿ ವಿಸ್ಮಯ ತಾಣಕ್ಕೆ ‘ಬಾಧೆ ಚಿಲುಮೆ, ಶಿವನ ಗಂಗೆ’ ಎಂದು ಕರೆಯುತ್ತ ನೀರನ್ನು ಪೂಜಿಸುತ್ತಾರೆ. ಈ ನೀರು ಕುಡಿದರೆ ಮನುಷ್ಯನಿಗೆ ರೋಗಗಳೂ ದೂರ ಎನ್ನುವ ನಂಬಿಕೆ ಇದೆ. ಇಂತಹ ವಿಸ್ಮಯ ತಾಣ ನೋಡುವುದೇ ಸೋಜಿಗ!

Water on the hot rock in Shivratri Amavasye at bellary district rav
Author
First Published Feb 19, 2023, 9:24 AM IST | Last Updated Feb 19, 2023, 9:25 AM IST

ಭೀಮಣ್ಣ ಗಜಾಪುರ

ಕೂಡ್ಲಿಗಿ (ಫೆ.19) : ಬಿರು ಬೇಸಿಗೆಯಲ್ಲಿಯೂ ಇಲ್ಲಿನ ಬೆಟ್ಟದ ತುದಿಯಲ್ಲಿ ಕಾದ ಬಂಡೆಯ ಮೇಲೆ ತಂಪಾದ ಸಿಹಿ ನೀರು ಜಿನುಗುತ್ತದೆ!

ಆ ಬಂಡೆಯ ಇಕ್ಕೆಲಗಳಲ್ಲಿ ಜಿನುಗುವ ಪರಿಶುದ್ಧ ನೀರು ಒರತೆಯಂತ ತಗ್ಗುಗುಂಡಿಗಳಲ್ಲಿ ಶೇಖರಣೆಯಾಗುತ್ತಿದ್ದು, ಈ ಪ್ರಕೃತಿ ವಿಸ್ಮಯ ತಾಣಕ್ಕೆ ‘ಬಾಧೆ ಚಿಲುಮೆ, ಶಿವನ ಗಂಗೆ’ ಎಂದು ಕರೆಯುತ್ತ ನೀರನ್ನು ಪೂಜಿಸುತ್ತಾರೆ. ಈ ನೀರು ಕುಡಿದರೆ ಮನುಷ್ಯನಿಗೆ ರೋಗಗಳೂ ದೂರ ಎನ್ನುವ ನಂಬಿಕೆ ಇದೆ. ಇಂತಹ ವಿಸ್ಮಯ ತಾಣ ನೋಡುವುದೇ ಸೋಜಿಗ!

ಮುಂದಿನ ಚುನಾವಣೆಯಲ್ಲಿ ಪಕ್ಷಾಂತರಿಗಳಿಗೆ ಅಧಿಕಾರ ಯೋಗವಿಲ್ಲ; ಕೊಡೇಕಲ್ ಕಾಲಜ್ಞಾನಿಯ ಭವಿಷ್ಯನುಡಿ ನಿಜವಾಗುತ್ತಾ?

ಹೆಬ್ಬಂಡೆಗಳೇ ತುಂಬಿರುವ ಬೆಟ್ಟದಲ್ಲಿ ಸುತ್ತಮುತ್ತ ಎಲ್ಲಿ ನೋಡಿದರೂ ಬಿಸಿಲಿನ ಒಣ ಹವೆ, ಧಗಧಗ ಬಿಸಿಲು, ಮಳೆಗಾಲದಲ್ಲಿಯೇ ಕುಡಿಯಲು ನೀರು ಸಿಗದ ಈ ಪ್ರದೇಶದಲ್ಲಿ ಬಿರು ಬಿಸಿಲಿನ ಬೇಸಿಗೆಯ ಶಿವರಾತ್ರಿಯಂದು ಈ ಬೆಟ್ಟದಲ್ಲಿ ನೀರು ಪ್ರತ್ಯಕ್ಷವಾಗುತ್ತದೆ. ಬೆಟ್ಟದ ಇಳಿಜಾರಿನ ತಗ್ಗು ಪ್ರದೇಶದಲ್ಲಿ ನೀರು ಸಂಗ್ರಹವಾಗುತ್ತದೆ. ಈ ನೀರಿನಲ್ಲಿ ಔಷಧಿಯ ಗುಣವಿದೆಯೆಂಬುದು ಜನತೆಯ ಪರಂಪರಾಗತ ನಂಬಿಕೆ. ಈ ಬೆಟ್ಟದ ಗಂಗೆಯನ್ನು ಸ್ಥಳೀಯರು ಪೂಜೆ ಮಾಡುತ್ತಾರೆ. ರೋಗ ರುಜಿನ ದೂರವಾಗೋದ್ರಿಂದ ಎಲ್ಲರೂ ಈ ನೀರು ಕುಡಿತಾರೆ, ಸ್ಥಳೀಯರು ಸಂಗ್ರಹಿಸಿ ಮನೆಗಳಲ್ಲಿಟ್ಟು ವರ್ಷಗಟ್ಟಲೇ ಈ ನೀರು ಕುಡಿಯುತ್ತಾರೆ.

ನೀವೂ ಈ ವಿಸ್ಮಯ ತಾಣ ನೋಡಬೇಕೇ?

ಕೂಡ್ಲಿಗಿ(Koodligi) ಹಾಗೂ ಗುಡೇಕೋಟೆ(Gudekote)ಯಿಂದ ನರಸಿಂಹನಗಿರಿ(Narasimhanagiri)ಗೆ ಬರಬಹುದು ಇಲ್ಲವೇ ಚಿಕ್ಕಜೋಗಿಹಳ್ಳಿಯಿಂದ ಭೀಮಸಮುದ್ರ ಮೂಲಕ ಕರಡಿಹಳ್ಳಿ(Karadihalli)ಗೆ ಬಂದರೆ ನೀವು ಬಾಧೆ ಚಿಲುಮೆ ನೋಡಬಹುದು. ಕರಡಿಹಳ್ಳಿಯಿಂದ ನರಸಿಂಹಗಿರಿಗೆ ಹೋಗುವ ಕಚ್ಚಾ ರಸ್ತೆಯಲ್ಲಿ 2 ಕಿಮೀ ಸಾಗಿದರೆ ಈ ಪ್ರದೇಶ ಸಿಗುತ್ತದೆ. ವಾಹನ ಇಳಿದು ಕಾಡಿನಲ್ಲಿ ತುಸು ದೂರ ಕಾಲ್ನಡಿಗೆ ಮೂಲಕ ಹೋಗಬೇಕು, ಆಗ ಈ ಬೆಟ್ಟದ ಗಂಗೆ ನಿಮಗೆ ಸಿಗುತ್ತಾಳೆ. ಈ ಸ್ಥಳವನ್ನು ತೆಲುಗಿನಲ್ಲಿ ಬಾಗಲ… ಚಿಲುಮೆ ಎನ್ನುತ್ತಾರೆ. ಬಾಗಲ್‌ ಚಿಲುಮೆ ಅಂದರೆ ಬಾಧೆ ತೀರಿಸುವ ಚಿಲುಮೆ ಎಂದರ್ಥ. ಇಲ್ಲಿ ಕರಡಿ, ಚಿರತೆ ಮುಂತಾದ ಕಾಡು ಪ್ರಾಣಿಗಳ ಓಡಾಟ ಜಾಸ್ತಿ, ಹೀಗಾಗಿ ಗುಂಪಾಗಿ ಹೋಗುವುದು ಕ್ಷೇಮ.

ವಿಸ್ಮಯ ತಾಣದಲ್ಲಿ ವಿಸ್ಮಯಗಳು:

ಈ ಬೆಟ್ಟದಲ್ಲಿ 3ಕಡೆ ನೀರು ಜಿನುಗುತ್ತೆ. ಬಿಸಿಲು ಏರಿದಂತೆ ನೀರು ಜಾಸ್ತಿಯಾಗುತ್ತೆ, ಬಿಸಿಲು ಕಡಿಮೆಯಾದಂಗೆ ನೀರು ಕೂಡ ಜಿನುಗೋ ಪ್ರಮಾಣ ಕಡಿಮೆಯಾಗುತ್ತದೆ. ಋುತುಮಾತಿಯಾದ ಮಹಿಳೆಯರು ಈ ಚಿಲುಮೆ ಹತ್ತಿರ ಹೋದರೆ ಇಲ್ಲಿ ನೀರು ಬತ್ತುತ್ತದೆ ಎನ್ನುವ ನಂಬಿಕೆಯೂ ಇದೆ. ಹೀಗೆ ಆದ ಹಲವಾರು ಉದಾಹರಣೆಗಳನ್ನು ಕರಡಿಹಳ್ಳಿಯ ಶೆಟ್ರು ಶರಣಪ್ಪ ವಿವರಿಸುತ್ತಾರೆ.

ಬತ್ತಿ ಹೋದ ಚಿಲುಮೆಯಲ್ಲಿ ಪುನಃ ನೀರು ಬರಬೇಕೆಂದರೆ ಕಪ್ಪು ಬಣ್ಣದ ಮೇಕೆಯನ್ನು ಆ ಬಾಗಲ್‌ (ಬಾಧೆ ಚಿಲುಮೆ) ಮುಂದೆ ನಿಲ್ಲಿಸಿ ಹಾಲು ಕರೆದಾಗ ಮತ್ತೆ ಯಥಾ ರೀತಿ ಬಂಡೆಯ ಮೇಲೆ ನೀರು ಕಾಣಿಸುತ್ತದೆ ಎಂದು ಅವರು ಹೇಳುತ್ತಾರೆ.

ವಿಜಯಪುರ: ಶಿವರಾತ್ರಿಯಂದು ಸಿದ್ದೇಶ್ವರ ಶ್ರೀಗಳ ರೀತಿ ಉಡುಗೆ ತೊಟ್ಟ ಪುಟಾಣಿ, ಕಾಲಿಗೆ ಬಿದ್ದ ಭಕ್ತರು..!

ಕಾಡಲ್ಲಿರೋದರಿಂದ ಇಲ್ಲಿಗೆ ಜನತೆ ಬರೋದು ಕಡಿಮೆ ಈ ನೀರನ್ನು ಸಂಶೋಧನೆಗೊಳಪಡಿಸಿದರೆ ಔಷಧಿಯ ಗುಣ ತಿಳಿಯುತ್ತದೆ, ಈ ತಾಣಕ್ಕೆ ರಸ್ತೆ ನಿರ್ಮಿಸಿದರೆ ಎಲ್ಲರೂ ಈ ವಿಸ್ಮಯ ನೋಡಲು ಸಾಧ್ಯ. ಆಧುನಿಕ ದಿನಗಳಲ್ಲಿಯೂ ಅಚ್ಚರಿ ಮೂಡಿಸುತ್ತಿರುವುದು ಈ ತಾಣ ಎಲ್ಲರಲ್ಲೂ ಕುತೂಹಲ ಮೂಡಿಸುತ್ತದೆ. ಪ್ರತಿ ವರ್ಷ ಶಿವರಾತ್ರಿ ಅಮವಾಸ್ಯೆಯಂದು ಕಾಣಿಸುವ ನೀರು ಕೆಲವು ಬಾರಿ ಒಂದು ದಿನ ಮುಂಚೆಯೇ ಅಥವಾ ಒಂದು ದಿನ ತಡವಾಗಿಯೂ ನೀರು ಕಾಣಿಸಿದ ಉದಾಹರಣೆಗಳು ಇವೆ. ಹೀಗಾಗಿ ಈ ಬಾಧೆ ಚಿಲುಮೆ ನೋಡಲು ಹೋಗುವವರು ಕರಡಿಹಳ್ಳಿ, ನರಸಿಂಹಗಿರಿ ಗ್ರಾಮದ ರೈತರ ಕುರಿಗಾಹಿಗಳ ಮೂಲಕ ನೀರು ಬಂದಿದಿಯೋ ಇಲ್ಲವೋ ಎಂದು ತಿಳಿದುಕೊಂಡು ಹೋಗಬೇಕಾಗುತ್ತದೆ.

Latest Videos
Follow Us:
Download App:
  • android
  • ios