ಈ ಬಾರಿ ಕೊರೋನಾ ನಡುವೆಯೇ ಗಣೇಶ ಚತುರ್ಥಿಯನ್ನು ಸರಳವಾಗಿ ಆಚರಿಸುವ ಪರಿಸ್ಥಿತಿ ಬಂದೊದಗಿದೆ. ಆದರೆ, 126 ವರ್ಷಗಳ ನಂತರ ಬರುತ್ತಿರುವ ಸೂರ್ಯ ಮತ್ತು ಮಂಗಳ ಯೋಗವು ಹಲವರ ದಿಕ್ಕನ್ನು ಬದಲಿಸಲಿದೆ. ಬಹುತೇಕರಿಗೆ ಶುಭವನ್ನು ನೀಡಿದರೆ, ಕೆಲವೇ ಕೆಲವರಿಗೆ ಸ್ವಲ್ಪ ಕಹಿಯನ್ನು ನೀಡಲಿದೆ. ಆದರೆ, ಇದಕ್ಕೂ ಪರಿಹಾರಗಳು ಇದ್ದು, ಗಣೇಶ ಹಾಗೂ ಸೂರ್ಯೋಪಾಸನೆ ಮಾಡುವುದರಿಂದ ಸಂಕಷ್ಟ ನಿವಾರಣೆಯಾಗಲಿದೆ. ಹಾಗಾದರೆ, ಯಾವ ಯಾವ ರಾಶಿಗಳ ಯೋಗ ಏನಿದೆ ಎಂಬುದನ್ನು ನೋಡೋಣ ಬನ್ನಿ…
ಭಾದ್ರಪದ ಮಾಸದ ಶುಕ್ಲ ಪಕ್ಷದ ಚತುರ್ಥಿಯಂದು ಗಣಪತಿ ಹಬ್ಬವನ್ನು ಆಚರಿಸುತ್ತೇವೆ. ಗಣೇಶ ಎಂದರೇ ವಿಘ್ನನಿವಾರಕ, ಇಂತಹ ಸಂದರ್ಭದಲ್ಲಿ ಈಗ ಹಬ್ಬದ ಖುಷಿಯಲ್ಲಿ ನಾವಿದ್ದೇವೆ. ಪ್ರಥಮ ಪೂಜಕನಿಂದ ಈ ಬಾರಿ ಹಲವು ರಾಶಿಯವರಿಗೂ ಅದೃಷ್ಟ ಒಲಿದಿದೆ. ಬೇರೆ ಬೇರೆ ರಾಶಿಯವರಿಗೆ ಬೇರೆ ಬೇರೆ ಫಲಗಳು ಈ ಸಂದರ್ಭದಲ್ಲಿ ಲಭಿಸಲಿದೆ.
ಈ ಅದೃಷ್ಟವೇನು ಪ್ರತಿ ವರ್ಷ ಬರುವುದಲ್ಲ. ಬರೋಬ್ಬರಿ 126 ವರ್ಷಗಳ ನಂತರ ಸೂರ್ಯ ಸಿಂಹರಾಶಿಯಲ್ಲಿ, ಮಂಗಳ ಮೇಷರಾಶಿಯಲ್ಲಿ ನೆಲೆಸಿರುತ್ತಾನೆ. ಸೂರ್ಯ ಮತ್ತು ಮಂಗಳ ಗ್ರಹದ ಈ ಯೋಗವು ಇಷ್ಟು ಸುದೀರ್ಘ ಸಮಯದ ಬಳಿಕ ಬರುತ್ತಿದೆ. ಹಾಗಾಗಿ ಇದು ವಿಶೇಷವೇ ಆಗಿದೆ. ಆದರೆ, ಕೆಲವರಿಗೆ ಇದು ಅಡ್ಡಪರಿಣಾಮವನ್ನೂ ಬೀರಲಿದೆ. ಇದರಿಂದ ಇಂತಹ ರಾಶಿಯವರು ಮೊದಲೇ ಎಚ್ಚೆತ್ತುಕೊಳ್ಳುವುದು ಉತ್ತಮ.
![]()
ಮೇಷ ರಾಶಿ
ಈ ರಾಶಿಯಿಂದ 5ನೇ ಮನೆಯಲ್ಲಿ ಸೂರ್ಯನ ಗೋಚರ ಪ್ರಭಾವದಿಂದ ಹಿಡಿದ ಕೆಲಸವು ವೃದ್ಧಿಯಾಗಲಿದೆ. ಅಂದರೆ ಹೊಸ ಕಾರ್ಯಗಳು ಹಾಗೂ ಯೋಜನೆಗಳು ಫಲಪ್ರದವಾಗಲಿದೆ. ಮೇಷ ರಾಶಿಯವರ ಪರಿವಾರದಲ್ಲಿ ಖುಷಿಯು ಮನೆಮಾಡಲಿದೆ.
ಇದನ್ನು ಓದಿ: ಹಲ್ಲಿನ ಮಧ್ಯೆ ಅಕ್ಕಿಕಾಳಿನಷ್ಟು ಜಾಗ ಬಿಟ್ಟಿದ್ದರೆ ಏನು ಅರ್ಥ ಅಂತ ಗೊತ್ತಾ..!?
ವೃಷಭ
ಈ ರಾಶಿಯಿಂದ ಸೂರ್ಯನು ನಾಲ್ಕನೇ ಮನೆಯಲ್ಲಿ ಗೋಚರಿಸುವುದರಿಂದ ಕುಟುಂಬದಲ್ಲಿ ಕಲಹವಾಗುತ್ತದೆ. ಸೂರ್ಯನ ಆರಾಧನೆ ಮಾಡುವುದರಿಂದ ಮಾನಸಿಕ ನೆಮ್ಮದಿ ಲಭಿಸಲಿದೆ. ವಾದ-ವಿವಾದಗಳಲ್ಲಿ ಜಯ ಸಿಗಲಿದೆ. ಅರ್ಧಕ್ಕೆ ನಿಂತ ಕೆಲಸಗಳೆಲ್ಲಾ ಪೂರ್ಣವಾಗುವುದು.
ಮಿಥುನ
ಪರಾಕ್ರಮ ಭಾವದಲ್ಲಿ ಸೂರ್ಯ ಗೋಚರವಾಗುವುದರಿಂದ ಈ ರಾಶಿಯವರಲ್ಲಿ ಶಕ್ತಿ ಹೆಚ್ಚಲಿದೆ. ಅಂದರೆ ಶಕ್ತಿಯ ಭಂಡಾರವೇ ಜೊತೆಗಿರುತ್ತದೆ. ಹಾಗಂತ ಇವರು ತಮ್ಮ ಹಠ ಹಾಗೂ ಆವೇಶವನ್ನು ನಿಯಂತ್ರಣದಲ್ಲಿಟ್ಟುಕೊಂಡು ನಡೆದರೆ ಯಶಸ್ಸು ಲಭಿಸುತ್ತದೆ. ಆರ್ಥಿಕ ಸ್ಥಿತಿ ಉತ್ತಮಗೊಳ್ಳಲಿದೆ.
ಕರ್ಕಾಟಕ
ಧನಭಾವದಲ್ಲಿ ಸೂರ್ಯ ಗೋಚರವಾಗುವುದರಿಂದ ಆರ್ಥಿಕ ಸ್ಥಿತಿ ಉತ್ತಮವಾಗಲಿದೆ. ಮಾತಿನ ಮೇಲೆ ಹಿಡಿತವನ್ನು ಇವರು ಇಟ್ಟುಕೊಳ್ಳಲೇಬೇಕು. ಹೀಗಾದಲ್ಲಿ ಮಾತ್ರ ತಮ್ಮ ಕೆಲಸದಲ್ಲಿ ಸಫಲತೆಯನ್ನು ಸಾಧಿಸಬಹುದಾಗಿದೆ. ದೊಡ್ಡ ಯೋಜನೆಯು ಫಲಪ್ರದವಾಗುವುದರ ಮೂಲಕ ಮನೆಯಲ್ಲಿ ಖುಷಿ ನೆಲೆಸುವುದು. ಮನೆಯಲ್ಲಿ ಸುಖ, ಶಾಂತಿ ನೆಲೆಸುತ್ತದೆ.
ಸಿಂಹ
ಸಿಂಹ ರಾಶಿಯ ಅಧಿಪತಿಯಾದ ಸೂರ್ಯನು ತನ್ನದೇ ಮನೆಯಲ್ಲಿ ನೆಲಸಿರುವುದು ಈ ರಾಶಿಯವರಿಗೆ ವರದಾನವೇ ಸರಿ. ಆದರೆ, ಇದು ಪರೀಕ್ಷೆಯ ಸಮಯವಾಗಿದೆ. ನಿಮ್ಮ ಸಿಟ್ಟನ್ನು ನಿಯಂತ್ರಣದಲ್ಲಿಟ್ಟುಕೊಂಡು ಶಕ್ತಿಯನ್ನು ಸರಿಯಾದ ಮಾರ್ಗದಲ್ಲಿ ಉಪಯೋಗ ಮಾಡಿಕೊಂಡು ಕೆಲಸ ಮಾಡಬೇಕು. ಗಣೇಶನನ್ನು ಭಕ್ತಿಯಿಂದ ಆರಾಧಿಸಿದರೆ ಮನೋಕಾಮನೆಗಳೆಲ್ಲಾ ಪೂರ್ಣಗೊಳ್ಳುವುದು.
