Asianet Suvarna News Asianet Suvarna News

ಅಪರಾಜಿತಾ ಹೂವನ್ನು ಈ ರೀತಿ ಬಳಸಿದ್ರೆ ಧನಪ್ರಾಪ್ತಿ..

ಅಪರಾಜಿತಾ ಹೂವು ಅಥವಾ ನೀಲಿ ಹೂವು ಅಥವಾ ಶಂಖ ಪುಷ್ಪ ಪವಿತ್ರ ಹೂವಾಗಿದ್ದು, ದೈನಂದಿನ ಪೂಜಾ ವಿಧಿಗಳಲ್ಲಿ ಬಳಸಲಾಗುತ್ತದೆ. ಈ ಹೂವನ್ನು ದುರ್ಗಾ ದೇವಿಯ ಅವತಾರ ಎನ್ನಲಾಗುತ್ತದೆ. 

The Amazing Benefits of the Aparajita Flower skr
Author
Bangalore, First Published Aug 5, 2022, 12:40 PM IST

ಹೂವುಗಳ ಉಪಸ್ಥಿತಿಯು ಪ್ರತಿ ಸಂದರ್ಭವನ್ನು ಇನ್ನಷ್ಟು ವಿಶೇಷಗೊಳಿಸುತ್ತದೆ. ಪೂಜೆ ಇರಲಿ, ಶುಭಕಾರ್ಯವಿರಲಿ- ಎಲ್ಲಕ್ಕೂ ಹೂವುಗಳು ಬೇಕೇ ಬೇಕು. ಹೂವುಗಳು ಈ ಲೋಕದ ಸೌಂದರ್ಯವನ್ನು ವರ್ಧಿಸುತ್ತವೆ. ಬಹಳಷ್ಟು ಹೂವುಗಳು ಧಾರ್ಮಿಕವಾಗಿಯೂ, ಜ್ಯೋತಿಷ್ಯದ ಪ್ರಕಾರವಾಗಿಯೂ ಮಹತ್ವ ಪಡೆದಿವೆ. ಅವುಗಳಲ್ಲಿ ಅಪರಾಜಿತಾ ಹೂವು ಕೂಡಾ ಒಂದು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಅಪರಾಜಿತಾ ಹೂವಿನ ಕೆಲವು ಪರಿಹಾರಗಳು ನಿಮ್ಮ ಜೀವನದಲ್ಲಿ ಪ್ರಗತಿ ಮತ್ತು ಸಂಪತ್ತನ್ನು ತರುತ್ತವೆ.

ನವಿಲು ಗರಿಯಂತೆ ಕಾಣುವ ನೀಲಿ ಬಣ್ಣದ ಅಪರಾಜಿತಾ ಹೂವನ್ನು ಶಂಖಪುಷ್ಪ, ವಿಷ್ಣುಪ್ರಿಯಾ, ಏಷ್ಯನ್ ಪಾರಿವಾಳಗಳು, ಬ್ಲೂಬೆಲ್‌ವೈನ್, ನೀಲಿ ಬಟಾಣಿ, ಬಟರ್‌ಫ್ಲೈ ಬಟಾಣಿ, ಮುಂತಾದ ಹೆಸರುಗಳಿಂದ ಕರೆಯಲಾಗುತ್ತದೆ. ಇದು ಫ್ಯಾಬೇಸಿಯ ಕುಟುಂಬಕ್ಕೆ ಸೇರಿದ ಸಸ್ಯ ಜಾತಿಯಾಗಿದೆ.

ವಿಷ್ಣುವಿಗೆ ಪ್ರಿಯ
ಅಪರಾಜಿತಾ ನೀಲಿ ಹೂವಿನ ಪರಿಹಾರವು ನಿಮ್ಮ ಯಶಸ್ಸಿನ ಎಲ್ಲಾ ಮಾರ್ಗಗಳನ್ನು ತೆರೆಯುತ್ತದೆ. ಅಪರಾಜಿತಾ ಹೂವನ್ನು ಹಿಂದೂ ಧರ್ಮದಲ್ಲಿ ಬಹಳ ವಿಶೇಷವೆಂದು ಪರಿಗಣಿಸಲಾಗಿದೆ. ಈ ಹೂವು ವಿಷ್ಣುವಿಗೆ ತುಂಬಾ ಪ್ರಿಯವಾಗಿದೆ. ಇದಲ್ಲದೇ ಈ ನೀಲಿ ಬಣ್ಣದ ಹೂವು ಶನಿದೇವನನ್ನು ಮೆಚ್ಚಿಸಲು ಕೂಡಾ ತುಂಬಾ ಸಹಕಾರಿಯಾಗಿದೆ.

ಧನ ಪ್ರಾಪ್ತಿಗೆ ಪರಿಹಾರ
ಹಣದ ಕೊರತೆ ನೀಗಿಸಲು ಹಾಗೂ ದುಡ್ಡನ್ನು ಆಕರ್ಷಿಸಲು ಸೋಮವಾರ ಅಥವಾ ಶನಿವಾರದಂದು 3 ಅಪರಾಜಿತ ಹೂವುಗಳನ್ನು ಹರಿಯುವ ನೀರಿನಲ್ಲಿ ತೇಲಿ ಬಿಡಿ. ಸ್ವಲ್ಪ ಸಮಯದಲ್ಲೇ ನಿಮಗೆ ಈ ಪರಿಹಾರದ ಫಲಗಳು ದೊರೆಯಲಾರಂಭಿಸುತ್ತವೆ. 

ನೀವು ಸಿಂಹ ರಾಶಿಯವರಾಗಿದ್ರೆ ಈ ಬಣ್ಣಗಳನ್ನು ಹೆಚ್ಚು ಬಳಸಿ..

ಇಷ್ಟಾರ್ಥ ಈಡೇರಿಕೆಗಾಗಿ 
ಅಪರಾಜಿತಾ ಹೂಗಳ ಹಾರವನ್ನು ಸಿದ್ಧಪಡಿಸಿ ಅದನ್ನು ದುರ್ಗಾ ದೇವಿ, ಶಿವ ಮತ್ತು ಭಗವಾನ್ ವಿಷ್ಣುವಿಗೆ ಅರ್ಪಿಸಿದರೆ, ದೇವತೆಗಳ ಆಶೀರ್ವಾದವನ್ನು ಪಡೆಯಲಾಗುತ್ತದೆ. ಇದರೊಂದಿಗೆ, ದೇವರ ದಯೆಯಿಂದ, ನಿಮ್ಮ ಪ್ರತಿಯೊಂದು ಆಸೆಯೂ ಈಡೇರುತ್ತದೆ ಎಂಬ ನಂಬಿಕೆ ಇದೆ.

ಶುಭ ವಾಸ್ತುಗಾಗಿ
ವಾಸ್ತುವಿನಲ್ಲಿ ತುಳಸಿ, ಶಮಿ, ಮನಿ ಪ್ಲಾಂಟ್‌ಗಳನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಿದಂತೆ, ಅಪರಾಜಿತಾ ಸಸ್ಯವನ್ನು ಕೂಡ ಮಂಗಳಕರವೆಂದು ಪರಿಗಣಿಸಲಾಗಿದೆ. ಇದನ್ನು ಉದ್ಯಾನದಲ್ಲಿ ಬೆಳೆಸುವುದರಿಂದ, ಧನಾತ್ಮಕ ಶಕ್ತಿಯು ಮನೆಯ ಎಲ್ಲಾ ಮೂಲೆಗಳನ್ನು ತಲುಪುತ್ತದೆ. ಅಪರಾಜಿತಾ ಬಳ್ಳಿ ಅಥವಾ ಗಿಡವನ್ನು ಮನೆಯ ಉತ್ತರ ದಿಕ್ಕಿನಲ್ಲಿ ನೆಡಬೇಕು. ಹೀಗೆ ಮಾಡುವುದರಿಂದ ಮನೆಯಲ್ಲಿ ಸಂಪತ್ತು ಹೆಚ್ಚುತ್ತದೆ ಮತ್ತು ಸಕಾರಾತ್ಮಕತೆ ಉಳಿಯುತ್ತದೆ. 

ಶನಿ ದೋಷ ತಡೆಯಲು
ತಮ್ಮ ಜಾತಕದಲ್ಲಿ ಅರ್ಧಾರ್ಧ ಅಥವಾ ಶನಿ ದೋಷವನ್ನು ಹೊಂದಿರುವವರು ಖಂಡಿತವಾಗಿಯೂ ಅಪರಾಜಿತ ಹೂವನ್ನು ಶನಿ ದೇವರಿಗೆ ಅರ್ಪಿಸಬೇಕು. ಅಪರಾಜಿತಾ ಹೂವುಗಳನ್ನು ಶನಿಗೆ ಒಟ್ಟಿಗೆ ಇಡುವುದರಿಂದ ಶುಭ ಕಾರ್ಯವನ್ನು ಪ್ರಾರಂಭಿಸುವುದು ಯಶಸ್ವಿಯಾಗುತ್ತದೆ ಎಂದು ನಂಬಲಾಗಿದೆ. ಶನಿವಾರದಂದು ಶನಿದೇವನಿಗೆ ನೀಲಿ ಅಪರಾಜಿತಾ ಪುಷ್ಪಗಳ ಮಾಲೆಯನ್ನು ಅರ್ಪಿಸುವ ಮೂಲಕ ಶನಿದೇವನು ಪ್ರಸನ್ನನಾಗುತ್ತಾನೆ. ಇದರಿಂದಾಗಿ ಜೀವನದಲ್ಲಿ ಬರುವ ತೊಂದರೆಗಳು ಕೊನೆಗೊಳ್ಳುತ್ತವೆ. ಇದಲ್ಲದೆ, ಜೀವನದಲ್ಲಿ ಪ್ರಗತಿ, ಸಂತೋಷ ಮತ್ತು ಶಾಂತಿಗಾಗಿ ಸೋಮವಾರದಂದು ನೀಲಿ ಅಥವಾ ಬಿಳಿ ಅಪರಾಜಿತಾ ಹೂವುಗಳನ್ನು ಶಿವಲಿಂಗದ ಮೇಲೆ ಅರ್ಪಿಸಿ.

ರಕ್ಷಾ ಬಂಧನ ದಿನ ರಾಶಿ ಅನುಸಾರ ಸಹೋದರನಿಗೆ ರಾಖಿ ಕಟ್ಟಿ

ಉದ್ಯೋಗದಲ್ಲಿ ಬಡ್ತಿ ಪಡೆಯಲು
ಬಡ್ತಿ ಅಥವಾ ಹೊಸ ಉದ್ಯೋಗವನ್ನು ಪಡೆಯುವ ಪ್ರತಿಯೊಂದು ಪ್ರಯತ್ನವೂ ವಿಫಲವಾದರೆ, ಸಂದರ್ಶನದ ಮೊದಲು, 6 ಅಪರಾಜಿತಾ ಹೂವುಗಳನ್ನು ಮಾತೃದೇವತೆಗೆ ಅರ್ಪಿಸಿ. ನೀವು ಖಂಡಿತವಾಗಿಯೂ ಯಶಸ್ಸನ್ನು ಪಡೆಯುತ್ತೀರಿ.
 

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

Follow Us:
Download App:
  • android
  • ios