Asianet Suvarna News Asianet Suvarna News

ಮೀನ ರಾಶಿಯಿಂದ ಮೇಷ ರಾಶಿಗೆ ಸೂರ್ಯನ ಚಲನೆ: ನಿಮ್ಮ ರಾಶಿಗೆ ಏನು ಫಲ?

ಯುಗಾದಿಯ ಮರುದಿನ ಸೂರ್ಯನು ಮೀನ ರಾಶಿಯಿಂದ ಮೇಷ ರಾಶಿಗೆ ಬಂದಿದ್ದಾನೆ. ನಿಮ್ಮ ರಾಶಿಗೆ ಇದರಿಂದ ಯಾವ ಫಲವೋ ತಿಳಿದುಕೊಳ್ಳಿ.

Sun Transitiion from Pisces to Aries how it would affect on zodiac signs
Author
Bengaluru, First Published Apr 15, 2021, 5:01 PM IST

ಈ ಯುಗಾದಿಯ ಮರುದಿನ (ಸೌರಮಾನ ಯುಗಾದಿ)ಯಂದು ಸೂರ್ಯನು ಮೀನ ರಾಶಿಯಿಂದ ಮೇಷ ರಾಶಿಗೆ ಪ್ರವೇಶಿಸಿದ್ದಾನೆ. ಇದರಿಂದ ದ್ವಾದಶ ರಾಶಿಯವರ ಫಲಾಫಲಗಳಲ್ಲಿ ವ್ಯತ್ಯಾಸ ಉಂಟಾಗಲಿದೆ. ಬನ್ನಿ ನಿಮ್ಮ ಮುಂದಿನ ಒಂದು ತಿಂಗಳ ಫಲಾಫಲ ಹೇಗಿದೆ ತಿಳಿಯಿರಿ.

ಮೇಷ
ಜೀವನಮೌಲ್ಯವೇ ಪರಮ ಭಾಗ್ಯವು. ಸೂರ್ಯನ ಪಥ ಬದಲಾವಣೆ ಮೇಷ ರಾಶಿಯವರಿಗೆ ಯಶಸ್ಸು ನೀಡಲಿದೆ. ಜನಪ್ರಿಯತೆ ಹೆಚ್ಚಾಗುತ್ತದೆ. ಎಲ್ಲಾ ಕ್ಷೇತ್ರಗಳಲ್ಲೂ ಯಶಸ್ಸು ಸಿಗುತ್ತದೆ. ಅತ್ಯಂತ ಶುಭ ಫಲ ಉಂಟಾಗಲಿದೆ. ಈ ರಾಶಿಯವರ ಗೌರವ, ಪ್ರತಿಷ್ಠೆ ಹೆಚ್ಚುತ್ತದೆ. ಹೊಸ ಕೆಲಸವನ್ನು ಪ್ರಾರಂಭಿಸಲು ಉತ್ತಮ ಅವಕಾಶವಿದೆ. ಅವಿವಾಹಿತರಿಗೆ ಕಂಕಣ ಭಾಗ್ಯ ಕೂಡಿ ಬರಲಿದೆ. ದೇವಿಯ ಪೂಜೆ ಮಾಡುವ ಅಗತ್ಯವಿದೆ. ಕಟೀಲು, ಕೊಡಚಾದ್ರಿಗೆ ಹೋಗಿ ಪೂಜಿಸಬಹುದು.

ವೃಷಭ
ವೈದ್ಯರಾಜೋ ಯಮರಾಜ ಸಹೋದರಃ. ಭಯ ಬೇಡ. ಈ ರಾಶಿಯವರು ಶೀತಕಾರಿ ಕಾಯಿಲೆಗಳ ಬಾಧೆ ಇರುವುದರಿಂದ ಆರೋಗ್ಯದತ್ತ ಗಮನ ಹರಿಸಿ. ಹಳೆಯ ವ್ಯವಹಾರಗಳು ಮತ್ತು ಬಾಕಿ ಇರುವ ಕೆಲಸಗಳು ಇತ್ಯರ್ಥಗೊಳ್ಳುತ್ತವೆ. ಹಣಕಾಸಿನ ಹೂಡಿಕೆಯ ಸಾಧ್ಯತೆ ಇರುತ್ತದೆ. ಸಂಬಂಧಗಳು ಸುಧಾರಿಸುತ್ತವೆ. ಈ ಸಮಯದಲ್ಲಿ ನೀವು ಆಸ್ತಿಯನ್ನು ಖರೀದಿಸಬಹುದು. ದೇವರಿಗೆ ಬಾಕಿ ಇರುವ ಸೇವೆಗಳಿದ್ದರೆ ಕೂಡಲೇ ಅದನ್ನು ಸಲ್ಲಿಸಿ. ವಿಶೇಷವಾಗಿ ಸುಬ್ರಹ್ಮಣ್ಯ ದೇವರು ಇರುವ ಕ್ಷೇತ್ರದ ಹರಿಕೆಗಳು.

ಮಿಥುನ
ಪ್ರೀತಿ ಪ್ರೇಮ ಪ್ರಣಯದಲ್ಲಿ ಒಂದಾಗುವಿರಿ. ಮಿಥುನ ರಾಶಿಯವರು ಪ್ರೀತಿಗೆ ಸಂಬಂಧಿಸಿದ ವಿಷಯಗಳಲ್ಲಿ ಮುನಿಸು ಇದ್ದರೆ ಕೂಡಲೇ ಸರಿಪಡಿಸಿಕೊಳ್ಳಿ. ಆರ್ಥಿಕವಾಗಿ ಉನ್ನತಸ್ಥಾನಕ್ಕೆ ಏರಬಹುದು. ಆದರೂ ಕೂಡಾ ಖರ್ಚನ್ನು ನಿಯಂತ್ರಿಸುವ ಅಗತ್ಯವಿದೆ. ಕುಟುಂಬ ಸದಸ್ಯರೊಂದಿಗೆ ಭಿನ್ನಾಭಿಪ್ರಾಯ ಬರಲು ಬಿಡಬೇಡಿ. ಸರ್ಕಾರಿ ಕೆಲಸದಲ್ಲಿ ಯಶಸ್ಸು ಸಿಗುತ್ತದೆ. ಬಾಸ್‌ನೊಂದಿಗೆ ಜಗಳ ಬೇಡ. ಪದೋನ್ನತಿಗೆ ಬಾಸ್‌ನೊಂದಿಗೆ ಸೌಹಾರ್ದವೇ ಕಾರಣ.

ಕಟಕ
ಕುಟುಂಬ ಜೀವನದ ಸುಖದ ಮುಂದೆ ಬೇರಿನ್ನೇನೂ ಬೇಡ ಅನಿಸುವುದು. ಉದ್ಯೋಗದಲ್ಲಿ ಉನ್ನತ ಅಧಿಕಾರಿಗಳ ಬೆಂಬಲ ಸಿಗಲಿದೆ. ಪೋಷಕರ ಆರೋಗ್ಯದತ್ತ ಹೆಚ್ಚಿನ ಗಮನ ವಹಿಸಿ. ಆರ್ಥಿಕ ಸಮಸ್ಯೆಗಳು ನಿವಾರಣೆಯಾಗಲಿದೆ. ಪದೋನ್ನತಿಯಾಗಲಿದೆ. ಧನಲಾಭವಾಗುವ ಸಂಭವವಿದೆ. ಆದರೆ ಖರ್ಚು ಕೂಡಾ ಹೆಚ್ಚಾಗಬಹುದು. ಖರ್ಚಿನ ಮೇಲೆ ನಿಯಂತ್ರಣವಿರಲಿ. ಪರಸ್ಥಳದತ್ತ ಪ್ರಯಾಣವಿದ್ದರೆ ಅದನ್ನು ಮುಂದೆ ಹಾಕಿ. ಕುಟುಂಬದ ಸೌಖ್ಯದತ್ತ ಹೆಚ್ಚಿನ ಗಮನ ಕೊಡಿ. ಐಸೋಲೇಶನ್ ಮಾಡಿಕೊಳ್ಳಿ.

ಸಿಂಹ
ದುಡುಕು ಬಹಳ ಕೆಡುಕು ಎಂಬುದನ್ನು ನೀವು ಕಲಿಯುವ ಕಾಲವಿದು. ಕೋಪದ ಮೇಲೆ ನಿಯಂತ್ರಣವಿರಲಿ. ಧನಲಾಭದ ಸೂಚನೆಗಳು ಇವೆ. ಸಿಂಹ ರಾಶಿಯವರು ಬಾಕಿ ಉಳಿಸಿಕೊಂಡಿದ್ದ ಕಾರ್ಯಗಳು ಪೂರ್ಣಗೊಳ್ಳಲಿದೆ. ಅದೃಷ್ಟ ಮೇಲುಗೈ ಸಾಧಿಸುತ್ತದೆ ಮತ್ತು ನಿಮಗೆ ಬೆಂಬಲ ನೀಡುತ್ತದೆ. ಆಂಜನೇಯನ ಸೇವೆ ಅಥವಾ ಪೂಜೆ ಮಾಡುವುದು ಒಳ್ಳೆಯದು. ಇದರಿಂದ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳು ದೂರವೇ ಉಳಿಯುತ್ತವೆ. ವ್ಯಾಯಾಮ ಮಾಡುವುದು ಮರೆಯಬೇಡಿ. ಯೋಗ ಮಾಡಿ.

ಕನ್ಯಾ
ಬಾಳೆಹಣ್ಣಿನ ಸಿಪ್ಪೆಯನ್ನು ಬಿಸಾಡಿ ಒಳಗಿನ ಹಣ್ಣನ್ನು ಮಾತ್ರ ತಿನ್ನುವಂತೆ ಸುಖವನ್ನು ಸ್ವೀಕರಿಸಿ ದುಃಖವನ್ನು ದೂರವಿಡುವ ಕಲೆಯನ್ನು ಕಲಿಯುವ ಕಾಲ. ಕನ್ಯಾ ರಾಶಿಯವರಿಗೆ ಆರೋಗ್ಯದ ಜೊತೆಗೆ ಆರ್ಥಿಕ ತೊಂದರೆಗಳೂ ಇರಬಹುದು. ಮದುವೆಗೆ ಸಂಬಂಧಿಸಿದ ವಿಷಯಗಳಲ್ಲಿ ಸ್ವಲ್ಪ ವಿಳಂಬವಾಗಬಹುದು. ವಿವಾಹಿತ ಜೀವನದಲ್ಲಿಯೂ ಸಮಸ್ಯೆಗಳು ಉಂಟಾಗಬಹುದು. ಸಾಧ್ಯವಾದಷ್ಟು ಜಗಳ ಮತ್ತು ವಿವಾದಗಳಿಂದ ದೂರವಿರಿ.

ತುಲಾ
ದೇವರು ನಿಮಗೆ ಕೊಡಬೇಕೆಂದು ನಿಶ್ಚಯಿಸಿದರೆ ಕೊಟ್ಟೇ ಕೊಡುತ್ತಾನೆ ಎಂಬುದನ್ನು ನೀವು ಅರ್ಥ ಮಾಡಿಕೊಳ್ಳುವ ಕಾಲ. ವೈವಾಹಿಕ ಜೀವನದಲ್ಲಿ ಸಮಸ್ಯೆಗಳು ಎದುರಾಗಬಹುದು. ಗಂಡ ಹೆಂಡತಿಯರಲ್ಲಿ ಯಾರೊಬ್ಬರ ಆರೋಗ್ಯವೂ ಕೆಡಬಹುದು. ಈ ಸಮಯವು ಆರ್ಥಿಕವಾಗಿ ಉತ್ತಮವಾಗಿರುತ್ತದೆ. ಹಣ ಸಂಪಾದಿಸಲು ಉತ್ತಮ ಅವಕಾಶಗಳಿವೆ.

ಯುಗಾದಿ ಪ್ರತಿವರುಷದ ಪ್ರಾರಬ್ಧ ಮತ್ತು ಪ್ರೀತಿ, ನಮ್ಮನ್ನು ಹೊಸದಾಗಿಸಿಕೊಳ್ಳಲು ಒಂದು ನೆಪ ...

ವೃಶ್ಚಿಕ
ಎಲ್ಲ ಭಾಗ್ಯಗಳಲ್ಲಿ ಆರೋಗ್ಯವೇ ಭಾಗ್ಯ ಎಂಬುದನ್ನು ನೀವು ಕಂಡುಕೊಳ್ಳುತ್ತೀರಿ. ಹಳೆಯ ಆರೋಗ್ಯ ಸಮಸ್ಯೆಗಳು ಉಲ್ಬಣಿಸಬಹುದು. ಅವುಗಳನ್ನು ಪರಿಹರಿಸಿಕೊಳ್ಳಿ. ಉದ್ಯೋಗ ಮತ್ತು ಉದ್ಯೋಗದ ಬಗ್ಗೆ ಇಲ್ಲಿಯವರೆಗೆ ಇದ್ದ ಸಮಸ್ಯೆಗಳು ಕಡಿಮೆಯಾಗುತ್ತವೆ. ಶತ್ರುಗಳು ಸೋಲೋಪ್ಪಿಕೊಳ್ಳುತ್ತಾರೆ. ನ್ಯಾಯಾಲಯದ ತೀರ್ಪುಗಳು ನಿಮ್ಮ ಪರವಾಗಿ ಬರುತ್ತವೆ. ಆದಾಯದ ವಿಧಾನಗಳು ಹೆಚ್ಚಾಗುತ್ತವೆ. ಕೋಪದ ಮೇಲೆ ನಿಯಂತ್ರಣವಿರಲಿ.

Sun Transitiion from Pisces to Aries how it would affect on zodiac signs

ಧನು
ಶ್ರೀರಾಮನು ಧನುಸ್ಸನ್ನು ಹೆದೆಯೇರಿಸಲು ಕಿಂಚಿತ್ತೂ ಹಿಂದೆ ಮುಂದೆ ನೋಡಲಿಲ್ಲ. ಒಳಿತು ಮಾಡುವ ಅವಕಾಶವಿದ್ದರೆ ನೀವೂ ಹಿಂದೆ ಮುಂದೆ ನೋಡಬೇಡಿ. ಧನು ರಾಶಿ ಜನರಿಗೆ ಸಾಕಷ್ಟು ಯಶಸ್ಸು ಮತ್ತು ಗೌರವ ಸಿಗುತ್ತದೆ. ವೃತ್ತಿಜೀವನದಲ್ಲಿ ದೊಡ್ಡ ಬದಲಾವಣೆಯಾಗಬಹುದು. ಭಾರೀ ಲಾಭವಾಗಲಿದೆ. ಹಿರಿಯ ಸಹೋದರರೊಂದಿಗೆ ಭಿನ್ನಾಭಿಪ್ರಾಯ ಬಾರದಂತೆ ನೋಡಿಕೊಳ್ಳಿ. ದಾನ ದೇಣಿಗೆ ನೀಡಿ ಮತ್ತು ನಿಮಗೂ ಹಣ ಕಾಪಾಡಿಕೊಳ್ಳಿ.

ಶ್ರೀಹರಿ ದಶಾವತಾರ ಎತ್ತಲು, ಆದಿಶಕ್ತಿಯ ಪ್ರೇರಣೆಯೇ ಕಾರಣ.! ...

ಮಕರ
ಕಳೆದುಹೋದ ಕಾಲಕ್ಕೂ ಚೆಲ್ಲಿಹೋದ ಹಾಲಿಗೂ ಚಿಂತಿಸಿ ಫಲವಿಲ್ಲ. ಇಲ್ಲಿವರೆಗೆ ಎದುರಿಸುತ್ತಿದ್ದ ಸಮಸ್ಯೆಗಳು ಕೊನೆಯಾಗುತ್ತವೆ. ಅನೇಕ ಅನಿರೀಕ್ಷಿತ ಫಲಿತಾಂಶಗಳು ಕಂಡುಬರುತ್ತವೆ. ಈ ಸಮಯದಲ್ಲಿ, ನೀವು ಏರಿಳಿತಗಳನ್ನು ಎದುರಿಸಬೇಕಾಗಬಹುದು. ಕೌಟುಂಬಿಕ ಭಿನ್ನಾಭಿಪ್ರಾಯ ಮತ್ತು ಮಾನಸಿಕ ತೊಂದರೆ ಉಂಟಾಗಬಹುದು. ಕೆಲವು ಅಹಿತಕರ ಸುದ್ದಿಗಳನ್ನು ಕೇಳಬೇಕಾಗಬಹುದು.

ಕುಂಭ
ಕುಂಭದಲ್ಲಿ ಏನಿದೆ ಎಂಬುದು ಬಗ್ಗಿ ನೋಡಿದರೆ ಮಾತ್ರ ಗೊತ್ತಾಗುವುದು. ಹಾಗೇ ಅನುಭವಿಸುತ್ತಾ ಅನುಭವಿಸುತ್ತಾ ಜೀವನದಲ್ಲಿ ಮೇಲೆ ಬರುತ್ತೀರಿ ನೀವು. ಆರ್ಥಿಕವಾಗಿ ಯಶಸ್ಸು ಸಿಗಲಿದೆ. ನೀವು ಶತ್ರುಗಳ ಮೇಲೆ ವಿಜಯವನ್ನು ಪಡೆಯಲು ಸಾಧ್ಯವಾಗುತ್ತದೆ. ಧರ್ಮ ಮತ್ತು ದಾನ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ನಿಮ್ಮ ಯೋಜನೆಗಳನ್ನು ಗೌಪ್ಯವಾಗಿರಿಸಿಕೊಳ್ಳಿ.

ಮನೆಯಲ್ಲಿ ಶಿವಲಿಂಗವಿದ್ದರೆ, ಶಾಂತಿ, ನೆಮ್ಮದಿ ನೆಲೆಸುತ್ತದೆ.! ...

ಮೀನ

ಸೂರ್ಯ ನಿಮ್ಮ ರಾಶಿಯನ್ನು ತೊರೆದಿರಬಹುದು, ಆದರೆ ಆಶೀರ್ವದಿಸುವುದನ್ನು ಬಿಟ್ಟಿಲ್ಲ. ಇವರ ಆದಾಯ ಹೆಚ್ಚಾಗಬಹುದು. ಆದರೆ ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ, ವಿವಾದಗಳಿಂದ ದೂರವಿರಿ, ಯಾರಿಗೂ ಸಾಲ ನೀಡುವುದನ್ನು ತಪ್ಪಿಸಿ. ಆದಿತ್ಯ ಕವಚ ಮಂತ್ರವನ್ನು ಸದಾ ಪಠಿಸಿ. ಅಗಸ್ತ್ಯ ಮುನಿಗಳು ಮಂತ್ರಿಸಿ ಶ್ರೀರಾಮನಿಗೆ ಉಪದೇಶಿಸಿದ ಈ ಮಂತ್ರದ ಉಚ್ಚಾರಣೆಯಿಂದ ನಿಮಗೆ ಸಕಲ ಶ್ರೇಯಸ್ಸು ಉಂಟಾಗುವುದು.

Follow Us:
Download App:
  • android
  • ios