Asianet Suvarna News Asianet Suvarna News

Mahabharat Katha: ಬೇಕೆಂದೇ ಶ್ರೀಕೃಷ್ಣ ಅಭಿಮನ್ಯುವನ್ನು ರಕ್ಷಿಸಲಿಲ್ಲವೇ?

ಮಹಾಭಾರತದ ವೀರ ಯೋಧರಲ್ಲಿ ಅಭಿಮನ್ಯುವಿನ ಹೆಸರೂ ಒಂದು. ಅಭಿಮನ್ಯುವಿನೊಂದಿಗೆ ಕೌರವರು ಏನು ಮಾಡುತ್ತಾರೆಂದು ಶ್ರೀ ಕೃಷ್ಣನಿಗೆ ತಿಳಿದಿತ್ತು. ಆದರೂ ಅವನು ಅಭಿಮನ್ಯುವನ್ನು ಉಳಿಸಲಿಲ್ಲ. ಕಾರಣವೇನು?

Shri Krishna intentionally did not save Abhimanyus life know the reason skr
Author
First Published Apr 6, 2023, 10:36 AM IST

ಮಹಾಭಾರತದ ಅತಿ ಅನ್ಯಾಯದ ಸಾವುಗಳಲ್ಲಿ ಅಭಿಮನ್ಯುವಿನದೂ ಒಂದು. ಇನ್ನೂ ಹದಿ ಹರೆಯದ ಹುಡುಗನನ್ನು ಮೋಸದಿಂದ ಕೊಂದ ನೋವು ಕತೆ ಓದಿದ, ನೋಡಿದ ಪ್ರತಿಯೊಬ್ಬರಿಗೂ ಕಾಡುತ್ತದೆ. ಅರ್ಜುನ ಮತ್ತು ಸುಭದ್ರೆಗೆ ಜನಿಸಿದ ಅಭಿಮನ್ಯುವು ಶ್ರೀಕೃಷ್ಣನ ಸೋದರಳಿಯನಾಗಿದ್ದನು. ಯುದ್ಧದಲ್ಲಿ ಸಾಯುವ ಸಮಯದಲ್ಲಿ, ಅವನು ಮತ್ಸ್ಯ ಸಾಮ್ರಾಜ್ಯದ ರಾಜಕುಮಾರಿ ಉತ್ತರಾಳನ್ನು ವಿವಾಹವಾಗಿದ್ದನು.

ಅಭಿಮನ್ಯು ಚಿಕ್ಕ ವಯಸ್ಸಿನಲ್ಲಿಯೇ ಯುದ್ಧ ಕೌಶಲ್ಯದಲ್ಲಿ ಪ್ರವೀಣನಾಗಿದ್ದನು ಮತ್ತು ಮಹಾಭಾರತದ ಯುದ್ಧ ಪ್ರಾರಂಭವಾದಾಗ, ಅಭಿಮನ್ಯು ಅನೇಕ ಕೌರವ ಯೋಧರಿಗೆ ಸೋಲಿನ ರುಚಿಯನ್ನು ತೋರಿಸಿದ್ದನು. ಪಾಂಡವರು ಅರ್ಜುನನಿಗೆ ತಿಳಿಸದೆ ಯುದ್ಧದಲ್ಲಿ ಕೌರವರ ಚಕ್ರವ್ಯೂಹವನ್ನು ಪ್ರವೇಶಿಸಲು ಅಭಿಮನ್ಯುವನ್ನು ಯೋಜಿಸುತ್ತಿದ್ದಾಗ, ಮರುದಿನ ಯುದ್ಧಭೂಮಿಯಲ್ಲಿ ಅಭಿಮನ್ಯುವಿಗೆ ಏನಾಗುತ್ತದೆ ಎಂದು ಶ್ರೀ ಕೃಷ್ಣನಿಗೆ(Sri Krishna) ಮೊದಲೇ ತಿಳಿದಿತ್ತು. ಏಕೆಂದರೆ, ಪಾಂಡವರಂತೆಯೇ, ಅಭಿಮನ್ಯುವಿಗೆ ಎಲ್ಲಾ ರೀತಿಯ ಯುದ್ಧಗಳಲ್ಲಿ ಶ್ರೀಕೃಷ್ಣ ಮತ್ತು ಅರ್ಜುನನಿಂದಲೂ ತರಬೇತಿ ನೀಡಲಾಗಿತ್ತು. ನಂತರ ಅವನು ಕೃಷ್ಣನ ಮಗ ಪ್ರದ್ಯುಮ್ನನಿಂದ ತರಬೇತಿ ಪಡೆದನು. ಅವನು ತನ್ನ ತಾಯಿಯಾದ ಸುಭದ್ರೆಯ ಗರ್ಭದಲ್ಲಿದ್ದಾಗ ಚಕ್ರವ್ಯೂಹವನ್ನು ಬೇಧಿಸುವ ಕಲೆಯನ್ನು ಕಲಿತನು. ಆದರೆ, ಚಕ್ರವ್ಯೂಹದಿಂದ ಹೊರ ಬರುವ ವಿಷಯವನ್ನು ಅವನು ಕಲಿಯಲಿಲ್ಲ. 

ಆದರೆ ಇದರ ನಂತರವೂ ಶ್ರೀ ಕೃಷ್ಣನು ಪಾಂಡವರಿಗೆ ಈ ಬಗ್ಗೆ ಎಚ್ಚರಿಕೆ ನೀಡಲಿಲ್ಲ ಅಥವಾ ಅಭಿಮನ್ಯುವನ್ನು ರಕ್ಷಿಸಲಿಲ್ಲ.
ಶ್ರೀ ಕೃಷ್ಣನ ಈ ನಡೆ ಹಿಂದಿನ ಕಾರಣವೇನು? ಚಂದ್ರನ ಹಠಮಾರಿತನ ಇದಕ್ಕೆ ಕಾರಣ ಎನ್ನಲಾಗುತ್ತದೆ.

Akshaya Tritiya 2023 ಯಾವಾಗ? ಚಿನ್ನ ಖರೀದಿಗೆ ಶುಭ ಸಮಯವೇನು?

ಕೃಷ್ಣ ಮತ್ತು ಅಭಿಮನ್ಯು (Krishna And Abhimanyu)
ವಾಸ್ತವವಾಗಿ, ಮಹಾಭಾರತದ ಪ್ರಕಾರ, ಚಂದ್ರನಿಗೆ ವರ್ಚಸ್ ಎಂಬ ಮಗನಿದ್ದನು. ಪಾಂಡವ ಕುಲದಲ್ಲಿ ಪ್ರತಿ ದೇವತೆಯ ಮಕ್ಕಳು ಹುಟ್ಟುತ್ತಾರೆ ಎಂದು ನಿರ್ಧರಿಸಿದಾಗ, ಚಂದ್ರನಿಗೆ ತನ್ನ ಮಗ ಪಾಂಡವ ಕುಲದಲ್ಲಿ ಹುಟ್ಟುವುದು ಇಷ್ಟವಿರಲಿಲ್ಲ, ಆದರೆ ಚಂದ್ರನು ವಿಷ್ಣುವಿನ ಆಜ್ಞೆಯನ್ನು ಧಿಕ್ಕರಿಸಲು ಬಯಸಲಿಲ್ಲ. ಹಾಗಾಗಿ ಒಲ್ಲದ ಮನಸ್ಸಿನಿಂದಲೇ ಅವನು ತನ್ನ ಮಗನನ್ನು ಪಾಂಡವ ಕುಲಕ್ಕೆ ಕಳುಹಿಸಲು ಒಪ್ಪಿದನು.

ಚಂದ್ರಮ ಇತರ ದೇವತೆಗಳಿಗೆ ತನ್ನ ಮಗ ವರ್ಚಸ್ಸು ಅರ್ಜುನನ ಮಗನಾಗಿ ಅಭಿಮನ್ಯುವಾಗಿ ಹುಟ್ಟುತ್ತಾನೆ ಮತ್ತು ಭೂಮಿಯ ಮೇಲೆ 16 ವರ್ಷ ಮಾತ್ರ ಇರುತ್ತಾನೆ ಎಂದು ಷರತ್ತು ಹಾಕಿದನು. ಅದಕ್ಕಿಂತ ಹೆಚ್ಚು ಕಾಲ ತಾನು ಅವನನ್ನು ಬಿಟ್ಟು ಇರೆನು ಎಂದು ಹೇಳಿದನು. 

ಹೀಗಾಗಿ ಶ್ರೀಕೃಷ್ಣನು ಚಂದ್ರನ ಕೋರಿಕೆ ಈಡೇರಿಸುವ ಸಲುವಾಗಿ ಪದ್ಮವ್ಯೂಹ ಅಥವಾ ಚಕ್ರವ್ಯೂಹವನ್ನು ಪ್ರವೇಶಿಸುವವರೆಗೆ ಅಥವಾ ಒಡೆಯುವವರೆಗೆ ಅರ್ಜುನ ಮತ್ತು ಸುಭದ್ರೆಯ ನಡುವಿನ ಸಂಭಾಷಣೆಯನ್ನು ಕೇಳಲು ಅಭಿಮನ್ಯುಗೆ ಅವಕಾಶ ಮಾಡಿಕೊಟ್ಟನು. ಅಲ್ಲದೆ, ಚಕ್ರವ್ಯೂಹವನ್ನು ನಾಶಮಾಡಲು ಮತ್ತು ಹೊರಹಾಕಲು ಬೇಕಾದ ತಂತ್ರವನ್ನು ಅರ್ಥ ಮಾಡಿಕೊಳ್ಳುವ ಮೊದಲು, ಕೃಷ್ಣನು ಅರ್ಜುನನನ್ನು ದೂರ ಕರೆದನು. ಹಾಗಾಗಿ ಅಭಿಮನ್ಯುವಿಗೆ ಇದರ ಬಗ್ಗೆ ಅರಿವೇ ಇರಲಿಲ್ಲ.

ಮಹಾಭಾರತ ಯುದ್ಧದ 13ನೇ ದಿನದಂದು, ಅಭಿಮನ್ಯು ತನ್ನ ಶೌರ್ಯವನ್ನು ತೋರಿಸಿ ವೀರಗತಿಯನ್ನು ಸಾಧಿಸಿದನು ಮತ್ತು ಶ್ರೀ ಕೃಷ್ಣನು ಉದ್ದೇಶಪೂರ್ವಕವಾಗಿ ಅಭಿಮನ್ಯುವನ್ನು ಕೌರವರ ಮೋಸದಿಂದ ರಕ್ಷಿಸಲಿಲ್ಲ.

ಆದ್ದರಿಂದ ಈ ಕಾರಣಕ್ಕಾಗಿ ಮಹಾಭಾರತ ಯುದ್ಧದಲ್ಲಿ ಶ್ರೀ ಕೃಷ್ಣನು ಅಭಿಮನ್ಯುವಿನ ಪ್ರಾಣವನ್ನು ಉಳಿಸಲಿಲ್ಲ.

Hanuman Jayanti 2023: ಶನಿ ದೋಷ ಕಳೆದುಕೊಳ್ಳುವ ಅವಕಾಶ ಮಿಸ್ ಮಾಡ್ಕೋಬೇಡಿ!

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

Follow Us:
Download App:
  • android
  • ios