Sri Raghavendra Swamy Mutt : ಆಗಸ್ಟ್ 29 ರಿಂದ ಸೆಪ್ಟೆಂಬರ್ 4ರವರೆಗೆ ರಾಯರ ಆರಾಧನಾ ಮಹೋತ್ಸವ
ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ 352ನೇ ಆರಾಧನಾ ಮಹೋತ್ಸವವನ್ನು ಆ.29ರಿಂದ ಸೆ.4ರವರೆಗೆ ಮಠದಲ್ಲಿ ನಡೆಸುತ್ತಿದ್ದು, ಅದ್ಧೂರಿ ಆಚರಣೆಗೆ ಅಗತ್ಯವಾದ ಎಲ್ಲ ರೀತಿಯ ತಯಾರಿಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ಮಠದ ಪೀಠಾಧಿಪತಿ ಡಾ.ಸುಬುಧೇಂದ್ರ ತೀರ್ಥರು ತಿಳಿಸಿದರು.

ರಾಯಚೂರು (ಆ.17) :ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ 352ನೇ ಆರಾಧನಾ ಮಹೋತ್ಸವವನ್ನು ಆ.29ರಿಂದ ಸೆ.4ರವರೆಗೆ ಮಠದಲ್ಲಿ ನಡೆಸುತ್ತಿದ್ದು, ಅದ್ಧೂರಿ ಆಚರಣೆಗೆ ಅಗತ್ಯವಾದ ಎಲ್ಲ ರೀತಿಯ ತಯಾರಿಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ಮಠದ ಪೀಠಾಧಿಪತಿ ಡಾ.ಸುಬುಧೇಂದ್ರ ತೀರ್ಥರು ತಿಳಿಸಿದರು.
ಮಠದಲ್ಲಿ ಬುಧವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಆರಾಧನಾ ಮಹೋತ್ಸವ ಹಿನ್ನೆಲೆಯಲ್ಲಿ ಮಠದಲ್ಲಿ ಸಪ್ತರಾತ್ರೋತ್ಸವ ಜರುಗಲಿದ್ದು ನಿತ್ಯ ಧಾರ್ಮಿಕ, ಆಧ್ಯಾತ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಆಂಧ್ರಪ್ರದೇಶ ರಾಜ್ಯಪಾಲ ನ್ಯಾಯಮೂರ್ತಿ ಅಬ್ದುಲ್ ನಜೀರ್ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ವಿದ್ವಾನ್ ಶ್ರೀರಾಮ ವಿಠ್ಠಲಚಾರ್ಯ, ವಿದ್ವಾನ್ ಗರಿಕಪಾಟಿ ನರಸಿಂಹರಾವ್, ಎನ್. ಚಂದ್ರಶೇಖರನ್ ಹಾಗೂ ಎಂಐಟಿ ಸಂಸ್ಥಾಪಕ ಡಾ.ವಿಶ್ವನಾಥ್ ಡಿ.ಕಾರತ್ ಅವರಿಗೆ ರಾಘವೇಂದ್ರ ಅನುಗ್ರಹ ಪ್ರಶಸ್ತಿ ಪ್ರದಾನ ಮಾಡಿ ಸನ್ಮಾನಿಸಲಾಗುತ್ತದೆ ಎಂದು ಹೇಳಿದರು.
ಗುರುವಾರ ರಾಯರ ನೆನೆಯಮ್ಮ.... ಮಂತ್ರಾಲಯದಲ್ಲಿ ರಥೋತ್ಸವದ ದಿನವಿದು
ಶಕ್ತಿ ಯೋಜನೆ ಬಗ್ಗೆ ಗಮನ ಅಗತ್ಯ: ಇದೇ ವೇಳೆ, ರಾಜ್ಯ ಸರ್ಕಾರದ ಗ್ಯಾರಂಟಿ ‘ಶಕ್ತಿ’ ಯೋಜನೆ ಬಗ್ಗೆ ಪ್ರತಿಕ್ರಿಯೆ ನೀಡಿ, ಈ ಯೋಜನೆಯ ಪರಿಣಾಮ-ದುಷ್ಪರಿಣಾಮಗಳನ್ನು ನಾವು ಗಮನಿಸಬೇಕು. ಸರ್ಕಾರದ ಮೇಲೆ ಯೋಜನೆಯಿಂದ ಆರ್ಥಿಕ ಆಗುತ್ತದೆ. ಆದರೆ ಮಹಿಳೆಯರು ಹೊರಗಡೆ ಓಡಾಡುವ ಸೌಲಭ್ಯವೂ ಇದೆ. ಇದರಿಂದಾಗಿ ಮನೆಯಲ್ಲಿರುವ ಪುರುಷರಿಗೆ ಕೆಲ ತೊಂದರೆಗಳಾಗುತ್ತಿವೆ. ಈ ಎಲ್ಲವನ್ನು ಫಲಾನುಭವಿಗಳು ಹಾಗೂ ಸರ್ಕಾರಗಳು ಗಮನದಲ್ಲಿಟ್ಟುಕೊಳ್ಳಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಬೆಂಗಳೂರಿನ ಭಕ್ತರೊಬ್ಬರು ಮಂತ್ರಾಲಯದಲ್ಲಿ 100 ಕೊಠಡಿಗಳ ವಸತಿ ಸಮುಚ್ಚಯ ನಿರ್ಮಾಣ ಮಾಡಲು ಮುಂದಾಗಿದ್ದು, ಅದಕ್ಕೆ ಆ.21ರಂದು ಅಡಿಗಲ್ಲು ಹಾಕಲಾಗುವುದು. ಅಲ್ಲದೆ, 200 ಕಾರುಗಳಿಗೆ ಸ್ಥಳಾವಕಾಶ ಇರುವ ಪಾರ್ಕಿಂಗ್ ವ್ಯವಸ್ಥೆ, 3 ಭಾಗಗಳಲ್ಲಿ ಇಂಟರ್ ಲಾಕಿಂಗ್ ವ್ಯವಸ್ಥೆ, ಬೃಂದಾವನ ಗಾರ್ಡನ್ ಹಿಂಭಾಗದಲ್ಲಿ ವಸತಿ ಸಮುದಾಯ ಭವನ, ಮಂಚಾಲಮ್ಮ ದೇವಸ್ಥಾನ ಪಕ್ಕದ ನದಿಗೆ ತೆರಳುವ ದಾರಿಯಲ್ಲಿ ಕಾರಿಡಾರ್, ಹರಿಕಥಾಮೃತ ಸಂಪೂರ್ಣ ಮಾಹಿತಿ ಒಳಗೊಂಡ ಮ್ಯೂಸಿಯಂ ಉದ್ಘಾಟನೆ ಸೇರಿ ಹತ್ತು ಹಲವು ಯೋಜನೆಗಳನ್ನು ರೂಪಿಸಿದ್ದು, ಅವುಗಳಿಗೆ ಶೀಘ್ರ ಚಾಲನೆ ನೀಡÜಲಾಗುವುದು ಎಂದು ಹೇಳಿದರು.
ಮಂತ್ರಾಲಯದಲ್ಲಿ ಸಾಮೂಹಿಕ ಅಷ್ಟೋತ್ತರ ಪಾರಾಯಣ
ತುಂಗಭದ್ರಾ ನದಿ ಖಾಲಿ!
ಪ್ರತಿ ವರ್ಷ ರಾಯರ ಆರಾಧನಾ ವೇಳೆ ತುಂಬಿ ಹರಿಯುತ್ತಿದ್ದ ತುಂಗಭದ್ರಾ ನದಿ ಈ ವರ್ಷ ಮಳೆ ಕೊರತೆಯಿಂದ ಖಾಲಿ ಖಾಲಿಯಾಗಿದೆ. ತುಂಗಭದ್ರಾ ನದಿಯಲ್ಲಿ ಮಿಂದು ರಾಯರ ದರ್ಶನ ಪಡೆಯಲೆಂದು ಬರುತ್ತಿದ್ದ ಭಕ್ತರು. ಈ ಬಾರಿ ಮಂತ್ರಾಲಯ ಬಳಿ ಇರುವ ತುಂಗಭದ್ರಾ ನದಿ ಖಾಲಿಯಾಗಿ ನಿರಾಶೆ ಮೂಡಿಸಿದೆ. ಎತ್ತ ನೋಡಿದ್ರೂ ಬರೀ ಕಲ್ಲುಬಂಡೆಗಳ ದರ್ಶನ. ನದಿಯಲ್ಲಿ ಅಲ್ಪಸ್ವಲ್ಪ ನೀರು ಲಭ್ಯವಿದ್ದು. ಭಕ್ತರು ಪುಣ್ಯಸ್ನಾನಕ್ಕಾಗಿ ತುಂಗಭದ್ರಾ ನದಿಯಲ್ಲಿ ಅಲೆದಾಡುವಂತಾಗಿದೆ. ಹರಿಯುವ ನೀರಿನಲ್ಲಿ ಭಕ್ತರು ಸ್ನಾನ ಮಾಡಲು ಹರಸಾಹಸ ಪಡುತ್ತಿದ್ದಾರೆ.