Asianet Suvarna News Asianet Suvarna News

Hanuman Worship Tips: ಮಂಗಳವಾರ ಆಂಜನೇಯನನ್ನು ಈ ರೀತಿ ಪೂಜಿಸಿದ್ರೆ ಪ್ರಗತಿ ಖಚಿತ

ಆಂಜನೇಯನನ್ನು ನೀವು ಯಾವಾಗ ಬೇಕಾದರೂ ಪೂಜಿಸಬಹುದು. ಆದರೆ, ಮಂಗಳವಾರ ಆಂಜನೇಯನ ಪೂಜೆಗೆ ವಿಶೇಷ ಮಹತ್ವವಿದೆ.. ಈ ದಿನ ಆಂಜನೇಯನನ್ನು ಹೇಗೆ ಪೂಜಿಸಿದರೆ ಜೀವನದಲ್ಲಿ ಯಶಸ್ಸು ಖಚಿತ ನೋಡೋಣ..

Lord Hanuman Worship Tips 2022 do this every Tuesday to get rid of all problems skr
Author
First Published Sep 20, 2022, 10:51 AM IST

ಆಂಜನೇಯನನ್ನು ಯಾವುದೇ ಸಮಯದಲ್ಲಿ ಪೂಜಿಸಬಹುದು, ಅವನ ಕೃಪೆ ಯಾವಾಗಲೂ ನಮ್ಮ ಮೇಲೆ ಇರುತ್ತದೆ. ಆಂಜನೇಯನು ಶಿವನ ಅವತಾರವಾಗಿದ್ದಾನೆ. ಆತ ಚಿರಂಜೀವಿಯಾಗಿದ್ದು, ಇನ್ನೂ ಆತ ಜೀವಂತವಾಗಿ ಓಡಾಡಿಕೊಂಡಿದ್ದಾನೆ ಎಂಬ ನಂಬಿಕೆ ಇದೆ. ಮಂಗಳವಾರವನ್ನು ವಿಶೇಷವಾಗಿ ಆಂಜನೇಯನ ಪೂಜೆಗೆ ಮೀಸಲಿಡಲಾಗಿದೆ. ಮಂಗಳವಾರದ ಪೂಜೆಯಿಂದ ಅಷ್ಟಸಿದ್ಧಿ ಮತ್ತು ನವನಿಧಿ ಕೊಡುವ ಹನುಮಂತನ ಜೊತೆಗೆ ಮಂಗಳ ಕುಮಾರನ ಆಶೀರ್ವಾದವೂ ಸುರಿಸುತ್ತದೆ. ಹಿಂದೂ ಧರ್ಮಗ್ರಂಥಗಳ ಪ್ರಕಾರ, ಮಂಗಳವಾರ ಮತ್ತು ಶನಿವಾರವನ್ನು ಬಜರಂಗಬಲಿಯ ದಿನವೆಂದು ಪರಿಗಣಿಸಲಾಗುತ್ತದೆ. ಮಂಗಳವಾರ ಭಗವಾನ್ ಹನುಮಾನ್ ಮತ್ತು ಕುಜನನ್ನು ಪೂಜಿಸುವ ಸರಳ ಮತ್ತು ಪರಿಣಾಮಕಾರಿ ವಿಧಾನದ ಬಗ್ಗೆ ವಿವರವಾಗಿ ತಿಳಿಯೋಣ.

ಮಂಗಳವಾರದ ಪೂಜೆ(Tuesday worship)
ಮಂಗಳವಾರದಂದು ಸುಂದರಕಾಂಡವನ್ನು ಓದುವುದು ಬಹಳ ಪ್ರಾಮುಖ್ಯತೆಯನ್ನು ಹೊಂದಿದೆ. ಏಕೆಂದರೆ ಶ್ರೀ ರಾಮಚರಿತ ಮಾನಸದ ಸುಂದರಕಾಂಡವನ್ನು ಪಠಿಸುವುದರಿಂದ ಭಗವಾನ್ ಹನುಮಾನ್ ಮಾತ್ರವಲ್ಲದೆ ಭಗವಾನ್ ಶ್ರೀರಾಮನ ಆಶೀರ್ವಾದವೂ ದೊರೆಯುತ್ತದೆ ಎಂದು ನಂಬಲಾಗಿದೆ. ಹಾಗಾಗಿ ಸುಂದರಕಾಂಡ ಪಠಣದ ಬಳಿಕ ಆಂಜನೇಯನ ಪೂಜೆಯನ್ನು ಭಕ್ತಿಯಿಂದ ಮಾಡಿ.

ಬ್ರಹ್ಮಚರ್ಯ ಆಚರಿಸಿ
ಆಂಜನೇಯನ ಆರಾಧನೆಯಲ್ಲಿ ಬ್ರಹ್ಮಚರ್ಯವನ್ನು ಅನುಸರಿಸಿ. ಈ ದಿನ ನೀವು ಯಾರನ್ನೂ ಯಾವ ವಿಷಯಕ್ಕಾಗಿಯೂ ನೋಯಿಸಬಾರದು. ಈ ದಿನದಂದು ನೀವು ಹನುಮಾನ್ ಚಾಲೀಸಾ(Hanuman Chalisa)ವನ್ನು ಭಕ್ತಿ ಮತ್ತು ನಂಬಿಕೆಯಿಂದ ಏಳು ಬಾರಿ ಪಠಿಸಿ. ಇದನ್ನು ಮಾಡುವ ವ್ಯಕ್ತಿಯ ಮೇಲೆ ಭಜರಂಗಿಯ ವಿಶೇಷ ಆಶೀರ್ವಾದದಿಂದಾಗಿ ಜೀವನದಲ್ಲಿ ಸಂತೋಷ ತುಂಬುತ್ತದೆ. 

ಯಾವ ಭಂಗಿಯ ಆಂಜನೇಯನನ್ನು ಪೂಜಿಸಬೇಕು?
ಭಗವಾನ್ ಹನುಮಂತನನ್ನು ಹಲವು ರೂಪಗಳಲ್ಲಿ ಪೂಜಿಸಲಾಗುತ್ತದೆ. ಯಾವ ರೂಪದಲ್ಲಿ ಅವನನ್ನು ಭಕ್ತನು ಪೂಜಿಸುತ್ತಾನೋ, ಆ ರೂಪದಲ್ಲಿಯೇ ಆಂಜನೇಯನು ಅವನೊಂದಿಗೆ ಇದ್ದು ಅನುಗ್ರಹವನ್ನು ನೀಡುತ್ತಾನೆ. ಮನಸ್ಸು ಶಾಂತವಾಗಿರಲು ಧ್ಯಾನ ಭಂಗಿಯಲ್ಲಿರುವ ಹನುಮಂತನ ಚಿತ್ರವನ್ನು ಪೂಜಿಸಬೇಕು. ಈ ರೀತಿ ಮಾಡುವುದರಿಂದ ವ್ಯಕ್ತಿಯು ಶಕ್ತಿ ಮತ್ತು ಮನಸ್ಸಿನ ಶಾಂತಿಯನ್ನು ಪಡೆಯುತ್ತಾನೆ.
ಇನ್ನು, ಭಗವಾನ್ ರಾಮನ ಸೇವೆಯಲ್ಲಿ ಮಗ್ನವಾಗಿರುವ ಆಂಜನೇಯನನ್ನು ಆರಾಧಿಸುವ ಮೂಲಕ, ಒಬ್ಬ ವ್ಯಕ್ತಿಯು ಜೀವನದ ಎಲ್ಲಾ ಕ್ಷೇತ್ರಗಳಲ್ಲಿ ಯಶಸ್ಸು ಮತ್ತು ಸಂತೋಷ(Success and Happiness)ವನ್ನು ಪಡೆಯುತ್ತಾನೆ. 

ಭಯ ದೂರ ಮಾಡಲು
ಹನುಮಂತನಿಗೆ ಸಿಂಧೂರ ಎಂದರೆ ತುಂಬಾ ಇಷ್ಟ. ಅವನ ಆಶೀರ್ವಾದವನ್ನು ಪಡೆಯಲು, ಅವನ ದೇವಸ್ಥಾನಕ್ಕೆ ಹೋಗಿ ಮತ್ತು ಆತನಿಗೆ ಹಳದಿ ಸಿಂಧೂರವನ್ನು ಅರ್ಪಿಸಿ. ಹೀಗೆ ಮಾಡುವುದರಿಂದ ಶ್ರೀರಾಮ ಭಕ್ತ ಹನುಮಂತನಿಗೆ ತುಂಬಾ ಸಂತೋಷವಾಗುತ್ತದೆ. ಸಿಂಧೂರವನ್ನು ಅರ್ಪಿಸುವುದರಿಂದ ಎಲ್ಲಾ ದುಃಖಗಳಿಂದ ಮುಕ್ತಿ ಸಿಗುತ್ತದೆ ಮತ್ತು ಜೀವನದ ಭಯ ದೂರವಾಗುತ್ತದೆ ಎಂದು ಹೇಳಲಾಗುತ್ತದೆ.

Mysuru Dasara 2022: ಮೈಸೂರು ಜಂಬೂ ಸವಾರಿಗೆ ನಂದಿಗಿರಿ ಸ್ತಬ್ಧಚಿತ್ರ

ಹಣದ ಕೊರತೆ ನೀಗಲು
ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಜೀವನದಲ್ಲಿ ಹಣದ ಕೊರತೆ ಇರಬಾರದು ಎಂದು ಬಯಸುತ್ತಾನೆ. ಸಂಪತ್ತಿನ ಈಡೇರಿಕೆಗಾಗಿ ಶ್ರಮಿಸುತ್ತಾನೆ. ಮಂಗಳವಾರ ಬೆಳಗ್ಗೆ ಆಲದ ಮರದ ಎಲೆಯನ್ನು ಕಿತ್ತು ಗಂಗಾಜಲದಿಂದ ತೊಳೆದು ಹನುಮಂತನಿಗೆ ಅರ್ಪಿಸಿದರೆ ಸಂಪತ್ತು ಸಿಗುತ್ತದೆ. ಹೀಗೆ ಮಾಡುವುದರಿಂದ ಹನುಮಂತನ ಕೃಪೆಯೊಂದಿಗೆ ತಾಯಿ ಲಕ್ಷ್ಮಿಯ ಕೃಪೆಯೂ ಉಳಿಯುತ್ತದೆ.

ಇದಲ್ಲದೆ 11 ಅಶ್ವತ್ಥ ಎಲೆಗಳನ್ನು ತೆಗೆದುಕೊಂಡು ಶುದ್ಧ ನೀರಿನಿಂದ ತೊಳೆಯಿರಿ. ಬಳಿಕ ಪ್ರತಿ ಎಲೆಯಲ್ಲೂ 'ಜೈ ಶ್ರೀರಾಮ' ಎಂದು ಗಂಧದಿಂದ ಬರೆಯಿರಿ. ಇದರ ಹಾರ ಮಾಡಿ ಆಂಜನೇಯನಿಗೆ ಅರ್ಪಿಸಿ. ಇದರಿಂದ ಹಣಕಾಸಿನ ಸಂಬಂಧಿ ಸಮಸ್ಯೆಗಳಿಂದ ಪಾರಾಗುವಿರಿ. 
 

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

Follow Us:
Download App:
  • android
  • ios