2025 ಮಹಾಕುಂಭದಲ್ಲಿ, ಸಿಆರ್ಪಿಎಫ್ ಭಕ್ತರ ಸುರಕ್ಷತೆ, ಜನಸಂದಣಿ ನಿಯಂತ್ರಣ ಮತ್ತು ಮಾರ್ಗದರ್ಶನದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಈ ಕುರಿತ ವಿಶೇಷ ಸ್ಟೋರಿ ಇಲ್ಲಿದೆ.
ಪ್ರಯಾಗರಾಜ್(ಫೆ.17) ಮಹಾಕುಂಭ ಮೇಳದಲ್ಲಿ ಈಗಾಗಲೇ 50 ಕೋಟಿಗೂ ಅದಿಕ ಭಕ್ತರು ಪುಣ್ಯಸ್ನಾನ ಮಾಡಿದ್ದಾರೆ. ದೇಶದ ಮೂಲೆ ಮೂಲೆಯಿಂದ, ವಿದೇಶಗಳಿಂದಲೂ ಭಕ್ತರು ಆಗಮಿಸಿ ಪುಣ್ಯಸ್ನಾನ ಮಾಡಿದ್ದಾರೆ. ಹಿಂದೆಂದೂ ಕಾಣದಂತ ಆಯೋಜನೆಯನ್ನು ಸಿಎಂ ಯೋಗಿ ಆದಿತ್ಯನಾಥ್ ಸರ್ಕಾರ ಮಾಡಿದೆ. ಭಕ್ತರ ಅನುಕೂಲಕ್ಕಾಗಿ ವಿಶೇಷ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ. ಕೋಟ್ಯಾಂತರ ಭಕ್ತರು ಆಗಮಿಸುವ ಹಿನ್ನಲೆಯಲ್ಲಿ ಭಾರಿ ಭದ್ರತಾ ವ್ಯವಸ್ಥೆಯನ್ನು ಕೈಗೊಳ್ಳಲಾಗಿದೆ. ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಕ್ಯಾಮೆರಾ ಅಳಪಡಿಸಲಾಗಿದೆ. ಕಂಟ್ರೋಲ್ ರೂಂ ಮುಖಾಂತರ ಸಂಪೂರ್ಣ ಪ್ರದೇಶವನ್ನು ಭದ್ರತಾ ಪಡೆಗಳು ನಿಯಂತ್ರಣದಲ್ಲಿಟ್ಟಿದೆ. ಮಹಾಕುಂಭದ ವೈಭವದ ನಡುವೆ ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್ಪಿಎಫ್) ಭಕ್ತಾದಿಗಳ ಸುರಕ್ಷತೆ ಮತ್ತು ಸೇವೆಗಾಗಿ ಸಂಪೂರ್ಣ ಸನ್ನದ್ಧತೆಯಿಂದ ನಿಯೋಜನೆಗೊಂಡಿದೆ. ಅವರ ಸೇವಾ ಮನೋಭಾವ ಮತ್ತು ರಾಷ್ಟ್ರಪ್ರೇಮದ ಅನನ್ಯ ಉದಾಹರಣೆ ಮಹಾಕುಂಭದಲ್ಲಿ ಕಾಣಬಹುದು.
ಸಿಆರ್ಪಿಎಫ್ನ ಯೋಧರು 24 ಗಂಟೆಗಳ ಕಾಲ ಘಾಟ್ಗಳು, ಮೇಳ ಪ್ರದೇಶ ಮತ್ತು ಪ್ರಮುಖ ಮಾರ್ಗಗಳಲ್ಲಿ ಸುರಕ್ಷತಾ ವ್ಯವಸ್ಥೆಯನ್ನು ನಿರ್ವಹಿಸುತ್ತಿದ್ದಾರೆ. ಆಧುನಿಕ ತಂತ್ರಜ್ಞಾನ ಮತ್ತು ಜಾಗರೂಕ ದೃಷ್ಟಿಯಿಂದ ಯಾವುದೇ ತುರ್ತು ಪರಿಸ್ಥಿತಿಯನ್ನು ನಿಭಾಯಿಸಲು ಸಂಪೂರ್ಣ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಜನಸಂದಣಿ ನಿಯಂತ್ರಣ ಮತ್ತು ಮಾರ್ಗದರ್ಶನದಲ್ಲಿ ಪ್ರಮುಖ ಪಾತ್ರ
ಭಕ್ತಾದಿಗಳ ಭಾರಿ ಜನಸಂದಣಿಯ ನಡುವೆ ಸಿಆರ್ಪಿಎಫ್ನ ಯೋಧರು ಮಾರ್ಗದರ್ಶನ ಮತ್ತು ಸಹಾಯವನ್ನು ಒದಗಿಸುತ್ತಿದ್ದಾರೆ. ಅವರ ಸೌಮ್ಯ ವರ್ತನೆ ಮತ್ತು ಸಿದ್ಧತೆ ಭಕ್ತಾದಿಗಳಿಗೆ ಆರಾಮದಾಯಕ ಅನುಭವವನ್ನು ಒದಗಿಸುತ್ತಿದೆ. ಯಾವುದೇ ತುರ್ತು ಪರಿಸ್ಥಿತಿಯನ್ನು ನಿಭಾಯಿಸಲು ಸಿಆರ್ಪಿಎಫ್ನ ವಿಪತ್ತು ನಿರ್ವಹಣಾ ತಂಡ ಸಂಪೂರ್ಣ ಸನ್ನದ್ಧತೆಯಿಂದ ನಿಯೋಜನೆಗೊಂಡಿದೆ. ಕುಂಭಮೇಳದಲ್ಲಿ ಕಾಣೆಯಾದ ಮಕ್ಕಳು ಮತ್ತು ವೃದ್ಧರನ್ನು ಅವರ ಕುಟುಂಬದವರೊಂದಿಗೆ ಸೇರಿಸುವಲ್ಲಿ ಸಹ ಸಿಆರ್ಪಿಎಫ್ ಪ್ರಮುಖ ಪಾತ್ರ ವಹಿಸುತ್ತಿದೆ.
ರಾಷ್ಟ್ರ ಪ್ರಥಮ: ಸೇವೆ ಮತ್ತು ಸಮರ್ಪಣೆಯ ಮಾದರಿ
ಸಿಆರ್ಪಿಎಫ್ಗೆ ಸಂಬಂಧಿಸಿದ ಒಬ್ಬ ಅಧಿಕಾರಿ ತಿಳಿಸಿದಂತೆ, ಸಿಆರ್ಪಿಎಫ್ನ ಪ್ರತಿಯೊಬ್ಬ ಯೋಧ ಮಹಾಕುಂಭದಲ್ಲಿ 'ರಾಷ್ಟ್ರ ಪ್ರಥಮ' ಎಂಬ ಭಾವನೆಯಿಂದ ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಿದ್ದಾರೆ. ಅವರ ಸೇವೆ ಮತ್ತು ಸಮರ್ಪಣೆಯ ಈ ಉತ್ಸಾಹ ಮಹಾಕುಂಭದ ಆಧ್ಯಾತ್ಮಿಕತೆಯನ್ನು ಇನ್ನಷ್ಟು ಪವಿತ್ರಗೊಳಿಸುತ್ತಿದೆ. 2025ರ ಮಹಾಕುಂಭದಲ್ಲಿ ಸಿಆರ್ಪಿಎಫ್ನ ಈ ಅಚಲ ಸೇವೆ ಮತ್ತು ಸಮರ್ಪಣೆ ಕೇವಲ ಸುರಕ್ಷತೆಯ ಭರವಸೆಯನ್ನು ಮೂಡಿಸುತ್ತಿಲ್ಲ, ಆದರೆ ಇಡೀ ದೇಶಕ್ಕೆ ಒಂದು ಸ್ಫೂರ್ತಿಯೂ ಆಗಿದೆ.
